Just In
- 1 hr ago ಬೇಸಿಗೆಯಲ್ಲಿ ದಿನಾ ಎಳನೀರು ಕುಡಿದರೆ ಏನಾಗುತ್ತೆ? ಯಾವ ಸಮಯದಲ್ಲಿ ಎಳನೀರು ಕುಡಿಯಬೇಕು?
- 9 hrs ago ಮೀನ ರಾಶಿಗೆ ಮಂಗಳ ಸಂಚಾರ: ಈ 5 ರಾಶಿಯವರು ವೃತ್ತಿ ಬದುಕಿನಲ್ಲಿ ಜಾಗ್ರತೆ
- 10 hrs ago ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- 10 hrs ago ಬಿಲ್ಗೇಟ್ಸ್ ಟೀ ಕೇಳಿದ್ದಕ್ಕೆ ಟೀ ಮಾಡುತ್ತಿರುವ ನಾಯಿ: ಕ್ಯೂಟ್ ವೀಡಿಯೋ ವೈರಲ್
Don't Miss
- Sports GT vs DC: ಡೆಲ್ಲಿ ವಿರುದ್ಧದ ಹೀನಾಯ ಸೋಲಿಗೆ ಇವರೇ ಕಾರಣ; ಶುಭ್ಮನ್ ಗಿಲ್ ಗರಂ
- News ಭಾರತೀಯ ರೈಲ್ವೆಗೆ 171 ವರ್ಷ: ಮೊದಲ ರೈಲು ಸಂಚಾರ ಎಲ್ಲಿಂದ ಎಲ್ಲಿಗೆ? ಪೋಸ್ಟ್ ಹಂಚಿಕೊಂಡ ರೈಲ್ವೆ
- Technology ಅಗ್ಗದ ದರದಲ್ಲಿ 5G ಫೋನ್ ಖರೀದಿಸಬೇಕೆ?..ಈ ಆಫರ್ ಮಿಸ್ ಮಾಡ್ಕೋಬೇಡಿ!
- Automobiles Kia: ಬಹುನಿರೀಕ್ಷಿತ ಕಿಯಾ ಕ್ಲಾವಿಸ್ ಮೈಕ್ರೋ ಎಸ್ಯುವಿ ಶೀಘ್ರದಲ್ಲೇ ಬಿಡಗಡೆ
- Movies ಅನುಷ್ಕಾ ಶೆಟ್ಟಿ ಬ್ಯಾಕ್ ಟು ಬ್ಯಾಕ್ ಯಾಕೆ ಸಿನಿಮಾ ಮಾಡ್ತಿಲ್ಲಾ? ನಿರ್ದೇಶಕರಿ ಕಂಡೀಷನ್ ಹಾಕ್ತಿದ್ದಾರಾ?
- Finance Bullet train: ಮೇಡ್ ಇನ್ ಇಂಡಿಯಾ ಬುಲೆಟ್ ಟ್ರೈನ್ಗೆ ಶೀಘ್ರ ಚಾಲನೆ, ಗಂಟೆಗೆ 250 ವೇಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಾಸ್ತು ಪ್ರಕಾರ ಮನೆಯನ್ನು ಈ ರೀತಿ ಇಟ್ಟರೆ ಹಣದ ಕೊರತೆಯೇ ಇರಲ್ಲ
ನಾವು ಒಂದು ಮನೆಯಲ್ಲಿ ವಾಸಿಸುವಾಗ ಆ ಮನೆ ಕುಬೇರ ಮನೆಯಾಗಿರಬೇಕೆಂದು ಬಯಸುತ್ತೇವೆ. ಕುಬೇರನ ಒಲಿಸಿಕೊಂಡರೆ ಆ ಮನೆಯಲ್ಲಿ ಹಣಕ್ಕೆ ಕೊರತ ಇರಲ್ಲ ಎಂದು ಹೇಳಲಾಗುವುದು.
ಕುಬೇರನ ಸಂತೋಷಕ್ಕಾಗಿ ಮನೆಯಲ್ಲಿ ಕೆಲವೊಂದು ವಾಸ್ತು ನಿಮಯಗಳನ್ನು ಅನುಸರಿಸಬೇಕು ಎಂದು ವಾಸ್ತು ನಿಯಮ ಹೇಳುತ್ತದೆ. ವಾಸ್ತು ಶಾಸ್ತ್ರವು ನೀವು ಹಣವನ್ನು ಅಂದ್ರೆ ಕುಬೇರನನ್ನು ಆಕರ್ಷಿಸಲು ಏನು ಮಾಡಬೇಕೆಂದು ಹೇಳಿದೆ.
ನೀವು ವಾಸ್ತು ನಂಬುವುದಾದರೆ ಮನೆಯಲ್ಲಿ ಹಣ ಕೊರತೆ ಉಂಟಾಗದಿರಲು ಈ ವಾಸ್ತು ಟಿಪ್ಸ್ ಅನುಸರಿಸುವುದು ಒಳ್ಳೆಯದು:
ಮನೆಯ ಮುಂಬಾಗಲು
ಹಣವು ಅಂದ್ರೆ ಅದೃಷ್ಟ ಮನೆಯ ಮುಂಬಾಗಿಲಿನಿಂದ ಬರುತ್ತದೆ, ಆದ್ದರಿಂದ ಮನೆಯ ಮುಂಬಾಗಲು ಸ್ವಚ್ಛವಾಗಿರಬೇಕು. ಮನೆಯ ಒಳಗಡೆ ಬರುವಾಗ ಗಂಟೆಯ ನಿನಾದವಿರಲಿ. ಆ ಶಬ್ದ ಹಣವನ್ನು ಆಕರ್ಷಿಸುತ್ತದೆ. ಮನೆಯ ಮುಂದುಗಡೆ ಸುಂದರವಾದ ಅಲಂಕಆರ ಇರಲಿ, ದೀಪವಿರಲಿ.
ಮನೆಯ ಬಣ್ಣ
ವಾಸ್ತು ಪ್ರಕಾರ ಕೆಂಪು, ನೀಲಿ ಮತ್ತು ಹಸಿರು ಹಣವನ್ನು ಆಕರ್ಷಿಸುತ್ತದೆ. ಈ ಬಣ್ಣಗಳನನ್ನು ನಿಮ್ಮ ಮನೆಯ ಗೋಡೆಗಳಿಗೆ ಬಳಸಿ. ಅಲ್ಲದೆ ಫರ್ನೀಚರ್, ಮತ್ತಿತರ ಸಾಧನಗಳ ಬಣ್ಣಗಳು ಕೂಡ ಹಣವನ್ನು ಆಕರ್ಷಿಸುತ್ತದೆ.
ಚಿನ್ನದ ಬಣ್ಣ ಅಥವಾ ಅಲಂಕಾರ
ಚಿನ್ನ ಸಂಪತ್ತಿನ ಸಂಕೇತ. ನೀವು ಐಶ್ವರ್ಯವಂತರಾಗಲು ಮನೆಯಲ್ಲಿ ಚಿನ್ನದ ಬಣ್ಣದ ಸಾಧನಗಳು ಅಥವಾ ಡೆಕೋರೇಷನ್ ಬಳಸಿ ಮನೆಯ ಹಾಲ್ ಅಲಂಕರಿಸಿ.
ಸ್ವಚ್ಛವಾದ ಹಾಗೂ ಒಪ್ಪವಾದ ಅಡುಗೆ ಮನೆ
ಅಡುಗೆ ಮನೆ ತುಂಬಾ ಸ್ವಚ್ಛವಾಗಿ ಹಾಗೂ ಒಪ್ಪವಾಗಿ ಇಡುವುದರಿಂದ ಮನೆಗೆ ಐಶ್ವರ್ಯ ಬರುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
ಮನೆಯ ಗಡಿಯಾರ
ನಿಮ್ಮ ಮನೆಯಲ್ಲಿ ಎಷ್ಟು ಗಡಿಯಾರ ಇರುತ್ತದೋ ಆ ಎಲ್ಲಾ ಗಡಿಯಾರ ಸರಿಯಾದ ಸಮಯ ತೋರಿಸುತ್ತಿರಬೇಕು. ನಡೆಯದ ಗಡಿಯಾರ ಬಳಸಬೇಡಿ. ಇನ್ನು ಸರಿಯಾದ ಸಮಯ ತೋರಿಸದಿರುವ ಗಡಿಯಾರ ಮನೆಯಲ್ಲಿದ್ದರೆ ಅದರಿಂದ ಆರ್ಥಿಕ ತೊಂದರೆ ಉಂಟಾಗುವುದು.
ಸ್ಥಳಾವಕಾಶ ಅಧಿಕ ಇರಲಿ
ಮನೆಯಲ್ಲಿ ಸಾಕಷ್ಟು ಅಧಿಕಾರವಿರಲಿ, ಮನೆಯಲ್ಲಿ ಅಗ್ಯತವಿಲ್ಲದ ಮುರಿದ ವಸ್ತುಗಳನ್ನು ಬಿಸಾಡಿ, ಮನೆಯನ್ನು ಒಪ್ಪವಾಗಿ ಇಡಿ. ಇದರಿಂದ ಮನೆಯಲ್ಲಿ ಹಣದ ಬರುವಿಕೆ ಹೆಚ್ಚಾಗುವುದು.
ನೀರನ್ನು ಉಳಿಸಿ
ವಾಸ್ತು ಶಾಸ್ತ್ರದಲ್ಲಿ ನೀರಿಗೆ ತುಂಬಾ ಮಹತ್ವವಿದೆ. ಆದ್ದರಿಂದ ಮನೆಯಲ್ಲಿ ನೀರನ್ನು ಅನಗ್ಯತವಾಗಿ ಪೋಲು ಮಾಡಬೇಡಿ. ಮನೆಯಲ್ಲಿ ಯಾವ ನಲ್ಲಿ ಲೀಕ್ ಇರಬಾರದು. ಅಲ್ಲದೆ ಯಾವುದೇ ಕಲುಷಿತ ನೀರು ನಿಲ್ಲುವಂತಿರಬಾರದು.
ಮನಿ ಪ್ಲ್ಯಾಂಟ್ ನೆಡಿ
ಮನೆಯಲ್ಲಿ ಹಣವನ್ನು ಆಕರ್ಷಿಸುತ್ತೆ ಎಂದು ಹೇಳಲಾಗುವ ಮನಿ ಪ್ಲ್ಯಾಂಟ್ ನೆಡಿ, ಇದರಿಂದ ಶುದ್ಧ ಗಾಳಿಯೂ ಸಿಗುವುದು, ಮನೆಗೆ ಅದೃಷ್ಟವೂ ಬರುವುದು.