Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಶ್ರಾವಣ ಮಂಗಳವಾರ ಹನುಮಂತನನ್ನು ಈ ರೀತಿ ಪೂಜಿಸಿದರೆ ಸಂಕಷ್ಟಗಳು ದೂರಾಗುವುದು
ಶ್ರಾವಣ ಮಾಸ, ಶಿವನ ಪೂಜೆಗೆ ಮೀಸಲಾದ ತಿಂಗಳು, ಈ ತಿಂಗಳ ಪೂರ್ತಿ ಶಿವನ ಆರಾಧನೆ ಮಾಡಿದರೆ ಶಿವಕೃಪೆಗೆ ಪಾತ್ರರಾಗಬಹುದು, ಅದರಲ್ಲೂ ಶಿವ ಪೂಜೆಗೆ ಶ್ರಾವಣ ಸೋಮವಾರ ತುಂಬಾನೇ ಶ್ರೇಷ್ಠವಾದ ದಿನವಾಗಿದೆ.
ಅಲ್ಲದೆ ಶ್ರಾವಣ ಮಂಗಳವಾರ ಗೌರಿ ಪೂಜೆಗೆ, ಹನುಮಂತನ ಪೂಜೆಗೆ ತುಂಬಾ ಶ್ರೇಷ್ಠವಾದ ದಿನವಾಗಿದೆ. ಶ್ರಾವಣ ಮಂಗಳವಾರದಂದು ಹನುಮಂತನ ಆರಾಧನೆ ಹೇಗೆ ಮಾಡಬೇಕು? ಸಂಕಷ್ಟ ನಿವಾರಣೆಗೆ ಯಾವೆಲ್ಲಾ ಪರಿಹಾರ ಮಾಡಿದರೆ ಒಳ್ಳೆಯದು ಎಂದು ನೋಡೋಣ ಬನ್ನಿ:

ಶ್ರಾವಣ ಮಂಗಳವಾರ ಈ ಪೂಜಾ ವಿಧಿಗಳನ್ನು ಪಾಲಿಸಿ
- ಮಂಗಳವಾರ ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಮಡಿ ಬಟ್ಟೆ ಧರಿಸಿ
- ಈ ದಿನ ಉಪವಾಸವಿದ್ದರೆ ಒಳ್ಳೆಯದು
- ಸಮೀಪದ ಹನುಮಂತನ ದೇವಾಲಯಕ್ಕೆ ಭೇಟಿ ನೀಡಿ.
- ಶ್ರೀರಾಮನಿಗೆ ಸಿಂಧೂರ, ಹೂ-ಹಣ್ಣುಗಳನ್ನು ಅರ್ಪಿಸಿ.
- ಆಲದ ಮರದ ಎಲೆಗಳನ್ನು ತಂದು ಅದರ ಮೇಲೆ ಶ್ರೀರಾಮ ಅಂತ ಬರೆದು ಹನುಮಂತನ ಮೂರ್ತಿ ಮುಂದೆ ಇಡಿ.
- ಆಲದ ಮರದ ಕೆಳಗಡೆ ಕೂತು ಹನುಮಾನ್ ಚಾಲೀಸ ಪಠಿಸಿ.
ನಿಮ್ಮ ಸಮಸ್ಯೆ ನಿವಾರಣೆಗೆ ಈ ಸಮಸ್ಯೆ ಈ ಪರಿಹಾರ ಮಾಡಿ:
* ಹನುಮಂತನಿಗೆ ಸಿಂಧೂರ ಅರ್ಪಿಸಿ
ಮಂಗಳವಾರ ಬೆಳಗ್ಗೆ ಹನುಮಂತನ ದೇವಾಲಯಕ್ಕೆ ಹೋಗಿ ಸಿಂಧೂರ ಹಾಗೂ ಕೆಂಪು ಹೂಗಳನ್ನು ಅರ್ಪಿಸಿ ಹನುಮಾನ್ ಮಂತ್ರಗಳನ್ನು ಪಠಿಸಿ.
ಮಂತ್ರ: ಓಂ ಹಂ ಹನುಮತೇ ನಮಃ
* ರುದ್ರಾಕ್ಷಿ ಮಾಲೆ ಹಿಡಿದು ಹನುಮಂತ್ರನ ಮಂತ್ರ ಪಠಿಸಿ
ನೀವು ರುದ್ರಾಕ್ಷಿ ಮಾಲೆ ಹಿಡಿದು 108 ಬಾರಿ ಹನುಮಂತನ
ಮರ್ಕಟೇಶ ಮಹೋತ್ಸಹಃ ನವಗ್ರಹ ದೋಷ ನಿವಾರಣಃ |
ಶತ್ರೂನ್ ಸಂಹಾರ ಮಾಂ ರಕ್ಷ ಶ್ರಿಯಂ ದಾಪಯಾ ದೇಹಿಮೇ ಪ್ರಭೋ ||
ಹಣದ ಸಮಸ್ಯೆ ಕಾಡದಿರಲು ಈ ಮಂತ್ರ ಪಠಿಸಿ
ತುಂಬಾ ಆರ್ಥಿಕ ಸಮಸ್ಯೆ ಇದ್ದರೆ ಹನುಮಂತನಿಗೆ ಮಂಗಳವಾರ ಪೂಜೆ ಮಾಡುವಾಗ ಆಲದ ಮರದ ಎಲೆಯನ್ನು ತಂದು ಅದರಲ್ಲಿ ಶ್ರೀರಾಮ ಎಂದು ಬರೆದು ಹನುಮಂತನ ಮೂರ್ತಿ ಮುಂದೆ ಇಟ್ಟು ಪೂಜಿಸಿ, ನಂತರ ಆ ಎಲೆಯನ್ನು ನಿಮ್ಮ ಪರ್ಸ್ನಲ್ಲಿ ಇಟ್ಟುಕೊಳ್ಳಿ.
* ಈ ದಿನ ರಾಮ ರಕ್ಷಾ ಸ್ತೋತ್ರ ಪಠಿಸಿ, ಹೀಗೆ ಮಾಡುವುದರಿಂದ ಶ್ರೀರಾಮ ಹಾಗೂ ಹನುಮಂತನ ಕೃಪೆ ನಿಮ್ಮ ಮೇಲಿರಲಿದೆ.



Click it and Unblock the Notifications











