Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಮದ್ಯಪಾನ ಸೇವನೆಯು ಅನೇಕ ಧರ್ಮಗಳಲ್ಲಿ ಏಕೆ ನಿಷೇಧಿಸಲ್ಪಟ್ಟಿದೆ?
ಸಮಸ್ತ ಜಗತ್ತನ್ನು ಆವರಿಸಿಕೊಂಡಿರುವ ಮಾಯೆಯ ಮೂರು ಗುಣಗಳಾದ ಸತ್ವ, ರಜ, ಮತ್ತು ತಮೋ ಗುಣಗಳು, ಈ ಜಗತ್ತಿನ ಭಾಗವಾಗಿರುವ ಪ್ರತಿಯೋರ್ವ ವ್ಯಕ್ತಿಯ ಮನದಲ್ಲಿ ಬೇರೆ ಬೇರೆ ಮಟ್ಟಗಳಲ್ಲಿ ನೆಲೆಗೊoಡಿರುತ್ತವೆ. ಸತ್ವ ಗುಣದ ಸ್ವರೂಪಗಳೆoದರೆ; ಜಯಶೀಲರಾಗಿರುವುದು (ದಕ್ಷತೆ), ಮಿತಿಯನ್ನು ದಾಟದಿರುವುದು (ಸಂಯಮ), ತ್ರಿಕರಣಪೂರ್ವಕ ಪರಿಶುದ್ಧತೆ, ಮತ್ತು ಮನಶ್ಶ್ಯಾoತಿ. ಮಾಯೆಯ ಸ್ವರೂಪದಿಂದ ಒಡಗೂಡಿದ ಭೋಗ ಮತ್ತು ಕಾಮನೆಗಳನ್ನು ಪಡೆಯಲು ಹಾತೊರೆಯುವಂತೆ ಮಾಡುವ ಮಾಯೆಯ ಗುಣವೇ ರಜೋಗುಣ.
ತಮೋಗುಣವು ಕೆಟ್ಟ ಸ್ವರೂಪದಿಂದ ಕೂಡಿದ್ದು, ಈ ಗುಣವು ಹೆಚ್ಚಾಗಿರುವವರಲ್ಲಿ ಕೋಪ, ದ್ವೇಷ, ದುರಹಂಕಾರ, ಹಾಗೂ ವಿನಾಶಕಾರೀ ಪ್ರವೃತ್ತಿಯನ್ನುoಟು ಮಾಡುತ್ತದೆ. ಓರ್ವ ವ್ಯಕ್ತಿಯು ತನ್ನ ಮನವನ್ನು ಭಗವಂತನಲ್ಲಿ ಸ್ಥಿರವಾಗಿ ನೆಲೆನಿಲ್ಲುವಂತೆ ಮಾಡಲು ಅವನಲ್ಲಿ ರಜ ಮತ್ತು ತಮೋಗುಣಗಳ ಮಟ್ಟವು ಕ್ಷೀಣ ಮಟ್ಟದಲ್ಲಿದ್ದು ಅವುಗಳನ್ನು ಸತ್ವ ಗುಣವು ಮೆಟ್ಟಿ ನಿಲ್ಲಬೇಕು.

ವಿವಿಧ ಬಗೆಯ ಆಹಾರವಸ್ತುಗಳು ಹಾಗೂ ಪಾನೀಯಗಳು ವ್ಯಕ್ತಿಯೋರ್ವನ ಮನಸ್ಸಿನ ಮೇಲೆ ಪ್ರಭಾವವನ್ನುoಟು ಮಾಡಬಲ್ಲವು ಹಾಗೂ ತನ್ಮೂಲಕ ಮನದಲ್ಲಿ ಅಡಕವಾಗಿರುವ ಸತ್ವ, ರಜ, ಹಾಗೂ ತಮೋಗುಣಗಳ ಮಟ್ಟವನ್ನು ಏರುಪೇರಾಗಿಸಬಲ್ಲವು. ಉದಾಹರಣೆಗೆ, ಮದ್ಯಪಾನವು ಸಂಯಮ ಅಥವಾ ಸಂಕೋಚ ಪ್ರವೃತ್ತಿಯನ್ನು ಹತ್ತಿಕ್ಕಿ ರಾಜಸಿಕ ಗುಣವಾದoತಹ ಕಾಮನೆಯನ್ನು ಕೆರಳಿಸಬಲ್ಲದು. ಅದೇ ರೀತಿ, ನೀರುಳ್ಳಿ, ಬೆಳ್ಳುಳ್ಳಿ, ಹಿಂಗು, ಮೊದಲಾದ ಆಹಾರವಸ್ತುಗಳು ಕೋಪದoತಹ ತಾಮಸೀ ಗುಣಗಳನ್ನು ಹೆಚ್ಚಿಸಬಲ್ಲವು.
ಹಿಂದೂ ಧರ್ಮವು ಮದ್ಯಪಾನವನ್ನು ನಿಷೇಧಿಸುತ್ತದೆಯೇ?
ವ್ಯಕ್ತಿಯೋರ್ವನ ಮನದಲ್ಲಿ ರಾಜಸಿಕ ಹಾಗೂ ತಾಮಸಿಕ ಗುಣಗಳು ವೃದ್ಧಿಗೊoಡಾಗ ಆತನ ಚಿತ್ತವು ನೆಮ್ಮದಿಯಿಂದಿರಲು ಸಾಧ್ಯವಿಲ್ಲ. ಆದ್ದರಿಂದಲೇ, ಈ ಸ್ಥಿತಿಯಲ್ಲಿ ವ್ಯಕ್ತಿಯೋರ್ವನಿಗೆ ಭಗವಂತನ ಕುರಿತು ಚಿಂತಿಸುವುದಾಗಲಿ, ಧ್ಯಾನಿಸುವುದಾಗಲಿ ಸಾಧ್ಯವಾಗುವುದಿಲ್ಲ. ಇವುಗಳ ಬದಲಿಗೆ ಸತ್ವ ಗುಣವು ವೃದ್ಧಿಯಾದಾಗ, ಭಗವಂತನ ಧ್ಯಾನವನ್ನೂ, ಭಕ್ತಿಪೂರ್ವಕವಾದ ಉಪಾಸನೆಯನ್ನೂ ಕೈಗೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದಲೇ, ಭಗವದ್ಭಕ್ತರು ತಮ್ಮ ಮನಸ್ಸಿನಲ್ಲಿ ಯಾವಾಗಲೂ ರಾಜಸಿಕ ಹಾಗೂ ತಾಮಸಿಕ ಗುಣಗಳನ್ನು ಹತ್ತಿಕ್ಕುವಂತೆ ಮಾಡಬೇಕು ಹಾಗೂ ಸಾತ್ವಿಕ ಮನಸ್ಥಿತಿಯನ್ನು ಕಾಯ್ದುಕೊಳ್ಳಬೇಕು.
ಪ್ರತಿಯೋರ್ವ ವ್ಯಕ್ತಿಯೂ ಸಹ, ರಸನೇಂದ್ರಿಯವನ್ನೂ ಒಳಗೊಂಡಂತೆ, ತನ್ನೆಲ್ಲಾ ಇಂದ್ರಿಯಗಳನ್ನು ನಿಯoತ್ರಣದಲ್ಲಿಟ್ಟುಕೊಳ್ಳಬೇಕು ಹಾಗೂ ಅವು ಪರಿಶುದ್ಧವಾಗಿರುವಂತೆ ಎಚ್ಚರದಿಂದಿರಬೇಕು. ಹೀಗೆ ಮಾಡುವುದರಿಂದ ಚಿತ್ತ ಶುದ್ದಿ ಹಾಗೂ ಭಾವಶುದ್ಧಿಯು ಉಂಟಾಗುತ್ತದೆ. ಕಾಯಾ, ವಾಚಾ, ಹಾಗೂ ಮನಸಾ ಪರಿಶುದ್ಧವಾಗಿರುವುದರ ಮೂಲಕ ವ್ಯಕ್ತಿಯೋರ್ವನು ದೇವರನ್ನು ಸoಪ್ರೀತಗೊಳಿಸಬಹುದು. ಇದರರ್ಥವೇನೆoದರೆ, ನಮ್ಮ ಮನಸ್ಸು, ನಮ್ಮ ನಡೆ, ಮತ್ತು ನಮ್ಮ ನುಡಿಗಳು ಸ್ವಚ್ಚವಾಗಿರಬೇಕು.



Click it and Unblock the Notifications