Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಶ್ರಾವಣದಲ್ಲಿ ವಿಶೇಷ ಪೂಜೆ ಸಲ್ಲಿಸಲು ಬೆಂಗಳೂರಿನಲ್ಲಿರುವ ಈ 6 ಪ್ರಸಿದ್ಧ ಶಿವ ದೇಗುಲಕ್ಕೆ ಭೇಟಿ ನೀಡಿ
ಶ್ರಾವಣ ಮಾಸ, ಶಿವ ಭಕ್ತರ ಅಚ್ಚು ಮೆಚ್ಚಿನ ಮಾಸ. ಈ ಸಮಯದಲ್ಲಿ ಶಿವನ ಧ್ಯಾನ ಮಾಡಿದಷ್ಟೂ ಒಳ್ಳೆಯದು. ಶ್ರಾವಣ ಮಾಸದಲ್ಲಿ ಶಿವ ಕ್ಷೇತ್ರಗಳಿಗೆ ಭೇಟಿ ನೀಡುವವರ ಸಂಖ್ಯೆ ಅಧಿಕವಿರಲಿದೆ . ನಮ್ಮ ಬೆಂಗಳೂರಿನಲ್ಲಿ ಕೂಡ ಅನೇಕ ಪ್ರಾಚೀನ ಶಿವ ದೇವಾಲಯಗಳಿವೆ. ಇದುವರೆಗೆ ಆ ದೇವಾಲಯಕ್ಕೆ ಹೋಗಿರದಿದ್ದರೆ ಈ ಶ್ರಾವಣ ಮಾಸದಲ್ಲಿ ಭೇಟಿ ನೀಡಿ ಶಿವನ ಆಶೀರ್ವಾದಕ್ಕೆ ಪಾತ್ರರಾಗಬಹುದು.
1. ಪಂಚ ಲಿಂಗ ನಾಗೇಶ್ವರ ದೇವಾಲಯ
ಇದು ಬೆಂಗಳೂರಿನಲ್ಲಿರುವ ಅತ್ಯಂತ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದ್ದು ಗರ್ಭಗುಡಿಯಲ್ಲಿ ಶಿವಲಿಂಗವಿದ್ದು ಶ್ರಾವಣ ಸೋಮವಾರದ ದಿನಗಳಲ್ಲಿ ವಿಶೇಷ ಪೂಜೆ ನಡೆಯಲಿದೆ. ಇಲ್ಲಿರುವ ನಾಗಲಿಂಗೇಶ್ವರ ಲಿಂಗವು ಪಂಚ ಲಿಂಗಳಲ್ಲಿಯೇ ಅತಿ ಎತ್ತರದ ಲಿಂಗವಾಗಿದೆ.

ಇಷ್ಟಾರ್ಥ ನೆರವೇರಲು ಜನರು ಹರಿಕೆ ಹೊತ್ತು ಬರುತ್ತಾರೆ
ವೃತ್ತಿ ಜೀವನದಲ್ಲಿ ಅಡೆತಡೆಗಳು ಉಂಟಾದಾಗ, ಉತ್ತಮ ಉದ್ಯೋಗ ಸಿಗಬೇಕು, ಏನಾದರೂ ಆರೋಗ್ಯ ಸಮಸ್ಯೆಯಿದ್ದಾಗ ಜನರು ಹರಿಕೆ ಹೊತ್ತು ಈ ದೇವಾಯಕ್ಕೆ ಬಂದು ಹರಿಕೆ ತೀರಿಸಿ ಹೋಗುತ್ತಾರೆ.
2. ಗವಿ ಗಂಗೇಶ್ವರ ದೇವಾಲಯ
ಇಲ್ಲಿ ಮಕರ ಸಂಕ್ರಾಂತಿ ಸಮಯದಲ್ಲಿ ವಿಶೇಷ ಪೂಜೆಯನ್ನು ಮಾಡುತ್ತಾರೆ. ಇದು ಬೆಂಗಳೂರಿನ ಬಸವನಗುಡಿ ಪಕ್ಕದಲ್ಲಿಯೇ ಇದೆ. ಇಲ್ಲಿರುವ ಶುವಲಿಂಗದ ವಿಶೇಷತೆಯೆಂದರೆ ಅದು ದಕ್ಷಿಣಾಭಿಮುಖವಾಗಿದೆ, ಬೇರೆ ಕಡೆ ನಿಮಗೆ ಪೂರ್ವಾಭಿಮುಖ ಅಥವಾ ಉತ್ತರಾಭಿಮುಖವಾಗಿ ಇರಲಿದೆ. ಅಲ್ಲದೆ ಇಲ್ಲಿ ಪಾರ್ವತಿ ದೇವಿ ಶಿವನ ಬಲಭಾಗದಲ್ಲಿ ಆಸೀನಳಾಗಿದ್ದಾಳೆ. ಪುರಾಣ ಕತೆಗಳಲ್ಲಿ ಬರುವ ಸಪ್ತ ಋಷಿಗಳಲ್ಲಿ ಒಬ್ಬರಾದ ಗೌತಮ ಮಹರ್ಷಿ ಇಲ್ಲಿ ತಪಸ್ಸು ಮಾಡಿದ್ದರು ಎಂಬ ಪೌರಾಣಿಕ ಕತೆಗಳಿವೆ. ಮಕರ ಸಂಕ್ರಾಂತಿಯಂದು ಶಿವಲಿಂಗಕ್ಕೆ ಸೂರ್ಯರಶ್ಮಿಗಳ ಅಭಿಷೇಕ ಆಗುವುದು ಕೂಡ ಇಲ್ಲಿಯ ಹಲವಾರು ಚಮತ್ಕಾರಗಳಲ್ಲಿ ಒಂದಾಗಿದೆ.
3. ಕಾಡು ಮಲ್ಲೇಶ್ವರ ದೇವಾಲಯ
ಕಾಡು ಮಲ್ಲೇಶ್ವರ ದೇವಾಲಯ ಮಲ್ಲೇಶ್ವರಂನಲ್ಲಿದೆ. ಇಲ್ಲಿಯ ಪ್ರಧಾನ ಗರ್ಭಗುಡಿಯಲ್ಲಿ ಅರ್ಧ ಅಡಿ ಎತ್ತರದ
ಶಿವಲಿಂಗವಿದೆ. ಮಹಾಶಿವರಾತ್ರಿಗೆ ಇಲ್ಲಿ ಗಿರಿಜಾ ಕಲ್ಯಾಣ ನಡೆಯುತ್ತದೆ. ಇಲ್ಲಿ ಪ್ರತಿನಿತ್ಯ ಪೂಜೆ ನಡೆಯುತ್ತಿದ್ದು ಶ್ರಾವಣದಲ್ಲಿ ಈ ದೇವಾಲಯಕ್ಕೆ ಭೇಟಿ ನೀಡಿದರೆ ಒಳ್ಳೆಯದು.
4. ಹಲಸೂರು ಸೋಮೇಶ್ವರ ದೇವಾಲಯ
ಇದು ಪುರಾತನ ಶಿವ ದೇವಾಲಯಗಳಲ್ಲಿ ಒಂದಾಗಿದೆ. ಇಲ್ಲಿ ಪರಶಿವ ಸೋಮೇಶ್ವರ ರೂಪದಲ್ಲಿ ಲಿಂಗರೂಪಿಯಾಗಿ ನೆಲೆಸಿದ್ದಾನೆ. ಈ ದೇವಾಲಯದಲ್ಲಿ ತ್ರಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರನಿಗೆ ಪೂಜೆ ಸಲ್ಲಿಸುವುದು ಇಲ್ಲಿಯ ವಿಶೇಷಗಳಲ್ಲಿ ಒಂದಾಗಿದೆ. ನೀವು ಈ ದೇವಾಲಯಕ್ಕೆ ಹೋಗಿ ರುದ್ರಾಭಿಷೇಕ ಮಾಡಿಸಿ ಬರಬಹುದು.
5. ಶ್ರೀ ಜಲ ಕಂಟೇಶ್ವರ ದೇವಾಲಯ
ಈ ಶಿವ ದೇವಾಲಯ ಬೆಂಗಳೂರಿನ ಕಲಾಸಿಪಾಳ್ಯದಲ್ಲಿದೆ. ಈ ದೇವಾಲಯ ಕೂಡ ತುಂಬಾ ಪ್ರಶಾಂತವಾಗಿದ್ದು ಶಿವ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡಿದಾಗ ಅತಿಯಾದ ಮಾನಸಿಕ ನೆಮ್ಮದಿ ಪಡೆಯುತ್ತಾರೆ.
6. ಮಲ್ಲಿಕಾರ್ಜುನ ಸ್ವಾಮಿ ದೇವಾಲಯ
ಈ ದೇವಾಲಯ ಕೂಡ ಬೆಂಗಳೂರಿನ ಬಸವನಗುಡಿಯಲ್ಲಿದೆ. ತಮ್ಮ ಕಷ್ಟಗಳ ನಿವಾರಣೆ ಮಾಡು ತಂದೆ ಎಂದು ಪ್ರತಿನಿತ್ಯ ಭಕ್ತರು ಇಲ್ಲಿಗೆ ಬರುತ್ತಾರೆ. ಇಲ್ಲಿಗೆ ಆಗಮಿಸಿದರೆ ಎಲ್ಲಾ ಕಷ್ಟಗಳು ದೂರಾಗಲಿದೆ ಎಂಬುವುದು ಶಿವ ಭಕ್ತರ ಅಚಲ ನಂಬಿಕೆ.



Click it and Unblock the Notifications