Latest Updates
-
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು ತಪ್ಪಿದ್ದಲ್ಲ! -
ಸೋಷಿಯಲ್ ಮೀಡಿಯಾದಲ್ಲಿ ಪ್ರೀತಿಯನ್ನು ತೋರಿಸುವ ಹೊಸ ಟ್ರೆಂಡ್: 'ಸಾಫ್ಟ್ ಲಾಂಚ್' ಮೂಲಕ ನಿಮ್ಮ ಸಂಬಂಧವನ್ನು ಭದ್ರಪಡಿಸಿಕೊಳ್ಳಿ! -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಲ್ಲೂ ನಿಮ್ಮ ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಉಳಿಸಲು ಈ ಟಿಪ್ಸ್ ಸಾಕು! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಆಹಾರ ಕ್ರಮಗಳನ್ನು ಮರೆಯದೆ ಪಾಲಿಸಿ! -
ಮುಟ್ಟಿನ ನೈರ್ಮಲ್ಯ ದಿನ: ಕೇವಲ 200 ರೂಪಾಯಿಗೂ ಕಡಿಮೆ ಬೆಲೆಯಲ್ಲಿ ಸಿಗುತ್ತಿವೆ ಈ ಅಗತ್ಯ ಉತ್ಪನ್ನಗಳು, ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ಮದುವೆ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ 5 ಬದಲಾವಣೆಗಳನ್ನು ಮರೆಯಬೇಡಿ! -
ದೆಹಲಿ ಧೂಳಿನ ಬಿರುಗಾಳಿ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 500 ರೂಪಾಯಿಯ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ಈ ಸರಳ ಆಹಾರ ಬದಲಾವಣೆ ನಿಮ್ಮನ್ನು ಹೀಟ್ಸ್ಟ್ರೋಕ್ನಿಂದ ರಕ್ಷಿಸುತ್ತದೆ! -
ರೆಡ್ ಕಾರ್ಪೆಟ್ನಿಂದ ನಿಮ್ಮ ವಾರ್ಡ್ರೋಬ್ಗೆ: ಕಾನ್ 2026ರ ಈ ಫ್ಯಾಷನ್ ಟ್ರೆಂಡ್ಸ್ ಈಗ ಸಿಕ್ಕಾಪಟ್ಟೆ ವೈರಲ್! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ!
ಮಹಾಶಿವರಾತ್ರಿಗೆ ಉಪವಾಸ ಮಾಡುವುದೇಕೆ? ಇದರ ಮಹತ್ವವೇನು?
ಮಾರ್ಚ್ 1ಕ್ಕೆ ಮಹಾ ಶಿವರಾತ್ರಿ. ಈ ದಿನ ಶಿವನ ಭಕ್ತರು ಉಪವಾಸವಿದ್ದು ಅವನಿಗೆ ಪೂಜೆಯನ್ನು ಮಾಡುತ್ತಾರೆ. ರಾತ್ರಿಯಿಡೀ ಜಾಗರಣೆ ಇದ್ದು ಪೂಜೆಯನ್ನು ಮಾಡುತ್ತಾರೆ. ಶಿವರಾತ್ರಿಗೆ ಬೆಳಗ್ಗೆಎದ್ದು ಸ್ನಾನ ಮಾಡಿ ಮಡಿ ಬಟ್ಟೆ ಧರಿಸಿ ಶಿವನ ದೇವಾಲಯಕ್ಕೆ ಹೋಗಿ ಪೂಜೆಯನ್ನು ಸಲ್ಲಿಸುತ್ತಾರೆ. ಈ ದಿನದಂದು ಕೆಲ ಭಕತರು ನೀರು ಕೂಡ ಸೇವಿಸದೆ ಕಟ್ಟು ನಿಟ್ಟಿನ ಉಪವಾಸ ಮಾಡಿದರೆ, ಇನ್ನು ಕೆಲವರು ಬರೀ ಹಾಲು, ಹಣ್ಣುಗಳನ್ನಷ್ಟೇ ಸೇವಿಸುತ್ತಾರೆ.
ಉಪವಾಸವಿದ್ದು ಶಿವನ ಆರಾಧನೆ ಮಾಡಿದರೆ ಶಿವ ಪೂಜೆ ಫಲ ನೀಡುವುದು ಎಂದು ಹೇಳಲಾಗುವುದು. ಶಿವರಾತ್ರಿಯಂದು ಶಿವನ ಆರಾಧನೆ ಮಾಡುವುದರಿಂದ ಮನಸ್ಸಿಗೆ-ದೇಹಕ್ಕೆ ತುಂಬಾ ಒಳ್ಳೆಯದು.
ಶಿವರಾತ್ರಿಗೆ ಉಪವಾಸ ಏಕೆ ಮಾಡುತ್ತಾರೆ, ಇದರಿಂದ ದೊರೆಯುವ ಪ್ರಯೋಜನವೇನು ಎಂದು ಗೊತ್ತಾ? ಇಲ್ಲಿದೆ ನೋಡಿ ಹೆಚ್ಚಿನ ವಿವರ:
ಶಿವರಾತ್ರಿಗೆ ಉಪವಾಸ ಆಚರಣೆಯ ಮಹತ್ವ:

ಮನಸ್ಸನ್ನು ಶಿವನ ಮೇಲೆ ಕೇಂದ್ರೀಕರಿಸಿ ಧ್ಯಾನ ಮಾಡಲು ಸಹಕಾರಿ
ಉಪವಾಸ ಮಾಡಿದಾಗ ದೇಹ ಶುದ್ಧವಾಗುವುದು, ಮನಸ್ಸು ಶುದ್ಧವಾಗುವುದು. ನಮ್ಮ ಮನಸ್ಸು ತುಂಬಾ ವಿಶ್ರಾಂತಿಯ ಅನುಭವ ಪಡೆಯುವುದು. ಅಲ್ಲದೆ ಮನಸ್ಸು ತುಂಬಾ ಎಚ್ಚರದಿಂದ ಇರುತ್ತದೆ, ಆಗ ಮನಸ್ಸನ್ನು ಧ್ಯಾನ ಕಡೆ ಗಮನ ಕೊಡಲು ಸಹಕಾರಿಯಾಗುವುದು. ಮನಸ್ಸು ಹಾಗೂ ದೇಹವನ್ನು ಶುದ್ಧ ಮಾಡಿ, ಆ ದಿನಪೂರ್ತಿ ಶಿವ ಜಪ ಮಾಡುತ್ತಾ ಕಳೆಯಲು ಉಪವಾಸ ಆಚರಣೆ ಮಾಡಲಾಗುವುದು.

ತುಂಬಾ ಹೊತ್ತು ಧ್ಯಾನದಲ್ಲಿ ಕೂರಲು ಸಾಧ್ಯವಾಗುವುದು
ಉಪವಾಸ ಮಾಡಿದಾಗ ದೇಹ ಡಿಟಾಕ್ಸ್ ಆಗುವುದರಿಂದ ಒಮ್ಮೆ ಪೂಜೆಗೆ ಕೂತರೆ ತುಂಬಾ ಹೊತ್ತು ಪೂಜೆಯಲ್ಲಿ ಕಳೆಯಬಹುದು. ಅಂದರೆ ಮೂತ್ರವಿಸರ್ಜನೆಗೆ, ಮಲವಿಸರ್ಜನೆಗೆ ಹೋಗುವುದು ಕಡಿಮೆಯಾಗುತ್ತೆ, ಇದರಿಂದ ದೇವರ ಧ್ಯಾನದಲ್ಲಿ ಹೆಚ್ಚು ಹೊತ್ತು ತೊಡಗಿಸಿಕೊಳ್ಳಬಹುದು.

ದೇವರ ಪೂಜೆಯಲ್ಲಿ ತಲ್ಲೀನರಾಗಬಹುದು
ದೇವರಿಗಾಗಿ ನಾವು ಉಪವಾಸವಿದ್ದಾಗ ಆ ದಿನವಿಡೀ ದೇವರ ಜಪದಲ್ಲಿಯೇ ಕಳೆಯುತ್ತೇವೆ, ಉಪವಾಸವಿದ್ದು ಮಾಡುವ ಪೂಜೆಗೆ ಬೇಗ ಫಲ ಸಿಗುವುದು, ಆದ್ದರಿಂದ ನಾವು ಅಂದುಕೊಂಡಿದ್ದ ಸಂಕಲ್ಪ ನೆರವೇರುವುದು.

ಪಾಪ -ಕರ್ಮಗಳಿಂದ ಮುಕ್ತಿ ಸಿಗುವುದು
ಉಪವಾಸವಿದ್ದು ಶಿವನ ಆರಾಧನೆ ಮಾಡುವುದರಿಂದ ಬೇಗನೆ ಪಾಪಕರ್ಮಗಳಿಂದ ಮುಕ್ತರಾಗುವವರು ಎಂದು ಹೇಳಲಾಗುವುದು. ಅಲ್ಲದೆ ಮತ್ಸರ, ಕಾಮ, ಕ್ರೋಧ ಇವುಗಳೆನ್ನೆಲ್ಲಾ ನಿಯಂತ್ರಿಸುವ ಶಕ್ತಿ ಮನಸ್ಸಿಗೆ ದೊರೆಯುವುದು.

ಅಲ್ಲದೆ ಶಿವರಾತ್ರಿಗೆ ಏಕೆ ಉಪವಾಸ ಮಾಡುತ್ತಾರೆ ಎಂಬುವುದಕ್ಕೆ ಪೌರಾಣಿಕ ಕತೆಯೂ ಇದೆ:
ಅಮೃತಗಾಗಿ ದಾನವರು ಹಾಗೂ ದೇವತೆಗಳು ಸಮುದ್ರ ಮಂಥನ ಮಾಡುವಾಗ ಮೊದಲಿಗೆ ಹಾಲಾಹಲ ಉಕ್ಕುತ್ತೆ, ಆಗ ದೇವತೆಗಳು ಹಾಗೂ ಅಸುರರು ಶಿವನಲ್ಲಿ ಪ್ರಾರ್ಥಿಸಿದಾಗ ಶಿವನು ಆ ವಿಷವನ್ನು ಕುಡಿಯುತ್ತಾನೆ, ಆಗ ಪಾರ್ವತಿಯು ಶಿವ ಕುಡಿದ ವಿಷ ಅವನ ದೇಹಕ್ಕೆ ಹರಡಬಾರದು ಎಂದು ಶಿವನ ಕುತ್ತಿಗೆಯನ್ನು ಗಟ್ಟಿಯಾಗಿ ಹಿಡಿದು ಏನೂ ತಿನ್ನದೆ ಒಂದು ರಾತ್ರಿ- ಒಂದು ಹಗಲು ನಿಲ್ಲುತ್ತಾರೆ, ಆಗ ಶಿವ ನೀಲಕಂಠನಾಗುತ್ತಾನೆ ಎಂದು ಪೌರಾಣಿಕ ಕತೆ ಹೇಳುತ್ತದೆ. ಅಲ್ಲಿಂದ ಶಿವರಾತ್ರಿಗೆ ಉಪವಾಸ ಆಚರಣೆ ಮಾಡಲಾಗುವುದು ಎಂದು ಹೇಳಲಾಗುವುದು.



Click it and Unblock the Notifications