Latest Updates
-
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ
ವಾಸ್ತು ಪ್ರಕಾರ ಮನೆಯನ್ನು ಈ ರೀತಿ ಇಟ್ಟರೆ ಹಣದ ಕೊರತೆಯೇ ಇರಲ್ಲ
ನಾವು ಒಂದು ಮನೆಯಲ್ಲಿ ವಾಸಿಸುವಾಗ ಆ ಮನೆ ಕುಬೇರ ಮನೆಯಾಗಿರಬೇಕೆಂದು ಬಯಸುತ್ತೇವೆ. ಕುಬೇರನ ಒಲಿಸಿಕೊಂಡರೆ ಆ ಮನೆಯಲ್ಲಿ ಹಣಕ್ಕೆ ಕೊರತ ಇರಲ್ಲ ಎಂದು ಹೇಳಲಾಗುವುದು.

ಕುಬೇರನ ಸಂತೋಷಕ್ಕಾಗಿ ಮನೆಯಲ್ಲಿ ಕೆಲವೊಂದು ವಾಸ್ತು ನಿಮಯಗಳನ್ನು ಅನುಸರಿಸಬೇಕು ಎಂದು ವಾಸ್ತು ನಿಯಮ ಹೇಳುತ್ತದೆ. ವಾಸ್ತು ಶಾಸ್ತ್ರವು ನೀವು ಹಣವನ್ನು ಅಂದ್ರೆ ಕುಬೇರನನ್ನು ಆಕರ್ಷಿಸಲು ಏನು ಮಾಡಬೇಕೆಂದು ಹೇಳಿದೆ.
ನೀವು ವಾಸ್ತು ನಂಬುವುದಾದರೆ ಮನೆಯಲ್ಲಿ ಹಣ ಕೊರತೆ ಉಂಟಾಗದಿರಲು ಈ ವಾಸ್ತು ಟಿಪ್ಸ್ ಅನುಸರಿಸುವುದು ಒಳ್ಳೆಯದು:

ಮನೆಯ ಮುಂಬಾಗಲು
ಹಣವು ಅಂದ್ರೆ ಅದೃಷ್ಟ ಮನೆಯ ಮುಂಬಾಗಿಲಿನಿಂದ ಬರುತ್ತದೆ, ಆದ್ದರಿಂದ ಮನೆಯ ಮುಂಬಾಗಲು ಸ್ವಚ್ಛವಾಗಿರಬೇಕು. ಮನೆಯ ಒಳಗಡೆ ಬರುವಾಗ ಗಂಟೆಯ ನಿನಾದವಿರಲಿ. ಆ ಶಬ್ದ ಹಣವನ್ನು ಆಕರ್ಷಿಸುತ್ತದೆ. ಮನೆಯ ಮುಂದುಗಡೆ ಸುಂದರವಾದ ಅಲಂಕಆರ ಇರಲಿ, ದೀಪವಿರಲಿ.

ಮನೆಯ ಬಣ್ಣ
ವಾಸ್ತು ಪ್ರಕಾರ ಕೆಂಪು, ನೀಲಿ ಮತ್ತು ಹಸಿರು ಹಣವನ್ನು ಆಕರ್ಷಿಸುತ್ತದೆ. ಈ ಬಣ್ಣಗಳನನ್ನು ನಿಮ್ಮ ಮನೆಯ ಗೋಡೆಗಳಿಗೆ ಬಳಸಿ. ಅಲ್ಲದೆ ಫರ್ನೀಚರ್, ಮತ್ತಿತರ ಸಾಧನಗಳ ಬಣ್ಣಗಳು ಕೂಡ ಹಣವನ್ನು ಆಕರ್ಷಿಸುತ್ತದೆ.

ಚಿನ್ನದ ಬಣ್ಣ ಅಥವಾ ಅಲಂಕಾರ
ಚಿನ್ನ ಸಂಪತ್ತಿನ ಸಂಕೇತ. ನೀವು ಐಶ್ವರ್ಯವಂತರಾಗಲು ಮನೆಯಲ್ಲಿ ಚಿನ್ನದ ಬಣ್ಣದ ಸಾಧನಗಳು ಅಥವಾ ಡೆಕೋರೇಷನ್ ಬಳಸಿ ಮನೆಯ ಹಾಲ್ ಅಲಂಕರಿಸಿ.

ಸ್ವಚ್ಛವಾದ ಹಾಗೂ ಒಪ್ಪವಾದ ಅಡುಗೆ ಮನೆ
ಅಡುಗೆ ಮನೆ ತುಂಬಾ ಸ್ವಚ್ಛವಾಗಿ ಹಾಗೂ ಒಪ್ಪವಾಗಿ ಇಡುವುದರಿಂದ ಮನೆಗೆ ಐಶ್ವರ್ಯ ಬರುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

ಮನೆಯ ಗಡಿಯಾರ
ನಿಮ್ಮ ಮನೆಯಲ್ಲಿ ಎಷ್ಟು ಗಡಿಯಾರ ಇರುತ್ತದೋ ಆ ಎಲ್ಲಾ ಗಡಿಯಾರ ಸರಿಯಾದ ಸಮಯ ತೋರಿಸುತ್ತಿರಬೇಕು. ನಡೆಯದ ಗಡಿಯಾರ ಬಳಸಬೇಡಿ. ಇನ್ನು ಸರಿಯಾದ ಸಮಯ ತೋರಿಸದಿರುವ ಗಡಿಯಾರ ಮನೆಯಲ್ಲಿದ್ದರೆ ಅದರಿಂದ ಆರ್ಥಿಕ ತೊಂದರೆ ಉಂಟಾಗುವುದು.

ಸ್ಥಳಾವಕಾಶ ಅಧಿಕ ಇರಲಿ
ಮನೆಯಲ್ಲಿ ಸಾಕಷ್ಟು ಅಧಿಕಾರವಿರಲಿ, ಮನೆಯಲ್ಲಿ ಅಗ್ಯತವಿಲ್ಲದ ಮುರಿದ ವಸ್ತುಗಳನ್ನು ಬಿಸಾಡಿ, ಮನೆಯನ್ನು ಒಪ್ಪವಾಗಿ ಇಡಿ. ಇದರಿಂದ ಮನೆಯಲ್ಲಿ ಹಣದ ಬರುವಿಕೆ ಹೆಚ್ಚಾಗುವುದು.

ನೀರನ್ನು ಉಳಿಸಿ
ವಾಸ್ತು ಶಾಸ್ತ್ರದಲ್ಲಿ ನೀರಿಗೆ ತುಂಬಾ ಮಹತ್ವವಿದೆ. ಆದ್ದರಿಂದ ಮನೆಯಲ್ಲಿ ನೀರನ್ನು ಅನಗ್ಯತವಾಗಿ ಪೋಲು ಮಾಡಬೇಡಿ. ಮನೆಯಲ್ಲಿ ಯಾವ ನಲ್ಲಿ ಲೀಕ್ ಇರಬಾರದು. ಅಲ್ಲದೆ ಯಾವುದೇ ಕಲುಷಿತ ನೀರು ನಿಲ್ಲುವಂತಿರಬಾರದು.

ಮನಿ ಪ್ಲ್ಯಾಂಟ್ ನೆಡಿ
ಮನೆಯಲ್ಲಿ ಹಣವನ್ನು ಆಕರ್ಷಿಸುತ್ತೆ ಎಂದು ಹೇಳಲಾಗುವ ಮನಿ ಪ್ಲ್ಯಾಂಟ್ ನೆಡಿ, ಇದರಿಂದ ಶುದ್ಧ ಗಾಳಿಯೂ ಸಿಗುವುದು, ಮನೆಗೆ ಅದೃಷ್ಟವೂ ಬರುವುದು.



Click it and Unblock the Notifications











