Latest Updates
-
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು
ವಿನಾಯಕ ಚತುರ್ಥಿ 2023 : ಪೂಜಾ ಸಮಯ, ಮಹತ್ವ ಹಾಗೂ ಆಚರಣಾ ವಿಧಾನವೇನು?
ಯಾವುದೇ ಶುಭ ಕಾರ್ಯಕ್ರಮಗಳು ನಡೆಯಬೇಕಾದರೂ ಮೊದಲಿಗೆ ವಿಘ್ನ ನಿವಾರಕನ ನೆನೆಯಲೇಬೇಕು. ವಿನಾಯಕನ ಪೂಜೆಯ ಬಳಿಕ ಮುಂದಿನ ಕಾರ್ಯಗಳನ್ನು ನಡೆಸಲಾಗುತ್ತದೆ. ಹಿಂದೂ ಸಂಪ್ರದಾಯದಲ್ಲಿ ಚತುರ್ಥಿ ಆಚರಣೆಗೆ ತುಂಬಾನೇ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ.
ಆ ದಿನ ಸಂಕಷ್ಟ ಹರನನ್ನು ಭಕ್ತಿಯಿಂದ ನೆನೆದರೆ ಕಷ್ಟಗಳೆಲ್ಲಾ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆಯಿದೆ. ಈ ತಿಂಗಳು ಆಷಾಡ ಮಾಸದ ಶುಕ್ಲ ಪಕ್ಷದ ದಿನ ಚತುರ್ಥಿಯನ್ನು ಆಚರಣೆ ಮಾಡಲಾಗುತ್ತಿದೆ. ಅಷ್ಟಕ್ಕು ವಿನಾಯಕ ಚತುರ್ಥಿಯನ್ನು ಯಾವ ದಿನ ಆಚರಣೆ ಮಾಡಲಾಗುತ್ತದೆ? ಶುಭ ಮುಹೂರ್ತ ಯಾವುದು? ಆಚರಣೆ ಹೇಗಿರಬೇಕು ಅನ್ನೋದನ್ನು ತಿಳಿಯೋಣ.

ವಿನಾಯಕ ಚತುರ್ಥಿ 2023 : ದಿನಾಂಕ ಮತ್ತು ಸಮಯ :
ವಿನಾಯಕ ಚತುರ್ಥಿ : ಜೂನ್ 21, 2023, ಮಧ್ಯಾಹ್ನ 03:09ಕ್ಕೆ ಆರಂಭ
ವಿನಾಯಕ ಚತುರ್ಥಿ ತಿಥಿ ಮುಕ್ತಾಯ : ಜೂನ್ 22, 2023 ಸಂಜೆ 05:27ಕ್ಕೆ
ವಿನಾಯಕ ಚತುರ್ಥಿಯ ಮಹತ್ವವೇನು?
ಹಿಂದೂ ನಂಬಿಕೆ ಹಾಗೂ ಪದ್ಧತಿಯ ಪ್ರಕಾರ ಪ್ರಥಮ ಪೂಜೆಯನ್ನು ಗಣೇಶನಿಗೆ ಅರ್ಪಿಸಬೇಕು. ವಿನಾಯಕನ ಪೂಜಿಸದ ಹೊರತಾಗಿ ಯಾವುದೇ ಶುಭ ಕಾರ್ಯಗಳನ್ನು ಮಾಡೋದಕ್ಕೆ ಮುಂದಡಿ ಇಡುವಂತಿಲ್ಲ. ಇದಿಷ್ಟೇ ಅಲ್ಲದೇ, ವಿಘ್ನ ನಿವಾರಕನನ್ನು ಪೂಜೆ ಮಾಡೋದ್ರಿಂದ ಸಂತೋಷ ಹಾಗೂ ಸಮೃದ್ಧಿ ಕೂಡ ಹೆಚ್ಚಾಗಲಿದೆ.
ಗಣೇಶನನ್ನೂ ಮಂಗಳ ಮೂರ್ತಿ, ಗೌರಿ ನಂದನ, ಗಣಪತಿ, ವಿನಾಯಕ ಹೀಗೆ ನಾನಾ ಹೆಸರುಗಳಿಂದ ಕರೆಯಲಾಗುತ್ತದೆ. ದಂಪತಿಗಳು ಗಂಡು ಸಂತಾನಕ್ಕಾಗಿ ಬಯಸುತ್ತಿದ್ದರೆ ಅವರು ಗಣೇಶನನ್ನು ಭಕ್ತಿಯಿಂದ ನೆನೆದರೆ ಅವರ ಇಷ್ಟಾರ್ಥಗಳೆಲ್ಲಾ ನೆರವೇರುತ್ತಂತೆ.
ವಿನಾಯಕ ಚತುರ್ಥಿಯ ಪೂಜಾ ವಿಧಾನ ಹೇಗಿರಬೇಕು?
ವಿನಾಯಕ ಚತುರ್ಥಿಯ ದಿನ ಬೆಳಗ್ಗೆ ಬೇಗನೆ ಎದ್ದು ಪುಣ್ಯ ಸ್ನಾನ ಮಾಡಬೇಕು. ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವ ಮೊದಲು ಹಳದಿ ಬಟ್ಟೆಯನ್ನು ಕೆಳಗಡೆ ಹಾಕಿ ನಂತರ ಅದರ ಮೇಲೆ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಬೇಕು.
ಇನ್ನೂ ದೀಪ ಹಚ್ಚಿ, ಹಣ್ಣು-ಹಂಪಲು ಹಾಗೂ ಸಿಹಿ ತಿಂಡಿಗಳನ್ನು ಇಟ್ಟು ಗಣೇಶನನ್ನು ಪೂಜಿಸಬೇಕು. ಇನ್ನೂ ಚತುರ್ಥಿ ಮುಗಿದ ದಿನ ಸಂಜೆಯ ಸಮಯದಲ್ಲಿ ಚಂದ್ರನಿಗೆ ಆರ್ಘ್ಯವನ್ನು ಅರ್ಪಿಸಿ, ನಂತರ ಸಾತ್ವಿಕ ಆಹಾರಗಳನ್ನು ಸೇವಿಸಿ ಉಪವಾಸವನ್ನು ಮುರಿಯಬೇಕು.
ಮಂತ್ರಗಳು :
1. ವಕ್ರತುಂಡ ಗಣೇಶ ಮಂತ್ರ
ಶ್ರೀ ವಕ್ರತುಂಡ ಮಹಾಕಾಯ ಸೂರ್ಯ ಕೋಟಿ ಸಂಮಪ್ರಭ.
ನಿರ್ವಿಘ್ನಂ ಕುರು ಮೇ ದೇವ್ ಸರ್ವ-ಕಾರ್ಯೇಷು ಸರ್ವದಾ ।
2. ಗಣೇಶ ಶುಭ ಲಾಭ ಮಂತ್ರ
ಓಂ ಶ್ರೀಂ ಗಂ ಸೌಭಾಗ್ಯ ಗಣಪತಯೇ ।
ವರದಾ ಸರ್ವಜನ್ಮ ಮೇ ವಷಮಯ ನಮಃ
3. ಗಣೇಶ ಗಾಯತ್ರಿ ಮಂತ್ರ
ಓಂ ಏಕದಂತಾಯ ವಿದ್ಧಾಮಹೇ, ವಕ್ರತುಂಡಯ ಧೀಮಹಿ,
ತನ್ನೋ ದಾನ್ತಿ ಪ್ರಚೋದಯಾತ್.
ವಿನಾಯಕ ಚತುರ್ಥಿಯ ದಿನ ಭಕ್ತರು ಅತೀವ ಭಕ್ತಿಯಿಂದ ಗಣೇಶನನ್ನು ಬೇಡಿಕೊಂಡರೆ ಖಂಡಿತ ನಿಮ್ಮ ಅತೀವ ಭಕ್ತಿಗೆ ಗಣೇಶ ಒಲಿಯದೇ ಇರೋದಿಲ್ಲ.



Click it and Unblock the Notifications
