Latest Updates
-
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು?
ರಾಮನ ಹೆಜ್ಜೆ ಗುರುತು ಸೀತೆ ಲಕ್ಷ್ಮಣರಿಗೆ ಪಾವನ ಏಕೆ?
ರಾಮಾಯಣವನ್ನು ಓದಿದ ಮೇಲೆ ಅಥವಾ ಕೇಳಿದ ಮೇಲೆ ಒಂದು ವಿಚಾರ ನಮಗೆ ಮತ್ತೆ ಮತ್ತೆ ಅರ್ಥವಾಗುತ್ತದೆ. ಅದು ರಾಮ ಎಲ್ಲಿಯೇ ಹೋದರು ಸೀತೆ ಮತ್ತು ಲಕ್ಷ್ಮಣರು ಆತನ ಹಿಂದೆಯೇ ಹೋಗುತ್ತಿದ್ದರು ಎಂದು. ರಾಮ ಎಲ್ಲಿಯೇ ಹೋದರು ಇವರು ಆತನ ಹಿಂದೆ ಅಲ್ಲಿ ಹಾಜರಿರುತ್ತಿದ್ದರು ಹಾಗು ಜನರು ಸಹ ಇವರನ್ನು ಬರ ಮಾಡಿಕೊಳ್ಳಲು ಮತ್ತು ಅವರಿಗೆ ಆತಿಥ್ಯ ನೀಡಲು ಹಾಗೂ ಭೇಟಿ ಮಾಡಲು ಕಾಯುತ್ತ ಕುಳಿತಿರುತ್ತಿದ್ದರು ಎಂದು ನಮಗೆ ತಿಳಿದು ಬರುತ್ತದೆ.
ಆದರೂ ಒಂದು ವಿಚಾರ ನಮಗೆ ತಿಳಿಯುತ್ತದೆ. ಅದೇನೆಂದರೆ ಸೀತೆ ಮತ್ತು ಲಕ್ಷ್ಮಣ ಇಬ್ಬರೂ ರಾಮನ ಹಿಂದೆ ಹೋದರೆ ಹೊರತು, ಅಪ್ಪಿ-ತಪ್ಪಿ ಸಹ ಆತನ ಮುಂದೆ ನಡೆಯಲಿಲ್ಲ, ಯಾವಾಗಲು ಇವರು ರಾಮನನ್ನೆ ಹಿಂಬಾಲಿಸಿದರು. ವಿಚಿತ್ರ ಎನಿಸಿದರು ಇದು ಸತ್ಯ. ಇದಕ್ಕೆ ಕಾರಣ ಅವರಲ್ಲಿ ಇದ್ದ ನಂಬಿಕೆಯೇ ಕಾರಣ, ಅದೇ ಅವರನ್ನು ಹೀಗೆ ಮಾಡಿಸಿತ್ತು. ಹಾಗಾದರೆ ಯಾವ ನಂಬಿಕೆ ಮತ್ತು ಆಚಾರ ಸೀತೆ ಮತ್ತು ಲಕ್ಷ್ಮಣರನ್ನು ಎಂದೆಂದಿಗು ರಾಮನ ಹಿಂದೆಯೇ ಹೋಗುವಂತೆ ಮಾಡಿತ್ತು? ಎಂಬುದನ್ನು ನೋಡೋಣ.

ಪ್ರಯಾಣ ಮಾಡುವಾಗ ಸೀತೆಯು ರಾಮನ ಹಿಂದೆಯೇ ನಡೆದುಕೊಂಡು ಬರುತ್ತಿದ್ದಳು. ಹೀಗೆ ಬರುವಾಗ ಆಕೆ ಸುಮ್ಮನೆ ಬರುತ್ತಿರಲಿಲ್ಲ, ಸೀತೆ ಅಪ್ಪಿ-ತಪ್ಪಿ ಸಹ ರಾಮನ ಹೆಜ್ಜೆ ಗುರುತುಗಳನ್ನು ತುಳಿಯಲು ಹೋಗುತ್ತಿರಲಿಲ್ಲ. ಇದಕ್ಕಾಗಿ ಆಕೆಯು ನಡೆಯುವಾಗ ರಾಮನ ಹೆಜ್ಜೆ ಗುರುತುಗಳ ನಡುವೆಯೇ ಹೆಜ್ಜೆ ಇರಿಸಿ ನಡೆದುಕೊಂಡು ಬರುತ್ತಿದ್ದಳು. ಇದರ ಜೊತೆಗೆ ಲಕ್ಷ್ಮಣನು ಇವರಿಬ್ಬರ ಹಿಂದೆ ನಡೆದುಕೊಂಡು ಬರುತ್ತಿದ್ದನು. ಆತನು ಸಹ ರಾಮ-ಸೀತೆ ಇಬ್ಬರ ಹೆಜ್ಜೆ ಗುರುತುಗಳನ್ನು ತುಳಿಯದೆ ಬರುತ್ತಿದ್ದನು. ರಾಮಾಯಣದಲ್ಲಿ ಬಚ್ಚಿಟ್ಟ ಸತ್ಯ; ಸೀತಾದೇವಿ ರಾವಣನ ಪುತ್ರಿ?
ಸೀತೆ ರಾಮನ ಹೆಜ್ಜೆ ಗುರುತನ್ನು ತುಳಿಯದೆ ಇರುವುದಕ್ಕು, ಲಕ್ಷ್ಮಣ ಸೀತಾ-ರಾಮರ ಹೆಜ್ಜೆ ಗುರುತುಗಳನ್ನು ತುಳಿಯದೆ ಇರುವುದು ಕುಟುಂಬ ಗೌರವದ ಒಂದು ಅಮೋಘ ಉದಾಹರಣೆಯಾಗಿ ನಿಲ್ಲುತ್ತದೆ. ಏಕೆಂದರೆ ರಾಮನು ಸೀತೆಯ ಪತಿಯಾದ್ದರಿಂದ ಆಕೆ ತನ್ನ ಪತಿಯ ಹೆಜ್ಜೆ ಗುರುತುಗಳನ್ನು ತುಳಿಯದೆ ಆತನಿಗೆ ಗೌರವವನ್ನು ನೀಡುತ್ತಿದ್ದಳು.
ಲಕ್ಷ್ಮಣನಿಗೆ ರಾಮ ಮತ್ತು ಸೀತೆ ಇಬ್ಬರೂ ಹಿರಿಯರಾದ್ದರಿಂದ, ಆತನು ಈ ಇಬ್ಬರ ಹೆಜ್ಜೆ ಗುರುತುಗಳನ್ನು ತುಳಿಯದೆ ಅವರಿಬ್ಬರಿಗೆ ಗೌರವವನ್ನು ನೀಡುತ್ತಿದ್ದನು. ಇಲ್ಲಿ ಸೀತಾ ಮತ್ತು ಲಕ್ಷ್ಮಣರ ನಡವಳಿಕೆಯು ಕುಟುಂಬಗಳ ಮೌಲ್ಯವನ್ನು ಮತ್ತು ಹಿರಿಯರಿಗೆ ನೀಡುವ ಗೌರವವನ್ನು ಸಾರುತ್ತದೆ. ಕುಟುಂಬದ ಹಿರಿಯರಿಗೆ ಗೌರವ ನೀಡದಿದ್ದಲ್ಲಿ ಅವರನ್ನು ನಿಂದಿಸಿದಂತೆಯೇ ಆಗುತ್ತದೆ.



Click it and Unblock the Notifications
