Latest Updates
-
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು!
ಗಣೇಶನಿಗೆ ಎಷ್ಟು ಗರಿಕೆ ಅರ್ಪಿಸಬೇಕು? ಬೆಸ ಸಂಖ್ಯೆಯಲ್ಲಿ ಅರ್ಪಿಸುವುದೇಕೆ?
ಗಣೇಶನ ಪೂಜೆಗೆ ನೀವು ಏನೇ ಅರ್ಪಿಸಿ, ಆದರೆ ಗರಿಕೆ ಅರ್ಪಿಸಲಿಲ್ಲ ಎಂದರೆ ಗಣೇಶನ ಪೂಜೆ ಕಂಪ್ಲೀಟ್ ಆಗುವುದಿಲ್ಲ ಎಂದು ಹೇಳಲಾಗುವುದು. ಗಣೇಶನ ಆರಾಧನೆಯಲ್ಲಿ ಗರಿಕೆಗೆ ಏಕಿಷ್ಟು ಮಹತ್ವ? ಎಂದು ನೋಡೋಣ ಬನ್ನಿ:
ಪುರಾಣದ ಪ್ರಕಾರ ಗಣೇಶನಿಗೆ ಗರಿಕೆ ಏಕೆ ಪ್ರಿಯ?
ದೇವಲೋಕದ ಹಾಡುಗಾರ್ತಿ ಶ್ರೀ ಗಣಪತಿಯನ್ನು ಮದುವೆಯಾಗಲು ಬಯಸುತ್ತಾಳೆ, ಆದರೆ ಗಣಪತಿ ಅದನ್ನು ತಿರಸ್ಕರಿಸುತ್ತಾನೆ. ಇದರಿಂದ ಕೋಪಗೊಂಡ ಅವಳು ಗಣೇಶನಿಗೆ ಶಾಪ ನೀಡುತ್ತಾಳೆ. ಇದರಿಂದ ಗಣೇಶನ ಮೈಯೆಲ್ಲಾ ಉರಿ-ಉರಿಯಾಗುತ್ತದೆ. ಈ ಉರಿಯನ್ನು ಸಹಿಸಲಾಗದೆ ಒದ್ದಾಡುತ್ತಿರುವಾಗ ಗರಿಕೆಯನ್ನು ಗಣಪತಿಯ ತಲೆಗೆ ಮೇಲೆ ಇಟ್ಟಾಗ ಉರಿಯೆಲ್ಲಾ ಕಡಿಮೆಯಾಗುವುದು. ಅಂದಿನಿಂದ ಗಣಪತಿಗೆ ಗರಿಕೆಯೆಂದರೆ ತುಂಬಾನೇ ಇಷ್ಟ.

ಆಯುರ್ವೇದಲ್ಲಿ ಗರಿಕೆಯ ಮಹತ್ವದ ಕುರಿತು ಈ ರೀತಿ ಹೇಳಲಾಗಿದೆ
ದೇಹ ಉರಿ-ಉರಿಯಾಗುತ್ತಿದ್ದರೆ ಗರಿಕೆಯ ಜ್ಯೂಸ್ ಕುಡಿದರೆ ಕಡಿಮೆಯಾಗುವುದು ಎಂದು ಆಯುರ್ವೇದದಲ್ಲಿ ಹೇಳಲಾಗಿದೆ.
ಧಾರ್ಮಿಕ ಕಾರಣ
ಗರಿಕೆಯನ್ನು ಗಣಪನ ಮೂರ್ತಿ ಬಳಿ ಇಟ್ಟಾಗ ಆ ಮೂರ್ತಿಯ ದೈವ ಚೈತನ್ಯ ಹೆಚ್ಚಾಗುವುದು ಎಂದು ಹೇಳಲಾಗುವುದು . ನಾವು ಆರಾಧಿಸುವ ದೇವರ ಮೂರ್ತಿಗೆ ದೇವತ್ವವು ಹೆಚ್ಚಾಗಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದ್ದರಿಂದ ದೇವರಿಗೆ ದೇವತೆಗಳ ತತ್ತ್ವವನ್ನು ಹೆಚ್ಚಿಸುವ ವಸ್ತುಗಳನ್ನು ಅರ್ಪಿಸಲಾಗುವುದು. ಗರಿಕೆಯಲ್ಲಿ ಗಣೇಶ ತತ್ತ್ವವನ್ನು ಹೆಚ್ಚಿಸುವ ಆಕರ್ಷಿಸುವ ಅಂಶವಿರುವುದರಿಂದ ಗರಿಕೆಯನ್ನು ಅರ್ಪಿಸಲಾಗುವುದು.
ಎಂಥ ಗರಿಕೆಯನ್ನು ಗಣಪತಿಗೆ ಅರ್ಪಿಸಬೇಕು?
ನೀವು ಗಣಪತಿಗೆ ಗರಿಗೆಯನ್ನು ಅರ್ಪಿಸುವಾಗ 3, 5 ಅಥವಾ 7, 21 ಗರಿಕೆಯನ್ನು ಅರ್ಪಿಸಿದರೆ ಒಳ್ಳೆಯದು ಎಂದು ಹೇಳಲಾಗುವುದು. ನೀವು ಎಳೆ ಗರಿಕೆಯನ್ನು ಗಣಪನಿಗೆ ಅರ್ಪಿಸಬೇಕು, ಬಲಿತಿರುವ ಗರಿಕೆ ಹುಲ್ಲಿನಂತೆ ಇರುತ್ತದೆ, ಆದ್ದರಿಂದ ಗಿಡ್ಡವಾದ, ಎಳೆ ಗರಿಕೆಯನ್ನು ಬಳಸಲಾಗುವುದು. ಗರಿಕೆಯನ್ನು ಒಟ್ಟಿಗೆ ಕಟ್ಟಿ ದೇವರಿಗೆ ಅರ್ಪಿಸಲಾಗುವುದು. ದೂರ್ವೆಗಳನ್ನು ಒಟ್ಟಿಗೆ ಕಟ್ಟುವುದರಿಂದ ಗರಿಕೆಯ ಸುಗಂಧ ತುಂಬಾ ಸಮಯ ಉಳಿಯುತ್ತದೆ. ನೀವು ಗರಿಕೆ ತುಂಬಾ ಸಮಯ ತಾಜಾವಾಗಿರಲು ನೀರಿನಲ್ಲಿ ಅದ್ದಿ ಬಳಸಿದರೆ ಒಳ್ಳೆಯದು.
ಗಣಪತಿಗೆ ಗರಿಕೆಯನ್ನು ಹೇಗೆ ಅರ್ಪಿಸಬೇಕು?
ನೀವು ಗಣಪತಿಯ ಮುಖ ಬಿಟ್ಟು ಇಡೀ ಮೈಯನ್ನು ಗರಿಕೆಯಿಂದ ಅಲಂಕರಿಸಬಹುದು. ಗರಿಕೆಯ ಸುವಾಸನೆ ಮೂರ್ತಿಯ ಸುತ್ತಲೂ ಹರಡುವುದು. ನೀವು ಗಣಪತಿಗೆ ಗರಿಕೆಯನ್ನು ಅರ್ಪಿಸಿದರೆ ದಿನಾ ಬದಲಾಯಿಸುವ ಅಗ್ಯತವಿಲ್ಲ, 3 ದಿನಕ್ಕೊಮ್ಮೆ ಬದಲಾಯಿಸಿದರೆ ಸಾಕು.
ಗಣೇಶನಿಗೆ ಗರಿಕೆಯನ್ನು ಬೆಸ ಸಂಖ್ಯೆಯಲ್ಲಿ ಬಳಸಲು ಕಾರಣವೇನು?
ಬೆಸ ಸಂಖ್ಯೆಗಳಲ್ಲಿ ಶಕ್ತಿ ಹೆಚ್ಚು ಎಂದು ಹೇಳಲಾಗುವುದು. ಬೆಸ ಸಂಖ್ಯೆಯಲ್ಲಿ ಗರಿಕೆಯನ್ನು ಅರ್ಪಿಸುವುದರಿಂದ ಮೂರ್ತಿಯಲ್ಲಿ ಶಕ್ತಿ ಹೆಚ್ಚಾಗುವುದು. ಗಣಪನಿಗೆ ಹೆಚ್ಚಾಗಿ 21 ಗರಿಕೆಗಳನ್ನು ಅರ್ಪಿಸಲಾಗುವುದು. 21 ಅಂದರೆ ಸಂಖ್ಯಾಶಾಸ್ತ್ರ ಪ್ರಕಾರ ನೋಡುವುದಾದರೆ 2+1=3 ಸಂಖ್ಯೆ ಬರುತ್ತದೆ. ಗಣಪತಿಯು 3 ಸಂಖ್ಯೆ ಸಂಬಂಧಿಸಿದ್ದಾಗಿದೆ, ಆದ್ದರಿಂದ ಬೆಸ ಸಂಖ್ಯೆಯಲ್ಲಿ ಗಣಪನಿಗೆ ಗರಿಕೆಯನ್ನು ಅರ್ಪಿಸಲಾಗುವುದು.



Click it and Unblock the Notifications