Latest Updates
-
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್
ಬುದ್ಧನು ನಿಮ್ಮ ಸ್ವಂತ ಮನಸ್ಸಿನಲ್ಲಿ ಇದ್ದಾನೆ

ಝೆನ್ ಗುರುಗಳ ಬೋಧನೆಯಿಂದ ಒಬ್ಬ ಸನ್ಯಾಸಿಯು ಗಾಢ ಪ್ರಭಾವಕ್ಕೊಳಗಾದನು. ಧ್ಯಾನದ ಒಳ ನೋಟವನ್ನು ಗ್ರಹಿಸುವ ಉದ್ದೇಶದಿಂದ ಮತ್ತು ಆ ಬೋಧನೆಯ ತನಿಖೆಯನ್ನು ಮಾಡುವ ಉದ್ದೇಶದಿಂದ ಮಠವನ್ನು ಬಿಟ್ಟು ಕಾಡಿಗೆ ಹೋಗಲು ನಿರ್ಧರಿಸಿದನು. ಸುಮಾರು 20 ವರ್ಷಗಳ ಕಾಲ ಆ ಅತ್ಯುತ್ತಮ ಬೋಧನೆಯ ತನಿಖೆ ಮಾಡುತ್ತಾ ಆ ಕಾಡಿನಲ್ಲಿ ಕಳೆದನು. ಇಷ್ಟೆಲ್ಲ ತನಿಖೆ ಮಾಡಿದರೂ ಆತನಲ್ಲಿ ಏನೋ ದ್ವಂದ್ವ ಮನೆ ಮಾಡಿತ್ತು.
ಒಂದು ದಿನ ಆ ಕಾಡಿನಲ್ಲಿ ಅಲೆದಾಡುತ್ತಿದ್ದ ಮತ್ತೊಬ್ಬ ಸನ್ಯಾಸಿಯನ್ನು ಕಂಡನು. ಅವನನ್ನು ನೋಡಿದ ಈ ವಿರಕ್ತ ಸನ್ಯಾಸಿಯು, ಆ ಕಾಡಿನಲ್ಲಿ ಅಲೆದಾಡುತ್ತಿದ್ದ ಸನ್ಯಾಸಿಯೂ ಅದೇ ಜೈನ ಗುರುಗಳ ಹತ್ತಿರ ಅಧ್ಯಯನ ಮಾಡಿದವನು ಎಂದು ಗುರುತು ಹಿಡಿದನು. ಗುರುಗಳ ಬೋಧನೆಯಿಂದ ಅವರು ಕಂಡುಕೊಂಡಿರುವ ಸತ್ಯವನ್ನು ಅರಿಯಬೇಕೆಂದು ಅಂದುಕೊಂಡು ಅವರನ್ನು ಮಾತನಾಡಿಸಬೇಕೆಂದು ಅವರ ಬಳಿ ಬಂದನು.
ಆ ಅಲೆಮಾರಿ ಸನ್ಯಾಸಿಯ ಬಳಿಗೆ ಹೋಗಿ “ಗುರುಗಳ ಅತ್ಯುತ್ತಮ (ಮಹಾನ್) ಬೋಧನೆಯಲ್ಲಿ ನೀವು ಏನು ಅರ್ಥ ಮಾಡಿಕೊಂಡಿದ್ದೀರಿ ಎಂದು ದಯವಿಟ್ಟು ಹೇಳಿ” ಎಂದು ಕೇಳಿದನು. ಆಗ ಅಲೆಮಾರಿ ಸನ್ಯಾಸಿ “ಓಹೋ ಅದಾ? ಆ ವಿಚಾರದ ಬಗ್ಗೆ ಗುರುಗಳು ಅತ್ಯಂತ ಸ್ಪಷ್ಟವಾಗಿ ಹೇಳಿದ್ದಾರಲ್ಲವೇ? ಗುರುಗಳು ತಮ್ಮ ಮಹಾನ್ ಬೋಧನೆಯಲ್ಲಿ ಹೇಳಿದ್ದು ಏನೆಂದರೆ “ಬುದ್ಧನು ನಿಮ್ಮ ಸ್ವಂತ ಮನಸ್ಸಿನಲ್ಲಿ ಇಲ್ಲ” ಎಂದು.



Click it and Unblock the Notifications