Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
25 ಅದೃಷ್ಟವಂತಿರಿಗೆ ಸಿಗಲಿದೆ ತಿಮ್ಮಪ್ಪನ ವಿಐಪಿ ದರ್ಶನ ಭಾಗ್ಯ, ಅದಕ್ಕಾಗಿ ಏನು ಮಾಡಬೇಕು ಗೊತ್ತೆ?
ತಿರುಪತಿ ತಿಮ್ಮಪ್ಪನ ದರ್ಶನ ಮಾಡ್ಬೇಕು ಅನ್ನೋ ಆಸೆ ಯಾರಿಗೆ ತಾನೇ ಇರೋದಿಲ್ಲ ಹೇಳಿ. ಜೀವನದಲ್ಲಿ ಒಮ್ಮೆಯಾದ್ರು ಆತನ ದರ್ಶನ ಮಾಡ್ಬೇಕು ಅಂತ ಭಕ್ತರು ಕಾಯ್ತಿರ್ತಾರೆ. ಆದರೆ ಸಾಮಾನ್ಯ ದರ್ಶನ ಮಾಡ್ಬೇಕಂದ್ರೆ ದಿನವಿಡೀ ಕ್ಯೂನಲ್ಲಿ ಕಾಯ್ಬೇಕು.

ಇನ್ನೂ ವಿಐಪಿ ಟಿಕೆಟ್ ಖರೀದಿ ಮಾಡಿದ್ರೆ ಆರಾಮಾಗಿ ದರ್ಶನ ಮಾಡ್ಕೊಂಡು ಬರಬಹುದು. ವಿಐಪಿ ಟಿಕೆಟ್ ಕೊಂಚ ದುಬಾರಿಯಾಗಿರೋದ್ರಿಂದ ಹೆಚ್ಚಿನವರು ಸಾಮಾನ್ಯ ದರ್ಶನವನ್ನೇ ಮಾಡ್ತಾರೆ. ಇದೀಗ ಖುಷಿಯ ಸುದ್ದಿ ಏನಂದ್ರೆ ಟಿಟಿಡಿ ಟ್ರಸ್ಟ್ ಭಕ್ತರಿಗೆ ವಿಐಪಿ ಟಿಕೆಟ್ ಗಳನ್ನು ನೀಡೋದಕ್ಕೆ ನಿರ್ಧರಿಸಿದೆ.
ನೀವೇನಾದರೂ ಅದೃಷ್ಟಶಾಲಿಗಳಾಗಿದ್ರೆ ಖಂಡಿತ ನಿಮಗೆ ಈ ದರ್ಶನ ಭಾಗ್ಯ ಸಿಗಲಿದೆ. ಆದರೆ ನಿಮ್ಮ ವಯಸ್ಸು 25 ವರ್ಷ ದಾಟಿರಬಾರದು. 25 ವರ್ಷದೊಳಗಿನವರು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಅದಕ್ಕೆ ನೀವು ಮಾಡಬೇಕಾಗಿರೋದು ಇಷ್ಟೇ..
25 ವರ್ಷದೊಳಗಿನ ಯುವಕರು ಯಾರು ಗೋವಿಂದ ನಾಮವನ್ನು ಒಂದು ಕೋಟಿ ಕೈ ಬರವಣಿಗೆಯಲ್ಲಿ ಬರೆಯುತ್ತಾರೆಯೋ ಅವರಿಗೆ ವಿಐಪಿ ಟಿಕೆಟ್ ನೀಡೋದಕ್ಕೆ ನಿರ್ಧರಿಸಿದೆ. ಕೇವಲ ಅವರಿಗೆ ಮಾತ್ರವಲ್ಲದೇ ಅವರ ಕುಟುಂಬಕ್ಕೂ ವಿಐಪಿ ದರ್ಶನದ ಅವಕಾಶವನ್ನು ನೀಡಲಾಗುತ್ತೆ ಎಂದು ಟಿಟಿಡಿ ಪ್ರಕಟಣೆಯನ್ನು ಹೊರಡಿಸಿದೆ.
ಇದಿಷ್ಟೇ ಅಲ್ಲದೇ, ಶ್ರೀವಾರಿ ದೇವಸ್ಥಾನದ ಟ್ರಸ್ಟ್ 10,01,116 ಬಾರಿ 'ಗೋವಿಂದ ನಾಮಾವಳಿ'ಯನ್ನು ಬರೆಯುವ ಯುವಕರಿಗೆ ಒಂದು ಬಾರಿ ದರ್ಶನದ ಅವಕಾಶವನ್ನು ನೀಡಲು ನಿರ್ಧರಿಸಿದೆ.
ಈ ಬಗ್ಗೆ ಟಿಟಿಡಿಯ ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ ಮಂಡಳಿಯ ನಿರ್ಣಯಗಳ ಬಗ್ಗೆ ಹೇಳಿದ್ದಾರೆ. ಇನ್ನೂ ಗೋವಿಂದ ನಾಮವಳಿಯನ್ನು ಬರೆಯುವ ಮೊದಲ 25 ಮಂದಿ ಅದೃಷ್ಟವಂತರಿಗೆ ಮಾತ್ರ ಈ ಅವಕಾಶ ಕಲ್ಪಸಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಪ್ರಕಟನೆಗಳನ್ನು ಹೊರಡಿಸಿಲ್ಲ. ಅಧಿಕೃತ ಪ್ರಕಟನೆಯ ನಂತರವಷ್ಟೇ ನಿಯಮಾವಳಿಗಳ ಬಗ್ಗೆ ಗೊತ್ತಾಗಬೇಕಿದೆ.



Click it and Unblock the Notifications