Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
Shravan Shukravar Vrat : ಶ್ರಾವಣ ಶುಕ್ರವಾರ: ಸಂಪತ್ತು ವೃದ್ಧಿಗಾಗಿ ಪೂಜಾ ವಿಧಿಗಳು ಹಾಗೂ ಮಹತ್ವ
ಶ್ರಾವಣ ಶುಕ್ರವಾರವನ್ನು ಸಂಪತ್ತಿನ ಶುಕ್ರವಾರ ಎಂದು ಕೂಡ ಕರೆಯುತ್ತಾರೆ. ಶ್ರಾವಣ ಮಾಸದ ಎಲ್ಲಾ ಶುಕ್ರವಾರ ಲಕ್ಷ್ಮಿ ದೇವಿ ಅಥವಾ ಗೌರಿ ದೇವಿಯನ್ನು ಪೂಜಿಸಲಾಗುವುದು.
ಶ್ರಾವಣ ಶುಕ್ರವಾರ ವ್ರತವನ್ನು ಮುತ್ತೈದೆಯರು ಮಾಡುತ್ತಾರೆ. ಈ ವ್ರತ ಮಾಡುವುದರಿಂದ ಗಂಡನ ಆಯುಸ್ಸು ಹೆಚ್ಚುವುದು ಹಾಗೂ ಲಕ್ಷ್ಮಿಯ ಕೃಪೆಯಿಂದ ಸಂಪತ್ತು ಕೂಡ ವೃದ್ಧಿಯಾಗುವುದು.
ಶ್ರಾವಣ ಶುಕ್ರವಾರವನ್ನು ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ತೆಲಂಗಾಣದಲ್ಲಿ ಆಚರಿಸಲಾಗುವುದು.

ಶ್ರಾವಣ ಶುಕ್ರವಾರದ ದಿನಾಂಕಗಳು 2021
ಆಗಸ್ಟ್ 13, 2021
ಆಗಸ್ಟ್ 20, 2021,
ಆಗಸ್ಟ್ 27, 2021
ಸೆಪ್ಟೆಂಬರ್ 3, 2021

ಲಕ್ಷ್ಮಿ ಪೂಜೆಗೆ ಶುಭ ಸಮಯ
ಆಗಸ್ಟ್ 13, 2021
ಅಭಿಜಿತ್ ಮುಹೂರ್ತ: ಬೆಳಗ್ಗೆ 11:59ರಿಂದ ಮಧ್ಯಾಹ್ನ 12:50
ಅಮೃತ ಕಾಲ: ಮಧ್ಯಾಹ್ನ 12:49ರಿಂದ ರಾತ್ರಿನ 02:21ರವರೆಗೆ
ಗೋಧೂಳಿ ಮುಹೂರ್ತ ಸಂಜೆ 06: 29ರಿಂದ 06:53ರವರೆಗೆ
ಆಗಸ್ಟ್ 20, 2021,
ಅಭಿಜಿತ್ ಮುಹೂರ್ತ 11:58ರಿಂದ 12:48ರವರೆಗೆ
ಗೋಧೂಳಿ ಮುಹೂರ್ತ ಸಂಜೆ 06:25ರಿಂದ 06:49ರವರೆಗೆ
ಅಮೃತ ಕಾಲ: ಮಧ್ಯಾಹ್ನ 03:21ರಿಂದ ಸಂಜೆ 04:52ರವರೆಗೆ
ಆಗಸ್ಟ್ 27, 2021
ಅಭಿಜಿತ್ ಮುಹೂರ್ತ: ಬೆಳಗ್ಗೆ 11:56ರಿಂದ ಮಧ್ಯಾಹ್ನ 12:46ರವೆರೆಗೆ
ಗೋಧೂಳಿ ಮುಹೂರ್ತ: ಸಂಜೆ 06:21ರಿಂದ 06:45ರವರೆಗೆ
ಅಮೃತ ಕಾಲ: ಸಂಜೆ 04:54ರಿಂದ 06:39ರವರೆಗೆ
ಸೆಪ್ಟೆಂಬರ್ 3, 2021
ಅಭಿಜಿತ್ ಮುಹೂರ್ತ: ಬೆಳಗ್ಗೆ 11:54ರಿಂದ ಮಧ್ಯಾಹ್ನ 12:44ರವರೆಗೆ
ಗೋಧೂಳಿ ಮುಹೂರ್ತ: ಸಂಜೆ 06:17ರಿಂದ 06:41ರವೆರೆಗ
ಅಮೃತ ಕಾಲ: ಮಧ್ಯಾಹ್ನ 02:08ರಿಂದ 03:51ರವರೆಗೆ

ಶ್ರಾವಣ ಶುಕ್ರವಾರ ಪೂಜೆ ವಿಧಿ-ವಿಧಾನ
* ಬೆಳಗ್ಗೆ ಎದ್ದು ಎಣ್ಣೆ ಸ್ನಾನ ಮಾಡಬೇಕು
* ಬೆಳ್ಳಿ ಅಥವಾ ತಾಮ್ರದ 5 ಗಡಿಗೆ ತೆಗೆದು ಅದರಲ್ಲು ಶಂಖ, ಚಕ್ರ, ಎರಡು ಲಕ್ಷ್ಮಿಯ ಚಿತ್ರ, ಹಸು ಹಾಗೂ ಕರುವಿನ ಚಿತ್ರ, ಆನೆಯ ಚಿತ್ರ ಬಿಡಿಸಬೇಕು.
* ಗಡಿಗೆಯ ಮುಚ್ಚಳದ ಮೇಲೆ ಹೂವಿನ ಚಿತ್ರ ಬಿಡಿಸಿ, ಇದನ್ನು ಸಂಪತ್ತು ಗೌರಿ ಗಡಿಗೆಯೆಂದು ಹೇಳಲಾಗುವುದು.
* ನೀವು ಪ್ರತೀ ಗಡಿಕೆಯಲ್ಲಿ ಅಕ್ಕಿ, ಅರಿಶಿಣ ಕೊಂಬು, ಡ್ರೈ ಫ್ರೂಟ್ಸ್, ವೀಳ್ಯೆದೆಲೆ, ಅಡಿಕೆ ಇಟ್ಟು ಅವುಗಳನ್ನು ಪೂಜಾ ಸ್ಥಾನದಲ್ಲಿ ಇಡಿ.
* ಹಿಟ್ಟಿನಿಂದ ಹಣತೆಯನ್ನು ಮಾಡಿ ತುಪ್ಪದ ದೀಪ ಹಚ್ಚಿ.
* ಈಗ ನೀವು ಲಕ್ಷ್ಮಿ ಮಂತ್ರ ಅಥವಾ ಹಾಡುಗಳನ್ನು ಹೇಳುತ್ತಾ ಅವಳನ್ನು ಗಡಿಗೆಗೆ ಆಹ್ವಾನಿಸಿ, ಗಡಿಗೆಗೆ ಕಮಲದ ಹೂ, ಹೂ, ಹಣ್ಣುಗಳನ್ನು ಅರ್ಪಿಸಿ.
* ಲಕ್ಷ್ಮಿ ಮಂತ್ರಗಳನ್ನು ಹೇಳುತ್ತಾ ಮಂತ್ರಗಳನ್ನು ಪಠಿಸಿ.
* ನಂತರ ಮನೆಗೆ ಸುಮಂಗಲಿರನ್ನು ಕರೆದು ತಾಂಬೂಲ ನೀಡಿ.

ಲಕ್ಷ್ಮಿ ಮಂತ್ರ
"ಓಂ ಹ್ರೀಮ್ ಶ್ರೀಮ್ ಕ್ಲೀಮ್ ಮಹಾಲಕ್ಷ್ಮಿ ನಮಃ"



Click it and Unblock the Notifications











