Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ವಿನಾಯಕ ಚತುರ್ಥಿ 2023 : ಪೂಜಾ ಸಮಯ, ಮಹತ್ವ ಹಾಗೂ ಆಚರಣಾ ವಿಧಾನವೇನು?
ಯಾವುದೇ ಶುಭ ಕಾರ್ಯಕ್ರಮಗಳು ನಡೆಯಬೇಕಾದರೂ ಮೊದಲಿಗೆ ವಿಘ್ನ ನಿವಾರಕನ ನೆನೆಯಲೇಬೇಕು. ವಿನಾಯಕನ ಪೂಜೆಯ ಬಳಿಕ ಮುಂದಿನ ಕಾರ್ಯಗಳನ್ನು ನಡೆಸಲಾಗುತ್ತದೆ. ಹಿಂದೂ ಸಂಪ್ರದಾಯದಲ್ಲಿ ಚತುರ್ಥಿ ಆಚರಣೆಗೆ ತುಂಬಾನೇ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ.
ಆ ದಿನ ಸಂಕಷ್ಟ ಹರನನ್ನು ಭಕ್ತಿಯಿಂದ ನೆನೆದರೆ ಕಷ್ಟಗಳೆಲ್ಲಾ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆಯಿದೆ. ಈ ತಿಂಗಳು ಆಷಾಡ ಮಾಸದ ಶುಕ್ಲ ಪಕ್ಷದ ದಿನ ಚತುರ್ಥಿಯನ್ನು ಆಚರಣೆ ಮಾಡಲಾಗುತ್ತಿದೆ. ಅಷ್ಟಕ್ಕು ವಿನಾಯಕ ಚತುರ್ಥಿಯನ್ನು ಯಾವ ದಿನ ಆಚರಣೆ ಮಾಡಲಾಗುತ್ತದೆ? ಶುಭ ಮುಹೂರ್ತ ಯಾವುದು? ಆಚರಣೆ ಹೇಗಿರಬೇಕು ಅನ್ನೋದನ್ನು ತಿಳಿಯೋಣ.

ವಿನಾಯಕ ಚತುರ್ಥಿ 2023 : ದಿನಾಂಕ ಮತ್ತು ಸಮಯ :
ವಿನಾಯಕ ಚತುರ್ಥಿ : ಜೂನ್ 21, 2023, ಮಧ್ಯಾಹ್ನ 03:09ಕ್ಕೆ ಆರಂಭ
ವಿನಾಯಕ ಚತುರ್ಥಿ ತಿಥಿ ಮುಕ್ತಾಯ : ಜೂನ್ 22, 2023 ಸಂಜೆ 05:27ಕ್ಕೆ
ವಿನಾಯಕ ಚತುರ್ಥಿಯ ಮಹತ್ವವೇನು?
ಹಿಂದೂ ನಂಬಿಕೆ ಹಾಗೂ ಪದ್ಧತಿಯ ಪ್ರಕಾರ ಪ್ರಥಮ ಪೂಜೆಯನ್ನು ಗಣೇಶನಿಗೆ ಅರ್ಪಿಸಬೇಕು. ವಿನಾಯಕನ ಪೂಜಿಸದ ಹೊರತಾಗಿ ಯಾವುದೇ ಶುಭ ಕಾರ್ಯಗಳನ್ನು ಮಾಡೋದಕ್ಕೆ ಮುಂದಡಿ ಇಡುವಂತಿಲ್ಲ. ಇದಿಷ್ಟೇ ಅಲ್ಲದೇ, ವಿಘ್ನ ನಿವಾರಕನನ್ನು ಪೂಜೆ ಮಾಡೋದ್ರಿಂದ ಸಂತೋಷ ಹಾಗೂ ಸಮೃದ್ಧಿ ಕೂಡ ಹೆಚ್ಚಾಗಲಿದೆ.
ಗಣೇಶನನ್ನೂ ಮಂಗಳ ಮೂರ್ತಿ, ಗೌರಿ ನಂದನ, ಗಣಪತಿ, ವಿನಾಯಕ ಹೀಗೆ ನಾನಾ ಹೆಸರುಗಳಿಂದ ಕರೆಯಲಾಗುತ್ತದೆ. ದಂಪತಿಗಳು ಗಂಡು ಸಂತಾನಕ್ಕಾಗಿ ಬಯಸುತ್ತಿದ್ದರೆ ಅವರು ಗಣೇಶನನ್ನು ಭಕ್ತಿಯಿಂದ ನೆನೆದರೆ ಅವರ ಇಷ್ಟಾರ್ಥಗಳೆಲ್ಲಾ ನೆರವೇರುತ್ತಂತೆ.
ವಿನಾಯಕ ಚತುರ್ಥಿಯ ಪೂಜಾ ವಿಧಾನ ಹೇಗಿರಬೇಕು?
ವಿನಾಯಕ ಚತುರ್ಥಿಯ ದಿನ ಬೆಳಗ್ಗೆ ಬೇಗನೆ ಎದ್ದು ಪುಣ್ಯ ಸ್ನಾನ ಮಾಡಬೇಕು. ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವ ಮೊದಲು ಹಳದಿ ಬಟ್ಟೆಯನ್ನು ಕೆಳಗಡೆ ಹಾಕಿ ನಂತರ ಅದರ ಮೇಲೆ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಬೇಕು.
ಇನ್ನೂ ದೀಪ ಹಚ್ಚಿ, ಹಣ್ಣು-ಹಂಪಲು ಹಾಗೂ ಸಿಹಿ ತಿಂಡಿಗಳನ್ನು ಇಟ್ಟು ಗಣೇಶನನ್ನು ಪೂಜಿಸಬೇಕು. ಇನ್ನೂ ಚತುರ್ಥಿ ಮುಗಿದ ದಿನ ಸಂಜೆಯ ಸಮಯದಲ್ಲಿ ಚಂದ್ರನಿಗೆ ಆರ್ಘ್ಯವನ್ನು ಅರ್ಪಿಸಿ, ನಂತರ ಸಾತ್ವಿಕ ಆಹಾರಗಳನ್ನು ಸೇವಿಸಿ ಉಪವಾಸವನ್ನು ಮುರಿಯಬೇಕು.
ಮಂತ್ರಗಳು :
1. ವಕ್ರತುಂಡ ಗಣೇಶ ಮಂತ್ರ
ಶ್ರೀ ವಕ್ರತುಂಡ ಮಹಾಕಾಯ ಸೂರ್ಯ ಕೋಟಿ ಸಂಮಪ್ರಭ.
ನಿರ್ವಿಘ್ನಂ ಕುರು ಮೇ ದೇವ್ ಸರ್ವ-ಕಾರ್ಯೇಷು ಸರ್ವದಾ ।
2. ಗಣೇಶ ಶುಭ ಲಾಭ ಮಂತ್ರ
ಓಂ ಶ್ರೀಂ ಗಂ ಸೌಭಾಗ್ಯ ಗಣಪತಯೇ ।
ವರದಾ ಸರ್ವಜನ್ಮ ಮೇ ವಷಮಯ ನಮಃ
3. ಗಣೇಶ ಗಾಯತ್ರಿ ಮಂತ್ರ
ಓಂ ಏಕದಂತಾಯ ವಿದ್ಧಾಮಹೇ, ವಕ್ರತುಂಡಯ ಧೀಮಹಿ,
ತನ್ನೋ ದಾನ್ತಿ ಪ್ರಚೋದಯಾತ್.
ವಿನಾಯಕ ಚತುರ್ಥಿಯ ದಿನ ಭಕ್ತರು ಅತೀವ ಭಕ್ತಿಯಿಂದ ಗಣೇಶನನ್ನು ಬೇಡಿಕೊಂಡರೆ ಖಂಡಿತ ನಿಮ್ಮ ಅತೀವ ಭಕ್ತಿಗೆ ಗಣೇಶ ಒಲಿಯದೇ ಇರೋದಿಲ್ಲ.



Click it and Unblock the Notifications

