Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ತಿರುಪತಿಯಲ್ಲಿ ಮುಡಿ ದಾನ ಮಾಡುವುದರ ಹಿಂದಿರುವ ಮಹತ್ವವೇನು ಗೊತ್ತೇ?
ಭಾರತದ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲೊಂದು ತಿರುಪತಿ. ತಿರುಪತಿ ಬಾಲಾಜಿಯ ದರ್ಶನ ಪಡೆಯಲು ಪ್ರತಿನಿತ್ಯ ಲಕ್ಷಾಂತರ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಈ ಯಾರು ಈ ಪವಿತ್ರ ಕ್ಷೇತ್ರಕ್ಕೆ ಬಂದು ಬಾಲಾಜಿ ದೇವರ ದರ್ಶನ ಪಡೆಯುತ್ತಾರೋ ಅವರಿಗೆ ಎಲ್ಲಾ ಪಾಪಗಳಿಂದ ಮೋಕ್ಷ ಸಿಗುವುದು ಎಂಬ ನಂಬಿಕೆ.

ತಿರುಪತಿ ದೇವಾಲಯಕ್ಕೆ ಬಂದ ಭಕ್ತರು ಇಲ್ಲಿ ಮುಡಿಯನ್ನು ಹರಿಕೆ ರೂಪದಲ್ಲಿ ಸಲ್ಲಿಸುತ್ತಾರೆ. ತಮ್ಮ ಯಾವುದೋ ಒಂದು ಕಾರ್ಯಸಿದ್ಧಿಗಾಗಿ ಭಗವಂತ ತಿರುಪತಿ ಬಾಲಾಜಿಯಲ್ಲಿ ಪ್ರಾರ್ಥನೆ ಮಾಡಿರುತ್ತಾರೆ. ಆ ಕಾರ್ಯ ನೆರವೇರಿದಾಗ ಆ ಬಾಲಾಜಿಗೆ ತಮ್ಮ ಮುಡಿಯನ್ನು ಹರಿಕೆ ರೂಪದಲ್ಲಿ ಅರ್ಪಿಸುತ್ತಾರೆ. ಏಕೆ ಬಾಲಾಜಿಗೆ ಮುಡಿಯನ್ನು ಅರ್ಪಿಸುತ್ತಾರೆ, ಇದರ ಹಿಂದಿರುವ ಪೌರಾಣಿಕ ಕತೆಯ ಹಿನ್ನೆಲೆಯೇನು ಎಂದು ನೋಡೋಣ ಬನ್ನಿ:
ನಂಬಿಕೆ
ವೆಂಕಟೇಶ್ವರ ಕುಬೇರನಿಂದ ಪಡೆದ ಸಂಪತ್ತನ್ನು ಕೂದಲಿನ ರೂಪದಲ್ಲಿ ಮರಳಿಸುತ್ತಾನೆ ಎಂಬುವುದಾಗಿ ಪೌರಾಣಿಕ ಕತೆಯಿದೆ. ಭಕ್ತರು ವೆಂಕಟೇಶ್ವರನಿಗೆ ಮುಡಿಯನ್ನು ಹರಿಕೆ ರೂಪದಲ್ಲಿ ಅರ್ಪಿಸಿದರೆ ತಿರುಪತಿ ಅವರಿಗೆ 10 ಪಟ್ಟು ಅಧಿಕ ಸಂಪತ್ತು ಮರಳಿಸುತ್ತಾನೆ ಎಂಬ ನಂಬಿಕೆಯಿದೆ. ಯಾರು ವೆಂಕಟೇಶ್ವರನಿಗೆ ಕೂದಲನ್ನು ಹರಿಕೆ ರೂಪದಲ್ಲಿ ಅರ್ಪಿಸುತ್ತಾರೋ ಅವರಿಗೆ ಲಕ್ಷ್ಮಿ ಕೃಪೆ ಇರಲಿದೆ. ಇಲ್ಲಿ ಪುರುಷರು ಹಾಗೂ ಮಹಿಳೆಯರು ವೆಂಟೇಶ್ವರನಿಗೆ ಕೂದಲನ್ನು ಅರ್ಪಿಸುತ್ತಾರೆ.
ಪೌರಾಣಿಕ ಕತೆ
ಪೌರಾಣಿಕ ಕತೆಯ ಪ್ರಕಾರ ಬೆಟ್ಟದಲ್ಲಿ ಇರುವೆಗಳ ಗುಂಪುವೊಂದು ವೆಂಕಟೇಶ್ವರ ಪ್ರಾರ್ಥಿಸುತ್ತವೆ,ಹಸುವೊಂದು ಬೆಟ್ಟಕ್ಕೆ ಹೋಗಿ ಆ ಇರುವೆಗಳಿಗೆ ಹಾಲು ನೀಡುತ್ತದೆ. ಇದನ್ನು ನೋಡಿದ ಹಸುವಿನ ಮಾಲಿಕ ಕೋಪದಿಂದ ಕೊಡಲಿಯಿಂದ ಹಸುವಿನ ತಲೆಗೆ ಪೆಟ್ಟು ನೀಡುತ್ತಾನೆ. ಇದರಿಂದ ಬಾಲಾಜಿ ತಲೆಗೆ ಪೆಟ್ಟಾಗಿ ಕೂದಲು ಕೆಳಗೆ ಬೀಳುತ್ತದೆ. ಆಗ ನೀಲಾ ದೇವಿ ತನ್ನ ಕೂದಲನ್ನು ಕತ್ತರಿಸಿ, ಬಾಲಾಜಿ ತಲೆಗೆ ಅಂಟಿಸುತ್ತಾಳೆ, ಇದರಿಂದ ಬಾಲಾಜಿ ಗಾಯ ವಾಸಿಯಾಗುವುದು. ಕೂದಲು ಸೌಂದರ್ಯದ ಪ್ರತೀಕ. ತನ್ನ ಸೌಂದರ್ಯ ಲೆಕ್ಕಿಸದೆ ನೀಲಾ ದೇವಿ ತನ್ನ ಕೂದಲನ್ನು ಬಾಲಾಜಿಗೆ ಅರ್ಪಿಸುತ್ತಾಳೆ. ಆದ್ದರಿಂದ ಯಾರು ವೆಂಕಟೇಶ್ವರನಿಗೆ ಕೂದಲು ಅರ್ಪಿಸುತ್ತಾರೋ ಅವರ ಬಯಕೆ ಈಡೇರುವುದು ಎಂಬ ನಂಬಿಕೆ ಇದೆ.
ಇಲ್ಲಿ ದಾನ ಮಾಡಿದ ಕೂದಲು ಏನಾಗುತ್ತದೆ?
ತಿರುಪತಿಯಲ್ಲಿ ದಾನ ಮಾಡಲಾಗುವ ಕೂದಲನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗೆ ಮಾರಲಾಗುವುದು. ಯುರೋಪ್, ಅಮೆರಿಕ, ಚೀನಾ, ಆಫ್ರಿಕಾ ದೇಶಗಳಲ್ಲಿ ಕೂದಲಿಗೆ ತುಂಬಾ ಡಿಮ್ಯಾಂಡ್ ಇದೆ.
ಒಂದು ದಿನದಲ್ಲಿ ಸುಮಾರು 20, 000ಕ್ಕೂ ಅಧಿಕ ಭಕ್ತರು ಇಲ್ಲಿ ಕೂದಲನ್ನು ದಾನ ಮಾಡುತ್ತಾರೆ.



Click it and Unblock the Notifications
