Latest Updates
-
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ?
ಯಮ ದೀಪ 2021: ದಿನಾಂಕ, ಸಮಯ ಹಾಗೂ ಇದರ ಮಹತ್ವವೇನು?
ದೀಪಾವಳಿ ಸಮಯದಲ್ಲಿ ಯಮದೀಪ ಹಚ್ಚಿಡಲಾಗುವುದು. ಮನೆ ಮುಂದೆ ಹಚ್ಚಿಡುವ ಈ ದೀಪಕ್ಕೆ ತುಂಬಾನೇ ಮಹತ್ವವಿದೆ. ಧನತ್ರಯೋದಶಿಯಂದು ಯಮ ದೀಪ ಹಚ್ಚಿಡಲಾಗುವುದು.
ಈ ದಿನ ಯಮನನ್ನು ಪೂಜಿಸಿದರ ಅಕಾಲಿಕ ಮರಣಭಯ ದೂರವಾಗುವುದು, ಯಮನ ಅನುಗ್ರಹ ದೊರೆಯುವುದು ಎಂದು ನಂಬಲಾಗಿದೆ. ಹಿಂದೂ ಪುರಾಣದ ಪ್ರಕಾರ ಮೃತ್ಯುವಿನ ಅಧಿಪತಿ ಯಮ. ಯಮ ವ್ಯಕ್ತಿಯ ಪ್ರಾಣ ಕೊಂಡೊಯ್ಯಲು ಬಂದರೆ ಅದನ್ನು ತಪ್ಪಿಸಲು ಸಾಧ್ಯವಿಲ್ಲ. ಅಷ್ಟ ದಿಕ್ಪಾಲಕರಲ್ಲಿ ದಕ್ಷಿಣ ದಿಕ್ಕಿನ ಅಧಿಪತಿ, ಸೂರ್ಯನ ಮಗ, ಕರ್ಮಕ್ಕೆ ತಕ್ಕಂತೆ ಶಿಕ್ಷೆ ನೀಡುವ ಶನೇಶ್ವರನ ತಮ್ಮ. ಈ ಯಮನಿಗೆ ಧನ ತ್ರಯೋದಶಿಯಂದು ದಕ್ಷಿಣ ದಿಕ್ಕಿನಲ್ಲಿ ಹಚ್ಚಿಟ್ಟರೆ ಯಮನ ಅನುಗ್ರಹವಿರುತ್ತದೆ. ಹಾಗಾಗಿ ಅಪಮೃತ್ಯು ಬರುವುದಿಲ್ಲ ಎಂದು ಹೇಳಲಾಗುವುದು.
ಯಮ ದೀಪ ಯಾವ ದಿನ, ಯಾವ ಸಮಯಕ್ಕೆ ಹಚ್ಚಬೇಕು? ಯಮನಿಗೆ ಹಚ್ಚುವ ದಿಪ ಹೇಗಿರಬೇಕು ಎಂದು ತಿಳಿಯೋಣ ಬನ್ನಿ:

ಯಮ ದೀಪ ಹಚ್ಚುವುದರ ಹಿಂದಿನ ದಾರ್ಮಿಕ ಪ್ರಾಮುಖ್ಯತೆ
* ಯಮ ದೀಪ ಹಚ್ಚುವುದರಿಂದ ವ್ಯಕ್ತಿಯಲ್ಲಿ ಧನಾತ್ಮಕ ಶಕ್ತಿ ಹೆಚ್ಚುವುದು.
* ಧನ ತ್ರಯೋಧಶಿಯಂದು ಯಮ ಧರ್ಮ ತುಂಬಾ ಚಟುವಟಿಕೆಯಿಂದ ಇರುತ್ತಾನೆ ಎನ್ನಲಾಗಿದೆ, ಆದ್ದರಿಂದ ಈ ದಿನ ಅವನನ್ನು ಪೂಜಿಸಿದರೆ ಇತರ ಸಮಯದಲ್ಲಿ ಪೂಜಿಸಿದ್ದಕ್ಕಿಂತ ಅಧಿಕ ಫಲ ಸಿಗುವುದು. ಯಮನ ಅನುಗ್ರಹ ಬೇಗನೆ ಸಿಗುವುದು.
* ಅಪಮೃತ್ಯು ನೀಡಬೇಡ ಎಂದು ಯಮನಲ್ಲಿ ಪ್ರಾರ್ಥಿಸಿ ಅವನ ಅನುಗ್ರಹ ಪಡೆಯಲಾಗುವುದು.

ಗೋಧಿ ಹಿಟ್ಟಿನಿಂದ ದೀಪ ತಯಾರಿಸಿ ಹಚ್ಚಬೇಕು
ಈ ದಿನ ಯಮ ದೀಪವನ್ನು ದಕ್ಷಿಣ ದಿಕ್ಕಿನಲ್ಲಿ ಹಚ್ಚಿಡಬೇಕು. ಅದರಲ್ಲೂ ಗೋಧಿ ಹಿಟ್ಟಿನಿಂದ ತಯಾರಿಸಿದ ದೀಪವನ್ನು ಹಚ್ಚಿಡಬೇಕು.

ಯಮ ದೀಪ ಸಮಯ
ದಿನಾಂಕ: ನವೆಂಬರ್ 2, ಧನ ತ್ರಯೋದಶಿ
ತ್ರಯೋದಶಿ ತಿಥಿ ಪ್ರಾರಂಭ: ನವೆಂಬರ್ 2, ಬೆಳಗ್ಗೆ 11:31ಕ್ಕೆ
ತ್ರಯೋದಶಿ ತಿಥಿ ಮುಕ್ತಾಯ: ನವೆಂಬರ್ 3, ಬೆಳಗ್ಗೆ 09:02ಕ್ಕೆ
ಮನೆಯ ಹೊರಗಡೆ ದಕ್ಷಿನ ದಿಕ್ಕಿನಲ್ಲಿ ಯಮ ದೀಪವನ್ನು ಹಚ್ಚಿಡಲಾಗುವುದು. ಧನತ್ರಯೋಧಶಿಯಂದು ಈ ದೀಪವನ್ನು ಹಚ್ಚಿ ಯಮನನ್ನು ಪ್ರಾರ್ಥಿಸಿದರೆ ಅವರಿಗೆ ಅಕಾಲಿಕ ಮೃತ್ಯ ಸಂಭವಿಸುವುದಿಲ್ಲ ಎಂದು ವೈದಿಕ ಶಾಸ್ತ್ರ ಹೇಳುತ್ತದೆ.

ಯಮ ದೀಪ ಹಚ್ಚುವಾಗ ಈ ಮಂತ್ರಗಳನ್ನು ಹೇಳಿ
ಮಮ ಆಪ್ಮೃತ್ಯು ವಿನಾಶಾರ್ಥಂ ಯಮದೀಪ್ದಾನಂ ಕರಿಷ್ಯೇ
ಅರ್ಥ: ನನ್ನ ಅಕಾಲಿನ ಮೃತ್ಯ ತಡೆಯಲು ಈ ಯಮ ದೀಪವನ್ನು ಹಚ್ಚುತ್ತಿದ್ದೇನೆ.
ಮೃತ್ಯುನಾ ಪಾಷಾದನ್ ದಾಭ್ಯಾಂ ಕಾಲೇನ ಶ್ಯಾಮಯಾಯುತಃ |
ತ್ರಯೋದಶ್ಯಾಮ್ ದೀಪದಾನಾತ್ ಸೂರ್ಯಜಃ ಪ್ರಿಯತಾಂ ಮಮ |
ಅರ್ಥ: ಧನತ್ರಯೋಧಶಿಯಂದು ಸುರ್ಯನ ಪುತ್ರನಾದ ಯಮ ದೇವನಿಗೆ ಈ ದೀಪ ಹಚ್ಚುತ್ತಿದ್ದೇನೆ. ಯಮರಾಯನು ನನ್ನ ಅಕಾಲಿಕ ಮೃತ್ಯು ತಡೆದು ನನಗೆ ಒಳಿತು ಮಾಡಲಿ ಎಂದು ಪ್ರಾರ್ಥಿಸಬೇಕು.
ನಂತರ ಸ್ವಲ್ಪ ನೀರನ್ನು ತೆಗೆದು ದೀಪದ ಮುಂದೆ ಅರ್ಪಿಸಬೇಕು.



Click it and Unblock the Notifications











