Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಬುದ್ಧನು ನಿಮ್ಮ ಸ್ವಂತ ಮನಸ್ಸಿನಲ್ಲಿ ಇದ್ದಾನೆ

ಝೆನ್ ಗುರುಗಳ ಬೋಧನೆಯಿಂದ ಒಬ್ಬ ಸನ್ಯಾಸಿಯು ಗಾಢ ಪ್ರಭಾವಕ್ಕೊಳಗಾದನು. ಧ್ಯಾನದ ಒಳ ನೋಟವನ್ನು ಗ್ರಹಿಸುವ ಉದ್ದೇಶದಿಂದ ಮತ್ತು ಆ ಬೋಧನೆಯ ತನಿಖೆಯನ್ನು ಮಾಡುವ ಉದ್ದೇಶದಿಂದ ಮಠವನ್ನು ಬಿಟ್ಟು ಕಾಡಿಗೆ ಹೋಗಲು ನಿರ್ಧರಿಸಿದನು. ಸುಮಾರು 20 ವರ್ಷಗಳ ಕಾಲ ಆ ಅತ್ಯುತ್ತಮ ಬೋಧನೆಯ ತನಿಖೆ ಮಾಡುತ್ತಾ ಆ ಕಾಡಿನಲ್ಲಿ ಕಳೆದನು. ಇಷ್ಟೆಲ್ಲ ತನಿಖೆ ಮಾಡಿದರೂ ಆತನಲ್ಲಿ ಏನೋ ದ್ವಂದ್ವ ಮನೆ ಮಾಡಿತ್ತು.
ಒಂದು ದಿನ ಆ ಕಾಡಿನಲ್ಲಿ ಅಲೆದಾಡುತ್ತಿದ್ದ ಮತ್ತೊಬ್ಬ ಸನ್ಯಾಸಿಯನ್ನು ಕಂಡನು. ಅವನನ್ನು ನೋಡಿದ ಈ ವಿರಕ್ತ ಸನ್ಯಾಸಿಯು, ಆ ಕಾಡಿನಲ್ಲಿ ಅಲೆದಾಡುತ್ತಿದ್ದ ಸನ್ಯಾಸಿಯೂ ಅದೇ ಜೈನ ಗುರುಗಳ ಹತ್ತಿರ ಅಧ್ಯಯನ ಮಾಡಿದವನು ಎಂದು ಗುರುತು ಹಿಡಿದನು. ಗುರುಗಳ ಬೋಧನೆಯಿಂದ ಅವರು ಕಂಡುಕೊಂಡಿರುವ ಸತ್ಯವನ್ನು ಅರಿಯಬೇಕೆಂದು ಅಂದುಕೊಂಡು ಅವರನ್ನು ಮಾತನಾಡಿಸಬೇಕೆಂದು ಅವರ ಬಳಿ ಬಂದನು.
ಆ ಅಲೆಮಾರಿ ಸನ್ಯಾಸಿಯ ಬಳಿಗೆ ಹೋಗಿ “ಗುರುಗಳ ಅತ್ಯುತ್ತಮ (ಮಹಾನ್) ಬೋಧನೆಯಲ್ಲಿ ನೀವು ಏನು ಅರ್ಥ ಮಾಡಿಕೊಂಡಿದ್ದೀರಿ ಎಂದು ದಯವಿಟ್ಟು ಹೇಳಿ” ಎಂದು ಕೇಳಿದನು. ಆಗ ಅಲೆಮಾರಿ ಸನ್ಯಾಸಿ “ಓಹೋ ಅದಾ? ಆ ವಿಚಾರದ ಬಗ್ಗೆ ಗುರುಗಳು ಅತ್ಯಂತ ಸ್ಪಷ್ಟವಾಗಿ ಹೇಳಿದ್ದಾರಲ್ಲವೇ? ಗುರುಗಳು ತಮ್ಮ ಮಹಾನ್ ಬೋಧನೆಯಲ್ಲಿ ಹೇಳಿದ್ದು ಏನೆಂದರೆ “ಬುದ್ಧನು ನಿಮ್ಮ ಸ್ವಂತ ಮನಸ್ಸಿನಲ್ಲಿ ಇಲ್ಲ” ಎಂದು.



Click it and Unblock the Notifications