Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಶ್ರಾವಣದಲ್ಲಿ ವಿಶೇಷ ಪೂಜೆ ಸಲ್ಲಿಸಲು ಬೆಂಗಳೂರಿನಲ್ಲಿರುವ ಈ 6 ಪ್ರಸಿದ್ಧ ಶಿವ ದೇಗುಲಕ್ಕೆ ಭೇಟಿ ನೀಡಿ
ಶ್ರಾವಣ ಮಾಸ, ಶಿವ ಭಕ್ತರ ಅಚ್ಚು ಮೆಚ್ಚಿನ ಮಾಸ. ಈ ಸಮಯದಲ್ಲಿ ಶಿವನ ಧ್ಯಾನ ಮಾಡಿದಷ್ಟೂ ಒಳ್ಳೆಯದು. ಶ್ರಾವಣ ಮಾಸದಲ್ಲಿ ಶಿವ ಕ್ಷೇತ್ರಗಳಿಗೆ ಭೇಟಿ ನೀಡುವವರ ಸಂಖ್ಯೆ ಅಧಿಕವಿರಲಿದೆ . ನಮ್ಮ ಬೆಂಗಳೂರಿನಲ್ಲಿ ಕೂಡ ಅನೇಕ ಪ್ರಾಚೀನ ಶಿವ ದೇವಾಲಯಗಳಿವೆ. ಇದುವರೆಗೆ ಆ ದೇವಾಲಯಕ್ಕೆ ಹೋಗಿರದಿದ್ದರೆ ಈ ಶ್ರಾವಣ ಮಾಸದಲ್ಲಿ ಭೇಟಿ ನೀಡಿ ಶಿವನ ಆಶೀರ್ವಾದಕ್ಕೆ ಪಾತ್ರರಾಗಬಹುದು.
1. ಪಂಚ ಲಿಂಗ ನಾಗೇಶ್ವರ ದೇವಾಲಯ
ಇದು ಬೆಂಗಳೂರಿನಲ್ಲಿರುವ ಅತ್ಯಂತ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದ್ದು ಗರ್ಭಗುಡಿಯಲ್ಲಿ ಶಿವಲಿಂಗವಿದ್ದು ಶ್ರಾವಣ ಸೋಮವಾರದ ದಿನಗಳಲ್ಲಿ ವಿಶೇಷ ಪೂಜೆ ನಡೆಯಲಿದೆ. ಇಲ್ಲಿರುವ ನಾಗಲಿಂಗೇಶ್ವರ ಲಿಂಗವು ಪಂಚ ಲಿಂಗಳಲ್ಲಿಯೇ ಅತಿ ಎತ್ತರದ ಲಿಂಗವಾಗಿದೆ.

ಇಷ್ಟಾರ್ಥ ನೆರವೇರಲು ಜನರು ಹರಿಕೆ ಹೊತ್ತು ಬರುತ್ತಾರೆ
ವೃತ್ತಿ ಜೀವನದಲ್ಲಿ ಅಡೆತಡೆಗಳು ಉಂಟಾದಾಗ, ಉತ್ತಮ ಉದ್ಯೋಗ ಸಿಗಬೇಕು, ಏನಾದರೂ ಆರೋಗ್ಯ ಸಮಸ್ಯೆಯಿದ್ದಾಗ ಜನರು ಹರಿಕೆ ಹೊತ್ತು ಈ ದೇವಾಯಕ್ಕೆ ಬಂದು ಹರಿಕೆ ತೀರಿಸಿ ಹೋಗುತ್ತಾರೆ.
2. ಗವಿ ಗಂಗೇಶ್ವರ ದೇವಾಲಯ
ಇಲ್ಲಿ ಮಕರ ಸಂಕ್ರಾಂತಿ ಸಮಯದಲ್ಲಿ ವಿಶೇಷ ಪೂಜೆಯನ್ನು ಮಾಡುತ್ತಾರೆ. ಇದು ಬೆಂಗಳೂರಿನ ಬಸವನಗುಡಿ ಪಕ್ಕದಲ್ಲಿಯೇ ಇದೆ. ಇಲ್ಲಿರುವ ಶುವಲಿಂಗದ ವಿಶೇಷತೆಯೆಂದರೆ ಅದು ದಕ್ಷಿಣಾಭಿಮುಖವಾಗಿದೆ, ಬೇರೆ ಕಡೆ ನಿಮಗೆ ಪೂರ್ವಾಭಿಮುಖ ಅಥವಾ ಉತ್ತರಾಭಿಮುಖವಾಗಿ ಇರಲಿದೆ. ಅಲ್ಲದೆ ಇಲ್ಲಿ ಪಾರ್ವತಿ ದೇವಿ ಶಿವನ ಬಲಭಾಗದಲ್ಲಿ ಆಸೀನಳಾಗಿದ್ದಾಳೆ. ಪುರಾಣ ಕತೆಗಳಲ್ಲಿ ಬರುವ ಸಪ್ತ ಋಷಿಗಳಲ್ಲಿ ಒಬ್ಬರಾದ ಗೌತಮ ಮಹರ್ಷಿ ಇಲ್ಲಿ ತಪಸ್ಸು ಮಾಡಿದ್ದರು ಎಂಬ ಪೌರಾಣಿಕ ಕತೆಗಳಿವೆ. ಮಕರ ಸಂಕ್ರಾಂತಿಯಂದು ಶಿವಲಿಂಗಕ್ಕೆ ಸೂರ್ಯರಶ್ಮಿಗಳ ಅಭಿಷೇಕ ಆಗುವುದು ಕೂಡ ಇಲ್ಲಿಯ ಹಲವಾರು ಚಮತ್ಕಾರಗಳಲ್ಲಿ ಒಂದಾಗಿದೆ.
3. ಕಾಡು ಮಲ್ಲೇಶ್ವರ ದೇವಾಲಯ
ಕಾಡು ಮಲ್ಲೇಶ್ವರ ದೇವಾಲಯ ಮಲ್ಲೇಶ್ವರಂನಲ್ಲಿದೆ. ಇಲ್ಲಿಯ ಪ್ರಧಾನ ಗರ್ಭಗುಡಿಯಲ್ಲಿ ಅರ್ಧ ಅಡಿ ಎತ್ತರದ
ಶಿವಲಿಂಗವಿದೆ. ಮಹಾಶಿವರಾತ್ರಿಗೆ ಇಲ್ಲಿ ಗಿರಿಜಾ ಕಲ್ಯಾಣ ನಡೆಯುತ್ತದೆ. ಇಲ್ಲಿ ಪ್ರತಿನಿತ್ಯ ಪೂಜೆ ನಡೆಯುತ್ತಿದ್ದು ಶ್ರಾವಣದಲ್ಲಿ ಈ ದೇವಾಲಯಕ್ಕೆ ಭೇಟಿ ನೀಡಿದರೆ ಒಳ್ಳೆಯದು.
4. ಹಲಸೂರು ಸೋಮೇಶ್ವರ ದೇವಾಲಯ
ಇದು ಪುರಾತನ ಶಿವ ದೇವಾಲಯಗಳಲ್ಲಿ ಒಂದಾಗಿದೆ. ಇಲ್ಲಿ ಪರಶಿವ ಸೋಮೇಶ್ವರ ರೂಪದಲ್ಲಿ ಲಿಂಗರೂಪಿಯಾಗಿ ನೆಲೆಸಿದ್ದಾನೆ. ಈ ದೇವಾಲಯದಲ್ಲಿ ತ್ರಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರನಿಗೆ ಪೂಜೆ ಸಲ್ಲಿಸುವುದು ಇಲ್ಲಿಯ ವಿಶೇಷಗಳಲ್ಲಿ ಒಂದಾಗಿದೆ. ನೀವು ಈ ದೇವಾಲಯಕ್ಕೆ ಹೋಗಿ ರುದ್ರಾಭಿಷೇಕ ಮಾಡಿಸಿ ಬರಬಹುದು.
5. ಶ್ರೀ ಜಲ ಕಂಟೇಶ್ವರ ದೇವಾಲಯ
ಈ ಶಿವ ದೇವಾಲಯ ಬೆಂಗಳೂರಿನ ಕಲಾಸಿಪಾಳ್ಯದಲ್ಲಿದೆ. ಈ ದೇವಾಲಯ ಕೂಡ ತುಂಬಾ ಪ್ರಶಾಂತವಾಗಿದ್ದು ಶಿವ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡಿದಾಗ ಅತಿಯಾದ ಮಾನಸಿಕ ನೆಮ್ಮದಿ ಪಡೆಯುತ್ತಾರೆ.
6. ಮಲ್ಲಿಕಾರ್ಜುನ ಸ್ವಾಮಿ ದೇವಾಲಯ
ಈ ದೇವಾಲಯ ಕೂಡ ಬೆಂಗಳೂರಿನ ಬಸವನಗುಡಿಯಲ್ಲಿದೆ. ತಮ್ಮ ಕಷ್ಟಗಳ ನಿವಾರಣೆ ಮಾಡು ತಂದೆ ಎಂದು ಪ್ರತಿನಿತ್ಯ ಭಕ್ತರು ಇಲ್ಲಿಗೆ ಬರುತ್ತಾರೆ. ಇಲ್ಲಿಗೆ ಆಗಮಿಸಿದರೆ ಎಲ್ಲಾ ಕಷ್ಟಗಳು ದೂರಾಗಲಿದೆ ಎಂಬುವುದು ಶಿವ ಭಕ್ತರ ಅಚಲ ನಂಬಿಕೆ.



Click it and Unblock the Notifications











