Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಬುದ್ಧನು ನಿಮ್ಮ ಸ್ವಂತ ಮನಸ್ಸಿನಲ್ಲಿ ಇದ್ದಾನೆ

ಝೆನ್ ಗುರುಗಳ ಬೋಧನೆಯಿಂದ ಒಬ್ಬ ಸನ್ಯಾಸಿಯು ಗಾಢ ಪ್ರಭಾವಕ್ಕೊಳಗಾದನು. ಧ್ಯಾನದ ಒಳ ನೋಟವನ್ನು ಗ್ರಹಿಸುವ ಉದ್ದೇಶದಿಂದ ಮತ್ತು ಆ ಬೋಧನೆಯ ತನಿಖೆಯನ್ನು ಮಾಡುವ ಉದ್ದೇಶದಿಂದ ಮಠವನ್ನು ಬಿಟ್ಟು ಕಾಡಿಗೆ ಹೋಗಲು ನಿರ್ಧರಿಸಿದನು. ಸುಮಾರು 20 ವರ್ಷಗಳ ಕಾಲ ಆ ಅತ್ಯುತ್ತಮ ಬೋಧನೆಯ ತನಿಖೆ ಮಾಡುತ್ತಾ ಆ ಕಾಡಿನಲ್ಲಿ ಕಳೆದನು. ಇಷ್ಟೆಲ್ಲ ತನಿಖೆ ಮಾಡಿದರೂ ಆತನಲ್ಲಿ ಏನೋ ದ್ವಂದ್ವ ಮನೆ ಮಾಡಿತ್ತು.
ಒಂದು ದಿನ ಆ ಕಾಡಿನಲ್ಲಿ ಅಲೆದಾಡುತ್ತಿದ್ದ ಮತ್ತೊಬ್ಬ ಸನ್ಯಾಸಿಯನ್ನು ಕಂಡನು. ಅವನನ್ನು ನೋಡಿದ ಈ ವಿರಕ್ತ ಸನ್ಯಾಸಿಯು, ಆ ಕಾಡಿನಲ್ಲಿ ಅಲೆದಾಡುತ್ತಿದ್ದ ಸನ್ಯಾಸಿಯೂ ಅದೇ ಜೈನ ಗುರುಗಳ ಹತ್ತಿರ ಅಧ್ಯಯನ ಮಾಡಿದವನು ಎಂದು ಗುರುತು ಹಿಡಿದನು. ಗುರುಗಳ ಬೋಧನೆಯಿಂದ ಅವರು ಕಂಡುಕೊಂಡಿರುವ ಸತ್ಯವನ್ನು ಅರಿಯಬೇಕೆಂದು ಅಂದುಕೊಂಡು ಅವರನ್ನು ಮಾತನಾಡಿಸಬೇಕೆಂದು ಅವರ ಬಳಿ ಬಂದನು.
ಆ ಅಲೆಮಾರಿ ಸನ್ಯಾಸಿಯ ಬಳಿಗೆ ಹೋಗಿ “ಗುರುಗಳ ಅತ್ಯುತ್ತಮ (ಮಹಾನ್) ಬೋಧನೆಯಲ್ಲಿ ನೀವು ಏನು ಅರ್ಥ ಮಾಡಿಕೊಂಡಿದ್ದೀರಿ ಎಂದು ದಯವಿಟ್ಟು ಹೇಳಿ” ಎಂದು ಕೇಳಿದನು. ಆಗ ಅಲೆಮಾರಿ ಸನ್ಯಾಸಿ “ಓಹೋ ಅದಾ? ಆ ವಿಚಾರದ ಬಗ್ಗೆ ಗುರುಗಳು ಅತ್ಯಂತ ಸ್ಪಷ್ಟವಾಗಿ ಹೇಳಿದ್ದಾರಲ್ಲವೇ? ಗುರುಗಳು ತಮ್ಮ ಮಹಾನ್ ಬೋಧನೆಯಲ್ಲಿ ಹೇಳಿದ್ದು ಏನೆಂದರೆ “ಬುದ್ಧನು ನಿಮ್ಮ ಸ್ವಂತ ಮನಸ್ಸಿನಲ್ಲಿ ಇಲ್ಲ” ಎಂದು.



Click it and Unblock the Notifications











