Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಮಂಗಳ ಗೌರಿ ವ್ರತ: ಸಂಜೆ ಪೂಜೆಗೆ ಸಿದ್ಧತೆ ಮಾಡುವಾಗ ಈ ವಿಚಾರಗಳ ಬಗ್ಗೆ ಗಮನವಿರಲಿ
ಶ್ರಾವಣ ಮಾಸದ ಪ್ರತಿಮಂಗಳವಾರ ನವ ವಿವಾಹಿತ ಹೆಣ್ಮಕ್ಕಳು ಅಥವಾ ಮದುವೆಯಾಗಿ ಇನ್ನೂ ಐದು ವರ್ಷ ಪೂರ್ಣವಾಗದ ಹೆಣ್ಮಕ್ಕಳು ಮಂಗಳ ಗೌರಿ ವ್ರತ ಆಚರಿಸುತ್ತಾರೆ.
ಗಂಡನ ಆರೋಗ್ಯ, ಶ್ರೇಯಸ್ಸು, ಮನೆಯಲ್ಲಿ ಸಂಪತ್ತು ಹೆಚ್ಚಲು ಮಂಗಳ ಗೌರಿ ವ್ರತವನ್ನು ಮಾಡುತ್ತಾರೆ. ಅವಿವಾಹಿತ ಹುಡುಗಿಯರು ಸಹ ಒಳ್ಳೆಯ ಗಂಡನನ್ನು ಪಡೆಯಲು ಈ ಉಪವಾಸವನ್ನು ಆಚರಿಸುತ್ತಾರೆ. ಈ ವ್ರತವನ್ನು ಆಚರಿಸುವುದರಿಂದ ಪತಿ-ಪತ್ನಿ ಬಾಂಧವ್ಯ ಚೆನ್ನಾಗಿರುತ್ತದೆ. ಅಲ್ಲದೆ ಮಕ್ಕಳಿಲ್ಲದವರು ಮಂಗಳಗೌರಿ ವ್ರತವನ್ನು ಆಚರಿಸಿದರೆ ಸಂತಾನ ಭಾಗ್ಯ ಸಿಗುತ್ತದೆ ನಂಬಿಕೆ ಇದೆ.

ಗೌರಿ ಪೂಜೆಗೆ ಸಿದ್ಧತೆ ಮಾಡುವಾಗ ಈ 7 ವಿಚಾರಗಳನ್ನು ಮರೆಯಬೇಡಿ:
1. ಮೊದಲು ಮಂಟಪ ಮಾಡಬೇಕು
2. ಮಾವಿನ ಎಲೆಗಳಿಂದ ತೋರಣ ಕಟ್ಟಿ ಅಲಂಕರಿಸಬೇಕು
3. ಬೆಳ್ಳಿ ಅಥವಾ ತಾಮ್ರದ ತಟ್ಟೆಯಲ್ಲಿ ಅಕ್ಕಿ ಹಾಕಿ.
4. ಅದರ ಮೇಲೆ ಚಿನ್ನ, ಬೆಳ್ಳಿ ಅಥವಾ ತಾಮ್ರದ ಕೋಟ್ ಇರುವ ಮಂಗಳ ಗೌರಿ ಮುಖವನ್ನು ಪ್ರತಿಷ್ಠಾಪಿಸಿ
5. ಈ ರೀತಿಯ ಪ್ರತಿಮೆ ನಿಮ್ಮ ಬಳಿ ಇರದಿದ್ದರೆ ನೀವು ಅರಿಶಿಣದಿಂದಾದರೂ ಮಂಗಳಗೌರಿ ಮುಖ ಮಾಡಿ ಪ್ರತಿಷ್ಠಾಪಿಸಬಹುದು.
6. ದೇವಿಗೆ ಎಣ್ಣೆ ಸ್ನಾನ ಮಾಡಿ
7. ಅಕ್ಕಿ ಹಿಟ್ಟಿನಿಂದ ಮಾಡಿದ ಹಣತೆಯಲ್ಲಿ ತುಪ್ಪ ಹಾಕಿ ದೀಪ ಹಚ್ಚಬೇಕು.
ಮಂಗಳ ಗೌರಿ ವ್ರತ ಪೂಜೆ ವಿಧಾನ
- ಶ್ರಾವಣ ಮಂಗಳವಾರ ಹೆಣ್ಮಕ್ಕಳು ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ, ಸಾಂಪ್ರದಾಯಕ ಉಡುಗೆ ತೊಟ್ಟು ಅಲಂಕಾರ ಮಾಡಿ ಲಕ್ಷ್ಮಿ ಕಳೆಯಿಂದ ಕಂಗೊಳಿಸುತ್ತಾರೆ.
- ಇದರ ನಂತರ, ಉಪವಾಸದ ಪ್ರತಿಜ್ಞೆ ಮಾಡಿ ಮತ್ತು ಪೂಜೆಗಾಗಿ ಪೀಠದ ಮೇಲೆ ಕೆಂಪು ಬಣ್ಣದ ಬಟ್ಟೆಯನ್ನು ಹರಡಬೇಕು.
- ನಂತರ ಮಂಗಳ ಗೌರಿ ಮುಖವನ್ನು ಪ್ರತಿಷ್ಠಾಪಿಸಿ, ಸೀರೆಯನ್ನು ಉಡಿಸಿ.
- ಪಾರ್ವತಿಯನ್ನು ಹೂ, ಆಭರಣಗಳಿಂದ ಅಲಂಕರಿಸಿ.
- ನಂತರ ತುಪ್ಪದ ದೀಪವನ್ನು ಹಚ್ಚಿ ಆರತಿ ಮಾಡಿ.
- ಪೂಜೆಗೆ ಇಡುವ ಅಡಿಕೆ , ವೀಳ್ಯದೆಲೆ, ಲವಂಗ, ಏಲಕ್ಕಿ, ಹಣ್ಣು,ಲಡ್ಡು ಹಣ್ಣುಗಳು, ಸಿಹಿ ಪದಾರ್ಥಗಳು ಮತ್ತು ಬಳೆಗಳು ಹೀಗೆ ಎಲ್ಲಾ ಪದಾರ್ಥಗಳ ಸಂಖ್ಯೆಯು16 ಆಗಿರಬೇಕು ಎಂಬುದನ್ನು ನೆನಪಿನಲ್ಲಿಡಿ.
- ಪೂಜೆ ಸಾಮಾಗ್ರಿಗಳನ್ನು ಅರ್ಪಿಸಿದ ನಂತರ ಮಂಗಳ ಗೌರಿ ಮಂತ್ರಗಳನ್ನು ಪಠಿಸಿ, ದೇವಿಗೆ ಆರತಿ ಎತ್ತಿ ಮಂತ್ರಗಳನ್ನು ಪಠಿಸಿ.
ಈ ಮಂತ್ರಗಳನ್ನು ಪಠಿಸಿ
ವಿಷ್ಣುಸ್ಮುತಿ ವಿಹೀನಾಂ ತು ಪೂಜಾ ಸ್ಯಾದಾಸುರೀ ಮತಾ |
ಗೃಹ್ಣಂತಿ ದೇವತಾ ನೈತಾಂ ತತ: ಸ್ಯಾದ್ ದೇಶ ವಿಪ್ಲವ: |
ಸಂಸ್ಕೃತೋ ಭಗವಾನ್ ವಿಷ್ಣು: ಸರ್ವಮಂಗಲಮಂಗಲ: |
ಸಮಸ್ತಾಭೀಷ್ಟದಾಯೀ ಸ್ಯಾತ್ ತೇನ ಧ್ಯೇಯೋ ಅಖಿಲೈ:ಜನೈ: |
ಆಗಮಾರ್ಥಂತು ದೇವಾನಾಂ ಗಮನಾರ್ಥಂ ತು ರಕ್ಷಸಾಂ |
ಕುರು ಘಂಟಾರವಂ ತತ್ರ ದೇವತಾಹ್ವಾನಲಾಂಛನಂ
ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ
ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪಶಾಂತಯೇ |
ವಿದ್ಯಾರಂಭೇ ವಿವಾಹೇ ಚ ಪ್ರವೇಶೇ ನಿರ್ಗಮೇ ತಥಾ |
ಸಂಗ್ರಾಮೇ ಸರ್ವಕಾರ್ಯೇಷು ವಿಘ್ನಸ್ತಸ್ಯ ನ ಜಾಯತೇ | ಗಣಪತಿ ಅನುಗ್ರಹಸಿದ್ಧಿರಸ್ತು|
ಕೊನೆಗೆ ದೇವಿಗೆ ಆರತಿ ಎತ್ತಿ ಮನೆಗೆ ಕರೆದು ಮುತ್ತೈದೆಯರಿಗೆ ತಾಂಬೂಲ ನೀಡಿ ಅವರ ಆಶೀರ್ವಾದ ಪಡೆಯಿರಿ.



Click it and Unblock the Notifications
