Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಗರುಡ ಪುರಾಣವು ಈ 5 ಕೆಲಸವನ್ನು ಮಹಾಪಾಪ ಎಂದಿದೆ
ಹಿಂದೂಗಳ 18 ಮಹಾಪುರಣಗಳಲ್ಲಿ ಗರುಡ ಪುರಾಣ ಕೂಡ. ಗರುಡ ಪುರಾಣದಲ್ಲಿ ಮನುಷ್ಯ ಹೇಗೆ ಜೀವಿಸಬೇಕು? ಸನ್ಮಾರ್ಗದಲ್ಲಿ ನಡೆದರೆ ಏನು ಪ್ರಯೋಜನ, ಕೆಟ್ಟ ಮಾರ್ಗದಲ್ಲಿ ನಡೆದರೆ ಯಾವ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎಂದು ಹೇಳಲಾಗಿದೆ. ಇದರಲ್ಲಿ ವ್ಯಕ್ತಿ ಹುಟ್ಟಿದಾಗಿನಿಂದ ಹಿಡಿದು ಸಾಯುವವರೆಗಿನ ಮನುಷ್ಯನ ಜೀವನದ ಬಗ್ಗೆ ಹೇಳಲಾಗಿದೆ. ಸ್ವರ್ಗ, ನರಕದ ಕಲ್ಪನೆ ಇದರಲ್ಲಿದೆ.
ಮನುಷ್ಯ ಸರಿಯಾದ ಮಾರ್ಗದಲ್ಲಿ ನಡೆಯಬೇಕೆಂಬ ಉದ್ದೇಶ ಗರುಡ ಪುರಾಣದಲ್ಲಿ ಏನು ಮಾಡಬಾರದು, ಯಶಸ್ವಿ ಬದುಕಿಗೆ ಏನು ಮಾಡಬೇಕು, ಬದುಕಿನ ನಂತರ ಮೋಕ್ಷವನ್ನು ಪಡೆಯುವುದು ಹೇಗೆ ಎಂಬುವುದರ ಬಗ್ಗೆ ಹೇಳಲಾಗಿದೆ.

* ಭ್ರೂಣದಲ್ಲಿರುವ ಮಗುವನ್ನು ಕೊಲ್ಲುವುದು, ನವಜಾತ ಶಿಶುವನ್ನು ಕೊಲ್ಲುವುದು, ಗರ್ಭಿಣಿ ಮಹಿಳೆಯನ್ನು ಕೊಲ್ಲುವುದು ಮಹಾ ಪಾಪವೆಂದು ಹೇಳಲಾಗಿದೆ. ಈ ರೀತಿ ಮಾಡಿದರೆ ಮಹಾಪಾಪ ಸುತ್ತಿಕೊಳ್ಳುತ್ತದೆ ಎಂದು ಹೇಳಿದೆ.
* ಯಾರು ಮಹಿಳೆಯರನ್ನು ಅವಮಾನಿಸುತ್ತಾರೋ, ಅವರಿಗೆ ಕಿರುಕುಳ ನೀಡುತ್ತಾರೋ, ಅತ್ಯಾಚಾರ ಮಾಡುತ್ತಾರೋ ಅವರಿಗೆ ನರಕದಲ್ಲಿ ದೊಡ್ಡ ಶಿಕ್ಷೆಯನ್ನು ನೀಡಲಾಗುವುದು ಎಂದು ಹೇಳಲಾಗುತ್ತದೆ.
* ಸ್ನೇಹಿತೆ ಅಥವಾ ಪರಸ್ತ್ರೀ ಜೊತೆ ತಪ್ಪಾಗಿ ವರ್ತಿಸಿದರೆ ಅಂಥ ವ್ಯಕ್ತಿ ಮಹಾಪಾಪ ತಗುಲುತ್ತದೆ, ಅವನಿಗೆ ನರಕದಲ್ಲಿ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಹೇಳಲಾಗಿದೆ.
* ಯಾರು ದೇವಾಲಯ, ಧಾರ್ಮಿಕ ಆಚರಣೆಗಳನ್ನು ನಿಂದಿಸುತ್ತಾರೋ ಅವರು ಬದುಕಿನಲ್ಲಿ ತುಂಬಾ ಕಷ್ಟ ಅನುಭವಿಸುತ್ತಾರೆ. ಅವರ ವೈವಾಹಿಕ ಬದುಕು ಚೆನ್ನಾಗಿರುವುದಿಲ್ಲ, ತುಂಬಾನೇ ಕಷ್ಟಗಳನ್ನು ಅನುಭವಿಸುತ್ತಾರೆ ಎಂದು ಹೇಳಲಾಗುವುದು.
* ಯಾರು ಹಿರಿಯರ ಜೊತೆ ಅಗೌರವದಿಂದ ವರ್ತಿಸುತ್ತಾರೋ, ಯಾರು ದುರ್ಬಲರಿಗೆ ಸಹಾಯ ಮಾಡುವುದಿಲ್ಲ, ಪೋಷಕರನ್ನು ನೋಡಿಕೊಳ್ಳುವುದಿಲ್ಲವೂ ಅವರಿಗೆ ಮಹಾಪಾಪ ಸುತ್ತಿಕೊಳ್ಳುತ್ತದೆ. ಇವರು ಬದುಕಿನಲ್ಲಿ ತುಂಬಾನೇ ಕಷ್ಟಗಳನ್ನು ಅನುಭವಿಸುತ್ತರೆ ಎಂದು ಹೇಳಲಾಗಿದೆ. ಇಂಥ ವ್ಯಕ್ತಿಗಳು ಸಾವಿನ ಬಳಿಕ ನರಕವನ್ನು ಕಾಣುತ್ತಾರೆ ಎಂದು ಹೇಳಲಾಗುವುದು.
ಸ್ವರ್ಗ-ನರಕದ ಕಲ್ಪನೆ ಮೂಲಕ ಗರುಡ ಪುರಾಣವು ಮನುಷ್ಯನನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಮಾಡುತ್ತದೆ. ಸಾವಿನ ನಂತರ ನರಕವಿದೆಯೀ ಎಂಬುವುದು ಗೊತ್ತಿಲ್ಲ ಆದರೆ ಗರುಡ ಪುರಾಣದಲ್ಲಿ ಯಾವ ಕಾರ್ಯ ಮಾಡಬಾರದು, ಯಾವುದನ್ನು ಮಾಡಬೇಕು ಎಂದು ಹೇಳಿರುವುದನ್ನು ಪಾಲಸಿಇದರೆ ಮನುಷ್ಯ ಜೀವನ ಸುಂದರವಾಗಿರುತ್ತದೆ, ನೆಮ್ಮದಿಯಿಂದ ಕೂಡಿರುತ್ತದೆ.



Click it and Unblock the Notifications