Latest Updates
-
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ! -
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲಿನ ತಾಪಕ್ಕೆ ದಂಪತಿಗಳ ನಡುವೆ ಜಗಳವೇ? ಸಂಬಂಧ ಗಟ್ಟಿಯಾಗಿರಲು ಇಲ್ಲಿವೆ ನೋಡಿ ಸರಳ ಉಪಾಯಗಳು -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ವಿದ್ಯುತ್ ಬಿಲ್ ಇಲ್ಲದೆ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲ ಬೇಗೆಗೆ ರೆಡ್ ಅಲರ್ಟ್: ಹೀಟ್ ಸ್ಟ್ರೋಕ್ನಿಂದ ಪಾರಾಗಲು ಈ ಮನೆಮದ್ದುಗಳನ್ನು ಇಂದೇ ಟ್ರೈ ಮಾಡಿ! -
ಮಳೆಗಾಲದಲ್ಲಿ ಸ್ಟೈಲಿಶ್ ಆಗಿ ಕಾಣಬೇಕಾ? ಈ ಸಿಂಪಲ್ ಟಿಪ್ಸ್ ನಿಮ್ಮನ್ನು ಮಳೆಗಾಲದ ಫ್ಯಾಷನ್ ಐಕಾನ್ ಮಾಡೋದು ಗ್ಯಾರಂಟಿ!
ಗಣೇಶನ ರೂಪ ಈ ಒಳಾರ್ಥಗಳನ್ನು ಹೊಂದಿದೆ ಗೊತ್ತಾ?
ಯಾವುದೇ ಪೂಜೆ ಮಾಡುವ ಮುನ್ನ ಗಣಪನ ಪೂಜೆ ಮಾಡುತ್ತೇವೆ. ಗಣಪತಿ ಎಂದ ತಕ್ಷಣ ನಮ್ಮ ಕಣ್ಮುಂದೆ ಕಂಡು ಬರುವ ಮೂರ್ತಿಯೆಂದರೆ ಆನೆಯ ಸೊಂಡಲಿನ, ಡೊಳ್ಳು ಹೊಟ್ಟೆಯ ಮುದ್ದಾದ, ದೈವಿಕವಾದ ರೂಪ. ಗಣೇಶನಿಗೆ ಏಕೆ ಆನೆಯ ರೂಪವಿದೆ ಎಂಬುವುದಕ್ಕೆ ಶಿವ ಪುರಾಣದಲ್ಲಿ ಕತೆಯಿದೆ. ಗಣೇಶನ ರೂಪಕ್ಕೆ ತುಂಬಾನೇ ಅರ್ಥ ಇದೆ. ಗಣೇಶನ ರೂಪ ಒಂದೊಂದು ಬದುಕಿನ ಅರ್ಥವನ್ನು ಹೇಳುತ್ತದೆ, ಅದರ ಬಗ್ಗೆ ನೋಡುವುದಾದರೆ.....

* ದೊಡ್ಡ ತಲೆ: ಗಣೇಶ ದೊಡ್ಡ ತಲೆಯನ್ನು ಹೊಂದಿದ್ದಾನೆ. ದೊಡ್ಡ ತಲೆಯೆಂದರೆ ದೊಡ್ಡದಾಗಿ ಚಿಂತೆ ಮಾಡು ಎಂಬುವುದಾಗಿದೆ. ದೊಡ್ಡ ಚಿಂತನೆ ಬದುಕನ್ನು ತುಂಬಾ ಎತ್ತರಕ್ಕೆ ತೆಗೆದುಕೊಂಡು ಹೋಗುತ್ತದೆ.
* ದೊಡ್ಡ ಕಿವಿ: ಗಣೇಶ ದೊಡ್ಡ ಕಿವಿಗಳನ್ನು ಹೊಂದಿದ್ದಾನೆ. ದೊಡ್ಡ ಕಿವಿ ಚೆನ್ನಾಗಿ ಕೇಳಿಸಿಕೊಳ್ಳಬೇಕು ಎಂಬ ಅರ್ಥವನ್ನು ಸೂಚಿಸುತ್ತದೆ. ಯಾರು ಏನೇ ಹೇಳಲಿ ಚೆನ್ನಾಗಿ ಕೇಳಿಸಿಕೊಳ್ಳಬೇಕು. ಅರ್ಧಂಬರ್ಧ ಕೇಳಿಸಿಕೊಂಡರೆ ತಪ್ಪು ಕಲ್ಪನೆ ಹೆಚ್ಚಾಗುತ್ತದೆ. ಆದ್ದರಿಂದ ಯಾರು ಏನೇ ಹೇಳಲಿ ಪೂರ್ಣವಾಗಿ ಕೇಳಿಸಿಕೊಳ್ಳುವ ಗುಣವನ್ನು ಹೊಂದಿರಬೇಕು.
* ಚಿಕ್ಕ ಕಣ್ಣುಗಳು: ದೊಡ್ಡ ತಲೆಗೆ ಚಿಕ್ಕ ಕಣ್ಣುಗಳು. ಈ ಚಿಕ್ಕ ಕಣ್ಣುಗಳು ಏಕಾಗ್ರತೆಯನ್ನು ಸೂಚಿಸುತ್ತದೆ. ನಾವು ನಮ್ಮ ಕೆಲಸವನ್ನು ಏಕಾಗ್ರತೆಯಿಂದ ಮಾಡಿದರೆ ಅದರಿಂದ ಉತ್ತಮ ಪ್ರಯೋಜನ ಪಡೆಯಬಹುದು.
* ಚಿಕ್ಕ ಬಾಯಿ: ಚಿಕ್ಕ ಬಾಯಿ ಸ್ವಲ್ಪ ಮಾತನಾಡಿ ಎಂಬುವುದನ್ನು ಸೂಚಿಸುತ್ತದೆ.
* ದಂತಗಳು: ಗಣೇಶನಿಗೆ ಎರಡು ದಂತಗಳು, ಒಂದು ದಂತ ಒಳ್ಳೆಯದನ್ನು ಸೂಚಿಸುತ್ತದೆ. ಅದು ಒಳ್ಳೆಯದನ್ನು ಸೂಚಿಸುತ್ತದೆ. ಮತ್ತೊಂದು ದಂತ ಮುರಿದಿರುತ್ತದೆ, ಅದು ನಮ್ಮಲ್ಲಿರುವ ಅಹಂ ಮುರಿದಿರಬೇಕು ಎಂಬುವುದನ್ನು ಸೂಚಿಸುತ್ತದೆ. ಒಳ್ಳೆಯ ಗುಣಗಳನ್ನು ಹೊಂದಬೇಕು, ಕೆಟ್ಟ ಗುಣವನ್ನು ಮುರಿಯಬೇಕು ಎಂಬುವುದನ್ನು ಸೂಚಿಸುತ್ತದೆ.
ಉದ್ದ ಸೊಂಡಿಲು: ಉದ್ದದ ಸೊಂಡಿಲು ಸ್ವೀಕರಿಸುವ ಗುಣವನ್ನು ಹೊಂದು ಸೂಚಿಸುತ್ತದೆ.
ದೊಡ್ಡ ಹೊಟ್ಟೆ: ಒಳ್ಳೆಯದು, ಕೆಟ್ಟದು ಎರಡನ್ನೂ ಜೀರ್ಣಸುವ ಶಕ್ತಿ ಹೊಂದಬೇಕು ಎಂಬುವುದನ್ನು ಸೂಚಿಸುತ್ತದೆ
ನಾಲ್ಕು ಕೈಗಳು: ನಾಲ್ಕು ಗುಣಗಳನ್ನು ಸೂಚಿಸುತ್ತದೆ: ಬುದ್ಧಿವಂತಿಕೆ, ಒಳ್ಳೆಯ ಆಲೋಚನೆ, ನಿಸ್ವಾರ್ಥ, ಆತ್ಮಸಾಕ್ಷಿಯನ್ನು ಪ್ರತಿನಿಧಿಸುತ್ತದೆ.
ಗಣೇಶ ಒಂದು ಕಾಲನ್ನು ಮತ್ತೊಂದು ಕಾಲಿನ ಮೇಲೆ ಹಾಕಿ ಕೂತಿರುವ ಭಂಗಿಯಲ್ಲಿ ಇರುತ್ತಾನೆ. ಇದು ಲೌಕಿಕ ಹಾಗೂ ಅಲೌಕಿಕ ಬದುಕು ಎರಡೂ ಮುಖ್ಯ ಎಂದು ಹೇಳಲಾಗುವುದು.
ಮನೆಯಲ್ಲಿ ಎಷ್ಟು ಗಣೇಶನ ಮೂರ್ತಿಯನ್ನು ಇಡಬಹುದು
ಮನೆಯಲ್ಲಿ ಒಂದು ಗಣೇಶನ ಮೂರ್ತಿ ಇದ್ದರೆ ಒಳ್ಳೆಯದು, ಒಂದಕ್ಕಿಂತ ಹೆಚ್ಚಿನ ಗಣೇಶನ ಮೂರ್ತಿಗಳನ್ನು ಇಟ್ಟರೆ ಪಾಸಿಟಿವ್ ಎನರ್ಜಿ ಹಂಚಿಹೋಗುವುದು, ಆದ್ದರಿಂದ ಒಂದೇ ಗಣೇಶನ ಕೂರಿಸಬೇಕು ಎಂದು ಹೇಳಲಾಗುವುದು.



Click it and Unblock the Notifications