Latest Updates
-
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್!
ಗರುಡ ಪುರಾಣವು ಈ 5 ಕೆಲಸವನ್ನು ಮಹಾಪಾಪ ಎಂದಿದೆ
ಹಿಂದೂಗಳ 18 ಮಹಾಪುರಣಗಳಲ್ಲಿ ಗರುಡ ಪುರಾಣ ಕೂಡ. ಗರುಡ ಪುರಾಣದಲ್ಲಿ ಮನುಷ್ಯ ಹೇಗೆ ಜೀವಿಸಬೇಕು? ಸನ್ಮಾರ್ಗದಲ್ಲಿ ನಡೆದರೆ ಏನು ಪ್ರಯೋಜನ, ಕೆಟ್ಟ ಮಾರ್ಗದಲ್ಲಿ ನಡೆದರೆ ಯಾವ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎಂದು ಹೇಳಲಾಗಿದೆ. ಇದರಲ್ಲಿ ವ್ಯಕ್ತಿ ಹುಟ್ಟಿದಾಗಿನಿಂದ ಹಿಡಿದು ಸಾಯುವವರೆಗಿನ ಮನುಷ್ಯನ ಜೀವನದ ಬಗ್ಗೆ ಹೇಳಲಾಗಿದೆ. ಸ್ವರ್ಗ, ನರಕದ ಕಲ್ಪನೆ ಇದರಲ್ಲಿದೆ.
ಮನುಷ್ಯ ಸರಿಯಾದ ಮಾರ್ಗದಲ್ಲಿ ನಡೆಯಬೇಕೆಂಬ ಉದ್ದೇಶ ಗರುಡ ಪುರಾಣದಲ್ಲಿ ಏನು ಮಾಡಬಾರದು, ಯಶಸ್ವಿ ಬದುಕಿಗೆ ಏನು ಮಾಡಬೇಕು, ಬದುಕಿನ ನಂತರ ಮೋಕ್ಷವನ್ನು ಪಡೆಯುವುದು ಹೇಗೆ ಎಂಬುವುದರ ಬಗ್ಗೆ ಹೇಳಲಾಗಿದೆ.

* ಭ್ರೂಣದಲ್ಲಿರುವ ಮಗುವನ್ನು ಕೊಲ್ಲುವುದು, ನವಜಾತ ಶಿಶುವನ್ನು ಕೊಲ್ಲುವುದು, ಗರ್ಭಿಣಿ ಮಹಿಳೆಯನ್ನು ಕೊಲ್ಲುವುದು ಮಹಾ ಪಾಪವೆಂದು ಹೇಳಲಾಗಿದೆ. ಈ ರೀತಿ ಮಾಡಿದರೆ ಮಹಾಪಾಪ ಸುತ್ತಿಕೊಳ್ಳುತ್ತದೆ ಎಂದು ಹೇಳಿದೆ.
* ಯಾರು ಮಹಿಳೆಯರನ್ನು ಅವಮಾನಿಸುತ್ತಾರೋ, ಅವರಿಗೆ ಕಿರುಕುಳ ನೀಡುತ್ತಾರೋ, ಅತ್ಯಾಚಾರ ಮಾಡುತ್ತಾರೋ ಅವರಿಗೆ ನರಕದಲ್ಲಿ ದೊಡ್ಡ ಶಿಕ್ಷೆಯನ್ನು ನೀಡಲಾಗುವುದು ಎಂದು ಹೇಳಲಾಗುತ್ತದೆ.
* ಸ್ನೇಹಿತೆ ಅಥವಾ ಪರಸ್ತ್ರೀ ಜೊತೆ ತಪ್ಪಾಗಿ ವರ್ತಿಸಿದರೆ ಅಂಥ ವ್ಯಕ್ತಿ ಮಹಾಪಾಪ ತಗುಲುತ್ತದೆ, ಅವನಿಗೆ ನರಕದಲ್ಲಿ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಹೇಳಲಾಗಿದೆ.
* ಯಾರು ದೇವಾಲಯ, ಧಾರ್ಮಿಕ ಆಚರಣೆಗಳನ್ನು ನಿಂದಿಸುತ್ತಾರೋ ಅವರು ಬದುಕಿನಲ್ಲಿ ತುಂಬಾ ಕಷ್ಟ ಅನುಭವಿಸುತ್ತಾರೆ. ಅವರ ವೈವಾಹಿಕ ಬದುಕು ಚೆನ್ನಾಗಿರುವುದಿಲ್ಲ, ತುಂಬಾನೇ ಕಷ್ಟಗಳನ್ನು ಅನುಭವಿಸುತ್ತಾರೆ ಎಂದು ಹೇಳಲಾಗುವುದು.
* ಯಾರು ಹಿರಿಯರ ಜೊತೆ ಅಗೌರವದಿಂದ ವರ್ತಿಸುತ್ತಾರೋ, ಯಾರು ದುರ್ಬಲರಿಗೆ ಸಹಾಯ ಮಾಡುವುದಿಲ್ಲ, ಪೋಷಕರನ್ನು ನೋಡಿಕೊಳ್ಳುವುದಿಲ್ಲವೂ ಅವರಿಗೆ ಮಹಾಪಾಪ ಸುತ್ತಿಕೊಳ್ಳುತ್ತದೆ. ಇವರು ಬದುಕಿನಲ್ಲಿ ತುಂಬಾನೇ ಕಷ್ಟಗಳನ್ನು ಅನುಭವಿಸುತ್ತರೆ ಎಂದು ಹೇಳಲಾಗಿದೆ. ಇಂಥ ವ್ಯಕ್ತಿಗಳು ಸಾವಿನ ಬಳಿಕ ನರಕವನ್ನು ಕಾಣುತ್ತಾರೆ ಎಂದು ಹೇಳಲಾಗುವುದು.
ಸ್ವರ್ಗ-ನರಕದ ಕಲ್ಪನೆ ಮೂಲಕ ಗರುಡ ಪುರಾಣವು ಮನುಷ್ಯನನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಮಾಡುತ್ತದೆ. ಸಾವಿನ ನಂತರ ನರಕವಿದೆಯೀ ಎಂಬುವುದು ಗೊತ್ತಿಲ್ಲ ಆದರೆ ಗರುಡ ಪುರಾಣದಲ್ಲಿ ಯಾವ ಕಾರ್ಯ ಮಾಡಬಾರದು, ಯಾವುದನ್ನು ಮಾಡಬೇಕು ಎಂದು ಹೇಳಿರುವುದನ್ನು ಪಾಲಸಿಇದರೆ ಮನುಷ್ಯ ಜೀವನ ಸುಂದರವಾಗಿರುತ್ತದೆ, ನೆಮ್ಮದಿಯಿಂದ ಕೂಡಿರುತ್ತದೆ.



Click it and Unblock the Notifications