Latest Updates
-
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ? -
ಬೇಸಿಗೆ ಬಿಸಿಲಿಗೆ ಮನೆ ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ
ನ. 17ಕ್ಕೆ ವೈಕುಂಠ ಚತುರ್ದಶಿ: ಪೂಜೆಗೆ ಶುಭ ಮುಹೂರ್ತ, ಪೂಜಾವಿಧಿ ಹಾಗೂ ಮಹತ್ವ
ಪ್ರತಿ ವರ್ಷ ಕಾರ್ತಿಕ ಮಾಸದ ಶುಕ್ಲ ಪಕ್ಷದ ಚತುರ್ದಶಿ ತಿಥಿಯಂದು ವೈಕುಂಠ ಚತುರ್ದಶಿಯನ್ನು ಆಚರಿಸಲಾಗುತ್ತದೆ. ಈ ವರ್ಷ ನವೆಂಬರ್ 17 ರಂದು ವೈಕುಂಠ ಚತುರ್ದಶಿಯ ಹಬ್ಬವನ್ನು ಆಚರಿಸಲಾಗುವುದು. ಈ ದಿನ ಶಿವ ಮತ್ತು ವಿಷ್ಣುವನ್ನು ಪೂಜಿಸಲಾಗುವುದು. ದೇಶದ ವಿವಿಧ ಭಾಗಗಳಲ್ಲಿ ಈ ದಿನದಂದು ಸಾಮೂಹಿಕ ಪೂಜೆಯನ್ನು ಸಲ್ಲಿಸಲಾಗುವುದು.
ವೈಕುಂಠ ಚತುರ್ದಶಿಯ ದಿನದಂದು ಉಪವಾಸವಿದ್ದುಪೂರ್ಣ ವಿಧಿವಿಧಾನಗಳೊಂದಿಗೆ ಪೂಜಿಸಿದರೆ ಮರಣಾನಂತರ ವೈಕುಂಠಧಾಮದಲ್ಲಿರುವ ಭಗವಾನ್ ವಿಷ್ಣುವಿನ ಬಳಿಗೆ ಹೋಗುತ್ತಾನೆ ಎಂದು ಹೇಳಲಾಗುತ್ತದೆ.

ವೈಕುಂಠ ಚತುರ್ದಶಿ ಮಹತ್ವ
ಪೌರಾಣಿಕ ಕತೆಯ ಪ್ರಕಾರ ಈ ದಿನದಂದು ಮಹಾದೇವ ಮತ್ತು ಶ್ರೀ ಹರಿವಿಷ್ಣುವಿನ ಆರಾಧನೆ ಮಾಡಿದರೆ ಮಾನವನ ಎಲ್ಲಾ ಪಾಪಗಳು ದೂರವಾಗುತ್ತವೆ, ಮೋಕ್ಷ ಸಿಗುತ್ತದೆ ಎಂದು ನಂಬಲಾಗಿದೆ. ಧಾರ್ಮಿಕ ಗ್ರಂಥಗಳ ಪ್ರಕಾರ, ಭಗವಂತ ನಿದ್ರೆಗೆ ಹೋಗುವ ನಾಲ್ಕು ತಿಂಗಳುಗಳಲ್ಲಿ, ಶಿವನು ಬ್ರಹ್ಮಾಂಡವನ್ನು ಆಳುತ್ತಾನೆ. ನಾಲ್ಕು ತಿಂಗಳ ಕಾಲ ಮಲಗಿದ ನಂತರ ದೇವುತಣಿ ಏಕಾದಶಿಯ ದಿನದಂದು ಭಗವಾನ್ ವಿಷ್ಣುವು ಎಚ್ಚರಗೊಳ್ಳುತ್ತಾನೆ. ಅದರ ನಂತರ ವೈಕುಂಠ ಚತುರ್ದಶಿಯ ದಿನದಂದು ಶಿವನು ಮತ್ತೆ ವಿಷ್ಣುವಿಗೆ ಸೃಷ್ಟಿಯ ಭಾರವನ್ನು ಹಸ್ತಾಂತರಿಸುತ್ತಾನೆ. ಈ ದಿನ ವೈಕುಂಠ ಲೋಕದ ದ್ವಾರಗಳೂ ತೆರೆದಿರುತ್ತವೆ ಎಂದು ನಂಬಲಾಗಿದೆ.

ವೈಕುಂಠ ಚತುರ್ದಶಿ ದಿನಾಂಕ:
ದಿನಾಂಕ: ನವೆಂಬರ್ 17, ಬುಧವಾರ
ಚತುರ್ದಶಿ ತಿಥಿ ಪ್ರಾರಂಭ: ಬೆಳಗ್ಗೆ 09:50 ರಿಂದ ಪ್ರಾರಂಭ
ಚತುರ್ದಶಿ ತಿಥಿ ಮುಕ್ತಾಯ: ನವೆಂಬರ್ 18, ಗುರುವಾರ ಮಧ್ಯಾಹ್ನ 12 ಗಂಟೆಗೆ ಕೊನೆಗೊಳ್ಳುತ್ತದೆ.

ಪೂಜೆ
ವೈಕುಂಠ ಚತುರ್ದಶಿಯ ದಿನ ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ ಉಪವಾಸ ವ್ರತ ಮಾಡಬೇಕು. ನಂತರ ರಾತ್ರಿ ವಿಷ್ಣುವಿಗೆ 108 ಕಮಲದ ಹೂವುಗಳಿಂದ ಪೂಜೆ ಮಾಡಬೇಕು. ಇದರ ನಂತರ ಶಿವನನ್ನು ಆರಾಧಿಸಿ. ಪೂಜೆಯ ಸಮಯದಲ್ಲಿ 'ಶಿವ ಹಾಗೂ ವಿಷ್ಣು ಮಂತ್ರಗಳನ್ನು ಪಠಿಸಬೇಕು.

ವೈಕುಂಠ ಚತುರ್ದಶಿಯಂದು ಶುಭ ಫಲಕ್ಕಾಗಿ ಹೀಗೆ ಮಾಡಿ
* ವಿಷ್ಣು ಸಹಸ್ರನಾಮ ಪಠಿಸಿ: ಬೆಳಗ್ಗೆ ಎದ್ದು ಸ್ನಾನ ಮಾಡಿ ಮಡಿ ಬಟ್ಟೆ ಧರಿಸಿ ತುಪ್ಪದ ದೀಪ ಹಚ್ಚಿ ವಿಷ್ಣು ಸಹಸ್ರನಾಮ ಪಠಿಸಬೇಕು.
* ಅರಿಶಿಣ ಕೊಂಬಿನಿಂದ ಮಾಲೆ ಮಾಡಿ, ಅದನ್ನು ಜಪ ಮಾಡುತ್ತಾ ವಿಷ್ಣು ಮಂತ್ರ ಪಠಿಸಿ.
* ವಿಷ್ಣುವಿನ ಪೂಜೆಗೆ ಹಳದಿ ಬಟ್ಟೆ, ಹಳದಿ ಹೂ ಬಳಸಿ.
* ದಾಂಪತ್ಯ ಜೀವನದಲ್ಲಿ ಒಳಿತಾಗಲು ಶ್ರೀಹರಿ ಜೊತೆಗೆ ಲಕ್ಷ್ಮಿಯ ವಿಗ್ರಹ ಇಟ್ಟು ಪೂಜೆ ಮಾಡಿ.
ಮಹಾಭಾರತದ ಯುದ್ಧದ ನಂತರ ಈ ದಿನದಂದು ಶ್ರೀಕೃಷ್ಣನು ಅದರಲ್ಲಿ ಕೊಲ್ಲಲ್ಪಟ್ಟವರಿಗೆ ಶ್ರಾದ್ಧವನ್ನು ಮಾಡಿದನೆಂದು ನಂಬಲಾಗಿದೆ. ಆದುದರಿಂದ ಈ ದಿನದಂದು ಶ್ರಾದ್ಧ ತರ್ಪಣ ಕಾರ್ಯವನ್ನು ಮಾಡುವುದಕ್ಕೂ ವಿಶೇಷ ಮಹತ್ವವಿದೆ.



Click it and Unblock the Notifications











