ಶ್ರಾವಣ ಮಾಸ: ಕರ್ನಾಟಕದಲ್ಲಿರುವ ಟಾಪ್ 10 ಪ್ರಸಿದ್ಧ ಶಿವ ಕ್ಷೇತ್ರಗಳು

ಶ್ರಾವಣ ಮಾಸ ಎಂಬುವುದು ಶಿವನ ಆರಾಧನೆಗೆ ಮೀಸಲಾದ ತಿಂಗಳು. ಈ ವರ್ಷ ಶ್ರಾವಣ ಮಾಸ ಜುಲೈ 18ರಿಂದ ಪ್ರಾರಂಭವಾಗಲಿದೆ. ಈ ವರ್ಷ ಅಧಿಕ ಮಾಸ ಇರುವುದರಿಂದ ಸೆಪ್ಟೆಂಬರ್‌ 15ರವರೆಗೆ ಇರಲಿದೆ. ಈ ಸಮಯದಲ್ಲಿ ಶಿವನ ಕ್ಷೇತ್ರಗಳಿಗೆ ಭೇಟಿ ನೀಡಿದರೆ, ಶಿವನ ಆರಾಧನೆ ಮಾಡಿದರೆ ಪುಣ್ಯ ಫಲ ಸಿಗಲಿದೆ. ಈ ವರ್ಷ ಶ್ರಾವಣ ಮಾಸದಲ್ಲಿ ನೀವು ಕರ್ನಾಟಕದಲ್ಲಿರುವ ಪ್ರಸಿದ್ಧ ಶಿವ ದೇವಾಲಯಗಳಿಗೆ ಭೇಟಿ ನೀಡಲು ಬಯಸಿದರೆ ನಿಮಗಾಗಿ ಪ್ರಸಿದ್ಧ ಶಿವ ದೇವಾಲಯಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ:

ಪಟ್ಟದ ಕಲ್ಲಿನಲ್ಲಿರುವ ಮಲ್ಲಿಕಾರ್ಜುನ ದೇವಾಲಯ

ನೀವು ಈ ದೇವಾಲಯಕ್ಕೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಹೋಗಬಹುದು, ರೈಲಿನಲ್ಲಿ ಹೋಗುವುದಾದರೆ ಬಾದಾಮಿ ರೈಲು ನಿದ್ದಾಣಕ್ಕೆ ಹೋಗಿ ಹೋಗಬಹುದು. ಈ ದೇವಾಲಯಕ್ಕೆ ಭೇಟಿ ನೀಡಿದರೆ ಮೋಕ್ಷ ಸಿಗುತ್ತದೆ, ಇಷ್ಟಾರ್ಥಗಳು ನೆರವೇರಲಿದೆ.

Shravan Masa 2023:Top 10 Shiva Kshetra In Karnataka

ಬನವಾಸಿಯಲ್ಲಿರುವ ಮಧುಕೇಶ್ವರಾ ದೇವಾಲಯ

ಕರ್ನಾಟಕದಲ್ಲಿರುವ ಅತ್ಯಂತ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದೆ. ಮಹಾಶಿವರಾತ್ರಿ ಸಮಯದಲ್ಲಿ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಶ್ರಾವಣ ಮಾಸದಲ್ಲಿ ಶಿವನಿಗೆ ವಿಶೇಷ ಪೂಜೆ ಸಲ್ಲಿಸುವುದರಿಂದ ಶ್ರಾವಣ ಮಾಸದಲ್ಲಿ ನೀವು ಇಲ್ಲಿಗೆ ಭೇಟಿ ನೀಡಬಹುದು. ಇಲ್ಲಿರುವ ನಂದಿಯ ಬಲಗಣ್ಣು ಶಿವನ ಮೂರ್ತಿಯನ್ನು ನೋಡಿದಂತೆ ಎಡಗಣ್ಣು ಪಾರ್ವತಿ ದೇವಿಯ ಮೂರ್ತಿಯನ್ನು ನೋಡಿದಂತಿದೆ. ಇಲ್ಲಿ ಅರ್ಧ ಕೆತ್ತಿದ ಗಣೇಶನ ಮೂರ್ತಿ ಕೂಡ ಇದೆ, ಇದರರ್ಧ ಭಾಗ ವಾರಾಣಸಿಯಲ್ಲಿದೆ ಎಂದು ನಂಬಲಾಗಿದೆ. ನೀವು ಶಿವಮೊಗ್ಗಕ್ಕೆ ಹೋಗಿ ಹೋಗಬಹುದು.

ಗದಗದ ಲಕ್ಕುಂಡಿಯಲ್ಲಿರುವ ನನ್ನೇಶ್ವರ ದೇವಾಲಯ

ಕರ್ನಾಟಕದ ಪ್ರಸಿದ್ಧ ಶಿವ ದೇವಾಲಯಗಳಲ್ಲಿ ಇದು ಒಂದಾಗಿದೆ. ಲಕ್ಕುಂಡಿ ಗ್ರಾಮದಲ್ಲಿದೆ. ಈ ದೇವಾಲಯಕ್ಕೆ ನೀವು ಕೆಎಸ್‌ಆರ್‌ಟಿಸಿ ಬಸ್ ಹಾಗೂ ರೈಲು ಮೂಲಕ ಹೋಗಬಹುದು. ಕರ್ನಾಟಕದಲ್ಲಿರುವ 7 ಮುಕ್ತಿ ಸ್ಥಳಗಳಲ್ಲಿ ಇದು ಕೂಡ ಒಂದಾಗಿದೆ. ಕರ್ನಾಟಕದಲ್ಲಿರುವ ಶಿವನ ಪಂಚ ಕ್ಷೇತ್ರಗಳಲ್ಲಿ ಈ ದೇವಾಲಯವೂ ಒಂದಾಗಿದೆ.

ಉಡುಪಿಯಲ್ಲಿರುವ ತುಳುವೇಶ್ವರಾ ದೇವಾಲಯ

ಉಡುಪಿಯ ಕುಂದಾಪುರದ ಬಸ್ರುರುನಲ್ಲಿ ಈ ತುಳುವೇಶ್ವರ ದೇವಾಲಯವಿದೆ. ಈ ದೇವಾಲಯದ ವಿಶೇಷವೆಂದರೆ ಇಲ್ಲಿ ಶಿವನ ದೇವಾಲಯ ಶಿಥಿಲವಾಗಿ ಹೋಗಿದ್ದರೂ, ಆಲದ ಮರವೇ ಶಿವಲಿಂಗದ ಸುತ್ತ ಆವರಿಸಿದೆ. ಈ ಆಲದ ಮರವೇ ಶಿವಲಿಂಗಕ್ಕೆ ಆಲಯದಂತಿದೆ. ಇಲ್ಲಿರುವ ನಂದಿ ವಿಗ್ರಹ ಕೂಡ ಅಪರೂಪದ ಕೆತ್ತನೆಯಿಂದ ಕೂಡಿದೆ.

ಶೃಂಗೇರಿಯಲ್ಲಿರುವ ವಿದ್ಯಾಶಂಕರ ದೇವಾಲಯ

ಶೃಂಗೇರಿಯಲ್ಲಿರುವ ಈ ದೇವಾಲಯ ಕೂಡ ಅತ್ಯಂತ ಪ್ರಸಿದ್ಧ ಶಿವ ದೇವಾಲಯಗಳಲ್ಲಿ ಒಂದಾಗಿದ್ದು, ನೀವು ಶೃಂಗೇರಿಗೆ ಹೋದಾಗ ಈ ಶಿವ ದೇವಾಲಯಕ್ಕೆ ಭೇಟಿ ಕೊಡಲು ಮಿಸ್‌ ಮಾಡದಿರಿ. ಅಲ್ಲದೆ ಶ್ರಾವಣ ಮಾಸದಲ್ಲಿ ಶಿವನ ಈ ದೇವಾಲಯಕ್ಕೆ ಭೇಟಿ ಕೊಟ್ಟರೆ ಒಳ್ಳೆಯದು.

ಭಟ್ಕಳದ ಮುರುಡೇಶ್ವರ ದೇವಾಲಯ

ಇದು ವಿಶ್ವ ಪ್ರಸಿದ್ಧವಾಗಿದೆ. ಇಲ್ಲಿಗೆ ಭಕ್ತರು, ಪ್ರವಾಸಿಗರು ಬೇಟಿ ನೀಡುತ್ತಾರೆ. ವಿಶ್ವದಲ್ಲಿ ಅತೀ ಎತ್ತರದ ಶಿವನ ಮೂರ್ತಿ ಹೊಂದಿರುವ ಎರಡನೇ ದೇವಾಲಯ ಇದಾಗಿದೆ. ಅದರಲ್ಲೂ ಇಲ್ಲಿರುವ ಪ್ರಕೃತಿ ರಮಣೀಯ ದೃಶ್ಯ ಕೂಡ ಇಲ್ಲಿ ಪ್ರಮುಖ ಆಕರ್ಷಣೆಯಾಗಿದೆ.

ಗೋಕರ್ಣದ ಮಹಾಬಲೇಶ್ವರ ದೇವಾಲಯ

ರಾಮಾಯಣ, ಮಹಾಭಾರತದಲ್ಲಿ ಈ ದೇವಾಲಯದ ಬಗ್ಗೆ ಉಲ್ಲೇಖವಿದೆ. ಗೋಕರ್ಣದ ಮಹಾಬಲೇಶ್ವರ ದೇವಾಲಯ ಕಾಶಿಯಷ್ಟೇ ಪ್ರಾಮುಖ್ಯತೆ ಪಡೆದಿರುವ ದೇವಾಲಯವಾಗಿದೆ. ಆದ್ದರಿಂದ ಈ ದೇವಾಲಯವನ್ನು ದಕ್ಷಿಣದ ಕಾಶಿ ಎಂದು ಕರೆಯಲಾಗುವುದು.

ಬೇಲೂರಿನ ಚೆನ್ನಕೇಶವ ದೇವಾಲಯ

ಬೇಲೂರಿನಲ್ಲಿ ಈ ಚೆನ್ನಕೇಶವ ದೇವಾಲಯಕ್ಕೆ ಪ್ರತಿನಿತ್ಯ ಭಕ್ತರು ಭೇಟಿ ನೀಡುತ್ತಾರೆ. ಶ್ರಾವಣ ಮಾಸದಲ್ಲಿ ನೀವು ಶಿವ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ, ಪ್ರಸಿದ್ಧ ಈ ಶಿವ ಕ್ಷೇತ್ರಕ್ಕೂ ಭೇಟಿ ನೀಡಿ, ಪುಣ್ಯಫಲ ಪಡೆಯಿರಿ.

ಕೋಲಾರದ ಕೋಟಿ ಲಿಂಗೇಶ್ವರ ದೇವಾಲಯ

ಕರ್ನಾಟಕದಲ್ಲಿರುವ ಪ್ರಸಿದ್ಧ ಶಿವ ದೇವಾಲಯಗಳಲ್ಲಿ ಕೋಟಿಲಿಂಗೇಶ್ವರ ದೇವಾಲಯ ಕೂಡ ಒಂದಾಗಿದೆ. ಮಹಾಶಿವರಾತ್ರಿ ಸಮಯದಲ್ಲಂತೂ ಇಲ್ಲಿಗೆ ಬರುವ ಭಕ್ತರ ಸಂಖ್ಯೆ ಸಾವಿರಾರು ಸಂಖ್ಯೆಯಲ್ಲಿರುತ್ತದೆ.

ಶಿವಮೊಗ್ಗದ ಕೇದರೇಶ್ವರ ದೇವಾಲಯ

ಇದು ವಿಷ್ಣು ಹಾಗೂ ಶಿವನಿಗೆ ಸಂಬಂಧಿಸಿದ ದೇವಾಲಯವಾಗಿದೆ. ಈ ದೇವಾಲಯ ಶಿವಮೊಗ್ಗದಲ್ಲಿದೆ.

English summary

Shravan Masa 2023:Top 10 Shiva Kshetra In Karnataka

Shravan Masa 2023: Better to visit 10 Shiva Kshetra In Karnataka Read on.
Story first published: Thursday, July 13, 2023, 17:30 [IST]
X
Desktop Bottom Promotion