Latest Updates
-
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ!
25 ಅದೃಷ್ಟವಂತಿರಿಗೆ ಸಿಗಲಿದೆ ತಿಮ್ಮಪ್ಪನ ವಿಐಪಿ ದರ್ಶನ ಭಾಗ್ಯ, ಅದಕ್ಕಾಗಿ ಏನು ಮಾಡಬೇಕು ಗೊತ್ತೆ?
ತಿರುಪತಿ ತಿಮ್ಮಪ್ಪನ ದರ್ಶನ ಮಾಡ್ಬೇಕು ಅನ್ನೋ ಆಸೆ ಯಾರಿಗೆ ತಾನೇ ಇರೋದಿಲ್ಲ ಹೇಳಿ. ಜೀವನದಲ್ಲಿ ಒಮ್ಮೆಯಾದ್ರು ಆತನ ದರ್ಶನ ಮಾಡ್ಬೇಕು ಅಂತ ಭಕ್ತರು ಕಾಯ್ತಿರ್ತಾರೆ. ಆದರೆ ಸಾಮಾನ್ಯ ದರ್ಶನ ಮಾಡ್ಬೇಕಂದ್ರೆ ದಿನವಿಡೀ ಕ್ಯೂನಲ್ಲಿ ಕಾಯ್ಬೇಕು.

ಇನ್ನೂ ವಿಐಪಿ ಟಿಕೆಟ್ ಖರೀದಿ ಮಾಡಿದ್ರೆ ಆರಾಮಾಗಿ ದರ್ಶನ ಮಾಡ್ಕೊಂಡು ಬರಬಹುದು. ವಿಐಪಿ ಟಿಕೆಟ್ ಕೊಂಚ ದುಬಾರಿಯಾಗಿರೋದ್ರಿಂದ ಹೆಚ್ಚಿನವರು ಸಾಮಾನ್ಯ ದರ್ಶನವನ್ನೇ ಮಾಡ್ತಾರೆ. ಇದೀಗ ಖುಷಿಯ ಸುದ್ದಿ ಏನಂದ್ರೆ ಟಿಟಿಡಿ ಟ್ರಸ್ಟ್ ಭಕ್ತರಿಗೆ ವಿಐಪಿ ಟಿಕೆಟ್ ಗಳನ್ನು ನೀಡೋದಕ್ಕೆ ನಿರ್ಧರಿಸಿದೆ.
ನೀವೇನಾದರೂ ಅದೃಷ್ಟಶಾಲಿಗಳಾಗಿದ್ರೆ ಖಂಡಿತ ನಿಮಗೆ ಈ ದರ್ಶನ ಭಾಗ್ಯ ಸಿಗಲಿದೆ. ಆದರೆ ನಿಮ್ಮ ವಯಸ್ಸು 25 ವರ್ಷ ದಾಟಿರಬಾರದು. 25 ವರ್ಷದೊಳಗಿನವರು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಅದಕ್ಕೆ ನೀವು ಮಾಡಬೇಕಾಗಿರೋದು ಇಷ್ಟೇ..
25 ವರ್ಷದೊಳಗಿನ ಯುವಕರು ಯಾರು ಗೋವಿಂದ ನಾಮವನ್ನು ಒಂದು ಕೋಟಿ ಕೈ ಬರವಣಿಗೆಯಲ್ಲಿ ಬರೆಯುತ್ತಾರೆಯೋ ಅವರಿಗೆ ವಿಐಪಿ ಟಿಕೆಟ್ ನೀಡೋದಕ್ಕೆ ನಿರ್ಧರಿಸಿದೆ. ಕೇವಲ ಅವರಿಗೆ ಮಾತ್ರವಲ್ಲದೇ ಅವರ ಕುಟುಂಬಕ್ಕೂ ವಿಐಪಿ ದರ್ಶನದ ಅವಕಾಶವನ್ನು ನೀಡಲಾಗುತ್ತೆ ಎಂದು ಟಿಟಿಡಿ ಪ್ರಕಟಣೆಯನ್ನು ಹೊರಡಿಸಿದೆ.
ಇದಿಷ್ಟೇ ಅಲ್ಲದೇ, ಶ್ರೀವಾರಿ ದೇವಸ್ಥಾನದ ಟ್ರಸ್ಟ್ 10,01,116 ಬಾರಿ 'ಗೋವಿಂದ ನಾಮಾವಳಿ'ಯನ್ನು ಬರೆಯುವ ಯುವಕರಿಗೆ ಒಂದು ಬಾರಿ ದರ್ಶನದ ಅವಕಾಶವನ್ನು ನೀಡಲು ನಿರ್ಧರಿಸಿದೆ.
ಈ ಬಗ್ಗೆ ಟಿಟಿಡಿಯ ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ ಮಂಡಳಿಯ ನಿರ್ಣಯಗಳ ಬಗ್ಗೆ ಹೇಳಿದ್ದಾರೆ. ಇನ್ನೂ ಗೋವಿಂದ ನಾಮವಳಿಯನ್ನು ಬರೆಯುವ ಮೊದಲ 25 ಮಂದಿ ಅದೃಷ್ಟವಂತರಿಗೆ ಮಾತ್ರ ಈ ಅವಕಾಶ ಕಲ್ಪಸಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಪ್ರಕಟನೆಗಳನ್ನು ಹೊರಡಿಸಿಲ್ಲ. ಅಧಿಕೃತ ಪ್ರಕಟನೆಯ ನಂತರವಷ್ಟೇ ನಿಯಮಾವಳಿಗಳ ಬಗ್ಗೆ ಗೊತ್ತಾಗಬೇಕಿದೆ.



Click it and Unblock the Notifications