Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಗಣೇಶನ ರೂಪ ಈ ಒಳಾರ್ಥಗಳನ್ನು ಹೊಂದಿದೆ ಗೊತ್ತಾ?
ಯಾವುದೇ ಪೂಜೆ ಮಾಡುವ ಮುನ್ನ ಗಣಪನ ಪೂಜೆ ಮಾಡುತ್ತೇವೆ. ಗಣಪತಿ ಎಂದ ತಕ್ಷಣ ನಮ್ಮ ಕಣ್ಮುಂದೆ ಕಂಡು ಬರುವ ಮೂರ್ತಿಯೆಂದರೆ ಆನೆಯ ಸೊಂಡಲಿನ, ಡೊಳ್ಳು ಹೊಟ್ಟೆಯ ಮುದ್ದಾದ, ದೈವಿಕವಾದ ರೂಪ. ಗಣೇಶನಿಗೆ ಏಕೆ ಆನೆಯ ರೂಪವಿದೆ ಎಂಬುವುದಕ್ಕೆ ಶಿವ ಪುರಾಣದಲ್ಲಿ ಕತೆಯಿದೆ. ಗಣೇಶನ ರೂಪಕ್ಕೆ ತುಂಬಾನೇ ಅರ್ಥ ಇದೆ. ಗಣೇಶನ ರೂಪ ಒಂದೊಂದು ಬದುಕಿನ ಅರ್ಥವನ್ನು ಹೇಳುತ್ತದೆ, ಅದರ ಬಗ್ಗೆ ನೋಡುವುದಾದರೆ.....

* ದೊಡ್ಡ ತಲೆ: ಗಣೇಶ ದೊಡ್ಡ ತಲೆಯನ್ನು ಹೊಂದಿದ್ದಾನೆ. ದೊಡ್ಡ ತಲೆಯೆಂದರೆ ದೊಡ್ಡದಾಗಿ ಚಿಂತೆ ಮಾಡು ಎಂಬುವುದಾಗಿದೆ. ದೊಡ್ಡ ಚಿಂತನೆ ಬದುಕನ್ನು ತುಂಬಾ ಎತ್ತರಕ್ಕೆ ತೆಗೆದುಕೊಂಡು ಹೋಗುತ್ತದೆ.
* ದೊಡ್ಡ ಕಿವಿ: ಗಣೇಶ ದೊಡ್ಡ ಕಿವಿಗಳನ್ನು ಹೊಂದಿದ್ದಾನೆ. ದೊಡ್ಡ ಕಿವಿ ಚೆನ್ನಾಗಿ ಕೇಳಿಸಿಕೊಳ್ಳಬೇಕು ಎಂಬ ಅರ್ಥವನ್ನು ಸೂಚಿಸುತ್ತದೆ. ಯಾರು ಏನೇ ಹೇಳಲಿ ಚೆನ್ನಾಗಿ ಕೇಳಿಸಿಕೊಳ್ಳಬೇಕು. ಅರ್ಧಂಬರ್ಧ ಕೇಳಿಸಿಕೊಂಡರೆ ತಪ್ಪು ಕಲ್ಪನೆ ಹೆಚ್ಚಾಗುತ್ತದೆ. ಆದ್ದರಿಂದ ಯಾರು ಏನೇ ಹೇಳಲಿ ಪೂರ್ಣವಾಗಿ ಕೇಳಿಸಿಕೊಳ್ಳುವ ಗುಣವನ್ನು ಹೊಂದಿರಬೇಕು.
* ಚಿಕ್ಕ ಕಣ್ಣುಗಳು: ದೊಡ್ಡ ತಲೆಗೆ ಚಿಕ್ಕ ಕಣ್ಣುಗಳು. ಈ ಚಿಕ್ಕ ಕಣ್ಣುಗಳು ಏಕಾಗ್ರತೆಯನ್ನು ಸೂಚಿಸುತ್ತದೆ. ನಾವು ನಮ್ಮ ಕೆಲಸವನ್ನು ಏಕಾಗ್ರತೆಯಿಂದ ಮಾಡಿದರೆ ಅದರಿಂದ ಉತ್ತಮ ಪ್ರಯೋಜನ ಪಡೆಯಬಹುದು.
* ಚಿಕ್ಕ ಬಾಯಿ: ಚಿಕ್ಕ ಬಾಯಿ ಸ್ವಲ್ಪ ಮಾತನಾಡಿ ಎಂಬುವುದನ್ನು ಸೂಚಿಸುತ್ತದೆ.
* ದಂತಗಳು: ಗಣೇಶನಿಗೆ ಎರಡು ದಂತಗಳು, ಒಂದು ದಂತ ಒಳ್ಳೆಯದನ್ನು ಸೂಚಿಸುತ್ತದೆ. ಅದು ಒಳ್ಳೆಯದನ್ನು ಸೂಚಿಸುತ್ತದೆ. ಮತ್ತೊಂದು ದಂತ ಮುರಿದಿರುತ್ತದೆ, ಅದು ನಮ್ಮಲ್ಲಿರುವ ಅಹಂ ಮುರಿದಿರಬೇಕು ಎಂಬುವುದನ್ನು ಸೂಚಿಸುತ್ತದೆ. ಒಳ್ಳೆಯ ಗುಣಗಳನ್ನು ಹೊಂದಬೇಕು, ಕೆಟ್ಟ ಗುಣವನ್ನು ಮುರಿಯಬೇಕು ಎಂಬುವುದನ್ನು ಸೂಚಿಸುತ್ತದೆ.
ಉದ್ದ ಸೊಂಡಿಲು: ಉದ್ದದ ಸೊಂಡಿಲು ಸ್ವೀಕರಿಸುವ ಗುಣವನ್ನು ಹೊಂದು ಸೂಚಿಸುತ್ತದೆ.
ದೊಡ್ಡ ಹೊಟ್ಟೆ: ಒಳ್ಳೆಯದು, ಕೆಟ್ಟದು ಎರಡನ್ನೂ ಜೀರ್ಣಸುವ ಶಕ್ತಿ ಹೊಂದಬೇಕು ಎಂಬುವುದನ್ನು ಸೂಚಿಸುತ್ತದೆ
ನಾಲ್ಕು ಕೈಗಳು: ನಾಲ್ಕು ಗುಣಗಳನ್ನು ಸೂಚಿಸುತ್ತದೆ: ಬುದ್ಧಿವಂತಿಕೆ, ಒಳ್ಳೆಯ ಆಲೋಚನೆ, ನಿಸ್ವಾರ್ಥ, ಆತ್ಮಸಾಕ್ಷಿಯನ್ನು ಪ್ರತಿನಿಧಿಸುತ್ತದೆ.
ಗಣೇಶ ಒಂದು ಕಾಲನ್ನು ಮತ್ತೊಂದು ಕಾಲಿನ ಮೇಲೆ ಹಾಕಿ ಕೂತಿರುವ ಭಂಗಿಯಲ್ಲಿ ಇರುತ್ತಾನೆ. ಇದು ಲೌಕಿಕ ಹಾಗೂ ಅಲೌಕಿಕ ಬದುಕು ಎರಡೂ ಮುಖ್ಯ ಎಂದು ಹೇಳಲಾಗುವುದು.
ಮನೆಯಲ್ಲಿ ಎಷ್ಟು ಗಣೇಶನ ಮೂರ್ತಿಯನ್ನು ಇಡಬಹುದು
ಮನೆಯಲ್ಲಿ ಒಂದು ಗಣೇಶನ ಮೂರ್ತಿ ಇದ್ದರೆ ಒಳ್ಳೆಯದು, ಒಂದಕ್ಕಿಂತ ಹೆಚ್ಚಿನ ಗಣೇಶನ ಮೂರ್ತಿಗಳನ್ನು ಇಟ್ಟರೆ ಪಾಸಿಟಿವ್ ಎನರ್ಜಿ ಹಂಚಿಹೋಗುವುದು, ಆದ್ದರಿಂದ ಒಂದೇ ಗಣೇಶನ ಕೂರಿಸಬೇಕು ಎಂದು ಹೇಳಲಾಗುವುದು.



Click it and Unblock the Notifications