Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಗಣೇಶನಿಗೆ ಎಷ್ಟು ಗರಿಕೆ ಅರ್ಪಿಸಬೇಕು? ಬೆಸ ಸಂಖ್ಯೆಯಲ್ಲಿ ಅರ್ಪಿಸುವುದೇಕೆ?
ಗಣೇಶನ ಪೂಜೆಗೆ ನೀವು ಏನೇ ಅರ್ಪಿಸಿ, ಆದರೆ ಗರಿಕೆ ಅರ್ಪಿಸಲಿಲ್ಲ ಎಂದರೆ ಗಣೇಶನ ಪೂಜೆ ಕಂಪ್ಲೀಟ್ ಆಗುವುದಿಲ್ಲ ಎಂದು ಹೇಳಲಾಗುವುದು. ಗಣೇಶನ ಆರಾಧನೆಯಲ್ಲಿ ಗರಿಕೆಗೆ ಏಕಿಷ್ಟು ಮಹತ್ವ? ಎಂದು ನೋಡೋಣ ಬನ್ನಿ:
ಪುರಾಣದ ಪ್ರಕಾರ ಗಣೇಶನಿಗೆ ಗರಿಕೆ ಏಕೆ ಪ್ರಿಯ?
ದೇವಲೋಕದ ಹಾಡುಗಾರ್ತಿ ಶ್ರೀ ಗಣಪತಿಯನ್ನು ಮದುವೆಯಾಗಲು ಬಯಸುತ್ತಾಳೆ, ಆದರೆ ಗಣಪತಿ ಅದನ್ನು ತಿರಸ್ಕರಿಸುತ್ತಾನೆ. ಇದರಿಂದ ಕೋಪಗೊಂಡ ಅವಳು ಗಣೇಶನಿಗೆ ಶಾಪ ನೀಡುತ್ತಾಳೆ. ಇದರಿಂದ ಗಣೇಶನ ಮೈಯೆಲ್ಲಾ ಉರಿ-ಉರಿಯಾಗುತ್ತದೆ. ಈ ಉರಿಯನ್ನು ಸಹಿಸಲಾಗದೆ ಒದ್ದಾಡುತ್ತಿರುವಾಗ ಗರಿಕೆಯನ್ನು ಗಣಪತಿಯ ತಲೆಗೆ ಮೇಲೆ ಇಟ್ಟಾಗ ಉರಿಯೆಲ್ಲಾ ಕಡಿಮೆಯಾಗುವುದು. ಅಂದಿನಿಂದ ಗಣಪತಿಗೆ ಗರಿಕೆಯೆಂದರೆ ತುಂಬಾನೇ ಇಷ್ಟ.

ಆಯುರ್ವೇದಲ್ಲಿ ಗರಿಕೆಯ ಮಹತ್ವದ ಕುರಿತು ಈ ರೀತಿ ಹೇಳಲಾಗಿದೆ
ದೇಹ ಉರಿ-ಉರಿಯಾಗುತ್ತಿದ್ದರೆ ಗರಿಕೆಯ ಜ್ಯೂಸ್ ಕುಡಿದರೆ ಕಡಿಮೆಯಾಗುವುದು ಎಂದು ಆಯುರ್ವೇದದಲ್ಲಿ ಹೇಳಲಾಗಿದೆ.
ಧಾರ್ಮಿಕ ಕಾರಣ
ಗರಿಕೆಯನ್ನು ಗಣಪನ ಮೂರ್ತಿ ಬಳಿ ಇಟ್ಟಾಗ ಆ ಮೂರ್ತಿಯ ದೈವ ಚೈತನ್ಯ ಹೆಚ್ಚಾಗುವುದು ಎಂದು ಹೇಳಲಾಗುವುದು . ನಾವು ಆರಾಧಿಸುವ ದೇವರ ಮೂರ್ತಿಗೆ ದೇವತ್ವವು ಹೆಚ್ಚಾಗಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದ್ದರಿಂದ ದೇವರಿಗೆ ದೇವತೆಗಳ ತತ್ತ್ವವನ್ನು ಹೆಚ್ಚಿಸುವ ವಸ್ತುಗಳನ್ನು ಅರ್ಪಿಸಲಾಗುವುದು. ಗರಿಕೆಯಲ್ಲಿ ಗಣೇಶ ತತ್ತ್ವವನ್ನು ಹೆಚ್ಚಿಸುವ ಆಕರ್ಷಿಸುವ ಅಂಶವಿರುವುದರಿಂದ ಗರಿಕೆಯನ್ನು ಅರ್ಪಿಸಲಾಗುವುದು.
ಎಂಥ ಗರಿಕೆಯನ್ನು ಗಣಪತಿಗೆ ಅರ್ಪಿಸಬೇಕು?
ನೀವು ಗಣಪತಿಗೆ ಗರಿಗೆಯನ್ನು ಅರ್ಪಿಸುವಾಗ 3, 5 ಅಥವಾ 7, 21 ಗರಿಕೆಯನ್ನು ಅರ್ಪಿಸಿದರೆ ಒಳ್ಳೆಯದು ಎಂದು ಹೇಳಲಾಗುವುದು. ನೀವು ಎಳೆ ಗರಿಕೆಯನ್ನು ಗಣಪನಿಗೆ ಅರ್ಪಿಸಬೇಕು, ಬಲಿತಿರುವ ಗರಿಕೆ ಹುಲ್ಲಿನಂತೆ ಇರುತ್ತದೆ, ಆದ್ದರಿಂದ ಗಿಡ್ಡವಾದ, ಎಳೆ ಗರಿಕೆಯನ್ನು ಬಳಸಲಾಗುವುದು. ಗರಿಕೆಯನ್ನು ಒಟ್ಟಿಗೆ ಕಟ್ಟಿ ದೇವರಿಗೆ ಅರ್ಪಿಸಲಾಗುವುದು. ದೂರ್ವೆಗಳನ್ನು ಒಟ್ಟಿಗೆ ಕಟ್ಟುವುದರಿಂದ ಗರಿಕೆಯ ಸುಗಂಧ ತುಂಬಾ ಸಮಯ ಉಳಿಯುತ್ತದೆ. ನೀವು ಗರಿಕೆ ತುಂಬಾ ಸಮಯ ತಾಜಾವಾಗಿರಲು ನೀರಿನಲ್ಲಿ ಅದ್ದಿ ಬಳಸಿದರೆ ಒಳ್ಳೆಯದು.
ಗಣಪತಿಗೆ ಗರಿಕೆಯನ್ನು ಹೇಗೆ ಅರ್ಪಿಸಬೇಕು?
ನೀವು ಗಣಪತಿಯ ಮುಖ ಬಿಟ್ಟು ಇಡೀ ಮೈಯನ್ನು ಗರಿಕೆಯಿಂದ ಅಲಂಕರಿಸಬಹುದು. ಗರಿಕೆಯ ಸುವಾಸನೆ ಮೂರ್ತಿಯ ಸುತ್ತಲೂ ಹರಡುವುದು. ನೀವು ಗಣಪತಿಗೆ ಗರಿಕೆಯನ್ನು ಅರ್ಪಿಸಿದರೆ ದಿನಾ ಬದಲಾಯಿಸುವ ಅಗ್ಯತವಿಲ್ಲ, 3 ದಿನಕ್ಕೊಮ್ಮೆ ಬದಲಾಯಿಸಿದರೆ ಸಾಕು.
ಗಣೇಶನಿಗೆ ಗರಿಕೆಯನ್ನು ಬೆಸ ಸಂಖ್ಯೆಯಲ್ಲಿ ಬಳಸಲು ಕಾರಣವೇನು?
ಬೆಸ ಸಂಖ್ಯೆಗಳಲ್ಲಿ ಶಕ್ತಿ ಹೆಚ್ಚು ಎಂದು ಹೇಳಲಾಗುವುದು. ಬೆಸ ಸಂಖ್ಯೆಯಲ್ಲಿ ಗರಿಕೆಯನ್ನು ಅರ್ಪಿಸುವುದರಿಂದ ಮೂರ್ತಿಯಲ್ಲಿ ಶಕ್ತಿ ಹೆಚ್ಚಾಗುವುದು. ಗಣಪನಿಗೆ ಹೆಚ್ಚಾಗಿ 21 ಗರಿಕೆಗಳನ್ನು ಅರ್ಪಿಸಲಾಗುವುದು. 21 ಅಂದರೆ ಸಂಖ್ಯಾಶಾಸ್ತ್ರ ಪ್ರಕಾರ ನೋಡುವುದಾದರೆ 2+1=3 ಸಂಖ್ಯೆ ಬರುತ್ತದೆ. ಗಣಪತಿಯು 3 ಸಂಖ್ಯೆ ಸಂಬಂಧಿಸಿದ್ದಾಗಿದೆ, ಆದ್ದರಿಂದ ಬೆಸ ಸಂಖ್ಯೆಯಲ್ಲಿ ಗಣಪನಿಗೆ ಗರಿಕೆಯನ್ನು ಅರ್ಪಿಸಲಾಗುವುದು.



Click it and Unblock the Notifications