Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಆ. 16ಕ್ಕೆ ಶ್ರಾವಣ ಅಮವಾಸ್ಯೆ: ಈ ದಿನ ಏನು ಮಾಡಿದರೆ ಒಳ್ಳೆಯದು?
ಆಗಸ್ಟ್ 16ರಂದು ಶ್ರಾವಣ ಅಮವಾಸ್ಯೆ, ಇಂದಿಗೆ ಅಧಿಕ ಮಾಸದ ಶ್ರಾವಣ ಕೂಡ ಮುಕ್ತಾಯವಾಗಲಿದೆ, ನಾಳೆಯಿಂದ ನಿಜ ಶ್ರಾವಣ ಶುರುವಾಗಲಿದೆ. ಶಾಸ್ತ್ರಗಳ ಪ್ರಕಾರ ಈ ದಿನಕ್ಕೆ ತುಂಬಾನೇ ಮಹತ್ವವಿದೆ. ಈ ದಿನ ತರ್ಪಣ ಅಥವಾ ಪಿಂಡದಾನಕ್ಕೆ ತುಂಬಾನೇ ಮಹತ್ವವಾದ ದಿನವಾಗಿದೆ.

ಶ್ರಾವಣ ಅಮವಾಸ್ಯೆಯಂದು ಪಿತೃಷದೋಷಕ್ಕೆ ಪರಿಹಾರ
ಪಿತೃದೋಷವಿದ್ದರೆ ಜೀವನದಲ್ಲಿ ಅನೇಕ ಸಮಸ್ಯೆಗಳು ಎದುರಾಗುವುದು. ಯಾವುದೇ ಕೆಲಸ ಕೈ ಹಿಡಿಯಲ್ಲ, ಮನೆಯಲ್ಲಿ ನೆಮ್ಮದಿ ಇರಲ್ಲ, ವ್ಯವಹಾರದಲ್ಲಿ ಯಾವುದೇ ಪ್ರಗತಿ ಕಂಡು ಬರುವುದಿಲ್ಲ, ಸಂತಾನ ಭಾಗ್ಯ ಇರುವುದಿಲ್ಲ ಈ ರೀತಿ ಅನೇಕ ಬಗೆಯ ಸಮಸ್ಯೆ ಕಂಡು ಬರುವುದು, ಪಿತೃದೋಷ ನಿವಾರಣೆ ಮಾಡಿದರೆ ಜೀವನದಲ್ಲಿ ಒಳಿತಾಗುವುದು.
ಶ್ರಾವಣ ಅಮವಾಸ್ಯೆಯಂದು ಪಿತೃದೋಷಕ್ಕೆ ಪರಿಹಾರ ಮಾಡಿಕೊಳ್ಳಬಹುದು. ಈ ದಿನ ಪೂರ್ವಜರಿಗೆ ಪಿಂಡದಾನ ಅಥವಾ ತರ್ಪಣ ಮಾಡಿದರೆ ಪಿತೃದೋಷದಿಂದ ಮುಕ್ತರಾಗಬಹುದು. ಹೀಗೆ ಮಾಡುವುದರಿಂದ ಪೂರ್ವಜರ ಆತ್ಮಕ್ಕೆ ಶಾಂತಿ ಸಿಗಲಿದೆ, ಎಲ್ಲಾ ರೀತಿಯ ಕಂಟಕಗಳು ದೂರಾಗಲಿದೆ.
ಶ್ರಾವಣ ಅಮವಾಸ್ಯೆಯಂದು ಈ ಕಾರ್ಯಗಳನ್ನು ಮಾಡಿದರೆ ಒಳ್ಳೆಯದು:
ದಾನ ಮಾಡಿ
ಈ ದಿನ ನಿಮ್ಮ ಶಕ್ತಿಗೆ ತಕ್ಕಂತೆ ಬಡವರಿಗೆ ದಾನ ಮಾಡಿ, ಹೀಗೆ ದಾನ ಮಾಡುವುದರಿಂದ ಪುಣ್ಯಫಲ ಸಿಗುವುದು, ಹೀಗೆ ಮಾಡುವುದರಿಂದ ನಿಮ್ಮ ನೆಮ್ಮದಿ, ಸಂಪತ್ತು ಹೆಚ್ಚಲಿದೆ ಎಂದು ಹೇಳಲಾಗುವುದು.
ಚಂದ್ರದೋಷವಿದ್ದರೆ
ಚಂದ್ರದೋಷವಿದ್ದರೆ ಮನಸ್ಸಿಗೆ ನೆಮ್ಮದಿ ಇರಲ್ಲ, ಚಂದ್ರ ನಿಮ್ಮ ರಾಶಿಯಲ್ಲಿ ದುರ್ಬಲ ಸ್ಥಾನದಲ್ಲಿದ್ದರೆ ಹಸುವಿಗೆ ಹಿಟ್ಟನ್ನು ದಾನ ಮಾಡಿ.
ತುಳಸಿ ಪೂಜೆ ಮಾಡಿ
ಈ ದಿನ ತುಳಸಿ ಪೂಜೆ ಮಾಡಿ, ಇದರಿಂದ ಶ್ರೀ ವಿಷ್ಣು ಹಾಗೂ ಲಕ್ಷ್ಮಿಯ ಕೃಪೆಗೆ ಪಾತ್ರರಾಗಬಹುದು.ಅಲ್ಲದೆ ಈ ದಿನ ಅರಳಿ ಮರದ ಕೆಳಗಡೆ ತುಪ್ಪದ ದೀಪ ಹಚ್ಚಿ, ಹೀಗೆ ಮಾಡುವುದರಿಂದ ಅದೃಷ್ಟ ಒಲಿಯಲಿದೆ ಎಂದು ಹೇಳಲಾಗುವುದು.
ನೀವು ಅರಳಿ ಮರಕ್ಕೆ ಸುತ್ತು ಹಾಕಿ ಬಡವರಿಗೆ ಆಹಾರವನ್ನು ದಾನ ಮಾಡಿದರೆ ಒಳ್ಳೆಯದು ಎಂದು ಹೇಳಲಾಗುವುದು.
ಶಿವ-ಪಾರ್ವತಿಯನ್ನು ಪೂಜಿಸಿ
ಈ ದಿನ ನೀವು ಶಿವ ಪಾರ್ವತಿಯನ್ನು ಪೂಜಿಸುವುದರಿಮದ ಒಳಿತಾಗುವುದು ಎಂದು ಹೇಳಲಾಗುವುದು. ಈ ದಿನ ಶಿವ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಮಾಡಿಸಿದರೆ ಒಳ್ಳೆಯದು.



Click it and Unblock the Notifications
