Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಆಗಸ್ಟ್ 4ಕ್ಕೆ ಸಂಕಷ್ಠಿ: ಬದುಕಿನ ಎಲ್ಲಾ ವಿಘ್ನ ನಿವಾರಣೆಗೆ ಈ ಪರಿಹಾರ ಮಾಡಿ
ಯಾವುದೇ ಪೂಜೆ ಇರಲಿ ಮೊದಲಿಗೆ ವಿಘ್ನ ನಿವಾರಕ ಗಣೇಶನ ಊಜೆ ಮಾಡಿದ ಬಳಿಕವಷ್ಟೇ ಪೂಜೆ ಮಾಡಲಾಗುವುದು, ಅದರಲ್ಲೂ ಸಂಕಷ್ಠಿಯಂದು ಶ್ರೀ ಗಣೇಶನ ಆರಾಧಿಸುವುದರಿಂದ ಗಣೇಶನ ಕೃಪೆಗೆ ಬೇಗನೆ ಪಾತ್ರರಾಗುತ್ತೇವೆ, ನಮ್ಮೆಲ್ಲಾ ಸಮಸ್ಯೆಗಳಿಗೂ ಆ ಗಣೇಶ ಪರಿಹಾರ ನೀಡೇ ನೀಡುತ್ತಾನೆ ಎಂಬುವುದು ಶ್ರೀ ಗಣಪನ ನಂಬಿದ ಭಕ್ತರ ಅಚಲ ನಂಬಿಕೆ. ಆಗಸ್ಟ್ 4ರಂದು ಸಂಕಷ್ಠಿ, ಈ ದಿನ ನಿಮ್ಮ ಸಮಸ್ಯೆಗಳಿಗೆ ಈ ಪರಿಹಾರ ಮಾಡಿದರೆ ಒಳ್ಳೆಯದಾಗುವುದು...
ಸಂಕಷ್ಠಿಯಂದು ಉಪವಾಸವಿದ್ದು ಶ್ರೀಗಣೇಶನ ಆರಾಧನೆ ಮಾಡಿದರೆ ತುಂಬಾ ಒಳ್ಳೆಯದು. ಈ ದಿನ ನೀವು ಗಣೇಶನನ್ನು ಭಕ್ತಿಯಿಂದ ಪೂಜಿಸಿ 'ಓಂ ಗಣಪತೆಯೇ ಮಂತ್ರವನ್ನು' 108 ಬಾರಿ ಪಠಿಸಿ.

ವೃತ್ತಿ ಜೀವನದಲ್ಲಿ ಯಶಸ್ಸಿಗೆ
ವಿಭುವನ ಸಂಕಷ್ಟ ಚತುರ್ಥಿಯ ದಿನ ಗಣಪತಿಗೆ ಹೂವು, ಬೆಲ್ಲ, ಮೋದಕ , ಗರಿಕೆ ಇವುಗಳನ್ನು ಅರ್ಪಿಸಿ , ಓಂ ಗಣ ಗಣಪತಯೇ ನಮಃ ಎಂದು ಜಪಿಸಿ. ಇದರಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿರುವ ಎಲ್ಲಾ ಅಡೆತಡೆಗಳು ದೂರಾಗಿ ಪ್ರಗತಿ ಕಾಣುವಿರಿ.
ಸಂಪತ್ತು ಮತ್ತು ಸಂತೋಷಕ್ಕಾಗಿ
ವಿಭುವನ ಸಂಕಷ್ಟ ಚತುರ್ಥಿಯಂದು ಪೂಜೆ ಮಾಡಿ ಗಣೇಶ ಸ್ತೋತ್ರ ಪಠಿಸಿದರೆ ಒಳ್ಳೆಯದು. ನೀವು ಗಣೇಶ ಸ್ತೋತ್ರವನ್ನು 11 ಬಾರಿ ಪಠಿಸಿ.
ವಾಸ್ತುದೋಷ ಪರಿಹಾರಕ್ಕೆ
ನಿಮ್ಮ ಮನೆಯಲ್ಲಿ ವಾಸ್ತು ದೋಷವಿದ್ದರೆ ನೀವು ಕುಳಿತಿರುವ ಗಣೇಶನ ಮೂರ್ತಿಯನ್ನು ಮನೆಯಲ್ಲಿರಿಸಿ, ಆದರೆ ಗಣೇಶ ಬೆನ್ನು ಯಾರಿಗೆ ಕಾಣುವಂತೆ ಇರಬಾರದು. ಕೂತಿರುವ ಗಣೇಶನ ಮೂರ್ತಿಯ ಮನೆಯಲ್ಲಿದ್ದರೆ ವಾಸ್ತುದೋಷ ನಿವಾರಣೆಗೆ ಉತ್ತಮ ಪರಿಹಾರ ಎಂದು ಹೇಳಲಾಗುವುದು.
ಮದುವೆಯಾಗಲು ಅಡೆತಡೆಯಿದ್ದರೆ
ಮದುವೆಯಾಗಲು ಅಡೆತಡೆ ಇದ್ದರೆ ಈ ಸಂಕಷ್ಠಿಯಂದು ನೀವು 21 ಲಡ್ಡುಗಳನ್ನು ಅರ್ಪಿಸಿ ಪೂಜಿಸಿ.
ವ್ಯಾಪಾರದಲ್ಲಿ ಪ್ರಗತಿಗಾಗಿ
ವಿಭುವನ ಸಂಕಷ್ಠಿ ಚತುರ್ಥಿಯಂದು ಗಣೇಶನ ವಿಗ್ರಹವನ್ನು ಮನೆಗೆ ತಂದು ಆರಾಧಿಸಿ. ಅರಿಶಿಣದಿಂದ 5 ಲಡ್ಡು ಮಾಡಿ ಲಂಬೋದರನಿಗೆ ಅರ್ಪಿಸಿ.
ಮನೆಯಲ್ಲಿ ಹಣದ ಸಮಸ್ಯೆ ಹೋಗಲಾಡಿಸಲು
ಮನೆಯಲ್ಲಿ ಆರ್ಥಿಕ ಸಮಸ್ಯೆಯಿದ್ದರೆ ಈ ದಿನದಂದು ಮನೆಗೆ ಗಣೇಶ ಯಂತ್ರವನ್ನು ತಂದು ಸ್ಥಾಪಿಸಿ. ಇದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುವುದು.
ಈ ಮಂತ್ರಗಳನ್ನು ಪಠಿಸಿ
ಓಂ ಶ್ರೀ ಗಣೇಶಾಯ ನಮಃ
ಓಂ ಏಕದಂತಾಯ ನಮಃ
ಓಂ ಸುಮುಖಾಯ ನಮಃ
ಓಂ ಕ್ಷಿಪ್ರ ಪ್ರಸಾದಾಯ ನಮಃ
ಓಂ ಬಾಲಚಂದ್ರಾಯ ನಮಃ
ಓಂ ಗಣಾಧ್ಯಕ್ಷಾಯ ನಮಃ
ಓಂ ವಿನಾಯಕಾಯ ನಮಃ
ಓಂ ವಿಘ್ನನಾಶಾಯ ನಮಃ
ಓಂ ಲಂಬೋಧರಾಯ ನಮಃ
ಓಂ ಗಜಕರ್ಣಿಕಾಯ ನಮಃ
ಓಂ ಕಪಿಲಾಯ ನಮಃ
ಓಂ ವಿಕ್ತ್ರಾಯ ನಮಃ



Click it and Unblock the Notifications
