Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಶಿವಾಲಯಕ್ಕೆ ಹೋದಾಗ ಚಂಡಿ ಪ್ರದಕ್ಷಿಣೆ ಮಾತ್ರ ಮಾಡಬೇಕು , ಏಕೆ?
ದೇವಾಲಯಕ್ಕೆ ಹೋದಾಗ ದೇವಾಲಯದ ಸುತ್ತ ಪ್ರದಕ್ಷಿಣೆ ಬರುತ್ತೇವೆ, ದೇವಾಲಯದ ಸುತ್ತ ಸುತ್ತು ಬರುವುದರಿಂದ ಒಂಥರಾ ಭಕ್ತಿ ಭಾವನೆ ಮನಸ್ಸಿನಲ್ಲಿ ಮೂಡುವುದು. ಆದರೆ ನೀವು ಶಿವ ದೇವಾಲಯಕ್ಕೆ ಹೋದಾಗ ನೀವು ಪ್ರದಕ್ಷಣೆ ಬರುವ ಬದಲಿಗೆ ಚಂಡಿ ಪ್ರದಕ್ಷಿಣೆ ಬರಬೇಕಾಗುತ್ತದೆ. ಈ ಚಂಡಿ ಪ್ರದಕ್ಷಿಣೆ ಹೇಗೆ ಮಾಡಬೇಕು? ಏಕೆ ಶಿವನಿಗೆ ಮಾತ್ರ ಚಂಡಿ ಪ್ರದಕ್ಷಿಣೆ ಮಾಡಲಾಗುವುದು ಎಂದು ನೋಡೋಣ ಬನ್ನಿ:

ಶಿವ ದೇವಾಲಯಕ್ಕೆ ಹೋದಾಗ ಈ ನಿಯಮಗಳನ್ನು ಮರೆಯಬಾರದು
ಶಿವನ ದೇವಾಲಯಕ್ಕೆ ಹೋದಾಗ ಸೋಮ ಸ್ತೋತ್ರವನ್ನು ದಾಟಬಾರದು ಎಂದು ಹೇಳಲಾಗುವುದು. ಅಂದರೆ ಶಿವನಿಗೆ ಅಭಿಷೇಕ ಮಾಡಿದಾಗ ಅಭಿಷೇಕಕ್ಕೆ ಬಳಸಿದ ನೀರು, ಹಾಲು ಹೀಗೆ ಪೂಜೆಗೆ ಬಳಸಿದ ವಸ್ತುಗಳು ಹರಿದು ಬಂದು ಬೀಳುವ ಸ್ಥಳವನ್ನು ದಾಟಬಾರದು ಎಂದು ಹೇಳಲಾಗುವುದು.
ಚಂಡಿ ಪ್ರದಕ್ಷಿಣೆ ಎಂದರೇನು?
ಶಿವಲಿಂಗದ ಅಭಿಷೇಕಕ್ಕೆ ಬಳಸಿದ ಸಾಮಗ್ರಿಗಳು ಹರಿದು ಬಂದು ಬೀಳುವ ಸ್ಥಳ ಅದಾಗಿದ್ದು ಅದನ್ನು ದಾಟಬಾರದು ಎಂದು ಹೇಳಲಾಗುವುದು.
ಚಂಡಿ ಪ್ರದಕ್ಷಿಣೆ ಹೇಗೆ ಮಾಡಬೇಕು?
ಧ್ವಜ ಸ್ತಂಭದ ಬಳಿ ನಿಂತು ಬಲ ಭಾಗಕ್ಕೆ ಚಂಡೀಶ್ವರ ಬಳಿ ಬಂದು ನಂತರ ಅಲ್ಲಿಂದ ಸೋಮಸೂತ್ರ ಬಳಿ ಹೋಗಬೇಕು, ನಂತರ ಚಂಡೀಶ್ವರ ಬಳಿ ಬಂದು ನಂತರ ಮತ್ತೆ ಸೋಮ ಸ್ತೋತ್ರ ಬಳಿ ಹೋಗಬೇಕು. ಚಂಡೀಶ್ವರ ಬಳಿ ಬಂದು ನಂತರ ಧ್ವಜ ಸ್ತಂಭದ ಬಳಿಗೆ, ಧ್ವಜ ಸ್ತಂಭದಿಂದ ಚಂಡೀಶ್ವರ ಬಳಿಗೆ 3 ಬಾರಿ ಹೋಗಬೇಕು.
ಎಷ್ಟು ಬಾರಿ ಚಂಡಿಪ್ರದಕ್ಷಿಣೆ ಮಾಡಬೇಕು?
1 ಅಥವಾ 3 ಬಾರಿ ಚಂಡಿ ಪ್ರದಕ್ಷಿಣೆ ಮಾಡಬಹುದು. ಯಾವುದೇ ಕಾರಣಕ್ಕೆ ಸೋಮ ಸ್ತೋತ್ರ ದಾಟಬಾರದು. ಈ ಸೋಮ ಸ್ತೋತ್ರ ತುಂಬಾನೇ ಪವಿತ್ರವಾದದ್ದು. ನೀವು ಎಷ್ಟೇ ಚಿಕ್ಕ ಶಿವಲಿಂಗ ಖರೀದಿಸಿದರೂ ಅದರಲ್ಲಿ ಚಂಡೀಶ್ವರ ಇರುತ್ತದೆ. ಇದನ್ನು ದಾಟಬಾರದು.
ಚಂಡಿ ಪ್ರದಕ್ಷಿಣೆ ಪ್ರಯೋಜನಗಳೇನು?
ಚಂಡ ಪ್ರದಕ್ಷಿಣೆ ಮಾಡುವುದರಿಂದ ಇಷ್ಟಾರ್ಥಗಳು ನೆರವೇರುವುದು ಎಂದು ಹೇಳಲಾಗುವುದು.
ಶಿವನ ನೋಡುವ ಮೊದಲಿಗೆ ನಂದಿಗೆ ನಮಸ್ಕರಿಸಬೇಕು?
ನೀವು ಶಿವಾಲಯಕ್ಕೆ ಹೋದಾಗ ಅಲ್ಲೊಂದು ಘಂಟೆ ಇರುತ್ತದೆ. ಅದನ್ನು ಒಂದು ಬಾರಿ ಮಾತ್ರ ಬಡಿಯಬೇಕು, ಅದರಿಂದ ಬರುವ ಶಬ್ದ ಓಂಕಾರದಂತೆ ಕೇಳಿಸುತ್ತದೆ. ನಂತರ ನಂದಿಗೆ ನಮಸ್ಕರಿಸಿ ಶಿವನ ಮೂರ್ತಿ ಬಳಿ ಹೋಗಿ ನಮಸ್ಕರಿಸಬೇಕು. ನಂದಿ ಕಿವಿಗೆ ಇಷ್ಟಾರ್ಥಗಳನ್ನು ಹೇಳಿದರೆ ಶಿವನಿಗೆ ಅದು ಕೇಳಿಸುತ್ತದೆ, ಶಿವ ನಿಮ್ಮ ಇಷ್ಟಾರ್ಥಗಳು ನೆರವೇರುವುದು ಎಂದು ಹೇಳಲಾಗುವುದು.



Click it and Unblock the Notifications
