Latest Updates
-
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ!
ಬುದ್ಧನು ನಿಮ್ಮ ಸ್ವಂತ ಮನಸ್ಸಿನಲ್ಲಿ ಇದ್ದಾನೆ

ಝೆನ್ ಗುರುಗಳ ಬೋಧನೆಯಿಂದ ಒಬ್ಬ ಸನ್ಯಾಸಿಯು ಗಾಢ ಪ್ರಭಾವಕ್ಕೊಳಗಾದನು. ಧ್ಯಾನದ ಒಳ ನೋಟವನ್ನು ಗ್ರಹಿಸುವ ಉದ್ದೇಶದಿಂದ ಮತ್ತು ಆ ಬೋಧನೆಯ ತನಿಖೆಯನ್ನು ಮಾಡುವ ಉದ್ದೇಶದಿಂದ ಮಠವನ್ನು ಬಿಟ್ಟು ಕಾಡಿಗೆ ಹೋಗಲು ನಿರ್ಧರಿಸಿದನು. ಸುಮಾರು 20 ವರ್ಷಗಳ ಕಾಲ ಆ ಅತ್ಯುತ್ತಮ ಬೋಧನೆಯ ತನಿಖೆ ಮಾಡುತ್ತಾ ಆ ಕಾಡಿನಲ್ಲಿ ಕಳೆದನು. ಇಷ್ಟೆಲ್ಲ ತನಿಖೆ ಮಾಡಿದರೂ ಆತನಲ್ಲಿ ಏನೋ ದ್ವಂದ್ವ ಮನೆ ಮಾಡಿತ್ತು.
ಒಂದು ದಿನ ಆ ಕಾಡಿನಲ್ಲಿ ಅಲೆದಾಡುತ್ತಿದ್ದ ಮತ್ತೊಬ್ಬ ಸನ್ಯಾಸಿಯನ್ನು ಕಂಡನು. ಅವನನ್ನು ನೋಡಿದ ಈ ವಿರಕ್ತ ಸನ್ಯಾಸಿಯು, ಆ ಕಾಡಿನಲ್ಲಿ ಅಲೆದಾಡುತ್ತಿದ್ದ ಸನ್ಯಾಸಿಯೂ ಅದೇ ಜೈನ ಗುರುಗಳ ಹತ್ತಿರ ಅಧ್ಯಯನ ಮಾಡಿದವನು ಎಂದು ಗುರುತು ಹಿಡಿದನು. ಗುರುಗಳ ಬೋಧನೆಯಿಂದ ಅವರು ಕಂಡುಕೊಂಡಿರುವ ಸತ್ಯವನ್ನು ಅರಿಯಬೇಕೆಂದು ಅಂದುಕೊಂಡು ಅವರನ್ನು ಮಾತನಾಡಿಸಬೇಕೆಂದು ಅವರ ಬಳಿ ಬಂದನು.
ಆ ಅಲೆಮಾರಿ ಸನ್ಯಾಸಿಯ ಬಳಿಗೆ ಹೋಗಿ “ಗುರುಗಳ ಅತ್ಯುತ್ತಮ (ಮಹಾನ್) ಬೋಧನೆಯಲ್ಲಿ ನೀವು ಏನು ಅರ್ಥ ಮಾಡಿಕೊಂಡಿದ್ದೀರಿ ಎಂದು ದಯವಿಟ್ಟು ಹೇಳಿ” ಎಂದು ಕೇಳಿದನು. ಆಗ ಅಲೆಮಾರಿ ಸನ್ಯಾಸಿ “ಓಹೋ ಅದಾ? ಆ ವಿಚಾರದ ಬಗ್ಗೆ ಗುರುಗಳು ಅತ್ಯಂತ ಸ್ಪಷ್ಟವಾಗಿ ಹೇಳಿದ್ದಾರಲ್ಲವೇ? ಗುರುಗಳು ತಮ್ಮ ಮಹಾನ್ ಬೋಧನೆಯಲ್ಲಿ ಹೇಳಿದ್ದು ಏನೆಂದರೆ “ಬುದ್ಧನು ನಿಮ್ಮ ಸ್ವಂತ ಮನಸ್ಸಿನಲ್ಲಿ ಇಲ್ಲ” ಎಂದು.



Click it and Unblock the Notifications