Latest Updates
-
ಮೆಟ್ ಗಾಲಾ 2026: ಕರಣ್ ಜೋಹರ್ ಎಂಟ್ರಿಯಿಂದ ಫ್ಯಾಷನ್ ಲೋಕದಲ್ಲಿ ಸಂಚಲನ, ಭಾರತದಲ್ಲಿ ವೀಕ್ಷಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಮುಂಜಾನೆಯೇ ವ್ಯಾಯಾಮ: ನಿಮ್ಮ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ -
ಬೇಸಿಗೆ ಮದುವೆ ಸಂಭ್ರಮ: ಬಿಸಿಲ ಬೇಗೆಯಿಂದ ಅತಿಥಿಗಳನ್ನು ರಕ್ಷಿಸಲು ಇಲ್ಲಿದೆ ಮಾಸ್ಟರ್ ಪ್ಲಾನ್ -
ಮೇ 2-3ರ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಭಾರತದಲ್ಲಿ ಸುಡುವ ಬಿಸಿಲು: ಹೀಟ್ ವೇವ್ನಿಂದ ಪಾರಾಗಲು ಇಲ್ಲಿವೆ ಬೆಸ್ಟ್ ಡಯಟ್ ಮತ್ತು ಹೈಡ್ರೇಶನ್ ಟಿಪ್ಸ್! -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಕರಣ್ ಜೋಹರ್ ಅಬ್ಬರ, ಭಾರತೀಯ ಫ್ಯಾಷನ್ ಲೋಕದ ಹೊಸ ಸಂಚಲನ! -
ಮೇ ತಿಂಗಳ ಬಿಸಿಲ ಧಗೆ: ನಿಮ್ಮ ಬೆಳಗಿನ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳದಿದ್ದರೆ ಕಷ್ಟ! -
ಎವೆಲಿನ್ ಶರ್ಮಾ ವಿಚ್ಛೇದನ: ಮಕ್ಕಳ ಭವಿಷ್ಯಕ್ಕಾಗಿ ಈ ಜೋಡಿ ಆರಿಸಿದ ಹೊಸ ದಾರಿ ಯಾವುದು? -
ಬಿಸಿಲ ಧಗೆಗೆ ತಂಪಾದ ಗುಡ್ ನ್ಯೂಸ್: ಮೇ 8 ರಿಂದ ಶುರುವಾಗಲಿದೆ ಗ್ರೇಟ್ ಸಮ್ಮರ್ ಸೇಲ್! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಈ ಸರಳ ಆಹಾರ ಪದ್ಧತಿಯಿಂದ ಇಡೀ ದಿನ ಇರಿ ಫ್ರೆಶ್!
ಆಗಸ್ಟ್ 4ಕ್ಕೆ ಸಂಕಷ್ಠಿ: ಬದುಕಿನ ಎಲ್ಲಾ ವಿಘ್ನ ನಿವಾರಣೆಗೆ ಈ ಪರಿಹಾರ ಮಾಡಿ
ಯಾವುದೇ ಪೂಜೆ ಇರಲಿ ಮೊದಲಿಗೆ ವಿಘ್ನ ನಿವಾರಕ ಗಣೇಶನ ಊಜೆ ಮಾಡಿದ ಬಳಿಕವಷ್ಟೇ ಪೂಜೆ ಮಾಡಲಾಗುವುದು, ಅದರಲ್ಲೂ ಸಂಕಷ್ಠಿಯಂದು ಶ್ರೀ ಗಣೇಶನ ಆರಾಧಿಸುವುದರಿಂದ ಗಣೇಶನ ಕೃಪೆಗೆ ಬೇಗನೆ ಪಾತ್ರರಾಗುತ್ತೇವೆ, ನಮ್ಮೆಲ್ಲಾ ಸಮಸ್ಯೆಗಳಿಗೂ ಆ ಗಣೇಶ ಪರಿಹಾರ ನೀಡೇ ನೀಡುತ್ತಾನೆ ಎಂಬುವುದು ಶ್ರೀ ಗಣಪನ ನಂಬಿದ ಭಕ್ತರ ಅಚಲ ನಂಬಿಕೆ. ಆಗಸ್ಟ್ 4ರಂದು ಸಂಕಷ್ಠಿ, ಈ ದಿನ ನಿಮ್ಮ ಸಮಸ್ಯೆಗಳಿಗೆ ಈ ಪರಿಹಾರ ಮಾಡಿದರೆ ಒಳ್ಳೆಯದಾಗುವುದು...
ಸಂಕಷ್ಠಿಯಂದು ಉಪವಾಸವಿದ್ದು ಶ್ರೀಗಣೇಶನ ಆರಾಧನೆ ಮಾಡಿದರೆ ತುಂಬಾ ಒಳ್ಳೆಯದು. ಈ ದಿನ ನೀವು ಗಣೇಶನನ್ನು ಭಕ್ತಿಯಿಂದ ಪೂಜಿಸಿ 'ಓಂ ಗಣಪತೆಯೇ ಮಂತ್ರವನ್ನು' 108 ಬಾರಿ ಪಠಿಸಿ.

ವೃತ್ತಿ ಜೀವನದಲ್ಲಿ ಯಶಸ್ಸಿಗೆ
ವಿಭುವನ ಸಂಕಷ್ಟ ಚತುರ್ಥಿಯ ದಿನ ಗಣಪತಿಗೆ ಹೂವು, ಬೆಲ್ಲ, ಮೋದಕ , ಗರಿಕೆ ಇವುಗಳನ್ನು ಅರ್ಪಿಸಿ , ಓಂ ಗಣ ಗಣಪತಯೇ ನಮಃ ಎಂದು ಜಪಿಸಿ. ಇದರಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿರುವ ಎಲ್ಲಾ ಅಡೆತಡೆಗಳು ದೂರಾಗಿ ಪ್ರಗತಿ ಕಾಣುವಿರಿ.
ಸಂಪತ್ತು ಮತ್ತು ಸಂತೋಷಕ್ಕಾಗಿ
ವಿಭುವನ ಸಂಕಷ್ಟ ಚತುರ್ಥಿಯಂದು ಪೂಜೆ ಮಾಡಿ ಗಣೇಶ ಸ್ತೋತ್ರ ಪಠಿಸಿದರೆ ಒಳ್ಳೆಯದು. ನೀವು ಗಣೇಶ ಸ್ತೋತ್ರವನ್ನು 11 ಬಾರಿ ಪಠಿಸಿ.
ವಾಸ್ತುದೋಷ ಪರಿಹಾರಕ್ಕೆ
ನಿಮ್ಮ ಮನೆಯಲ್ಲಿ ವಾಸ್ತು ದೋಷವಿದ್ದರೆ ನೀವು ಕುಳಿತಿರುವ ಗಣೇಶನ ಮೂರ್ತಿಯನ್ನು ಮನೆಯಲ್ಲಿರಿಸಿ, ಆದರೆ ಗಣೇಶ ಬೆನ್ನು ಯಾರಿಗೆ ಕಾಣುವಂತೆ ಇರಬಾರದು. ಕೂತಿರುವ ಗಣೇಶನ ಮೂರ್ತಿಯ ಮನೆಯಲ್ಲಿದ್ದರೆ ವಾಸ್ತುದೋಷ ನಿವಾರಣೆಗೆ ಉತ್ತಮ ಪರಿಹಾರ ಎಂದು ಹೇಳಲಾಗುವುದು.
ಮದುವೆಯಾಗಲು ಅಡೆತಡೆಯಿದ್ದರೆ
ಮದುವೆಯಾಗಲು ಅಡೆತಡೆ ಇದ್ದರೆ ಈ ಸಂಕಷ್ಠಿಯಂದು ನೀವು 21 ಲಡ್ಡುಗಳನ್ನು ಅರ್ಪಿಸಿ ಪೂಜಿಸಿ.
ವ್ಯಾಪಾರದಲ್ಲಿ ಪ್ರಗತಿಗಾಗಿ
ವಿಭುವನ ಸಂಕಷ್ಠಿ ಚತುರ್ಥಿಯಂದು ಗಣೇಶನ ವಿಗ್ರಹವನ್ನು ಮನೆಗೆ ತಂದು ಆರಾಧಿಸಿ. ಅರಿಶಿಣದಿಂದ 5 ಲಡ್ಡು ಮಾಡಿ ಲಂಬೋದರನಿಗೆ ಅರ್ಪಿಸಿ.
ಮನೆಯಲ್ಲಿ ಹಣದ ಸಮಸ್ಯೆ ಹೋಗಲಾಡಿಸಲು
ಮನೆಯಲ್ಲಿ ಆರ್ಥಿಕ ಸಮಸ್ಯೆಯಿದ್ದರೆ ಈ ದಿನದಂದು ಮನೆಗೆ ಗಣೇಶ ಯಂತ್ರವನ್ನು ತಂದು ಸ್ಥಾಪಿಸಿ. ಇದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುವುದು.
ಈ ಮಂತ್ರಗಳನ್ನು ಪಠಿಸಿ
ಓಂ ಶ್ರೀ ಗಣೇಶಾಯ ನಮಃ
ಓಂ ಏಕದಂತಾಯ ನಮಃ
ಓಂ ಸುಮುಖಾಯ ನಮಃ
ಓಂ ಕ್ಷಿಪ್ರ ಪ್ರಸಾದಾಯ ನಮಃ
ಓಂ ಬಾಲಚಂದ್ರಾಯ ನಮಃ
ಓಂ ಗಣಾಧ್ಯಕ್ಷಾಯ ನಮಃ
ಓಂ ವಿನಾಯಕಾಯ ನಮಃ
ಓಂ ವಿಘ್ನನಾಶಾಯ ನಮಃ
ಓಂ ಲಂಬೋಧರಾಯ ನಮಃ
ಓಂ ಗಜಕರ್ಣಿಕಾಯ ನಮಃ
ಓಂ ಕಪಿಲಾಯ ನಮಃ
ಓಂ ವಿಕ್ತ್ರಾಯ ನಮಃ



Click it and Unblock the Notifications