Latest Updates
-
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ!
ಯೋಗ: ವಜ್ರಾಸನ ಹುಟ್ಟಿಕೊಂಡ ಸ್ವಾರಸ್ಯಕರ ಕತೆ
ಯೋಗದಲ್ಲಿ ವಜ್ರಾಸನ ಎಂಬ ಭಂಗಿಯಿದೆ. ಈ ಆಸನವು ಅಭ್ಯಾಸ ಮಾಡುವುದರಿಂದ ದೇಹವನ್ನು ವಜ್ರಾಯುಧದಂತೆ ಬಲಶಾಲಿಯನ್ನಾಗಿಸುತ್ತದೆ. ಇದು ತುಂಬಾ ಸರಳವಾದ ಆಸನವಾಗಿದ್ದು, ಈ ಆಸನ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಊಟದ ಬಳಿಕ ಒಂದು ಐದು ನಿಮಿಷ ವಜ್ರಾಸನದಲ್ಲಿ ಕೂತರೆ ಜೀರ್ಣಕ್ರಿಯೆಗೆ ತುಂಬಾನೇ ಸಹಕಾರಿ.
ಇಸ್ಲಾಂ, ಬೌದ್ಧ ಧರ್ಮದಲ್ಲಿ ಪ್ರಾರ್ಥನೆ ಮಾಡುವಾಗ ಈ ವಜ್ರಾಸನ ಭಂಗಿಯಲ್ಲಿ ಕುಳಿತುಕೊಳ್ಳುತ್ತಾರೆ. ಜಪಾನ್ನಲ್ಲಿ ವಜ್ರಾಸನದಲ್ಲಿ ಕುಳಿತುಕೊಳ್ಳುವ ಪದ್ಧತಿ ಇದೆ, ಇದಕ್ಕೆ ಸಿಝಾ ಎಂದು ಕರೆಯುತ್ತಾರೆ. ಟೀ ಸೆರ್ಮನಿ ಮಾಡುವಾಗ ಈ ಭಂಗಿಯಲ್ಲಿ ಕುಳಿತುಕೊಳ್ಳುತ್ತಾರೆ.

ಈ ವಜ್ರಾಸನ ಎಷ್ಟೊಂದು ಉಪಯುಕ್ತ ಎನ್ನುವುದನ್ನು ಯೋಗದಲ್ಲಿ ಹೇಳಲಾಗುತ್ತದೆ. ಅದೇ ಈ ವಜ್ರಾಸನ ಹೇಗೆ ಹುಟ್ಟಿಕೊಂಡಿತು ಎಂಬುವುದಕ್ಕೂ ಒಂದು ಪೌರಾಣಿಕ ಕತೆಯಿದೆ, ಅದರ ಬಗ್ಗೆ ಈ ಲೇಖನದಲ್ಲಿ ಹೇಳಲಾಗಿದೆ.
ಇಂಧ್ರ ದೇವತೆಗಳ ಅಧಿಪತಿ, ವಜ್ರಾಯುಧ ಈತನ ಆಯುಧ, ಆದ್ದರಿಂದಲೇ ಇವನನ್ನು ವಜ್ರಪಾಣಿ ಎಂದು ಕೂಡ ಕರೆಯಲಾಗುತ್ತದೆ. ಈಜಿಪ್ಟ್, ಇರಾನ್, ಗ್ರೀಸ್ ಇಲ್ಲಿ ಕೂಡ ಇಂಧ್ರನನ್ನು ದೇವರೆಂದು ಪೂಜಿಸಲಾಗುತ್ತದೆ. ಆ ದೇಶಗಳಲ್ಲಿ ಇಂದ್ರನನ್ನು ಆ್ಯಂಡ್ರಿವ್,ಆ್ಯಂಡ್ರಿಯಾ, ಆ್ಯಂಡ್ರಿಸ್ ಮುಂತಾದ ಹೆಸರಿನಲ್ಲಿ ಪೂಜಿಸಲಾಗುವುದು.
ಇಂಧ್ರನಿಗೆ ವಜ್ರಾಯುಧ ಹೇಗೆ ಸಿಕ್ಕಿತು ಎಂಬುವುದಕ್ಕೆ ಒಂದು ಕತೆಯಿದೆ. ವ್ರಿತ್ರ ಎಂಬ ಅಸುರನ ಕಾಟಕ್ಕೆ ದೇವ ಲೋಕ ಬೇಸತ್ತು ಹೋಗಿರುತ್ತದೆ, ಈತನ ಕಾಟದಿಂದ ಪಾರಾಗಲು ದೇವತೆಗಳು ಇಂಧ್ರನ ಮೊರೆ ಹೋಗುತ್ತಾರೆ. ಆದರೆ ಇರುವ ಯಾವ ಆಯುಧದಿಂದಲೂ ನನ್ನ ಸಾವು ಉಂಟಾಗಬಾರದೆಂದು ವರ ಪಡಿದ ಕಾರಣ ಆತನನ್ನು ಕೊಲ್ಲಲು ಸಾಧ್ಯ ವಾಗುವುದಿಲ್ಲ. ಆತ ಮೂರು ಲೋಕ ವಶಪಡಿಸಿಕೊಂಡು, ಭೂಮಿಯ ನೀರನ್ನು ಕೂಡ ತನ್ನ ವಶದಲ್ಲಿ ಇಟ್ಟುಕೊಳ್ಳುತ್ತಾನೆ.
ಎಲ್ಲಾ ದೇವತೆಗಳು ಒಟ್ಟಾಗಿ ದಧಿಚಿ ಮುನಿಯನ್ನು ಭೇಟಿಯಾಗಿ ತಮ್ಮ ಸಂಕಷ್ಟ ಹೇಳಿಕೊಳ್ಳುತ್ತಾರೆ. ಆಗ ಮುನಿಯು ಲೋಕ ಕಲ್ಯಾಣಕ್ಕಾಗಿ ತನ್ನ ದೇಹವನ್ನು ತ್ಯಾಗ ಮಾಡುತ್ತಾನೆ. ಆ ಮುನಿಯ ಮೂಳೆಯಿಂದ ವಿಶ್ವಕರ್ಮ ತಯಾರಿಸಿದ ಆಯುಧವೇ ವಜ್ರಾಯುಧ. ಇದನ್ನು ಬಳಸಿ ಇಂಧ್ರ ಆ ಅಸುರನನ್ನು ಕೊಲ್ಲುತ್ತಾನೆ. ಭೂಮಿಗೆ ನೀರನ್ನು ಮರಳಿಸುತ್ತಾನೆ. ಇದು ವಜ್ರಾಸನದ ಕತೆ.
ಈ ವಜ್ರಾಸನ ಅಭ್ಯಾಸ ಮಾಡುವುದರಿಂದ ಬೆನ್ನು ಮೂಳೆ ಬಲಶಾಲಿಯಾಗುವುದು.



Click it and Unblock the Notifications

