Latest Updates
-
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು! -
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು? -
ಪಂಜಾಬ್-ಹರಿಯಾಣದಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ 20 ನಿಮಿಷಗಳ ಟಿಪ್ಸ್ ಪಾಲಿಸಿ! -
ಸೋಯಾಬೀನ್ ಎಣ್ಣೆ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಮೇಲೆ ಹೊರೆ, ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು? -
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ಇಂದು ರಾತ್ರಿ ದೆಹಲಿ-ಎನ್ಸಿಆರ್ನಲ್ಲಿ ಭೀಕರ ಮಳೆ: ಹೊರಗೆ ಹೋಗುವ ಪ್ಲಾನ್ ಇದೆಯಾ? ಎಚ್ಚರ! -
ಮಳೆಗಾಲದಲ್ಲಿ ಮನೆ ಹಾಳಾಗದಂತೆ ತಡೆಯುವುದು ಹೇಗೆ? ತೇವಾಂಶ ಮತ್ತು ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
'ಹೆಲ್ದಿ' ಆಹಾರದ ಹೆಸರಿನಲ್ಲಿ ಮೋಸ ಹೋಗ್ತಿದ್ದೀರಾ? FSSAI ಹೊಸ ನಿಯಮದ ಅಸಲಿಯತ್ತು ಇಲ್ಲಿದೆ! -
UGC NET 2026 ಅಡ್ಮಿಟ್ ಕಾರ್ಡ್ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ!
ವಾಸ್ತು ಪ್ರಕಾರ ಮನೆಯನ್ನು ಈ ರೀತಿ ಇಟ್ಟರೆ ಹಣದ ಕೊರತೆಯೇ ಇರಲ್ಲ
ನಾವು ಒಂದು ಮನೆಯಲ್ಲಿ ವಾಸಿಸುವಾಗ ಆ ಮನೆ ಕುಬೇರ ಮನೆಯಾಗಿರಬೇಕೆಂದು ಬಯಸುತ್ತೇವೆ. ಕುಬೇರನ ಒಲಿಸಿಕೊಂಡರೆ ಆ ಮನೆಯಲ್ಲಿ ಹಣಕ್ಕೆ ಕೊರತ ಇರಲ್ಲ ಎಂದು ಹೇಳಲಾಗುವುದು.

ಕುಬೇರನ ಸಂತೋಷಕ್ಕಾಗಿ ಮನೆಯಲ್ಲಿ ಕೆಲವೊಂದು ವಾಸ್ತು ನಿಮಯಗಳನ್ನು ಅನುಸರಿಸಬೇಕು ಎಂದು ವಾಸ್ತು ನಿಯಮ ಹೇಳುತ್ತದೆ. ವಾಸ್ತು ಶಾಸ್ತ್ರವು ನೀವು ಹಣವನ್ನು ಅಂದ್ರೆ ಕುಬೇರನನ್ನು ಆಕರ್ಷಿಸಲು ಏನು ಮಾಡಬೇಕೆಂದು ಹೇಳಿದೆ.
ನೀವು ವಾಸ್ತು ನಂಬುವುದಾದರೆ ಮನೆಯಲ್ಲಿ ಹಣ ಕೊರತೆ ಉಂಟಾಗದಿರಲು ಈ ವಾಸ್ತು ಟಿಪ್ಸ್ ಅನುಸರಿಸುವುದು ಒಳ್ಳೆಯದು:

ಮನೆಯ ಮುಂಬಾಗಲು
ಹಣವು ಅಂದ್ರೆ ಅದೃಷ್ಟ ಮನೆಯ ಮುಂಬಾಗಿಲಿನಿಂದ ಬರುತ್ತದೆ, ಆದ್ದರಿಂದ ಮನೆಯ ಮುಂಬಾಗಲು ಸ್ವಚ್ಛವಾಗಿರಬೇಕು. ಮನೆಯ ಒಳಗಡೆ ಬರುವಾಗ ಗಂಟೆಯ ನಿನಾದವಿರಲಿ. ಆ ಶಬ್ದ ಹಣವನ್ನು ಆಕರ್ಷಿಸುತ್ತದೆ. ಮನೆಯ ಮುಂದುಗಡೆ ಸುಂದರವಾದ ಅಲಂಕಆರ ಇರಲಿ, ದೀಪವಿರಲಿ.

ಮನೆಯ ಬಣ್ಣ
ವಾಸ್ತು ಪ್ರಕಾರ ಕೆಂಪು, ನೀಲಿ ಮತ್ತು ಹಸಿರು ಹಣವನ್ನು ಆಕರ್ಷಿಸುತ್ತದೆ. ಈ ಬಣ್ಣಗಳನನ್ನು ನಿಮ್ಮ ಮನೆಯ ಗೋಡೆಗಳಿಗೆ ಬಳಸಿ. ಅಲ್ಲದೆ ಫರ್ನೀಚರ್, ಮತ್ತಿತರ ಸಾಧನಗಳ ಬಣ್ಣಗಳು ಕೂಡ ಹಣವನ್ನು ಆಕರ್ಷಿಸುತ್ತದೆ.

ಚಿನ್ನದ ಬಣ್ಣ ಅಥವಾ ಅಲಂಕಾರ
ಚಿನ್ನ ಸಂಪತ್ತಿನ ಸಂಕೇತ. ನೀವು ಐಶ್ವರ್ಯವಂತರಾಗಲು ಮನೆಯಲ್ಲಿ ಚಿನ್ನದ ಬಣ್ಣದ ಸಾಧನಗಳು ಅಥವಾ ಡೆಕೋರೇಷನ್ ಬಳಸಿ ಮನೆಯ ಹಾಲ್ ಅಲಂಕರಿಸಿ.

ಸ್ವಚ್ಛವಾದ ಹಾಗೂ ಒಪ್ಪವಾದ ಅಡುಗೆ ಮನೆ
ಅಡುಗೆ ಮನೆ ತುಂಬಾ ಸ್ವಚ್ಛವಾಗಿ ಹಾಗೂ ಒಪ್ಪವಾಗಿ ಇಡುವುದರಿಂದ ಮನೆಗೆ ಐಶ್ವರ್ಯ ಬರುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

ಮನೆಯ ಗಡಿಯಾರ
ನಿಮ್ಮ ಮನೆಯಲ್ಲಿ ಎಷ್ಟು ಗಡಿಯಾರ ಇರುತ್ತದೋ ಆ ಎಲ್ಲಾ ಗಡಿಯಾರ ಸರಿಯಾದ ಸಮಯ ತೋರಿಸುತ್ತಿರಬೇಕು. ನಡೆಯದ ಗಡಿಯಾರ ಬಳಸಬೇಡಿ. ಇನ್ನು ಸರಿಯಾದ ಸಮಯ ತೋರಿಸದಿರುವ ಗಡಿಯಾರ ಮನೆಯಲ್ಲಿದ್ದರೆ ಅದರಿಂದ ಆರ್ಥಿಕ ತೊಂದರೆ ಉಂಟಾಗುವುದು.

ಸ್ಥಳಾವಕಾಶ ಅಧಿಕ ಇರಲಿ
ಮನೆಯಲ್ಲಿ ಸಾಕಷ್ಟು ಅಧಿಕಾರವಿರಲಿ, ಮನೆಯಲ್ಲಿ ಅಗ್ಯತವಿಲ್ಲದ ಮುರಿದ ವಸ್ತುಗಳನ್ನು ಬಿಸಾಡಿ, ಮನೆಯನ್ನು ಒಪ್ಪವಾಗಿ ಇಡಿ. ಇದರಿಂದ ಮನೆಯಲ್ಲಿ ಹಣದ ಬರುವಿಕೆ ಹೆಚ್ಚಾಗುವುದು.

ನೀರನ್ನು ಉಳಿಸಿ
ವಾಸ್ತು ಶಾಸ್ತ್ರದಲ್ಲಿ ನೀರಿಗೆ ತುಂಬಾ ಮಹತ್ವವಿದೆ. ಆದ್ದರಿಂದ ಮನೆಯಲ್ಲಿ ನೀರನ್ನು ಅನಗ್ಯತವಾಗಿ ಪೋಲು ಮಾಡಬೇಡಿ. ಮನೆಯಲ್ಲಿ ಯಾವ ನಲ್ಲಿ ಲೀಕ್ ಇರಬಾರದು. ಅಲ್ಲದೆ ಯಾವುದೇ ಕಲುಷಿತ ನೀರು ನಿಲ್ಲುವಂತಿರಬಾರದು.

ಮನಿ ಪ್ಲ್ಯಾಂಟ್ ನೆಡಿ
ಮನೆಯಲ್ಲಿ ಹಣವನ್ನು ಆಕರ್ಷಿಸುತ್ತೆ ಎಂದು ಹೇಳಲಾಗುವ ಮನಿ ಪ್ಲ್ಯಾಂಟ್ ನೆಡಿ, ಇದರಿಂದ ಶುದ್ಧ ಗಾಳಿಯೂ ಸಿಗುವುದು, ಮನೆಗೆ ಅದೃಷ್ಟವೂ ಬರುವುದು.



Click it and Unblock the Notifications