Latest Updates
-
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ!
ತಿರುಪತಿಯಲ್ಲಿ ಮುಡಿ ದಾನ ಮಾಡುವುದರ ಹಿಂದಿರುವ ಮಹತ್ವವೇನು ಗೊತ್ತೇ?
ಭಾರತದ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲೊಂದು ತಿರುಪತಿ. ತಿರುಪತಿ ಬಾಲಾಜಿಯ ದರ್ಶನ ಪಡೆಯಲು ಪ್ರತಿನಿತ್ಯ ಲಕ್ಷಾಂತರ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಈ ಯಾರು ಈ ಪವಿತ್ರ ಕ್ಷೇತ್ರಕ್ಕೆ ಬಂದು ಬಾಲಾಜಿ ದೇವರ ದರ್ಶನ ಪಡೆಯುತ್ತಾರೋ ಅವರಿಗೆ ಎಲ್ಲಾ ಪಾಪಗಳಿಂದ ಮೋಕ್ಷ ಸಿಗುವುದು ಎಂಬ ನಂಬಿಕೆ.

ತಿರುಪತಿ ದೇವಾಲಯಕ್ಕೆ ಬಂದ ಭಕ್ತರು ಇಲ್ಲಿ ಮುಡಿಯನ್ನು ಹರಿಕೆ ರೂಪದಲ್ಲಿ ಸಲ್ಲಿಸುತ್ತಾರೆ. ತಮ್ಮ ಯಾವುದೋ ಒಂದು ಕಾರ್ಯಸಿದ್ಧಿಗಾಗಿ ಭಗವಂತ ತಿರುಪತಿ ಬಾಲಾಜಿಯಲ್ಲಿ ಪ್ರಾರ್ಥನೆ ಮಾಡಿರುತ್ತಾರೆ. ಆ ಕಾರ್ಯ ನೆರವೇರಿದಾಗ ಆ ಬಾಲಾಜಿಗೆ ತಮ್ಮ ಮುಡಿಯನ್ನು ಹರಿಕೆ ರೂಪದಲ್ಲಿ ಅರ್ಪಿಸುತ್ತಾರೆ. ಏಕೆ ಬಾಲಾಜಿಗೆ ಮುಡಿಯನ್ನು ಅರ್ಪಿಸುತ್ತಾರೆ, ಇದರ ಹಿಂದಿರುವ ಪೌರಾಣಿಕ ಕತೆಯ ಹಿನ್ನೆಲೆಯೇನು ಎಂದು ನೋಡೋಣ ಬನ್ನಿ:
ನಂಬಿಕೆ
ವೆಂಕಟೇಶ್ವರ ಕುಬೇರನಿಂದ ಪಡೆದ ಸಂಪತ್ತನ್ನು ಕೂದಲಿನ ರೂಪದಲ್ಲಿ ಮರಳಿಸುತ್ತಾನೆ ಎಂಬುವುದಾಗಿ ಪೌರಾಣಿಕ ಕತೆಯಿದೆ. ಭಕ್ತರು ವೆಂಕಟೇಶ್ವರನಿಗೆ ಮುಡಿಯನ್ನು ಹರಿಕೆ ರೂಪದಲ್ಲಿ ಅರ್ಪಿಸಿದರೆ ತಿರುಪತಿ ಅವರಿಗೆ 10 ಪಟ್ಟು ಅಧಿಕ ಸಂಪತ್ತು ಮರಳಿಸುತ್ತಾನೆ ಎಂಬ ನಂಬಿಕೆಯಿದೆ. ಯಾರು ವೆಂಕಟೇಶ್ವರನಿಗೆ ಕೂದಲನ್ನು ಹರಿಕೆ ರೂಪದಲ್ಲಿ ಅರ್ಪಿಸುತ್ತಾರೋ ಅವರಿಗೆ ಲಕ್ಷ್ಮಿ ಕೃಪೆ ಇರಲಿದೆ. ಇಲ್ಲಿ ಪುರುಷರು ಹಾಗೂ ಮಹಿಳೆಯರು ವೆಂಟೇಶ್ವರನಿಗೆ ಕೂದಲನ್ನು ಅರ್ಪಿಸುತ್ತಾರೆ.
ಪೌರಾಣಿಕ ಕತೆ
ಪೌರಾಣಿಕ ಕತೆಯ ಪ್ರಕಾರ ಬೆಟ್ಟದಲ್ಲಿ ಇರುವೆಗಳ ಗುಂಪುವೊಂದು ವೆಂಕಟೇಶ್ವರ ಪ್ರಾರ್ಥಿಸುತ್ತವೆ,ಹಸುವೊಂದು ಬೆಟ್ಟಕ್ಕೆ ಹೋಗಿ ಆ ಇರುವೆಗಳಿಗೆ ಹಾಲು ನೀಡುತ್ತದೆ. ಇದನ್ನು ನೋಡಿದ ಹಸುವಿನ ಮಾಲಿಕ ಕೋಪದಿಂದ ಕೊಡಲಿಯಿಂದ ಹಸುವಿನ ತಲೆಗೆ ಪೆಟ್ಟು ನೀಡುತ್ತಾನೆ. ಇದರಿಂದ ಬಾಲಾಜಿ ತಲೆಗೆ ಪೆಟ್ಟಾಗಿ ಕೂದಲು ಕೆಳಗೆ ಬೀಳುತ್ತದೆ. ಆಗ ನೀಲಾ ದೇವಿ ತನ್ನ ಕೂದಲನ್ನು ಕತ್ತರಿಸಿ, ಬಾಲಾಜಿ ತಲೆಗೆ ಅಂಟಿಸುತ್ತಾಳೆ, ಇದರಿಂದ ಬಾಲಾಜಿ ಗಾಯ ವಾಸಿಯಾಗುವುದು. ಕೂದಲು ಸೌಂದರ್ಯದ ಪ್ರತೀಕ. ತನ್ನ ಸೌಂದರ್ಯ ಲೆಕ್ಕಿಸದೆ ನೀಲಾ ದೇವಿ ತನ್ನ ಕೂದಲನ್ನು ಬಾಲಾಜಿಗೆ ಅರ್ಪಿಸುತ್ತಾಳೆ. ಆದ್ದರಿಂದ ಯಾರು ವೆಂಕಟೇಶ್ವರನಿಗೆ ಕೂದಲು ಅರ್ಪಿಸುತ್ತಾರೋ ಅವರ ಬಯಕೆ ಈಡೇರುವುದು ಎಂಬ ನಂಬಿಕೆ ಇದೆ.
ಇಲ್ಲಿ ದಾನ ಮಾಡಿದ ಕೂದಲು ಏನಾಗುತ್ತದೆ?
ತಿರುಪತಿಯಲ್ಲಿ ದಾನ ಮಾಡಲಾಗುವ ಕೂದಲನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗೆ ಮಾರಲಾಗುವುದು. ಯುರೋಪ್, ಅಮೆರಿಕ, ಚೀನಾ, ಆಫ್ರಿಕಾ ದೇಶಗಳಲ್ಲಿ ಕೂದಲಿಗೆ ತುಂಬಾ ಡಿಮ್ಯಾಂಡ್ ಇದೆ.
ಒಂದು ದಿನದಲ್ಲಿ ಸುಮಾರು 20, 000ಕ್ಕೂ ಅಧಿಕ ಭಕ್ತರು ಇಲ್ಲಿ ಕೂದಲನ್ನು ದಾನ ಮಾಡುತ್ತಾರೆ.



Click it and Unblock the Notifications