Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
Shravan Shukravar Vrat : ಶ್ರಾವಣ ಶುಕ್ರವಾರ: ಸಂಪತ್ತು ವೃದ್ಧಿಗಾಗಿ ಪೂಜಾ ವಿಧಿಗಳು ಹಾಗೂ ಮಹತ್ವ
ಶ್ರಾವಣ ಶುಕ್ರವಾರವನ್ನು ಸಂಪತ್ತಿನ ಶುಕ್ರವಾರ ಎಂದು ಕೂಡ ಕರೆಯುತ್ತಾರೆ. ಶ್ರಾವಣ ಮಾಸದ ಎಲ್ಲಾ ಶುಕ್ರವಾರ ಲಕ್ಷ್ಮಿ ದೇವಿ ಅಥವಾ ಗೌರಿ ದೇವಿಯನ್ನು ಪೂಜಿಸಲಾಗುವುದು.
ಶ್ರಾವಣ ಶುಕ್ರವಾರ ವ್ರತವನ್ನು ಮುತ್ತೈದೆಯರು ಮಾಡುತ್ತಾರೆ. ಈ ವ್ರತ ಮಾಡುವುದರಿಂದ ಗಂಡನ ಆಯುಸ್ಸು ಹೆಚ್ಚುವುದು ಹಾಗೂ ಲಕ್ಷ್ಮಿಯ ಕೃಪೆಯಿಂದ ಸಂಪತ್ತು ಕೂಡ ವೃದ್ಧಿಯಾಗುವುದು.
ಶ್ರಾವಣ ಶುಕ್ರವಾರವನ್ನು ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ತೆಲಂಗಾಣದಲ್ಲಿ ಆಚರಿಸಲಾಗುವುದು.

ಶ್ರಾವಣ ಶುಕ್ರವಾರದ ದಿನಾಂಕಗಳು 2021
ಆಗಸ್ಟ್ 13, 2021
ಆಗಸ್ಟ್ 20, 2021,
ಆಗಸ್ಟ್ 27, 2021
ಸೆಪ್ಟೆಂಬರ್ 3, 2021

ಲಕ್ಷ್ಮಿ ಪೂಜೆಗೆ ಶುಭ ಸಮಯ
ಆಗಸ್ಟ್ 13, 2021
ಅಭಿಜಿತ್ ಮುಹೂರ್ತ: ಬೆಳಗ್ಗೆ 11:59ರಿಂದ ಮಧ್ಯಾಹ್ನ 12:50
ಅಮೃತ ಕಾಲ: ಮಧ್ಯಾಹ್ನ 12:49ರಿಂದ ರಾತ್ರಿನ 02:21ರವರೆಗೆ
ಗೋಧೂಳಿ ಮುಹೂರ್ತ ಸಂಜೆ 06: 29ರಿಂದ 06:53ರವರೆಗೆ
ಆಗಸ್ಟ್ 20, 2021,
ಅಭಿಜಿತ್ ಮುಹೂರ್ತ 11:58ರಿಂದ 12:48ರವರೆಗೆ
ಗೋಧೂಳಿ ಮುಹೂರ್ತ ಸಂಜೆ 06:25ರಿಂದ 06:49ರವರೆಗೆ
ಅಮೃತ ಕಾಲ: ಮಧ್ಯಾಹ್ನ 03:21ರಿಂದ ಸಂಜೆ 04:52ರವರೆಗೆ
ಆಗಸ್ಟ್ 27, 2021
ಅಭಿಜಿತ್ ಮುಹೂರ್ತ: ಬೆಳಗ್ಗೆ 11:56ರಿಂದ ಮಧ್ಯಾಹ್ನ 12:46ರವೆರೆಗೆ
ಗೋಧೂಳಿ ಮುಹೂರ್ತ: ಸಂಜೆ 06:21ರಿಂದ 06:45ರವರೆಗೆ
ಅಮೃತ ಕಾಲ: ಸಂಜೆ 04:54ರಿಂದ 06:39ರವರೆಗೆ
ಸೆಪ್ಟೆಂಬರ್ 3, 2021
ಅಭಿಜಿತ್ ಮುಹೂರ್ತ: ಬೆಳಗ್ಗೆ 11:54ರಿಂದ ಮಧ್ಯಾಹ್ನ 12:44ರವರೆಗೆ
ಗೋಧೂಳಿ ಮುಹೂರ್ತ: ಸಂಜೆ 06:17ರಿಂದ 06:41ರವೆರೆಗ
ಅಮೃತ ಕಾಲ: ಮಧ್ಯಾಹ್ನ 02:08ರಿಂದ 03:51ರವರೆಗೆ

ಶ್ರಾವಣ ಶುಕ್ರವಾರ ಪೂಜೆ ವಿಧಿ-ವಿಧಾನ
* ಬೆಳಗ್ಗೆ ಎದ್ದು ಎಣ್ಣೆ ಸ್ನಾನ ಮಾಡಬೇಕು
* ಬೆಳ್ಳಿ ಅಥವಾ ತಾಮ್ರದ 5 ಗಡಿಗೆ ತೆಗೆದು ಅದರಲ್ಲು ಶಂಖ, ಚಕ್ರ, ಎರಡು ಲಕ್ಷ್ಮಿಯ ಚಿತ್ರ, ಹಸು ಹಾಗೂ ಕರುವಿನ ಚಿತ್ರ, ಆನೆಯ ಚಿತ್ರ ಬಿಡಿಸಬೇಕು.
* ಗಡಿಗೆಯ ಮುಚ್ಚಳದ ಮೇಲೆ ಹೂವಿನ ಚಿತ್ರ ಬಿಡಿಸಿ, ಇದನ್ನು ಸಂಪತ್ತು ಗೌರಿ ಗಡಿಗೆಯೆಂದು ಹೇಳಲಾಗುವುದು.
* ನೀವು ಪ್ರತೀ ಗಡಿಕೆಯಲ್ಲಿ ಅಕ್ಕಿ, ಅರಿಶಿಣ ಕೊಂಬು, ಡ್ರೈ ಫ್ರೂಟ್ಸ್, ವೀಳ್ಯೆದೆಲೆ, ಅಡಿಕೆ ಇಟ್ಟು ಅವುಗಳನ್ನು ಪೂಜಾ ಸ್ಥಾನದಲ್ಲಿ ಇಡಿ.
* ಹಿಟ್ಟಿನಿಂದ ಹಣತೆಯನ್ನು ಮಾಡಿ ತುಪ್ಪದ ದೀಪ ಹಚ್ಚಿ.
* ಈಗ ನೀವು ಲಕ್ಷ್ಮಿ ಮಂತ್ರ ಅಥವಾ ಹಾಡುಗಳನ್ನು ಹೇಳುತ್ತಾ ಅವಳನ್ನು ಗಡಿಗೆಗೆ ಆಹ್ವಾನಿಸಿ, ಗಡಿಗೆಗೆ ಕಮಲದ ಹೂ, ಹೂ, ಹಣ್ಣುಗಳನ್ನು ಅರ್ಪಿಸಿ.
* ಲಕ್ಷ್ಮಿ ಮಂತ್ರಗಳನ್ನು ಹೇಳುತ್ತಾ ಮಂತ್ರಗಳನ್ನು ಪಠಿಸಿ.
* ನಂತರ ಮನೆಗೆ ಸುಮಂಗಲಿರನ್ನು ಕರೆದು ತಾಂಬೂಲ ನೀಡಿ.

ಲಕ್ಷ್ಮಿ ಮಂತ್ರ
"ಓಂ ಹ್ರೀಮ್ ಶ್ರೀಮ್ ಕ್ಲೀಮ್ ಮಹಾಲಕ್ಷ್ಮಿ ನಮಃ"



Click it and Unblock the Notifications
