Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ತಿರುಪತಿಯಲ್ಲಿ ಮುಡಿ ದಾನ ಮಾಡುವುದರ ಹಿಂದಿರುವ ಮಹತ್ವವೇನು ಗೊತ್ತೇ?
ಭಾರತದ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲೊಂದು ತಿರುಪತಿ. ತಿರುಪತಿ ಬಾಲಾಜಿಯ ದರ್ಶನ ಪಡೆಯಲು ಪ್ರತಿನಿತ್ಯ ಲಕ್ಷಾಂತರ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಈ ಯಾರು ಈ ಪವಿತ್ರ ಕ್ಷೇತ್ರಕ್ಕೆ ಬಂದು ಬಾಲಾಜಿ ದೇವರ ದರ್ಶನ ಪಡೆಯುತ್ತಾರೋ ಅವರಿಗೆ ಎಲ್ಲಾ ಪಾಪಗಳಿಂದ ಮೋಕ್ಷ ಸಿಗುವುದು ಎಂಬ ನಂಬಿಕೆ.

ತಿರುಪತಿ ದೇವಾಲಯಕ್ಕೆ ಬಂದ ಭಕ್ತರು ಇಲ್ಲಿ ಮುಡಿಯನ್ನು ಹರಿಕೆ ರೂಪದಲ್ಲಿ ಸಲ್ಲಿಸುತ್ತಾರೆ. ತಮ್ಮ ಯಾವುದೋ ಒಂದು ಕಾರ್ಯಸಿದ್ಧಿಗಾಗಿ ಭಗವಂತ ತಿರುಪತಿ ಬಾಲಾಜಿಯಲ್ಲಿ ಪ್ರಾರ್ಥನೆ ಮಾಡಿರುತ್ತಾರೆ. ಆ ಕಾರ್ಯ ನೆರವೇರಿದಾಗ ಆ ಬಾಲಾಜಿಗೆ ತಮ್ಮ ಮುಡಿಯನ್ನು ಹರಿಕೆ ರೂಪದಲ್ಲಿ ಅರ್ಪಿಸುತ್ತಾರೆ. ಏಕೆ ಬಾಲಾಜಿಗೆ ಮುಡಿಯನ್ನು ಅರ್ಪಿಸುತ್ತಾರೆ, ಇದರ ಹಿಂದಿರುವ ಪೌರಾಣಿಕ ಕತೆಯ ಹಿನ್ನೆಲೆಯೇನು ಎಂದು ನೋಡೋಣ ಬನ್ನಿ:
ನಂಬಿಕೆ
ವೆಂಕಟೇಶ್ವರ ಕುಬೇರನಿಂದ ಪಡೆದ ಸಂಪತ್ತನ್ನು ಕೂದಲಿನ ರೂಪದಲ್ಲಿ ಮರಳಿಸುತ್ತಾನೆ ಎಂಬುವುದಾಗಿ ಪೌರಾಣಿಕ ಕತೆಯಿದೆ. ಭಕ್ತರು ವೆಂಕಟೇಶ್ವರನಿಗೆ ಮುಡಿಯನ್ನು ಹರಿಕೆ ರೂಪದಲ್ಲಿ ಅರ್ಪಿಸಿದರೆ ತಿರುಪತಿ ಅವರಿಗೆ 10 ಪಟ್ಟು ಅಧಿಕ ಸಂಪತ್ತು ಮರಳಿಸುತ್ತಾನೆ ಎಂಬ ನಂಬಿಕೆಯಿದೆ. ಯಾರು ವೆಂಕಟೇಶ್ವರನಿಗೆ ಕೂದಲನ್ನು ಹರಿಕೆ ರೂಪದಲ್ಲಿ ಅರ್ಪಿಸುತ್ತಾರೋ ಅವರಿಗೆ ಲಕ್ಷ್ಮಿ ಕೃಪೆ ಇರಲಿದೆ. ಇಲ್ಲಿ ಪುರುಷರು ಹಾಗೂ ಮಹಿಳೆಯರು ವೆಂಟೇಶ್ವರನಿಗೆ ಕೂದಲನ್ನು ಅರ್ಪಿಸುತ್ತಾರೆ.
ಪೌರಾಣಿಕ ಕತೆ
ಪೌರಾಣಿಕ ಕತೆಯ ಪ್ರಕಾರ ಬೆಟ್ಟದಲ್ಲಿ ಇರುವೆಗಳ ಗುಂಪುವೊಂದು ವೆಂಕಟೇಶ್ವರ ಪ್ರಾರ್ಥಿಸುತ್ತವೆ,ಹಸುವೊಂದು ಬೆಟ್ಟಕ್ಕೆ ಹೋಗಿ ಆ ಇರುವೆಗಳಿಗೆ ಹಾಲು ನೀಡುತ್ತದೆ. ಇದನ್ನು ನೋಡಿದ ಹಸುವಿನ ಮಾಲಿಕ ಕೋಪದಿಂದ ಕೊಡಲಿಯಿಂದ ಹಸುವಿನ ತಲೆಗೆ ಪೆಟ್ಟು ನೀಡುತ್ತಾನೆ. ಇದರಿಂದ ಬಾಲಾಜಿ ತಲೆಗೆ ಪೆಟ್ಟಾಗಿ ಕೂದಲು ಕೆಳಗೆ ಬೀಳುತ್ತದೆ. ಆಗ ನೀಲಾ ದೇವಿ ತನ್ನ ಕೂದಲನ್ನು ಕತ್ತರಿಸಿ, ಬಾಲಾಜಿ ತಲೆಗೆ ಅಂಟಿಸುತ್ತಾಳೆ, ಇದರಿಂದ ಬಾಲಾಜಿ ಗಾಯ ವಾಸಿಯಾಗುವುದು. ಕೂದಲು ಸೌಂದರ್ಯದ ಪ್ರತೀಕ. ತನ್ನ ಸೌಂದರ್ಯ ಲೆಕ್ಕಿಸದೆ ನೀಲಾ ದೇವಿ ತನ್ನ ಕೂದಲನ್ನು ಬಾಲಾಜಿಗೆ ಅರ್ಪಿಸುತ್ತಾಳೆ. ಆದ್ದರಿಂದ ಯಾರು ವೆಂಕಟೇಶ್ವರನಿಗೆ ಕೂದಲು ಅರ್ಪಿಸುತ್ತಾರೋ ಅವರ ಬಯಕೆ ಈಡೇರುವುದು ಎಂಬ ನಂಬಿಕೆ ಇದೆ.
ಇಲ್ಲಿ ದಾನ ಮಾಡಿದ ಕೂದಲು ಏನಾಗುತ್ತದೆ?
ತಿರುಪತಿಯಲ್ಲಿ ದಾನ ಮಾಡಲಾಗುವ ಕೂದಲನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗೆ ಮಾರಲಾಗುವುದು. ಯುರೋಪ್, ಅಮೆರಿಕ, ಚೀನಾ, ಆಫ್ರಿಕಾ ದೇಶಗಳಲ್ಲಿ ಕೂದಲಿಗೆ ತುಂಬಾ ಡಿಮ್ಯಾಂಡ್ ಇದೆ.
ಒಂದು ದಿನದಲ್ಲಿ ಸುಮಾರು 20, 000ಕ್ಕೂ ಅಧಿಕ ಭಕ್ತರು ಇಲ್ಲಿ ಕೂದಲನ್ನು ದಾನ ಮಾಡುತ್ತಾರೆ.



Click it and Unblock the Notifications