Latest Updates
-
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ!
25 ಅದೃಷ್ಟವಂತಿರಿಗೆ ಸಿಗಲಿದೆ ತಿಮ್ಮಪ್ಪನ ವಿಐಪಿ ದರ್ಶನ ಭಾಗ್ಯ, ಅದಕ್ಕಾಗಿ ಏನು ಮಾಡಬೇಕು ಗೊತ್ತೆ?
ತಿರುಪತಿ ತಿಮ್ಮಪ್ಪನ ದರ್ಶನ ಮಾಡ್ಬೇಕು ಅನ್ನೋ ಆಸೆ ಯಾರಿಗೆ ತಾನೇ ಇರೋದಿಲ್ಲ ಹೇಳಿ. ಜೀವನದಲ್ಲಿ ಒಮ್ಮೆಯಾದ್ರು ಆತನ ದರ್ಶನ ಮಾಡ್ಬೇಕು ಅಂತ ಭಕ್ತರು ಕಾಯ್ತಿರ್ತಾರೆ. ಆದರೆ ಸಾಮಾನ್ಯ ದರ್ಶನ ಮಾಡ್ಬೇಕಂದ್ರೆ ದಿನವಿಡೀ ಕ್ಯೂನಲ್ಲಿ ಕಾಯ್ಬೇಕು.

ಇನ್ನೂ ವಿಐಪಿ ಟಿಕೆಟ್ ಖರೀದಿ ಮಾಡಿದ್ರೆ ಆರಾಮಾಗಿ ದರ್ಶನ ಮಾಡ್ಕೊಂಡು ಬರಬಹುದು. ವಿಐಪಿ ಟಿಕೆಟ್ ಕೊಂಚ ದುಬಾರಿಯಾಗಿರೋದ್ರಿಂದ ಹೆಚ್ಚಿನವರು ಸಾಮಾನ್ಯ ದರ್ಶನವನ್ನೇ ಮಾಡ್ತಾರೆ. ಇದೀಗ ಖುಷಿಯ ಸುದ್ದಿ ಏನಂದ್ರೆ ಟಿಟಿಡಿ ಟ್ರಸ್ಟ್ ಭಕ್ತರಿಗೆ ವಿಐಪಿ ಟಿಕೆಟ್ ಗಳನ್ನು ನೀಡೋದಕ್ಕೆ ನಿರ್ಧರಿಸಿದೆ.
ನೀವೇನಾದರೂ ಅದೃಷ್ಟಶಾಲಿಗಳಾಗಿದ್ರೆ ಖಂಡಿತ ನಿಮಗೆ ಈ ದರ್ಶನ ಭಾಗ್ಯ ಸಿಗಲಿದೆ. ಆದರೆ ನಿಮ್ಮ ವಯಸ್ಸು 25 ವರ್ಷ ದಾಟಿರಬಾರದು. 25 ವರ್ಷದೊಳಗಿನವರು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಅದಕ್ಕೆ ನೀವು ಮಾಡಬೇಕಾಗಿರೋದು ಇಷ್ಟೇ..
25 ವರ್ಷದೊಳಗಿನ ಯುವಕರು ಯಾರು ಗೋವಿಂದ ನಾಮವನ್ನು ಒಂದು ಕೋಟಿ ಕೈ ಬರವಣಿಗೆಯಲ್ಲಿ ಬರೆಯುತ್ತಾರೆಯೋ ಅವರಿಗೆ ವಿಐಪಿ ಟಿಕೆಟ್ ನೀಡೋದಕ್ಕೆ ನಿರ್ಧರಿಸಿದೆ. ಕೇವಲ ಅವರಿಗೆ ಮಾತ್ರವಲ್ಲದೇ ಅವರ ಕುಟುಂಬಕ್ಕೂ ವಿಐಪಿ ದರ್ಶನದ ಅವಕಾಶವನ್ನು ನೀಡಲಾಗುತ್ತೆ ಎಂದು ಟಿಟಿಡಿ ಪ್ರಕಟಣೆಯನ್ನು ಹೊರಡಿಸಿದೆ.
ಇದಿಷ್ಟೇ ಅಲ್ಲದೇ, ಶ್ರೀವಾರಿ ದೇವಸ್ಥಾನದ ಟ್ರಸ್ಟ್ 10,01,116 ಬಾರಿ 'ಗೋವಿಂದ ನಾಮಾವಳಿ'ಯನ್ನು ಬರೆಯುವ ಯುವಕರಿಗೆ ಒಂದು ಬಾರಿ ದರ್ಶನದ ಅವಕಾಶವನ್ನು ನೀಡಲು ನಿರ್ಧರಿಸಿದೆ.
ಈ ಬಗ್ಗೆ ಟಿಟಿಡಿಯ ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ ಮಂಡಳಿಯ ನಿರ್ಣಯಗಳ ಬಗ್ಗೆ ಹೇಳಿದ್ದಾರೆ. ಇನ್ನೂ ಗೋವಿಂದ ನಾಮವಳಿಯನ್ನು ಬರೆಯುವ ಮೊದಲ 25 ಮಂದಿ ಅದೃಷ್ಟವಂತರಿಗೆ ಮಾತ್ರ ಈ ಅವಕಾಶ ಕಲ್ಪಸಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಪ್ರಕಟನೆಗಳನ್ನು ಹೊರಡಿಸಿಲ್ಲ. ಅಧಿಕೃತ ಪ್ರಕಟನೆಯ ನಂತರವಷ್ಟೇ ನಿಯಮಾವಳಿಗಳ ಬಗ್ಗೆ ಗೊತ್ತಾಗಬೇಕಿದೆ.



Click it and Unblock the Notifications