Latest Updates
-
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ!
ಶ್ರಾವಣ ಮಂಗಳವಾರ ಹನುಮಂತನನ್ನು ಈ ರೀತಿ ಪೂಜಿಸಿದರೆ ಸಂಕಷ್ಟಗಳು ದೂರಾಗುವುದು
ಶ್ರಾವಣ ಮಾಸ, ಶಿವನ ಪೂಜೆಗೆ ಮೀಸಲಾದ ತಿಂಗಳು, ಈ ತಿಂಗಳ ಪೂರ್ತಿ ಶಿವನ ಆರಾಧನೆ ಮಾಡಿದರೆ ಶಿವಕೃಪೆಗೆ ಪಾತ್ರರಾಗಬಹುದು, ಅದರಲ್ಲೂ ಶಿವ ಪೂಜೆಗೆ ಶ್ರಾವಣ ಸೋಮವಾರ ತುಂಬಾನೇ ಶ್ರೇಷ್ಠವಾದ ದಿನವಾಗಿದೆ.
ಅಲ್ಲದೆ ಶ್ರಾವಣ ಮಂಗಳವಾರ ಗೌರಿ ಪೂಜೆಗೆ, ಹನುಮಂತನ ಪೂಜೆಗೆ ತುಂಬಾ ಶ್ರೇಷ್ಠವಾದ ದಿನವಾಗಿದೆ. ಶ್ರಾವಣ ಮಂಗಳವಾರದಂದು ಹನುಮಂತನ ಆರಾಧನೆ ಹೇಗೆ ಮಾಡಬೇಕು? ಸಂಕಷ್ಟ ನಿವಾರಣೆಗೆ ಯಾವೆಲ್ಲಾ ಪರಿಹಾರ ಮಾಡಿದರೆ ಒಳ್ಳೆಯದು ಎಂದು ನೋಡೋಣ ಬನ್ನಿ:

ಶ್ರಾವಣ ಮಂಗಳವಾರ ಈ ಪೂಜಾ ವಿಧಿಗಳನ್ನು ಪಾಲಿಸಿ
- ಮಂಗಳವಾರ ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಮಡಿ ಬಟ್ಟೆ ಧರಿಸಿ
- ಈ ದಿನ ಉಪವಾಸವಿದ್ದರೆ ಒಳ್ಳೆಯದು
- ಸಮೀಪದ ಹನುಮಂತನ ದೇವಾಲಯಕ್ಕೆ ಭೇಟಿ ನೀಡಿ.
- ಶ್ರೀರಾಮನಿಗೆ ಸಿಂಧೂರ, ಹೂ-ಹಣ್ಣುಗಳನ್ನು ಅರ್ಪಿಸಿ.
- ಆಲದ ಮರದ ಎಲೆಗಳನ್ನು ತಂದು ಅದರ ಮೇಲೆ ಶ್ರೀರಾಮ ಅಂತ ಬರೆದು ಹನುಮಂತನ ಮೂರ್ತಿ ಮುಂದೆ ಇಡಿ.
- ಆಲದ ಮರದ ಕೆಳಗಡೆ ಕೂತು ಹನುಮಾನ್ ಚಾಲೀಸ ಪಠಿಸಿ.
ನಿಮ್ಮ ಸಮಸ್ಯೆ ನಿವಾರಣೆಗೆ ಈ ಸಮಸ್ಯೆ ಈ ಪರಿಹಾರ ಮಾಡಿ:
* ಹನುಮಂತನಿಗೆ ಸಿಂಧೂರ ಅರ್ಪಿಸಿ
ಮಂಗಳವಾರ ಬೆಳಗ್ಗೆ ಹನುಮಂತನ ದೇವಾಲಯಕ್ಕೆ ಹೋಗಿ ಸಿಂಧೂರ ಹಾಗೂ ಕೆಂಪು ಹೂಗಳನ್ನು ಅರ್ಪಿಸಿ ಹನುಮಾನ್ ಮಂತ್ರಗಳನ್ನು ಪಠಿಸಿ.
ಮಂತ್ರ: ಓಂ ಹಂ ಹನುಮತೇ ನಮಃ
* ರುದ್ರಾಕ್ಷಿ ಮಾಲೆ ಹಿಡಿದು ಹನುಮಂತ್ರನ ಮಂತ್ರ ಪಠಿಸಿ
ನೀವು ರುದ್ರಾಕ್ಷಿ ಮಾಲೆ ಹಿಡಿದು 108 ಬಾರಿ ಹನುಮಂತನ
ಮರ್ಕಟೇಶ ಮಹೋತ್ಸಹಃ ನವಗ್ರಹ ದೋಷ ನಿವಾರಣಃ |
ಶತ್ರೂನ್ ಸಂಹಾರ ಮಾಂ ರಕ್ಷ ಶ್ರಿಯಂ ದಾಪಯಾ ದೇಹಿಮೇ ಪ್ರಭೋ ||
ಹಣದ ಸಮಸ್ಯೆ ಕಾಡದಿರಲು ಈ ಮಂತ್ರ ಪಠಿಸಿ
ತುಂಬಾ ಆರ್ಥಿಕ ಸಮಸ್ಯೆ ಇದ್ದರೆ ಹನುಮಂತನಿಗೆ ಮಂಗಳವಾರ ಪೂಜೆ ಮಾಡುವಾಗ ಆಲದ ಮರದ ಎಲೆಯನ್ನು ತಂದು ಅದರಲ್ಲಿ ಶ್ರೀರಾಮ ಎಂದು ಬರೆದು ಹನುಮಂತನ ಮೂರ್ತಿ ಮುಂದೆ ಇಟ್ಟು ಪೂಜಿಸಿ, ನಂತರ ಆ ಎಲೆಯನ್ನು ನಿಮ್ಮ ಪರ್ಸ್ನಲ್ಲಿ ಇಟ್ಟುಕೊಳ್ಳಿ.
* ಈ ದಿನ ರಾಮ ರಕ್ಷಾ ಸ್ತೋತ್ರ ಪಠಿಸಿ, ಹೀಗೆ ಮಾಡುವುದರಿಂದ ಶ್ರೀರಾಮ ಹಾಗೂ ಹನುಮಂತನ ಕೃಪೆ ನಿಮ್ಮ ಮೇಲಿರಲಿದೆ.



Click it and Unblock the Notifications