Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಶಿವಾಲಯಕ್ಕೆ ಹೋದಾಗ ಚಂಡಿ ಪ್ರದಕ್ಷಿಣೆ ಮಾತ್ರ ಮಾಡಬೇಕು , ಏಕೆ?
ದೇವಾಲಯಕ್ಕೆ ಹೋದಾಗ ದೇವಾಲಯದ ಸುತ್ತ ಪ್ರದಕ್ಷಿಣೆ ಬರುತ್ತೇವೆ, ದೇವಾಲಯದ ಸುತ್ತ ಸುತ್ತು ಬರುವುದರಿಂದ ಒಂಥರಾ ಭಕ್ತಿ ಭಾವನೆ ಮನಸ್ಸಿನಲ್ಲಿ ಮೂಡುವುದು. ಆದರೆ ನೀವು ಶಿವ ದೇವಾಲಯಕ್ಕೆ ಹೋದಾಗ ನೀವು ಪ್ರದಕ್ಷಣೆ ಬರುವ ಬದಲಿಗೆ ಚಂಡಿ ಪ್ರದಕ್ಷಿಣೆ ಬರಬೇಕಾಗುತ್ತದೆ. ಈ ಚಂಡಿ ಪ್ರದಕ್ಷಿಣೆ ಹೇಗೆ ಮಾಡಬೇಕು? ಏಕೆ ಶಿವನಿಗೆ ಮಾತ್ರ ಚಂಡಿ ಪ್ರದಕ್ಷಿಣೆ ಮಾಡಲಾಗುವುದು ಎಂದು ನೋಡೋಣ ಬನ್ನಿ:

ಶಿವ ದೇವಾಲಯಕ್ಕೆ ಹೋದಾಗ ಈ ನಿಯಮಗಳನ್ನು ಮರೆಯಬಾರದು
ಶಿವನ ದೇವಾಲಯಕ್ಕೆ ಹೋದಾಗ ಸೋಮ ಸ್ತೋತ್ರವನ್ನು ದಾಟಬಾರದು ಎಂದು ಹೇಳಲಾಗುವುದು. ಅಂದರೆ ಶಿವನಿಗೆ ಅಭಿಷೇಕ ಮಾಡಿದಾಗ ಅಭಿಷೇಕಕ್ಕೆ ಬಳಸಿದ ನೀರು, ಹಾಲು ಹೀಗೆ ಪೂಜೆಗೆ ಬಳಸಿದ ವಸ್ತುಗಳು ಹರಿದು ಬಂದು ಬೀಳುವ ಸ್ಥಳವನ್ನು ದಾಟಬಾರದು ಎಂದು ಹೇಳಲಾಗುವುದು.
ಚಂಡಿ ಪ್ರದಕ್ಷಿಣೆ ಎಂದರೇನು?
ಶಿವಲಿಂಗದ ಅಭಿಷೇಕಕ್ಕೆ ಬಳಸಿದ ಸಾಮಗ್ರಿಗಳು ಹರಿದು ಬಂದು ಬೀಳುವ ಸ್ಥಳ ಅದಾಗಿದ್ದು ಅದನ್ನು ದಾಟಬಾರದು ಎಂದು ಹೇಳಲಾಗುವುದು.
ಚಂಡಿ ಪ್ರದಕ್ಷಿಣೆ ಹೇಗೆ ಮಾಡಬೇಕು?
ಧ್ವಜ ಸ್ತಂಭದ ಬಳಿ ನಿಂತು ಬಲ ಭಾಗಕ್ಕೆ ಚಂಡೀಶ್ವರ ಬಳಿ ಬಂದು ನಂತರ ಅಲ್ಲಿಂದ ಸೋಮಸೂತ್ರ ಬಳಿ ಹೋಗಬೇಕು, ನಂತರ ಚಂಡೀಶ್ವರ ಬಳಿ ಬಂದು ನಂತರ ಮತ್ತೆ ಸೋಮ ಸ್ತೋತ್ರ ಬಳಿ ಹೋಗಬೇಕು. ಚಂಡೀಶ್ವರ ಬಳಿ ಬಂದು ನಂತರ ಧ್ವಜ ಸ್ತಂಭದ ಬಳಿಗೆ, ಧ್ವಜ ಸ್ತಂಭದಿಂದ ಚಂಡೀಶ್ವರ ಬಳಿಗೆ 3 ಬಾರಿ ಹೋಗಬೇಕು.
ಎಷ್ಟು ಬಾರಿ ಚಂಡಿಪ್ರದಕ್ಷಿಣೆ ಮಾಡಬೇಕು?
1 ಅಥವಾ 3 ಬಾರಿ ಚಂಡಿ ಪ್ರದಕ್ಷಿಣೆ ಮಾಡಬಹುದು. ಯಾವುದೇ ಕಾರಣಕ್ಕೆ ಸೋಮ ಸ್ತೋತ್ರ ದಾಟಬಾರದು. ಈ ಸೋಮ ಸ್ತೋತ್ರ ತುಂಬಾನೇ ಪವಿತ್ರವಾದದ್ದು. ನೀವು ಎಷ್ಟೇ ಚಿಕ್ಕ ಶಿವಲಿಂಗ ಖರೀದಿಸಿದರೂ ಅದರಲ್ಲಿ ಚಂಡೀಶ್ವರ ಇರುತ್ತದೆ. ಇದನ್ನು ದಾಟಬಾರದು.
ಚಂಡಿ ಪ್ರದಕ್ಷಿಣೆ ಪ್ರಯೋಜನಗಳೇನು?
ಚಂಡ ಪ್ರದಕ್ಷಿಣೆ ಮಾಡುವುದರಿಂದ ಇಷ್ಟಾರ್ಥಗಳು ನೆರವೇರುವುದು ಎಂದು ಹೇಳಲಾಗುವುದು.
ಶಿವನ ನೋಡುವ ಮೊದಲಿಗೆ ನಂದಿಗೆ ನಮಸ್ಕರಿಸಬೇಕು?
ನೀವು ಶಿವಾಲಯಕ್ಕೆ ಹೋದಾಗ ಅಲ್ಲೊಂದು ಘಂಟೆ ಇರುತ್ತದೆ. ಅದನ್ನು ಒಂದು ಬಾರಿ ಮಾತ್ರ ಬಡಿಯಬೇಕು, ಅದರಿಂದ ಬರುವ ಶಬ್ದ ಓಂಕಾರದಂತೆ ಕೇಳಿಸುತ್ತದೆ. ನಂತರ ನಂದಿಗೆ ನಮಸ್ಕರಿಸಿ ಶಿವನ ಮೂರ್ತಿ ಬಳಿ ಹೋಗಿ ನಮಸ್ಕರಿಸಬೇಕು. ನಂದಿ ಕಿವಿಗೆ ಇಷ್ಟಾರ್ಥಗಳನ್ನು ಹೇಳಿದರೆ ಶಿವನಿಗೆ ಅದು ಕೇಳಿಸುತ್ತದೆ, ಶಿವ ನಿಮ್ಮ ಇಷ್ಟಾರ್ಥಗಳು ನೆರವೇರುವುದು ಎಂದು ಹೇಳಲಾಗುವುದು.



Click it and Unblock the Notifications