Just In
Don't Miss
- News Mysuru Zoo: ಬೇಸಿಗೆಯಲ್ಲೂ ಮೈಸೂರು ಮೃಗಾಲಯ ಕೂಲ್.. ಕೂಲ್! ಹೇಗೆ ಗೊತ್ತಾ?
- Technology vivo: ವಿವೋ Y200i ಸ್ಮಾರ್ಟ್ಫೋನ್ ಲಾಂಚ್! 12GB RAM.. 6000mAh ಬ್ಯಾಟರಿ
- Movies ನಿತೇಶ್ ತಿವಾರಿ 'ರಾಮಾಯಣ' ಚಿತ್ರದಲ್ಲಿ ರಣ್ಬೀರ್ ಅಲ್ಲ, ಯಶ್ ಹೀರೋ? ಏನಿದು ಟ್ವಿಸ್ಟ್!
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಂಧಿ ಪೂಜೆಯ ವಿಶೇಷತೆ ನಿಮಗೆ ಗೊತ್ತಾ? ಇಲ್ಲಿದೆ ಸಂಪೂರ್ಣ ವಿವರ...
ಹಿಂದೂ ಧರ್ಮದಲ್ಲಿ ಪ್ರತಿಯೊಂದು ದೇವರ ಆರಾಧನೆ ಹಾಗೂ ಹಬ್ಬದ ಆಚರಣೆಗಳು ವಿಭಿನ್ನವಾಗಿರುತ್ತದೆ. ಅಂತೆಯೇ ದುರ್ಗಾದೇವಿಯ ಆರಾಧನೆಯೂ ಬಹಳ ವಿಶಿಷ್ಟ ಹಾಗೂ ಶ್ರೇಷ್ಠತೆಯನ್ನು ಪಡೆದುಕೊಂಡಿದೆ. ದುರ್ಗಾ ದೇವಿಯ ಆರಾಧನೆಯ ಸಂದರ್ಭದಲ್ಲಿ ಸಂಧಿಪೂಜೆ ಎನ್ನುವ ವಿಶೇಷ ಆಚರಣೆ ಇದೆ. ನವರಾತ್ರಿಯ ಅಷ್ಟಮಿ ತಿಥಿ ಮತ್ತು ನವಮಿಗಳ ಅಂತ್ಯದ ಸಮಯದಲ್ಲಿ ಈ ಪೂಜೆಯನ್ನು ಮಾಡಲಾಗುತ್ತದೆ.
ಈ
ವರ್ಷ
ಅಂದರೆ
2017
ರಲ್ಲಿ
ಸಂಧಿ
ಪೂಜೆಯನ್ನು
ಸಪ್ಟೆಂಬರ್
28
ರಂದು
ಗುರುವಾರ
ಮಾಡಲಾಗುತ್ತದೆ.
ಸಂಧಿ
ಪೂಜೆಯ
ವಿಶಿಷ್ಠವಾದ
ಸಮಯ
ಕೇಲವ
47
ನಿಮಿಷ
ಇರುತ್ತದೆ.
ಅಂದು
ಆ
ಸಮಯ
21.12
ರಿಂದ
22.00ವರೆಗೆ
ಪ್ರಾರಂಭವಾಗುತ್ತದೆ.
ಸಂಧಿ
ಪೂಜೆಯ
ಈ
ಪವಿತ್ರ
ಕ್ಷಣವು
ಬಹಳ
ಮಂಗಳಕರವಾದದ್ದು
ಎಂದು
ಪರಿಗಣಿಸಲಾಗುತ್ತದೆ.
ಈ
ಸಮಯವು
ಚಾಮುಂಡಿ
ದೇವಿ
ದುಷ್ಟ
ಶಕ್ತಿಯೊಡನೆ
ಹೋರಾಡಿ
ಜಯವನ್ನು
ಸಾಧಿಸಿದ
ಸುವರ್ಣ
ಗಳಿಗೆ
ಎಂದು
ಹೇಳಲಾಗುತ್ತದೆ.
ದುರ್ಗಾ
ಮತ್ತು
ಚಾಮುಂಡಿ
ದೇವಿಯ
ಪೂಜಿಸುವ
ಭಕ್ತರು
ಈ
ಮಂಗಳಕರ
ಸಮಯದಲ್ಲಿ
ಪೂಜಿಸಬೇಕು.
ಆಗ
ಒಳ್ಳೆಯ
ಫಲ
ಪಡೆಯಬಹುದು
ಎನ್ನಲಾಗುತ್ತದೆ.
ಈ
ವಿಶೇಷ
ಆಚರಣೆಯ
ಪುರಾಣ
ಇತಿಹಾಸ
ಹಾಗೂ
ಅದರ
ಪುಣ್ಯ
ಫಲದ
ಬಗ್ಗೆ
ತಿಳಿದುಕೊಳ್ಳುವ
ಕುತೂಹಲವಿದ್ದರೆ
ಮುಂದೆ
ಓದಿ.
ಚಾಮುಂಡಿ
ದೇವಿಯ
ಲೀಲೆ
ಮಹಿಷಾಸುರ
ಎನ್ನುವ
ಭಯಂಕರನಾದ
ರಾಕ್ಷಸನಿದ್ದನು.
ಮೂರು
ಲೋಕದ
ಮೇಲೂ
ತನ್ನ
ಕ್ರೋಧ
ಹಾಗೂ
ಭಯ
ಇರಬೇಕೆಂದು
ಬಯಸುತ್ತಿದ್ದನು.
ಅದರಂತೆಯೇ
ಎಲ್ಲರಿಗೂ
ತೊಂದರೆಯನ್ನು
ನೀಡುತ್ತಿದ್ದನು.
ಭೂಮಿಯ
ಮೇಲಿರುವ
ಮಾನವರು
ಹಾಗೂ
ಸ್ವರ್ಗದಲ್ಲಿರುವ
ದೇವತೆಗಳೆಲ್ಲರೂ
ಈತನ
ಉಪಟಳದಿಂದ
ಬಹಳ
ಭಯಭೀತರಾಗಿದ್ದರು.
ದುಷ್ಟ
ರಾಕ್ಷಸನನ್ನು
ಸದೆ
ಬಡಿಯಬೇಕೆಂದು
ಬ್ರಹ್ಮ
ಮತ್ತು
ವಿಷ್ಣು
ದೇವರು
ನಿರ್ಧರಿಸಿದರು
ಅದರಂತೆಯೇ
ಮಾತೆ
ದುರ್ಗಾದೇವಿಯ
ಅವತಾರವನ್ನು
ಸೃಷ್ಟಿಸಿ,
ಎಲ್ಲಾ
ದೇವತೆಗಳ
ಶಕ್ತಿಯನ್ನು
ನೀಡಿದರು.
ಮಹಿಷಾಸುರನನ್ನು
ಸಂಹರಿಸಲು
ವಾಹನವನ್ನಾಗಿ
ಸಿಂಹದ
ಮೇಲೆ
ಪ್ರಯಾಣ
ಬೆಳೆಸಿದಳು.
ಜೊತೆಗೆ
ಹತ್ತು
ಕೈಗಳಲ್ಲೂ
ವಿಶೇಷ
ಆಯುಧಗಳನ್ನು
ಹಿಡಿದಿದ್ದಳು.
ಯುದ್ಧಕ್ಕೆ
ಸಿದ್ಧರಾದ
ಮಹಿಷಾಸುರ
ಹಾಗೂ
ಅವನ
ಬಳಗದ
ವಿರುದ್ಧ
ದುರ್ಗಾ
ದೇವಿ
ಹೋರಾಟಕ್ಕೆ
ಇಳಿದಳು.
ಮಹಿಷಾಸುರನ
ಕಡೆಯವರಾದ
ಚಂಡಾ
ಮತ್ತು
ಮುಂಡಾ
ಎನ್ನುವ
ದುಷ್ಟ
ಶಕ್ತಿಯ
ವಿರುದ್ಧವೂ
ಹೋರಾಡಬೇಕಾಯಿತು.
ಆ
ಸಂದರ್ಭದಲ್ಲಿ
ದೇವಿ
ಚಂದಿಕ
ರೂಪವನ್ನು
ತಾಳಿದಳು.
ಈ
ರೂಪದಲ್ಲಿ
ದೇವಿ
ಕಡು
ಕಪ್ಪು
ಬಣ್ಣ
ಹಾಗೂ
ಕೆಂಪು
ಕಣ್ಣು
ಮತ್ತು
ನಾಲಿಗೆಯನ್ನು
ಹೊಂದಿದ್ದಳು.
ಈ
ಅವತಾರದಲ್ಲಿಯೇ
ಚಂಡಾ
ಮತ್ತು
ಮುಂಡಾ
ಎನ್ನುವ
ಇಬ್ಬರು
ರಾಕ್ಷಸರನ್ನು
ಸಂಹರಿಸಿದಳು.
ಇವಳ
ಈ
ಸಾಹಸಕ್ಕೆ
ಮೆಚ್ಚುಗೆ
ಪಡೆದ
ಚಂದಿಕಾ
ದೇವಿಗೆ
ಚಾಮುಂಡಿ
ಎನ್ನುವ
ಹೆಸರಿನಿಂದ
ಕರೆಯಲಾಯಿತು.
ಚಾಮುಂಡಿ
ದೇವಿಯು
ಚಂಡಾ
ಮತ್ತು
ಮುಂಡಾ
ಎನ್ನುವ
ರಾಕ್ಷಸರನ್ನು
ಕೊಂದ
ಸಮಯವನ್ನೇ
ಸಂಧಿ
ಸಮಯ
ಎಂದು
ಕರೆಯಲಾಗುತ್ತದೆ.
ಹಾಗಾಗಿಯೇ
ಆ
ಸಮಯದಲ್ಲಿ
ದೇವಿಯನ್ನು
ಆರಾಧಿಸಬೇಕು
ಎನ್ನುವ
ಪ್ರತೀತಿ
ಬಂತು.
ರಾಮ
ದೇವರು
ಮತ್ತು
ದುರ್ಗಾ
ದೇವಿಯ
ಪೂಜೆ
ರಾಮನು
ತನ್ನ
ಪತ್ನಿ
ಸೀತೆಯನ್ನು
ರಾವಣನಿಂದ
ಬಿಡಿಸಿಕೊಂಡು
ಬರಲು
ಹಲವಾರು
ತಯಾರಿ
ಮಾಡಿಕೊಳ್ಳುತ್ತಿದ್ದನು.
ಈ
ಸಂದರ್ಭದಲ್ಲಿ
ವಿಜಯವನ್ನು
ಖಚಿತ
ಪಡಿಸಿಕೊಳ್ಳಬೇಕು
ಎನ್ನುವ
ಉದ್ದೇಶದಿಂದ
ದುರ್ಗಾ
ದೇವಿಯನ್ನು
ಪ್ರಾರ್ಥಿಸಿಕೊಂಡನು.
ದುರ್ಗಾದೇವಿಯನ್ನು
ಆಹ್ವಾನಿಸಲು
ಸಮಯ
ಇಲ್ಲವಾದರೂ
ಆಕೆಯನ್ನು
ಪ್ರಾರ್ಥಿಸಿಕೊಂಡನು.
ಅದು
ವಸಂತ
ಕಾಲವಾಗಿತ್ತು.
ರಾಮನು
ಮಾಡಿದ
ಆ
ಕಾರ್ಯವಿಧಾನಕ್ಕೆ
"ಆಕಲ್
ಭೋದನ್"
ಅಥವಾ
"ಅಕಾಲಿಕ
ಪ್ರಾರ್ಥನೆ"
ಎಂದು
ಕರೆಯುತ್ತಾರೆ.
ಸಂಧಿ
ಸಮಯದಲ್ಲಿ
ದುರ್ಗಾದೇವಿಯು
ರಾಮನ
ಎದುರು
ಪ್ರತ್ಯಕ್ಷಳಾದಳು
ಮತ್ತು
ವಿಜಯವಾಗಲಿ
ಎಂದು
ಹರಸಿದಳು
ಎನ್ನುವ
ಪ್ರತೀತಿ
ಇದೆ.
ಸಂಧಿ
ಪೂಜೆಯಲ್ಲಿ
ಕಮಲದ
ಹೂವಿನ
ಶ್ರೇಷ್ಠತೆ
ರಾವಣನ
ವಿರುದ್ಧ
ಹೋರಾಡಿ
ವಿಜಯವಾಗಲು
ಹರಸಿದ
ದುರ್ಗಾದೇವಿಗೆ
ತನ್ನ
ಕಣ್ಣುಗಳನ್ನು
ಅರ್ಪಿಸಲು
ಮುಂದಾಗಿದ್ದನು.
ಆ
ಸಂದರ್ಭದಲ್ಲಿ
ದೇವಿ
ಕಮಲದ
ದಳದಂತಿರುವ
ಕಣ್ಣಿನ
ಬದಲು,
ಕಮಲದಹೂವನ್ನು
ನೀಡೆಂದು
ಹೇಳಿದಳು.
ಅಂತೆಯೇ
ಸಂಧಿ
ಕಾಲದಲ್ಲಿ
ದೇವಿಗೆ
ಕಮಲದ
ಹೂವಿನ
ಶೃಂಗಾರದಿಂದ
ಪೂಜಿಸಲಾಗುತ್ತದೆ.
ಈ
ಪೂಜೆಗೆ
108
ಕಮಲವನ್ನು
ನೀಡುತ್ತಾರೆ.
108
ಎನ್ನುವುದು
ಹಿಂದೂ
ಸಮುದಾಯದಲ್ಲಿ
ಬಹಳ
ಪವಿತ್ರವಾದದ್ದು
ಅಥವಾ
ಮಂಗಳಕರವಾದದ್ದು
ಎಂದು
ಪರಿಗಣಿಸಲಾಗುತ್ತದೆ.
ಹಾಗಾಗಿಯೇ
108
ಕಮಲದ
ಹೂವು,
108
ತುಪ್ಪದ
ದೀಪ,
108
ಕರ್ಪೂರದ
ದೀಪವನ್ನು
ದುರ್ಗಾ/ಚಾಮುಂಡಿ
ದೇವಿಗೆ
ಭಕ್ತಿ
ಭಾವದಿಂದ
ಬೆಳಗುತ್ತಾರೆ.