Latest Updates
-
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ?
ಶ್ರಾವಣ ಮಂಗಳವಾರ ಹನುಮಂತನನ್ನು ಈ ರೀತಿ ಪೂಜಿಸಿದರೆ ಸಂಕಷ್ಟಗಳು ದೂರಾಗುವುದು
ಶ್ರಾವಣ ಮಾಸ, ಶಿವನ ಪೂಜೆಗೆ ಮೀಸಲಾದ ತಿಂಗಳು, ಈ ತಿಂಗಳ ಪೂರ್ತಿ ಶಿವನ ಆರಾಧನೆ ಮಾಡಿದರೆ ಶಿವಕೃಪೆಗೆ ಪಾತ್ರರಾಗಬಹುದು, ಅದರಲ್ಲೂ ಶಿವ ಪೂಜೆಗೆ ಶ್ರಾವಣ ಸೋಮವಾರ ತುಂಬಾನೇ ಶ್ರೇಷ್ಠವಾದ ದಿನವಾಗಿದೆ.
ಅಲ್ಲದೆ ಶ್ರಾವಣ ಮಂಗಳವಾರ ಗೌರಿ ಪೂಜೆಗೆ, ಹನುಮಂತನ ಪೂಜೆಗೆ ತುಂಬಾ ಶ್ರೇಷ್ಠವಾದ ದಿನವಾಗಿದೆ. ಶ್ರಾವಣ ಮಂಗಳವಾರದಂದು ಹನುಮಂತನ ಆರಾಧನೆ ಹೇಗೆ ಮಾಡಬೇಕು? ಸಂಕಷ್ಟ ನಿವಾರಣೆಗೆ ಯಾವೆಲ್ಲಾ ಪರಿಹಾರ ಮಾಡಿದರೆ ಒಳ್ಳೆಯದು ಎಂದು ನೋಡೋಣ ಬನ್ನಿ:

ಶ್ರಾವಣ ಮಂಗಳವಾರ ಈ ಪೂಜಾ ವಿಧಿಗಳನ್ನು ಪಾಲಿಸಿ
- ಮಂಗಳವಾರ ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಮಡಿ ಬಟ್ಟೆ ಧರಿಸಿ
- ಈ ದಿನ ಉಪವಾಸವಿದ್ದರೆ ಒಳ್ಳೆಯದು
- ಸಮೀಪದ ಹನುಮಂತನ ದೇವಾಲಯಕ್ಕೆ ಭೇಟಿ ನೀಡಿ.
- ಶ್ರೀರಾಮನಿಗೆ ಸಿಂಧೂರ, ಹೂ-ಹಣ್ಣುಗಳನ್ನು ಅರ್ಪಿಸಿ.
- ಆಲದ ಮರದ ಎಲೆಗಳನ್ನು ತಂದು ಅದರ ಮೇಲೆ ಶ್ರೀರಾಮ ಅಂತ ಬರೆದು ಹನುಮಂತನ ಮೂರ್ತಿ ಮುಂದೆ ಇಡಿ.
- ಆಲದ ಮರದ ಕೆಳಗಡೆ ಕೂತು ಹನುಮಾನ್ ಚಾಲೀಸ ಪಠಿಸಿ.
ನಿಮ್ಮ ಸಮಸ್ಯೆ ನಿವಾರಣೆಗೆ ಈ ಸಮಸ್ಯೆ ಈ ಪರಿಹಾರ ಮಾಡಿ:
* ಹನುಮಂತನಿಗೆ ಸಿಂಧೂರ ಅರ್ಪಿಸಿ
ಮಂಗಳವಾರ ಬೆಳಗ್ಗೆ ಹನುಮಂತನ ದೇವಾಲಯಕ್ಕೆ ಹೋಗಿ ಸಿಂಧೂರ ಹಾಗೂ ಕೆಂಪು ಹೂಗಳನ್ನು ಅರ್ಪಿಸಿ ಹನುಮಾನ್ ಮಂತ್ರಗಳನ್ನು ಪಠಿಸಿ.
ಮಂತ್ರ: ಓಂ ಹಂ ಹನುಮತೇ ನಮಃ
* ರುದ್ರಾಕ್ಷಿ ಮಾಲೆ ಹಿಡಿದು ಹನುಮಂತ್ರನ ಮಂತ್ರ ಪಠಿಸಿ
ನೀವು ರುದ್ರಾಕ್ಷಿ ಮಾಲೆ ಹಿಡಿದು 108 ಬಾರಿ ಹನುಮಂತನ
ಮರ್ಕಟೇಶ ಮಹೋತ್ಸಹಃ ನವಗ್ರಹ ದೋಷ ನಿವಾರಣಃ |
ಶತ್ರೂನ್ ಸಂಹಾರ ಮಾಂ ರಕ್ಷ ಶ್ರಿಯಂ ದಾಪಯಾ ದೇಹಿಮೇ ಪ್ರಭೋ ||
ಹಣದ ಸಮಸ್ಯೆ ಕಾಡದಿರಲು ಈ ಮಂತ್ರ ಪಠಿಸಿ
ತುಂಬಾ ಆರ್ಥಿಕ ಸಮಸ್ಯೆ ಇದ್ದರೆ ಹನುಮಂತನಿಗೆ ಮಂಗಳವಾರ ಪೂಜೆ ಮಾಡುವಾಗ ಆಲದ ಮರದ ಎಲೆಯನ್ನು ತಂದು ಅದರಲ್ಲಿ ಶ್ರೀರಾಮ ಎಂದು ಬರೆದು ಹನುಮಂತನ ಮೂರ್ತಿ ಮುಂದೆ ಇಟ್ಟು ಪೂಜಿಸಿ, ನಂತರ ಆ ಎಲೆಯನ್ನು ನಿಮ್ಮ ಪರ್ಸ್ನಲ್ಲಿ ಇಟ್ಟುಕೊಳ್ಳಿ.
* ಈ ದಿನ ರಾಮ ರಕ್ಷಾ ಸ್ತೋತ್ರ ಪಠಿಸಿ, ಹೀಗೆ ಮಾಡುವುದರಿಂದ ಶ್ರೀರಾಮ ಹಾಗೂ ಹನುಮಂತನ ಕೃಪೆ ನಿಮ್ಮ ಮೇಲಿರಲಿದೆ.



Click it and Unblock the Notifications
