Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಗರುಡ ಪುರಾಣವು ಈ 5 ಕೆಲಸವನ್ನು ಮಹಾಪಾಪ ಎಂದಿದೆ
ಹಿಂದೂಗಳ 18 ಮಹಾಪುರಣಗಳಲ್ಲಿ ಗರುಡ ಪುರಾಣ ಕೂಡ. ಗರುಡ ಪುರಾಣದಲ್ಲಿ ಮನುಷ್ಯ ಹೇಗೆ ಜೀವಿಸಬೇಕು? ಸನ್ಮಾರ್ಗದಲ್ಲಿ ನಡೆದರೆ ಏನು ಪ್ರಯೋಜನ, ಕೆಟ್ಟ ಮಾರ್ಗದಲ್ಲಿ ನಡೆದರೆ ಯಾವ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎಂದು ಹೇಳಲಾಗಿದೆ. ಇದರಲ್ಲಿ ವ್ಯಕ್ತಿ ಹುಟ್ಟಿದಾಗಿನಿಂದ ಹಿಡಿದು ಸಾಯುವವರೆಗಿನ ಮನುಷ್ಯನ ಜೀವನದ ಬಗ್ಗೆ ಹೇಳಲಾಗಿದೆ. ಸ್ವರ್ಗ, ನರಕದ ಕಲ್ಪನೆ ಇದರಲ್ಲಿದೆ.
ಮನುಷ್ಯ ಸರಿಯಾದ ಮಾರ್ಗದಲ್ಲಿ ನಡೆಯಬೇಕೆಂಬ ಉದ್ದೇಶ ಗರುಡ ಪುರಾಣದಲ್ಲಿ ಏನು ಮಾಡಬಾರದು, ಯಶಸ್ವಿ ಬದುಕಿಗೆ ಏನು ಮಾಡಬೇಕು, ಬದುಕಿನ ನಂತರ ಮೋಕ್ಷವನ್ನು ಪಡೆಯುವುದು ಹೇಗೆ ಎಂಬುವುದರ ಬಗ್ಗೆ ಹೇಳಲಾಗಿದೆ.

* ಭ್ರೂಣದಲ್ಲಿರುವ ಮಗುವನ್ನು ಕೊಲ್ಲುವುದು, ನವಜಾತ ಶಿಶುವನ್ನು ಕೊಲ್ಲುವುದು, ಗರ್ಭಿಣಿ ಮಹಿಳೆಯನ್ನು ಕೊಲ್ಲುವುದು ಮಹಾ ಪಾಪವೆಂದು ಹೇಳಲಾಗಿದೆ. ಈ ರೀತಿ ಮಾಡಿದರೆ ಮಹಾಪಾಪ ಸುತ್ತಿಕೊಳ್ಳುತ್ತದೆ ಎಂದು ಹೇಳಿದೆ.
* ಯಾರು ಮಹಿಳೆಯರನ್ನು ಅವಮಾನಿಸುತ್ತಾರೋ, ಅವರಿಗೆ ಕಿರುಕುಳ ನೀಡುತ್ತಾರೋ, ಅತ್ಯಾಚಾರ ಮಾಡುತ್ತಾರೋ ಅವರಿಗೆ ನರಕದಲ್ಲಿ ದೊಡ್ಡ ಶಿಕ್ಷೆಯನ್ನು ನೀಡಲಾಗುವುದು ಎಂದು ಹೇಳಲಾಗುತ್ತದೆ.
* ಸ್ನೇಹಿತೆ ಅಥವಾ ಪರಸ್ತ್ರೀ ಜೊತೆ ತಪ್ಪಾಗಿ ವರ್ತಿಸಿದರೆ ಅಂಥ ವ್ಯಕ್ತಿ ಮಹಾಪಾಪ ತಗುಲುತ್ತದೆ, ಅವನಿಗೆ ನರಕದಲ್ಲಿ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಹೇಳಲಾಗಿದೆ.
* ಯಾರು ದೇವಾಲಯ, ಧಾರ್ಮಿಕ ಆಚರಣೆಗಳನ್ನು ನಿಂದಿಸುತ್ತಾರೋ ಅವರು ಬದುಕಿನಲ್ಲಿ ತುಂಬಾ ಕಷ್ಟ ಅನುಭವಿಸುತ್ತಾರೆ. ಅವರ ವೈವಾಹಿಕ ಬದುಕು ಚೆನ್ನಾಗಿರುವುದಿಲ್ಲ, ತುಂಬಾನೇ ಕಷ್ಟಗಳನ್ನು ಅನುಭವಿಸುತ್ತಾರೆ ಎಂದು ಹೇಳಲಾಗುವುದು.
* ಯಾರು ಹಿರಿಯರ ಜೊತೆ ಅಗೌರವದಿಂದ ವರ್ತಿಸುತ್ತಾರೋ, ಯಾರು ದುರ್ಬಲರಿಗೆ ಸಹಾಯ ಮಾಡುವುದಿಲ್ಲ, ಪೋಷಕರನ್ನು ನೋಡಿಕೊಳ್ಳುವುದಿಲ್ಲವೂ ಅವರಿಗೆ ಮಹಾಪಾಪ ಸುತ್ತಿಕೊಳ್ಳುತ್ತದೆ. ಇವರು ಬದುಕಿನಲ್ಲಿ ತುಂಬಾನೇ ಕಷ್ಟಗಳನ್ನು ಅನುಭವಿಸುತ್ತರೆ ಎಂದು ಹೇಳಲಾಗಿದೆ. ಇಂಥ ವ್ಯಕ್ತಿಗಳು ಸಾವಿನ ಬಳಿಕ ನರಕವನ್ನು ಕಾಣುತ್ತಾರೆ ಎಂದು ಹೇಳಲಾಗುವುದು.
ಸ್ವರ್ಗ-ನರಕದ ಕಲ್ಪನೆ ಮೂಲಕ ಗರುಡ ಪುರಾಣವು ಮನುಷ್ಯನನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಮಾಡುತ್ತದೆ. ಸಾವಿನ ನಂತರ ನರಕವಿದೆಯೀ ಎಂಬುವುದು ಗೊತ್ತಿಲ್ಲ ಆದರೆ ಗರುಡ ಪುರಾಣದಲ್ಲಿ ಯಾವ ಕಾರ್ಯ ಮಾಡಬಾರದು, ಯಾವುದನ್ನು ಮಾಡಬೇಕು ಎಂದು ಹೇಳಿರುವುದನ್ನು ಪಾಲಸಿಇದರೆ ಮನುಷ್ಯ ಜೀವನ ಸುಂದರವಾಗಿರುತ್ತದೆ, ನೆಮ್ಮದಿಯಿಂದ ಕೂಡಿರುತ್ತದೆ.



Click it and Unblock the Notifications
