Latest Updates
-
UGC NET ಪರೀಕ್ಷೆ: ಪರೀಕ್ಷೆಯ ಒತ್ತಡದ ನಡುವೆ ಮನೆಯಲ್ಲಿ ನೆಮ್ಮದಿ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈಗಲೇ ಈ ಕೆಲಸ ಮಾಡಿ! -
ಭಾರಿ ಮಳೆ, ವಿದ್ಯುತ್ ಕಡಿತ: ಸಂಕಷ್ಟದ ಸಮಯದಲ್ಲಿ ನಿಮ್ಮ ಆರೋಗ್ಯ ಮತ್ತು ಆಹಾರ ಸುರಕ್ಷತೆ ಕಾಪಾಡಿಕೊಳ್ಳುವುದು ಹೇಗೆ? -
ಮುಂಬೈನಲ್ಲಿ ವರುಣನ ಆರ್ಭಟ: ರೆಡ್ ಅಲರ್ಟ್ ಘೋಷಣೆ, ಪ್ರಯಾಣಿಕರೇ ಎಚ್ಚರ! -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಆರ್ಭಟ: ಹೊರಗೆ ಹೋಗುವ ಮುನ್ನ ಎಚ್ಚರ, ಮನೆಯಲ್ಲೇ ಫಿಟ್ ಆಗಿರಲು ಈ 8 ನಿಮಿಷದ ಟಿಪ್ಸ್! -
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ!
ನ. 17ಕ್ಕೆ ವೈಕುಂಠ ಚತುರ್ದಶಿ: ಪೂಜೆಗೆ ಶುಭ ಮುಹೂರ್ತ, ಪೂಜಾವಿಧಿ ಹಾಗೂ ಮಹತ್ವ
ಪ್ರತಿ ವರ್ಷ ಕಾರ್ತಿಕ ಮಾಸದ ಶುಕ್ಲ ಪಕ್ಷದ ಚತುರ್ದಶಿ ತಿಥಿಯಂದು ವೈಕುಂಠ ಚತುರ್ದಶಿಯನ್ನು ಆಚರಿಸಲಾಗುತ್ತದೆ. ಈ ವರ್ಷ ನವೆಂಬರ್ 17 ರಂದು ವೈಕುಂಠ ಚತುರ್ದಶಿಯ ಹಬ್ಬವನ್ನು ಆಚರಿಸಲಾಗುವುದು. ಈ ದಿನ ಶಿವ ಮತ್ತು ವಿಷ್ಣುವನ್ನು ಪೂಜಿಸಲಾಗುವುದು. ದೇಶದ ವಿವಿಧ ಭಾಗಗಳಲ್ಲಿ ಈ ದಿನದಂದು ಸಾಮೂಹಿಕ ಪೂಜೆಯನ್ನು ಸಲ್ಲಿಸಲಾಗುವುದು.
ವೈಕುಂಠ ಚತುರ್ದಶಿಯ ದಿನದಂದು ಉಪವಾಸವಿದ್ದುಪೂರ್ಣ ವಿಧಿವಿಧಾನಗಳೊಂದಿಗೆ ಪೂಜಿಸಿದರೆ ಮರಣಾನಂತರ ವೈಕುಂಠಧಾಮದಲ್ಲಿರುವ ಭಗವಾನ್ ವಿಷ್ಣುವಿನ ಬಳಿಗೆ ಹೋಗುತ್ತಾನೆ ಎಂದು ಹೇಳಲಾಗುತ್ತದೆ.

ವೈಕುಂಠ ಚತುರ್ದಶಿ ಮಹತ್ವ
ಪೌರಾಣಿಕ ಕತೆಯ ಪ್ರಕಾರ ಈ ದಿನದಂದು ಮಹಾದೇವ ಮತ್ತು ಶ್ರೀ ಹರಿವಿಷ್ಣುವಿನ ಆರಾಧನೆ ಮಾಡಿದರೆ ಮಾನವನ ಎಲ್ಲಾ ಪಾಪಗಳು ದೂರವಾಗುತ್ತವೆ, ಮೋಕ್ಷ ಸಿಗುತ್ತದೆ ಎಂದು ನಂಬಲಾಗಿದೆ. ಧಾರ್ಮಿಕ ಗ್ರಂಥಗಳ ಪ್ರಕಾರ, ಭಗವಂತ ನಿದ್ರೆಗೆ ಹೋಗುವ ನಾಲ್ಕು ತಿಂಗಳುಗಳಲ್ಲಿ, ಶಿವನು ಬ್ರಹ್ಮಾಂಡವನ್ನು ಆಳುತ್ತಾನೆ. ನಾಲ್ಕು ತಿಂಗಳ ಕಾಲ ಮಲಗಿದ ನಂತರ ದೇವುತಣಿ ಏಕಾದಶಿಯ ದಿನದಂದು ಭಗವಾನ್ ವಿಷ್ಣುವು ಎಚ್ಚರಗೊಳ್ಳುತ್ತಾನೆ. ಅದರ ನಂತರ ವೈಕುಂಠ ಚತುರ್ದಶಿಯ ದಿನದಂದು ಶಿವನು ಮತ್ತೆ ವಿಷ್ಣುವಿಗೆ ಸೃಷ್ಟಿಯ ಭಾರವನ್ನು ಹಸ್ತಾಂತರಿಸುತ್ತಾನೆ. ಈ ದಿನ ವೈಕುಂಠ ಲೋಕದ ದ್ವಾರಗಳೂ ತೆರೆದಿರುತ್ತವೆ ಎಂದು ನಂಬಲಾಗಿದೆ.

ವೈಕುಂಠ ಚತುರ್ದಶಿ ದಿನಾಂಕ:
ದಿನಾಂಕ: ನವೆಂಬರ್ 17, ಬುಧವಾರ
ಚತುರ್ದಶಿ ತಿಥಿ ಪ್ರಾರಂಭ: ಬೆಳಗ್ಗೆ 09:50 ರಿಂದ ಪ್ರಾರಂಭ
ಚತುರ್ದಶಿ ತಿಥಿ ಮುಕ್ತಾಯ: ನವೆಂಬರ್ 18, ಗುರುವಾರ ಮಧ್ಯಾಹ್ನ 12 ಗಂಟೆಗೆ ಕೊನೆಗೊಳ್ಳುತ್ತದೆ.

ಪೂಜೆ
ವೈಕುಂಠ ಚತುರ್ದಶಿಯ ದಿನ ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ ಉಪವಾಸ ವ್ರತ ಮಾಡಬೇಕು. ನಂತರ ರಾತ್ರಿ ವಿಷ್ಣುವಿಗೆ 108 ಕಮಲದ ಹೂವುಗಳಿಂದ ಪೂಜೆ ಮಾಡಬೇಕು. ಇದರ ನಂತರ ಶಿವನನ್ನು ಆರಾಧಿಸಿ. ಪೂಜೆಯ ಸಮಯದಲ್ಲಿ 'ಶಿವ ಹಾಗೂ ವಿಷ್ಣು ಮಂತ್ರಗಳನ್ನು ಪಠಿಸಬೇಕು.

ವೈಕುಂಠ ಚತುರ್ದಶಿಯಂದು ಶುಭ ಫಲಕ್ಕಾಗಿ ಹೀಗೆ ಮಾಡಿ
* ವಿಷ್ಣು ಸಹಸ್ರನಾಮ ಪಠಿಸಿ: ಬೆಳಗ್ಗೆ ಎದ್ದು ಸ್ನಾನ ಮಾಡಿ ಮಡಿ ಬಟ್ಟೆ ಧರಿಸಿ ತುಪ್ಪದ ದೀಪ ಹಚ್ಚಿ ವಿಷ್ಣು ಸಹಸ್ರನಾಮ ಪಠಿಸಬೇಕು.
* ಅರಿಶಿಣ ಕೊಂಬಿನಿಂದ ಮಾಲೆ ಮಾಡಿ, ಅದನ್ನು ಜಪ ಮಾಡುತ್ತಾ ವಿಷ್ಣು ಮಂತ್ರ ಪಠಿಸಿ.
* ವಿಷ್ಣುವಿನ ಪೂಜೆಗೆ ಹಳದಿ ಬಟ್ಟೆ, ಹಳದಿ ಹೂ ಬಳಸಿ.
* ದಾಂಪತ್ಯ ಜೀವನದಲ್ಲಿ ಒಳಿತಾಗಲು ಶ್ರೀಹರಿ ಜೊತೆಗೆ ಲಕ್ಷ್ಮಿಯ ವಿಗ್ರಹ ಇಟ್ಟು ಪೂಜೆ ಮಾಡಿ.
ಮಹಾಭಾರತದ ಯುದ್ಧದ ನಂತರ ಈ ದಿನದಂದು ಶ್ರೀಕೃಷ್ಣನು ಅದರಲ್ಲಿ ಕೊಲ್ಲಲ್ಪಟ್ಟವರಿಗೆ ಶ್ರಾದ್ಧವನ್ನು ಮಾಡಿದನೆಂದು ನಂಬಲಾಗಿದೆ. ಆದುದರಿಂದ ಈ ದಿನದಂದು ಶ್ರಾದ್ಧ ತರ್ಪಣ ಕಾರ್ಯವನ್ನು ಮಾಡುವುದಕ್ಕೂ ವಿಶೇಷ ಮಹತ್ವವಿದೆ.



Click it and Unblock the Notifications