Latest Updates
-
ಮೊಟ್ಟೆ ದರ ಏರಿಕೆ ಚಿಂತೆಯೇ? ಕಡಿಮೆ ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ಕುಟುಂಬದೊಂದಿಗೆ ಸಂಭ್ರಮಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಪ್ಲಾನ್! -
ವರ್ಕ್ ಫ್ರಮ್ ಹೋಮ್ ಜೊತೆ ಭಾರತ-ಶ್ರೀಲಂಕಾ ಟೆಸ್ಟ್ ಮ್ಯಾಚ್: ಲೈವ್ ಸ್ಕೋರ್ ಮತ್ತು ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
ದೆಹಲಿ ಟಫ್ಮನ್ ಹಾಫ್ ಮ್ಯಾರಥಾನ್: ತೇವಾಂಶದ ನಡುವೆಯೂ ಓಟದಲ್ಲಿ ಮಿಂಚಲು ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರು ರನ್ನಿಂಗ್ ಡೇ: ಮಳೆಗಾಲದಲ್ಲಿ ಓಡುವಾಗ ಈ ತಪ್ಪುಗಳನ್ನು ಮಾಡಬೇಡಿ, ಸುರಕ್ಷಿತವಾಗಿರಿ! -
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್!
ಯೋಗ: ವಜ್ರಾಸನ ಹುಟ್ಟಿಕೊಂಡ ಸ್ವಾರಸ್ಯಕರ ಕತೆ
ಯೋಗದಲ್ಲಿ ವಜ್ರಾಸನ ಎಂಬ ಭಂಗಿಯಿದೆ. ಈ ಆಸನವು ಅಭ್ಯಾಸ ಮಾಡುವುದರಿಂದ ದೇಹವನ್ನು ವಜ್ರಾಯುಧದಂತೆ ಬಲಶಾಲಿಯನ್ನಾಗಿಸುತ್ತದೆ. ಇದು ತುಂಬಾ ಸರಳವಾದ ಆಸನವಾಗಿದ್ದು, ಈ ಆಸನ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಊಟದ ಬಳಿಕ ಒಂದು ಐದು ನಿಮಿಷ ವಜ್ರಾಸನದಲ್ಲಿ ಕೂತರೆ ಜೀರ್ಣಕ್ರಿಯೆಗೆ ತುಂಬಾನೇ ಸಹಕಾರಿ.
ಇಸ್ಲಾಂ, ಬೌದ್ಧ ಧರ್ಮದಲ್ಲಿ ಪ್ರಾರ್ಥನೆ ಮಾಡುವಾಗ ಈ ವಜ್ರಾಸನ ಭಂಗಿಯಲ್ಲಿ ಕುಳಿತುಕೊಳ್ಳುತ್ತಾರೆ. ಜಪಾನ್ನಲ್ಲಿ ವಜ್ರಾಸನದಲ್ಲಿ ಕುಳಿತುಕೊಳ್ಳುವ ಪದ್ಧತಿ ಇದೆ, ಇದಕ್ಕೆ ಸಿಝಾ ಎಂದು ಕರೆಯುತ್ತಾರೆ. ಟೀ ಸೆರ್ಮನಿ ಮಾಡುವಾಗ ಈ ಭಂಗಿಯಲ್ಲಿ ಕುಳಿತುಕೊಳ್ಳುತ್ತಾರೆ.

ಈ ವಜ್ರಾಸನ ಎಷ್ಟೊಂದು ಉಪಯುಕ್ತ ಎನ್ನುವುದನ್ನು ಯೋಗದಲ್ಲಿ ಹೇಳಲಾಗುತ್ತದೆ. ಅದೇ ಈ ವಜ್ರಾಸನ ಹೇಗೆ ಹುಟ್ಟಿಕೊಂಡಿತು ಎಂಬುವುದಕ್ಕೂ ಒಂದು ಪೌರಾಣಿಕ ಕತೆಯಿದೆ, ಅದರ ಬಗ್ಗೆ ಈ ಲೇಖನದಲ್ಲಿ ಹೇಳಲಾಗಿದೆ.
ಇಂಧ್ರ ದೇವತೆಗಳ ಅಧಿಪತಿ, ವಜ್ರಾಯುಧ ಈತನ ಆಯುಧ, ಆದ್ದರಿಂದಲೇ ಇವನನ್ನು ವಜ್ರಪಾಣಿ ಎಂದು ಕೂಡ ಕರೆಯಲಾಗುತ್ತದೆ. ಈಜಿಪ್ಟ್, ಇರಾನ್, ಗ್ರೀಸ್ ಇಲ್ಲಿ ಕೂಡ ಇಂಧ್ರನನ್ನು ದೇವರೆಂದು ಪೂಜಿಸಲಾಗುತ್ತದೆ. ಆ ದೇಶಗಳಲ್ಲಿ ಇಂದ್ರನನ್ನು ಆ್ಯಂಡ್ರಿವ್,ಆ್ಯಂಡ್ರಿಯಾ, ಆ್ಯಂಡ್ರಿಸ್ ಮುಂತಾದ ಹೆಸರಿನಲ್ಲಿ ಪೂಜಿಸಲಾಗುವುದು.
ಇಂಧ್ರನಿಗೆ ವಜ್ರಾಯುಧ ಹೇಗೆ ಸಿಕ್ಕಿತು ಎಂಬುವುದಕ್ಕೆ ಒಂದು ಕತೆಯಿದೆ. ವ್ರಿತ್ರ ಎಂಬ ಅಸುರನ ಕಾಟಕ್ಕೆ ದೇವ ಲೋಕ ಬೇಸತ್ತು ಹೋಗಿರುತ್ತದೆ, ಈತನ ಕಾಟದಿಂದ ಪಾರಾಗಲು ದೇವತೆಗಳು ಇಂಧ್ರನ ಮೊರೆ ಹೋಗುತ್ತಾರೆ. ಆದರೆ ಇರುವ ಯಾವ ಆಯುಧದಿಂದಲೂ ನನ್ನ ಸಾವು ಉಂಟಾಗಬಾರದೆಂದು ವರ ಪಡಿದ ಕಾರಣ ಆತನನ್ನು ಕೊಲ್ಲಲು ಸಾಧ್ಯ ವಾಗುವುದಿಲ್ಲ. ಆತ ಮೂರು ಲೋಕ ವಶಪಡಿಸಿಕೊಂಡು, ಭೂಮಿಯ ನೀರನ್ನು ಕೂಡ ತನ್ನ ವಶದಲ್ಲಿ ಇಟ್ಟುಕೊಳ್ಳುತ್ತಾನೆ.
ಎಲ್ಲಾ ದೇವತೆಗಳು ಒಟ್ಟಾಗಿ ದಧಿಚಿ ಮುನಿಯನ್ನು ಭೇಟಿಯಾಗಿ ತಮ್ಮ ಸಂಕಷ್ಟ ಹೇಳಿಕೊಳ್ಳುತ್ತಾರೆ. ಆಗ ಮುನಿಯು ಲೋಕ ಕಲ್ಯಾಣಕ್ಕಾಗಿ ತನ್ನ ದೇಹವನ್ನು ತ್ಯಾಗ ಮಾಡುತ್ತಾನೆ. ಆ ಮುನಿಯ ಮೂಳೆಯಿಂದ ವಿಶ್ವಕರ್ಮ ತಯಾರಿಸಿದ ಆಯುಧವೇ ವಜ್ರಾಯುಧ. ಇದನ್ನು ಬಳಸಿ ಇಂಧ್ರ ಆ ಅಸುರನನ್ನು ಕೊಲ್ಲುತ್ತಾನೆ. ಭೂಮಿಗೆ ನೀರನ್ನು ಮರಳಿಸುತ್ತಾನೆ. ಇದು ವಜ್ರಾಸನದ ಕತೆ.
ಈ ವಜ್ರಾಸನ ಅಭ್ಯಾಸ ಮಾಡುವುದರಿಂದ ಬೆನ್ನು ಮೂಳೆ ಬಲಶಾಲಿಯಾಗುವುದು.



Click it and Unblock the Notifications
