Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ತಿರುಪತಿಯಲ್ಲಿ ಮುಡಿ ದಾನ ಮಾಡುವುದರ ಹಿಂದಿರುವ ಮಹತ್ವವೇನು ಗೊತ್ತೇ?
ಭಾರತದ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲೊಂದು ತಿರುಪತಿ. ತಿರುಪತಿ ಬಾಲಾಜಿಯ ದರ್ಶನ ಪಡೆಯಲು ಪ್ರತಿನಿತ್ಯ ಲಕ್ಷಾಂತರ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಈ ಯಾರು ಈ ಪವಿತ್ರ ಕ್ಷೇತ್ರಕ್ಕೆ ಬಂದು ಬಾಲಾಜಿ ದೇವರ ದರ್ಶನ ಪಡೆಯುತ್ತಾರೋ ಅವರಿಗೆ ಎಲ್ಲಾ ಪಾಪಗಳಿಂದ ಮೋಕ್ಷ ಸಿಗುವುದು ಎಂಬ ನಂಬಿಕೆ.

ತಿರುಪತಿ ದೇವಾಲಯಕ್ಕೆ ಬಂದ ಭಕ್ತರು ಇಲ್ಲಿ ಮುಡಿಯನ್ನು ಹರಿಕೆ ರೂಪದಲ್ಲಿ ಸಲ್ಲಿಸುತ್ತಾರೆ. ತಮ್ಮ ಯಾವುದೋ ಒಂದು ಕಾರ್ಯಸಿದ್ಧಿಗಾಗಿ ಭಗವಂತ ತಿರುಪತಿ ಬಾಲಾಜಿಯಲ್ಲಿ ಪ್ರಾರ್ಥನೆ ಮಾಡಿರುತ್ತಾರೆ. ಆ ಕಾರ್ಯ ನೆರವೇರಿದಾಗ ಆ ಬಾಲಾಜಿಗೆ ತಮ್ಮ ಮುಡಿಯನ್ನು ಹರಿಕೆ ರೂಪದಲ್ಲಿ ಅರ್ಪಿಸುತ್ತಾರೆ. ಏಕೆ ಬಾಲಾಜಿಗೆ ಮುಡಿಯನ್ನು ಅರ್ಪಿಸುತ್ತಾರೆ, ಇದರ ಹಿಂದಿರುವ ಪೌರಾಣಿಕ ಕತೆಯ ಹಿನ್ನೆಲೆಯೇನು ಎಂದು ನೋಡೋಣ ಬನ್ನಿ:
ನಂಬಿಕೆ
ವೆಂಕಟೇಶ್ವರ ಕುಬೇರನಿಂದ ಪಡೆದ ಸಂಪತ್ತನ್ನು ಕೂದಲಿನ ರೂಪದಲ್ಲಿ ಮರಳಿಸುತ್ತಾನೆ ಎಂಬುವುದಾಗಿ ಪೌರಾಣಿಕ ಕತೆಯಿದೆ. ಭಕ್ತರು ವೆಂಕಟೇಶ್ವರನಿಗೆ ಮುಡಿಯನ್ನು ಹರಿಕೆ ರೂಪದಲ್ಲಿ ಅರ್ಪಿಸಿದರೆ ತಿರುಪತಿ ಅವರಿಗೆ 10 ಪಟ್ಟು ಅಧಿಕ ಸಂಪತ್ತು ಮರಳಿಸುತ್ತಾನೆ ಎಂಬ ನಂಬಿಕೆಯಿದೆ. ಯಾರು ವೆಂಕಟೇಶ್ವರನಿಗೆ ಕೂದಲನ್ನು ಹರಿಕೆ ರೂಪದಲ್ಲಿ ಅರ್ಪಿಸುತ್ತಾರೋ ಅವರಿಗೆ ಲಕ್ಷ್ಮಿ ಕೃಪೆ ಇರಲಿದೆ. ಇಲ್ಲಿ ಪುರುಷರು ಹಾಗೂ ಮಹಿಳೆಯರು ವೆಂಟೇಶ್ವರನಿಗೆ ಕೂದಲನ್ನು ಅರ್ಪಿಸುತ್ತಾರೆ.
ಪೌರಾಣಿಕ ಕತೆ
ಪೌರಾಣಿಕ ಕತೆಯ ಪ್ರಕಾರ ಬೆಟ್ಟದಲ್ಲಿ ಇರುವೆಗಳ ಗುಂಪುವೊಂದು ವೆಂಕಟೇಶ್ವರ ಪ್ರಾರ್ಥಿಸುತ್ತವೆ,ಹಸುವೊಂದು ಬೆಟ್ಟಕ್ಕೆ ಹೋಗಿ ಆ ಇರುವೆಗಳಿಗೆ ಹಾಲು ನೀಡುತ್ತದೆ. ಇದನ್ನು ನೋಡಿದ ಹಸುವಿನ ಮಾಲಿಕ ಕೋಪದಿಂದ ಕೊಡಲಿಯಿಂದ ಹಸುವಿನ ತಲೆಗೆ ಪೆಟ್ಟು ನೀಡುತ್ತಾನೆ. ಇದರಿಂದ ಬಾಲಾಜಿ ತಲೆಗೆ ಪೆಟ್ಟಾಗಿ ಕೂದಲು ಕೆಳಗೆ ಬೀಳುತ್ತದೆ. ಆಗ ನೀಲಾ ದೇವಿ ತನ್ನ ಕೂದಲನ್ನು ಕತ್ತರಿಸಿ, ಬಾಲಾಜಿ ತಲೆಗೆ ಅಂಟಿಸುತ್ತಾಳೆ, ಇದರಿಂದ ಬಾಲಾಜಿ ಗಾಯ ವಾಸಿಯಾಗುವುದು. ಕೂದಲು ಸೌಂದರ್ಯದ ಪ್ರತೀಕ. ತನ್ನ ಸೌಂದರ್ಯ ಲೆಕ್ಕಿಸದೆ ನೀಲಾ ದೇವಿ ತನ್ನ ಕೂದಲನ್ನು ಬಾಲಾಜಿಗೆ ಅರ್ಪಿಸುತ್ತಾಳೆ. ಆದ್ದರಿಂದ ಯಾರು ವೆಂಕಟೇಶ್ವರನಿಗೆ ಕೂದಲು ಅರ್ಪಿಸುತ್ತಾರೋ ಅವರ ಬಯಕೆ ಈಡೇರುವುದು ಎಂಬ ನಂಬಿಕೆ ಇದೆ.
ಇಲ್ಲಿ ದಾನ ಮಾಡಿದ ಕೂದಲು ಏನಾಗುತ್ತದೆ?
ತಿರುಪತಿಯಲ್ಲಿ ದಾನ ಮಾಡಲಾಗುವ ಕೂದಲನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗೆ ಮಾರಲಾಗುವುದು. ಯುರೋಪ್, ಅಮೆರಿಕ, ಚೀನಾ, ಆಫ್ರಿಕಾ ದೇಶಗಳಲ್ಲಿ ಕೂದಲಿಗೆ ತುಂಬಾ ಡಿಮ್ಯಾಂಡ್ ಇದೆ.
ಒಂದು ದಿನದಲ್ಲಿ ಸುಮಾರು 20, 000ಕ್ಕೂ ಅಧಿಕ ಭಕ್ತರು ಇಲ್ಲಿ ಕೂದಲನ್ನು ದಾನ ಮಾಡುತ್ತಾರೆ.



Click it and Unblock the Notifications