Latest Updates
-
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ -
ಹೋಟೆಲ್ ಸ್ಟೈಲ್ ರಾಯಲ್ ಚಟ್ನಿ! ಈ ಒಂದು ವಸ್ತು ಸೇರಿಸಿ ನೋಡಿ.. ರುಚಿ ಡಬಲ್, 2 ಇಡ್ಲಿ ಜಾಸ್ತಿ ತಿಂತೀರಾ -
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ -
March 07 Horoscope: ಪ್ರಯಾಣ ಮಾಡುವಾಗ ಎಚ್ಚರವಿಡಿ! -
ಅಬ್ಬಬ್ಬಾ ಎಂಥಾ ರುಚಿ ಈ ಈರುಳ್ಳಿ ಮಂಚೂರಿಯನ್: ನೀವೂ ಕೂಡ ಟ್ರೈ ಮಾಡಿ -
ಮಾರ್ಚ್ನಲ್ಲಿ ಕಾಳಸರ್ಪ ಯೋಗ: ಈ ರಾಶಿಯವರಿಗೆ ಯೋಗದಿಂದ ಇದೆ ದೊಡ್ಡ ಲಾಭ!
ಮಂಗಳ ಗೌರಿ ವ್ರತ: ಸಂಜೆ ಪೂಜೆಗೆ ಸಿದ್ಧತೆ ಮಾಡುವಾಗ ಈ ವಿಚಾರಗಳ ಬಗ್ಗೆ ಗಮನವಿರಲಿ
ಶ್ರಾವಣ ಮಾಸದ ಪ್ರತಿಮಂಗಳವಾರ ನವ ವಿವಾಹಿತ ಹೆಣ್ಮಕ್ಕಳು ಅಥವಾ ಮದುವೆಯಾಗಿ ಇನ್ನೂ ಐದು ವರ್ಷ ಪೂರ್ಣವಾಗದ ಹೆಣ್ಮಕ್ಕಳು ಮಂಗಳ ಗೌರಿ ವ್ರತ ಆಚರಿಸುತ್ತಾರೆ.
ಗಂಡನ ಆರೋಗ್ಯ, ಶ್ರೇಯಸ್ಸು, ಮನೆಯಲ್ಲಿ ಸಂಪತ್ತು ಹೆಚ್ಚಲು ಮಂಗಳ ಗೌರಿ ವ್ರತವನ್ನು ಮಾಡುತ್ತಾರೆ. ಅವಿವಾಹಿತ ಹುಡುಗಿಯರು ಸಹ ಒಳ್ಳೆಯ ಗಂಡನನ್ನು ಪಡೆಯಲು ಈ ಉಪವಾಸವನ್ನು ಆಚರಿಸುತ್ತಾರೆ. ಈ ವ್ರತವನ್ನು ಆಚರಿಸುವುದರಿಂದ ಪತಿ-ಪತ್ನಿ ಬಾಂಧವ್ಯ ಚೆನ್ನಾಗಿರುತ್ತದೆ. ಅಲ್ಲದೆ ಮಕ್ಕಳಿಲ್ಲದವರು ಮಂಗಳಗೌರಿ ವ್ರತವನ್ನು ಆಚರಿಸಿದರೆ ಸಂತಾನ ಭಾಗ್ಯ ಸಿಗುತ್ತದೆ ನಂಬಿಕೆ ಇದೆ.

ಗೌರಿ ಪೂಜೆಗೆ ಸಿದ್ಧತೆ ಮಾಡುವಾಗ ಈ 7 ವಿಚಾರಗಳನ್ನು ಮರೆಯಬೇಡಿ:
1. ಮೊದಲು ಮಂಟಪ ಮಾಡಬೇಕು
2. ಮಾವಿನ ಎಲೆಗಳಿಂದ ತೋರಣ ಕಟ್ಟಿ ಅಲಂಕರಿಸಬೇಕು
3. ಬೆಳ್ಳಿ ಅಥವಾ ತಾಮ್ರದ ತಟ್ಟೆಯಲ್ಲಿ ಅಕ್ಕಿ ಹಾಕಿ.
4. ಅದರ ಮೇಲೆ ಚಿನ್ನ, ಬೆಳ್ಳಿ ಅಥವಾ ತಾಮ್ರದ ಕೋಟ್ ಇರುವ ಮಂಗಳ ಗೌರಿ ಮುಖವನ್ನು ಪ್ರತಿಷ್ಠಾಪಿಸಿ
5. ಈ ರೀತಿಯ ಪ್ರತಿಮೆ ನಿಮ್ಮ ಬಳಿ ಇರದಿದ್ದರೆ ನೀವು ಅರಿಶಿಣದಿಂದಾದರೂ ಮಂಗಳಗೌರಿ ಮುಖ ಮಾಡಿ ಪ್ರತಿಷ್ಠಾಪಿಸಬಹುದು.
6. ದೇವಿಗೆ ಎಣ್ಣೆ ಸ್ನಾನ ಮಾಡಿ
7. ಅಕ್ಕಿ ಹಿಟ್ಟಿನಿಂದ ಮಾಡಿದ ಹಣತೆಯಲ್ಲಿ ತುಪ್ಪ ಹಾಕಿ ದೀಪ ಹಚ್ಚಬೇಕು.
ಮಂಗಳ ಗೌರಿ ವ್ರತ ಪೂಜೆ ವಿಧಾನ
- ಶ್ರಾವಣ ಮಂಗಳವಾರ ಹೆಣ್ಮಕ್ಕಳು ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ, ಸಾಂಪ್ರದಾಯಕ ಉಡುಗೆ ತೊಟ್ಟು ಅಲಂಕಾರ ಮಾಡಿ ಲಕ್ಷ್ಮಿ ಕಳೆಯಿಂದ ಕಂಗೊಳಿಸುತ್ತಾರೆ.
- ಇದರ ನಂತರ, ಉಪವಾಸದ ಪ್ರತಿಜ್ಞೆ ಮಾಡಿ ಮತ್ತು ಪೂಜೆಗಾಗಿ ಪೀಠದ ಮೇಲೆ ಕೆಂಪು ಬಣ್ಣದ ಬಟ್ಟೆಯನ್ನು ಹರಡಬೇಕು.
- ನಂತರ ಮಂಗಳ ಗೌರಿ ಮುಖವನ್ನು ಪ್ರತಿಷ್ಠಾಪಿಸಿ, ಸೀರೆಯನ್ನು ಉಡಿಸಿ.
- ಪಾರ್ವತಿಯನ್ನು ಹೂ, ಆಭರಣಗಳಿಂದ ಅಲಂಕರಿಸಿ.
- ನಂತರ ತುಪ್ಪದ ದೀಪವನ್ನು ಹಚ್ಚಿ ಆರತಿ ಮಾಡಿ.
- ಪೂಜೆಗೆ ಇಡುವ ಅಡಿಕೆ , ವೀಳ್ಯದೆಲೆ, ಲವಂಗ, ಏಲಕ್ಕಿ, ಹಣ್ಣು,ಲಡ್ಡು ಹಣ್ಣುಗಳು, ಸಿಹಿ ಪದಾರ್ಥಗಳು ಮತ್ತು ಬಳೆಗಳು ಹೀಗೆ ಎಲ್ಲಾ ಪದಾರ್ಥಗಳ ಸಂಖ್ಯೆಯು16 ಆಗಿರಬೇಕು ಎಂಬುದನ್ನು ನೆನಪಿನಲ್ಲಿಡಿ.
- ಪೂಜೆ ಸಾಮಾಗ್ರಿಗಳನ್ನು ಅರ್ಪಿಸಿದ ನಂತರ ಮಂಗಳ ಗೌರಿ ಮಂತ್ರಗಳನ್ನು ಪಠಿಸಿ, ದೇವಿಗೆ ಆರತಿ ಎತ್ತಿ ಮಂತ್ರಗಳನ್ನು ಪಠಿಸಿ.
ಈ ಮಂತ್ರಗಳನ್ನು ಪಠಿಸಿ
ವಿಷ್ಣುಸ್ಮುತಿ ವಿಹೀನಾಂ ತು ಪೂಜಾ ಸ್ಯಾದಾಸುರೀ ಮತಾ |
ಗೃಹ್ಣಂತಿ ದೇವತಾ ನೈತಾಂ ತತ: ಸ್ಯಾದ್ ದೇಶ ವಿಪ್ಲವ: |
ಸಂಸ್ಕೃತೋ ಭಗವಾನ್ ವಿಷ್ಣು: ಸರ್ವಮಂಗಲಮಂಗಲ: |
ಸಮಸ್ತಾಭೀಷ್ಟದಾಯೀ ಸ್ಯಾತ್ ತೇನ ಧ್ಯೇಯೋ ಅಖಿಲೈ:ಜನೈ: |
ಆಗಮಾರ್ಥಂತು ದೇವಾನಾಂ ಗಮನಾರ್ಥಂ ತು ರಕ್ಷಸಾಂ |
ಕುರು ಘಂಟಾರವಂ ತತ್ರ ದೇವತಾಹ್ವಾನಲಾಂಛನಂ
ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ
ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪಶಾಂತಯೇ |
ವಿದ್ಯಾರಂಭೇ ವಿವಾಹೇ ಚ ಪ್ರವೇಶೇ ನಿರ್ಗಮೇ ತಥಾ |
ಸಂಗ್ರಾಮೇ ಸರ್ವಕಾರ್ಯೇಷು ವಿಘ್ನಸ್ತಸ್ಯ ನ ಜಾಯತೇ | ಗಣಪತಿ ಅನುಗ್ರಹಸಿದ್ಧಿರಸ್ತು|
ಕೊನೆಗೆ ದೇವಿಗೆ ಆರತಿ ಎತ್ತಿ ಮನೆಗೆ ಕರೆದು ಮುತ್ತೈದೆಯರಿಗೆ ತಾಂಬೂಲ ನೀಡಿ ಅವರ ಆಶೀರ್ವಾದ ಪಡೆಯಿರಿ.



Click it and Unblock the Notifications











