Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಸಾಲದಿಂದ ಮುಕ್ತರಾಗಲು ಶ್ರಾವಣ ಶುಕ್ರವಾರ ಲಕ್ಷ್ಮಿ ಪೂಜೆ ಮಾಡುವಾಗ ಈ ಪರಿಹಾರ ಮಾಡಿದರೆ ಒಳ್ಳೆಯದು
ಶುಕ್ರವಾರ ಲಕ್ಷ್ಮಿ ಪೂಜೆಗೆ ವಿಶೇಷವಾದ ದಿನ, ಅದರಲ್ಲೂ ಶ್ರಾವಣ ಶುಕ್ರವಾರ ಲಕ್ಷ್ಮಿ ಪೂಜೆ ಮತ್ತಷ್ಟು ವಿಶೇಷವಾಗಿರುತ್ತದೆ. ಈ ದಿನ ಲಕ್ಷ್ಮಿಯನ್ನು ಆರಾಧನೆ ಮಾಡುವಾಗ ನಿಮ್ಮ ಜೀವನದಲ್ಲಿ ಏನು ಸಮಸ್ಯೆಯಿದೆಯೋ ಅದಕ್ಕೆ ತಕ್ಕಂತೆ ಪರಿಹಾರ ಮಾಡಿದರೆ ಆ ಸಮಸ್ಯೆ ಬೇಗನೆ ದೂರಾಗಲಿದೆ. ನಾವಿಲ್ಲಿ ಶ್ರಾವಣ ಶುಕ್ರವಾರ ಲಕ್ಷ್ಮಿ ಆರಾಧನೆ ಮಾಡುವಾಗ ಹಣದ ಸಮಸ್ಯೆ, ವೈವಾಹಿಕ ಜೀವನದ ಸಮಸ್ಯೆ, ವಿವಾಹ ತಡವಾಗುವುದು ಮುಂತಾದ ಸಮಸ್ಯೆಗೆ ಏನು ಪರಿಹಾರ ಮಾಡಿದರೆ ಒಳ್ಳೆಯದು ಎಂದು ಹೇಳಲಾಗಿದೆ ನೋಡಿ:

ಹಣದ ಸಮಸ್ಯೆಗೆ ಪರಿಹಾರ
ಲಕ್ಷ್ಮಿ ಕೃಪೆ ಇದ್ದರೆ ಸಾಲದಿಂದ ಮುಕ್ತರಾಗಿ ಒಳ್ಳೆಯ ಬದುಕು ನಡೆಸಬಹುದು, ಸಾಲದಿಂದ ಮುಕ್ತರಾಗಲು ಲಕ್ಷ್ಮಿಗೆ ಈ ಪರಿಹಾರ ಮಾಡಿದರೆ ಒಳ್ಳೆಯದು ಎಂದು ಹೇಳಲಾಗುವುದು:
* ಶ್ರಾವಣ ಶುಕ್ರವಾರದಂದು ಸಂಜೆ ಪೂಜೆ ಮಾಡುವಾಗ ಕೆಂಪು ಬಟ್ಟೆಯಲ್ಲಿ ಹಸಿರು ಏಲಕ್ಕಿ ಕಟ್ಟಿ ಲಕ್ಷ್ಮಿಯ ಮೂರ್ತಿಯ ಮುಂದಿಟ್ಟು ಪೂಜಿಸಬೇಕು, ನಂತರ ಆರತಿ ಬೆಳಗಿದ ನಂತರ ಅದನ್ನು ಪರ್ಸ್ ಅಥವಾ ನಮ್ಮ ಕಪಾಟಿನಲ್ಲಿಟ್ಟರೆ ಒಳ್ಳೆಯದು ಎಂದು ಹೇಳಲಾಗುವುದು. ಹೀಗೆ ಮಾಡುವುದರಿಂದ ಹಣಕ್ಕೆ ಸಂಬಂಧಿಸಿದ ದೋಷ ನಿವಾರಣೆಯಾಗಲಿದೆ ಎಂಬ ನಂಬಿಕೆ ಇದೆ.
ಶ್ರಾವಣ ಶುಕ್ರವಾರ ಶಿವಲಿಂಗಕ್ಕೆ ಅಭಿಷೇಕ ಮಾಡಿಸಿ
* ಶ್ರಾವಣ ಮಾಸ ಶಿವನಿಗೆ ಮೀಸಲಾದ ತಿಂಗಳು. ನೀವು ಶ್ರಾವಣ ಶುಕ್ರವಾರ 'ಓಂ ನಮಃ ಶಿವಾಯ' ಮಂತ್ರ ಪಠಿಸುತ್ತಾ ಜಲಾಭಿಷೇಕ ಮಾಡಿ.
* ಲಕ್ಷ್ಮಿ ಮಂತ್ರ ಪಠಿಸಿ
ಮದುವೆಗೆ ಅಡೆತಡೆ ಇದ್ದರೆ
ಈ ದಿನ ನೀವು ಶಿವನಿಗೆ ಪಂಚಾಮೃತ ಅರ್ಪಿಸಿ ಅದರ ಜೊತೆಗೆ ಒಂದು ರೂಪಾಯಿ ನಾಣ್ಯವನ್ನು ಇಡಿ. ನಂತರ ಆ ನಾಣ್ಯವನ್ನು ನಿಮ್ಮ ಬಳಿ ಇರಿಸಿ,ಹೀಗೆ ಮಾಡುವುದರಿಂದ ವಿವಾಹದಲ್ಲಿರುವ ಅಡೆತಡೆ ದೂರಾಗಿ ಮನೆಯಲ್ಲಿ ಶುಭಕಾರ್ಯ ನಡೆಯುವುದು.
ಸಂಪತ್ತು ವೃದ್ಧಿಗೆ
ಶ್ರಾವಣ ಶುಕ್ರವಾರದಂದು ಅಕ್ಕಿ ಪಾಯಸವನ್ನು ಲಕ್ಷ್ಮಿಗೆ ನೈವೇದ್ಯವನ್ನಾಗಿ ಅರ್ಪಿಸಿ.
* ಶ್ರಾವಣ ಶುಕ್ರವಾರ 8 ಚಿಕ್ಕ ಹೆಣ್ಮಕ್ಕಳನ್ನು ಮನೆಗೆ ಕರೆದು ಅವರನ್ನು ಪೂಜಿಸಿ ಅವರಿಗೆ ಹೂವುಗಳು , ಸಿಹಿ ತಿಂಡಿಗಳು, ಬಟ್ಟೆಗಳನ್ನು ದಾನ ಮಾಡಿ.
ಇದರಿಂದ ಲಕ್ಷ್ಮಿ ಕೃಪೆ ಸಿಗುವುದು ಎಂಬ ನಂಬಿಕೆ ಇದೆ.
ಶುಕ್ರವಾರ ಉಪವಾಸ
ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ದಿನದ ಉಪವಾಸವು ಸಹ ಪ್ರಯೋಜನಕಾರಿಯಾಗಿದೆ. ಸಾಧ್ಯವಾದರೆ ಈ ದಿನ ಕಠಿಣ ಉಪವಾಸ ನಿಯಮ ಆಚರಿಸಿ. ಇದರಿಂದ ಲಕ್ಷ್ಮಿ ಕೃಪೆಗೆ ಪಾತ್ರರಾಗಬಹುದು.
ಅನ್ನವನ್ನು ವ್ಯರ್ಥ ಮಾಡಬೇಡಿ
ಧಾರ್ಮಿಕ ನಂಬಿಕೆಗಳ ಪ್ರಕಾರ ಆಹಾರವು ಲಕ್ಷ್ಮಿಯಾಗಿದೆ, ಆದ್ದರಿಂದ ಅನ್ನವನ್ನು ವ್ಯರ್ಥ ಮಾಡಬಾರದು. ಅಲ್ಲದೆ ಶುಕ್ರವಾರ ನಿರ್ಗತಿಕರಿಗೆ ಆಹಾರ ದಾನ ಮಾಡಿ.
ಶುಕ್ರವಾರ ಈ ಪರಿಹಾರ ಕೂಡ ಮಾಡಿದರೆ ಒಳ್ಳೆಯದು:
* ಶುಕ್ರವಾರ ದೀಪವನ್ನು ಹಚ್ಚಿ 11 ದಿನಗಳ ಕಾಲ ಅಖಂಡ ಜ್ಯೋತಿಯನ್ನು ಬೆಳಗಿಸಿ. 11ನೇ ದಿನ 11 ಹೆಣ್ಣು ಮಕ್ಕಳಿಗೆ ತಾಯಿಯ ಹೆಸರಿನಲ್ಲಿ ಊಟ ಹಾಕಬೇಕು. ಇದರಿಂದ ಹಣದ ಸಮಸ್ಯೆ ದೂರಾಗಲಿದೆ
* ಪ್ರತಿ ಶುಕ್ರವಾರದಂದು ದಕ್ಷಿಣಾವರ್ತಿ ಶಂಖದಲ್ಲಿ ನೀರು ತುಂಬಿ ವಿಷ್ಣುವಿಗೆ ಅಭಿಷೇಕ ಮಾಡುವುದರಿಂದ ತಾಯಿ ಲಕ್ಷ್ಮಿ ಶೀಘ್ರವಾಗಿ ಪ್ರಸನ್ನಳಾಗುತ್ತಾಳೆ.



Click it and Unblock the Notifications