Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಜುಲೈ 21ಕ್ಕೆ ಶ್ರಾವಣ ಮಾಸದ ಮೊದಲ ವಿನಾಯಕ ಚತುರ್ಥಿ: ಹೀಗೆ ಆರಾಧಿಸಿದರೆ ವಿಘ್ನೆಗಳೆಲ್ಲಾ ದೂರ
ಶ್ರಾವಣ ಮಾಸದ ಮೊದಲ ವಿನಾಯಕ ಚತುರ್ಥಿಯನ್ನು ಜುಲೈ 21ರಂದು ಆಚರಿಸಲಾಗುವುದು. ಶ್ರಾವಣ ಮಾಸದ ಶುಕ್ಲ ಪಕ್ಷದಲ್ಲಿ ಈ ವಿನಾಯಕ ಚತುರ್ಥಿ ಬಂದಿದ್ದು ಈ ದಿನ ಸಿದ್ಧಿ ವಿನಾಯಕನನ್ನು ಶಾಸ್ತ್ರೋಕ್ತವಾಗಿ ಪೂಜಿಸಲಾಗುವುದು. ಶ್ರಾವಣದಲ್ಲಿ ಆಚರಿಸುವ ವಿನಾಯಕ ಚತುರ್ಥಿಯ ಮಹತ್ವ ಹಾಗೂ ಪೂಜಾ ಸಮಯ, ಪೂಜಾ ವಿಧಿಗಳ ಕುರಿತು ಹೆಚ್ಚಿನ ಮಾಹಿತಿ ತಿಳಿಯೋಣ:

ಶ್ರಾವಣ ವಿನಾಯಕ ಚತುರ್ಥಿ
ಹಿಂದೂ ಪಂಚಾಂಗದ ಪ್ರಕಾರ ಚತುರ್ಥಿ ತಿಥಿಯು ಜುಲೈ 21 ರಂದು ಬೆಳಗ್ಗೆ 06.58 ರಿಂದ ಪ್ರಾರಂಭವಾಗಲಿದೆ, ಉದಯತಿಥಿಯ ಆಧಾರದ ಮೇಲೆ ಜುಲೈ 21 ರ ಶುಕ್ರವಾರದಂದು ಶ್ರಾವಣದ ದಿನದಂದು ಮೊದಲ ವಿನಾಯಕ ಚತುರ್ಥಿಯನ್ನು ಆಚರಿಸಲಾಗುತ್ತದೆ. ಈ ದಿನ ಉಪವಾಸವಿದ್ದು ವಿನಾಯಕನ್ನು ಆರಾಧಿಸುವುದರಿಂದ ಬಯಸಿದ್ದು ನೆರವೇರಲಿದೆ ಎಂಬ ನಂಬಿಕೆ.
ವಿನಾಯಕ ಚತುರ್ಥಿಯ ಆರಾಧನೆಗೆ ಮಂಗಳಕರ ಸಮಯ
ಜುಲೈ 21,ಈ ದಿನ ಗಣೇಶನ ಪೂಜೆಗೆ ಶುಭ ಮುಹೂರ್ತವು ಬೆಳಗ್ಗೆ 11.05 ರಿಂದ ಮಧ್ಯಾಹ್ನ 01.50 ರವರೆಗೆ ಇರುತ್ತದೆ.
ಪೂಜೆಗೆ ಎರಡು ಗಂಟೆ 45 ನಿಮಿಷಗಳಿವೆ.
ವಿನಾಯಕ ಚತುರ್ಥಿಯಂದು ರವಿಯೋಗ
ಶ್ರಾವಣದಲ್ಲಿ ಮೊದಲ ವಿನಾಯಕ ಚತುರ್ಥಿಯಂದು ಮಧ್ಯಾಹ್ನ 01.58 ರಿಂದ ರವಿ ಯೋಗವು ಪ್ರಾರಂಭವಾಗಲಿದ್ದು, ಜುಲೈ 22 ರ ಭಾನುವಾರದಂದು 05.37 ರವರೆಗೆ ಈ ಯೋಗವು ಮುಂದುವರಿಯುತ್ತದೆ. ರವಿ ಯೋಗವು ಎಲ್ಲಾ ಶುಭ ಕಾರ್ಯಗಳಿಗೆ ಶುಭ ಯೋಗವಾಗಿದೆ.
ಶುಭ ಕಾರ್ಯಗಳಿಗೆ ಈ ದಿನ ಅನೇಕ ಶುಭ ಯೋಗ ಏರ್ಪಟ್ಟಿದೆ
ಈ ದಿನ, ಲಾಭ-ಪ್ರಗತಿಗಾಗಿ ನೀವು ಈ ಶುಭಯೋಗದಲ್ಲಿ ಏನಾದರೂ ಹೊಸ ಕಾರ್ಯಕ್ಕೆ ಕೈ ಹಾಕಿದರೆ ಒಳ್ಳೆಯದು. ಬೆಳಗ್ಗೆ 10.44ರಿಂದ ಮಧ್ಯಾಹ್ನ 12.27ರವರೆಗೆ ಲಾಭ-ಪ್ರಗತಿ ಮುಹೂರ್ತವಿದೆ. ಇದರ ನಂತರ ಅಮೃತ-ಅತ್ಯುತ್ತಮ ಮುಹೂರ್ತವು ಮಧ್ಯಾಹ್ನ 12:27 ರಿಂದ 02:10 ರವರೆಗೆ ಇರಲಿದೆ. ಮತ್ತೊಂದೆಡೆ ರವಿ ಯೋಗದ ಬಗ್ಗೆ ಹೇಳುವುದಾದರೆ ಜುಲೈ 21 ರಂದು ಮಧ್ಯಾಹ್ನ 1.58 ರಿಂದ ಜುಲೈ 22 ರ ಬೆಳಗ್ಗೆ 5.37 ರವರೆಗೆ ರವಿ ಯೋಗ ಇರುತ್ತದೆ. ಈ ಸಮಯದಲ್ಲಿ ಯಾವುದೇ ರೀತಿಯ ಶುಭ ಕಾರ್ಯವನ್ನು ಮಾಡುವುದು ಒಳ್ಳೆಯದು ಎಂದು ಪರಿಗಣಿಸಲಾಗಿದೆ.
ವಿನಾಯಕ ಚತುರ್ಥಿ ಪೂಜಾ ವಿಧಾನ
ವಿನಾಯಕ ಚತುರ್ಥಿಯ ದಿನದಂದು ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಗಣೇಶನನ್ನು ಪ್ರಾರ್ಥಿಸಿ, ಸಂಕಲ್ಪ ತೆಗೆದುಕೊಳ್ಳಿ.
* ನಂತರ ವಿಧಿ ವಿಧಾನಗಳ ಮೂಲಕ ಗಣಪತಿಯನ್ನು ಆರಾಧಿಸಿ. ಗನೇಶನಿಗೆ ಗರಿಕೆಯನ್ನು ಕಡ್ಡಾಯವಾಗಿ ಅರ್ಪಿಸಿ.
* ಲಡ್ಡುಗಳನ್ನು ನೈವೇದ್ಯವನ್ನಾಗಿ ಅರ್ಪಿಸಿ.



Click it and Unblock the Notifications