Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಜುಲೈ 21ಕ್ಕೆ ಶ್ರಾವಣ ಮಾಸದ ಮೊದಲ ವಿನಾಯಕ ಚತುರ್ಥಿ: ಹೀಗೆ ಆರಾಧಿಸಿದರೆ ವಿಘ್ನೆಗಳೆಲ್ಲಾ ದೂರ
ಶ್ರಾವಣ ಮಾಸದ ಮೊದಲ ವಿನಾಯಕ ಚತುರ್ಥಿಯನ್ನು ಜುಲೈ 21ರಂದು ಆಚರಿಸಲಾಗುವುದು. ಶ್ರಾವಣ ಮಾಸದ ಶುಕ್ಲ ಪಕ್ಷದಲ್ಲಿ ಈ ವಿನಾಯಕ ಚತುರ್ಥಿ ಬಂದಿದ್ದು ಈ ದಿನ ಸಿದ್ಧಿ ವಿನಾಯಕನನ್ನು ಶಾಸ್ತ್ರೋಕ್ತವಾಗಿ ಪೂಜಿಸಲಾಗುವುದು. ಶ್ರಾವಣದಲ್ಲಿ ಆಚರಿಸುವ ವಿನಾಯಕ ಚತುರ್ಥಿಯ ಮಹತ್ವ ಹಾಗೂ ಪೂಜಾ ಸಮಯ, ಪೂಜಾ ವಿಧಿಗಳ ಕುರಿತು ಹೆಚ್ಚಿನ ಮಾಹಿತಿ ತಿಳಿಯೋಣ:

ಶ್ರಾವಣ ವಿನಾಯಕ ಚತುರ್ಥಿ
ಹಿಂದೂ ಪಂಚಾಂಗದ ಪ್ರಕಾರ ಚತುರ್ಥಿ ತಿಥಿಯು ಜುಲೈ 21 ರಂದು ಬೆಳಗ್ಗೆ 06.58 ರಿಂದ ಪ್ರಾರಂಭವಾಗಲಿದೆ, ಉದಯತಿಥಿಯ ಆಧಾರದ ಮೇಲೆ ಜುಲೈ 21 ರ ಶುಕ್ರವಾರದಂದು ಶ್ರಾವಣದ ದಿನದಂದು ಮೊದಲ ವಿನಾಯಕ ಚತುರ್ಥಿಯನ್ನು ಆಚರಿಸಲಾಗುತ್ತದೆ. ಈ ದಿನ ಉಪವಾಸವಿದ್ದು ವಿನಾಯಕನ್ನು ಆರಾಧಿಸುವುದರಿಂದ ಬಯಸಿದ್ದು ನೆರವೇರಲಿದೆ ಎಂಬ ನಂಬಿಕೆ.
ವಿನಾಯಕ ಚತುರ್ಥಿಯ ಆರಾಧನೆಗೆ ಮಂಗಳಕರ ಸಮಯ
ಜುಲೈ 21,ಈ ದಿನ ಗಣೇಶನ ಪೂಜೆಗೆ ಶುಭ ಮುಹೂರ್ತವು ಬೆಳಗ್ಗೆ 11.05 ರಿಂದ ಮಧ್ಯಾಹ್ನ 01.50 ರವರೆಗೆ ಇರುತ್ತದೆ.
ಪೂಜೆಗೆ ಎರಡು ಗಂಟೆ 45 ನಿಮಿಷಗಳಿವೆ.
ವಿನಾಯಕ ಚತುರ್ಥಿಯಂದು ರವಿಯೋಗ
ಶ್ರಾವಣದಲ್ಲಿ ಮೊದಲ ವಿನಾಯಕ ಚತುರ್ಥಿಯಂದು ಮಧ್ಯಾಹ್ನ 01.58 ರಿಂದ ರವಿ ಯೋಗವು ಪ್ರಾರಂಭವಾಗಲಿದ್ದು, ಜುಲೈ 22 ರ ಭಾನುವಾರದಂದು 05.37 ರವರೆಗೆ ಈ ಯೋಗವು ಮುಂದುವರಿಯುತ್ತದೆ. ರವಿ ಯೋಗವು ಎಲ್ಲಾ ಶುಭ ಕಾರ್ಯಗಳಿಗೆ ಶುಭ ಯೋಗವಾಗಿದೆ.
ಶುಭ ಕಾರ್ಯಗಳಿಗೆ ಈ ದಿನ ಅನೇಕ ಶುಭ ಯೋಗ ಏರ್ಪಟ್ಟಿದೆ
ಈ ದಿನ, ಲಾಭ-ಪ್ರಗತಿಗಾಗಿ ನೀವು ಈ ಶುಭಯೋಗದಲ್ಲಿ ಏನಾದರೂ ಹೊಸ ಕಾರ್ಯಕ್ಕೆ ಕೈ ಹಾಕಿದರೆ ಒಳ್ಳೆಯದು. ಬೆಳಗ್ಗೆ 10.44ರಿಂದ ಮಧ್ಯಾಹ್ನ 12.27ರವರೆಗೆ ಲಾಭ-ಪ್ರಗತಿ ಮುಹೂರ್ತವಿದೆ. ಇದರ ನಂತರ ಅಮೃತ-ಅತ್ಯುತ್ತಮ ಮುಹೂರ್ತವು ಮಧ್ಯಾಹ್ನ 12:27 ರಿಂದ 02:10 ರವರೆಗೆ ಇರಲಿದೆ. ಮತ್ತೊಂದೆಡೆ ರವಿ ಯೋಗದ ಬಗ್ಗೆ ಹೇಳುವುದಾದರೆ ಜುಲೈ 21 ರಂದು ಮಧ್ಯಾಹ್ನ 1.58 ರಿಂದ ಜುಲೈ 22 ರ ಬೆಳಗ್ಗೆ 5.37 ರವರೆಗೆ ರವಿ ಯೋಗ ಇರುತ್ತದೆ. ಈ ಸಮಯದಲ್ಲಿ ಯಾವುದೇ ರೀತಿಯ ಶುಭ ಕಾರ್ಯವನ್ನು ಮಾಡುವುದು ಒಳ್ಳೆಯದು ಎಂದು ಪರಿಗಣಿಸಲಾಗಿದೆ.
ವಿನಾಯಕ ಚತುರ್ಥಿ ಪೂಜಾ ವಿಧಾನ
ವಿನಾಯಕ ಚತುರ್ಥಿಯ ದಿನದಂದು ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಗಣೇಶನನ್ನು ಪ್ರಾರ್ಥಿಸಿ, ಸಂಕಲ್ಪ ತೆಗೆದುಕೊಳ್ಳಿ.
* ನಂತರ ವಿಧಿ ವಿಧಾನಗಳ ಮೂಲಕ ಗಣಪತಿಯನ್ನು ಆರಾಧಿಸಿ. ಗನೇಶನಿಗೆ ಗರಿಕೆಯನ್ನು ಕಡ್ಡಾಯವಾಗಿ ಅರ್ಪಿಸಿ.
* ಲಡ್ಡುಗಳನ್ನು ನೈವೇದ್ಯವನ್ನಾಗಿ ಅರ್ಪಿಸಿ.



Click it and Unblock the Notifications