Latest Updates
-
ಸಿಲಿಂಡರ್ 3 ತಿಂಗಳು ಬರಬೇಕೆ? ಇನ್ಮುಂದೆ ಗ್ಯಾಸ್ ಚಿಂತೆ ಬೇಡ.. LPG ಉಳಿಸಲು ಇಲ್ಲಿದೆ 5 ಸ್ಮಾರ್ಟ್ ಟಿಪ್ಸ್ -
ಅಕ್ಕಿ ಬೇಡ, ಉದ್ದಿನಬೇಳೆ ಬೇಡ.. 15 ನಿಮಿಷದ ಹೆಸರು ಬೇಳೆ-ತರಕಾರಿ ಇಡ್ಲಿ! ಉಳಿದ ಇಡ್ಲಿ ಫ್ರೆಶ್ ಆಗಿಡೋದು ಹೇಗೆ? -
ಗ್ಯಾಸ್ ಇಲ್ವಾ? ಚಿಂತೆ ಬೇಡ.. ಒಲೆ ಹಚ್ಚದೇ ಮಾಡುವ 5 ಆರೋಗ್ಯಕರ ಊಟಗಳಿವು! -
ಮಿಕ್ಸಿಯಲ್ಲೇ ಮಾಡಿ ಕಬ್ಬಿನ ಹಾಲು! ಕಬ್ಬು ಇಲ್ಲದೆಯೇ ಶುದ್ಧವಾದ ಹಾಲು ಮಾಡೋದು ಹೇಗೆ? ರಸ್ತೆ ಬದಿಗಿಂತ ರುಚಿ -
ಮಘಾ ನಕ್ಷತ್ರಕ್ಕೆ ಕೇತು.. ಈ ಎಲ್ಲಾ ರಾಶಿಯವರ ಜೀವನದಲ್ಲಿ ಭಾರಿ ಬದಲಾವಣೆ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? -
10 ನಿಮಿಷಗಳ ಅಪ್ಪೆ.. ಹೆಸರುಕಾಳು ಮತ್ತು ಬಟಾಣಿ ಬಳಸಿ ಮಾಡುವ ರೆಸಿಪಿ! ಮೃದುವಾಗಿ ಮಾಡೋದು ಹೇಗೆ ಗೊತ್ತಾ? -
ವಿವಾಹಿತ ದಂಪತಿಗಳಿಗೂ ಈ ದಿನ ಸಂತೋಷದಾಯಕ! ಸಂಗಾತಿ ಮೇಲೆ ಡೌಟ್ ಬೇಡ -
March 13 Horoscope: ಶುಭ ಕಾರ್ಯ ಸಂಬಂಧಿತ ಚರ್ಚೆಗಳಿವೆ -
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ
ಪ್ರತಿಯೊಬ್ಬ ಮನುಷ್ಯನಲ್ಲೂ ಅಡಗಿರುವ ಆ ಮೂರು ಗುಣಗಳು...
ಹಿಂದೂ ಧರ್ಮದಲ್ಲಿ ಹುಟ್ಟಿನಿಂದ ಸಾವಿನ ತನಕ ಮನುಷ್ಯ ಹೇಗೆ ಬದುಕಬಹುದು ಎಂದು ಪ್ರತಿಯೊಂದು ಹಂತದಲ್ಲೂ ಹೇಳಿಕೊಡಲಾಗುತ್ತದೆ. ಇದರಲ್ಲಿ ಪ್ರಮುಖವಾಗಿರುವುದು ಮಾನವನಲ್ಲಿ ಇರಬೇಕಾದ ಮೂರು ಗುಣಗಳು.
ಹಿಂದೂ ಧರ್ಮ ತುಂಬಾ ಪುರಾತನವಾದ ಧರ್ಮವೆಂದು ನಂಬಲಾಗಿದೆ. ಹಿಂದೂ ಧರ್ಮವು ಬದಲಾವಣೆಗಳಿಗೆ ಹೊಂದಿಕೊಂಡು ಎಲ್ಲವನ್ನೂ ತನ್ನಲ್ಲಿ ಸೇರಿಸಿಕೊಂಡು ಈಗಲೂ ವಿಶ್ವದೆಲ್ಲೆಡೆಯಲ್ಲಿ ಜನಪ್ರಿಯತೆಯನ್ನು ಪಡೆದಿದೆ.
ಹಿಂದೂ ಧರ್ಮದಲ್ಲಿ ಹುಟ್ಟಿನಿಂದ ಸಾವಿನ ತನಕ ಮನುಷ್ಯ ಹೇಗೆ ಬದುಕಬಹುದು ಎಂದು ಪ್ರತಿಯೊಂದು ಹಂತದಲ್ಲೂ ಹೇಳಿಕೊಡಲಾಗುತ್ತದೆ. ಇದರಲ್ಲಿ ಪ್ರಮುಖವಾಗಿರುವುದು ಮಾನವನಲ್ಲಿ ಇರಬೇಕಾದ ಮೂರು ಗುಣಗಳು. ಈ ಮೂರು ಗುಣಗಳ ಬಗ್ಗೆ ಈ ಲೇಖನದಲ್ಲಿ ಚರ್ಚೆ ಮಾಡುತ್ತಾ ಹೋಗುವ. ಇಂದಿಗೂ ಹಿಂದೂ ಧರ್ಮದಲ್ಲಿ 'ಈ ವಸ್ತುಗಳಿಗೆ' ಪವಿತ್ರ ಸ್ಥಾನವಿದೆ

ಗುಣ ಎಂದರೆ ಪ್ರವೃತ್ತಿ ಎಂದು ಹೇಳಲಾಗುತ್ತದೆ. ಮಾನವನಲ್ಲಿ ಇರಬೇಕಾದ ಮೂರು ಗುಣಗಳನ್ನು ಇಲ್ಲಿ ಪ್ರಮುಖವಾಗಿ ಉಲ್ಲೇಖಿಸಲಾಗಿದೆ. ಯಾವುದೇ ವ್ಯಕ್ತಿಯಲ್ಲಿ ಒಂದು ಪರಿಸ್ಥಿತಿ ಅಥವಾ ಗುರಿಯ ಬಗ್ಗೆ ಇರುವ ಪ್ರವೃತ್ತಿಯನ್ನು ಇಲ್ಲಿ ತಿಳಿಸಲಾಗಿದೆ. ಹಿಂದೂ ಧರ್ಮದಲ್ಲಿ ಇರುವ ಮೂರು ಗುಣಗಳು ಏನು ಎನ್ನುವ ಬಗ್ಗೆ ತಿಳಿಯುವ ಮೊದಲು ಆ ಮೂರು ಗುಣಗಳು ಯಾವುದು ಎಂದು ತಿಳಿಯುವ.
ಈ ಎಲ್ಲಾ ಮೂರು ಗುಣಗಳು ಪ್ರತಿಯೊಬ್ಬ ವ್ಯಕ್ತಿಯೊಬ್ಬರಲ್ಲೂ ಇರುತ್ತದೆ ಎಂದು ಹಿಂದೂ ಧರ್ಮವು ಹೇಳುತ್ತದೆ. ತಮಸ, ರಾಜಸ ಮತ್ತು ಸತ್ವ ಇದು ಹಿಂದೂ ಧರ್ಮದಲ್ಲಿರುವ ಮೂರು ಪ್ರಮುಖ ಗುಣಗಳು. ಈ ಮೂರು ಗುಣಗಳಿಗೆ ಯಾವ ಪ್ರಾಮುಖ್ಯತೆ ಇದೆ ಎಂದು ಈ ಲೇಖನದ ಮುಖೇನ ತಿಳಿಯುವ. ಹಿಂದೂ ಧರ್ಮ: ಪೂಜಾ ಗೃಹದಲ್ಲಿ 'ಅಗರಬತ್ತಿಯ' ಮಹತ್ವ
ತಮಸವು ಅಜ್ಞಾನ ಮತ್ತು ಸೊಕ್ಕನ್ನು ಪ್ರತಿನಿಧಿಸುತ್ತದೆ. ಎರಡನೇಯದಾಗಿರುವ ರಾಜಸದ ಅರ್ಥವೇನೆಂದರೆ ಜೀವನ ಹಾಗೂ ಜನರ ಬಗ್ಗೆ ಸ್ವಾರ್ಥಪರ ಧೋರಣೆ ಹೊಂದುವುದು. ಮೂರನೇ ಗುಣವಾಗಿರುವ ಸತ್ವವು ಶಾಂತತೆ ಹಾಗೂ ಹಿಡಿತದ ಸ್ವಯಂ ಪೂರಕ ಗುಣವಾಗಿದೆ. ಹಿಂದೂ ಧರ್ಮದ ಪ್ರಕಾರ ಮೂರು ಗುಣಗಳಿಗೆ ಹೊಂದಿಕೊಂಡು ಜನರು ತಮ್ಮ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬೇಕು.
ಮೂರನೇ ಗುಣವಾಗಿರುವ ಸತ್ವದಿಂದಾಗಿ ಅನಗತ್ಯ ದುಃಖದಿಂದ ದೂರವಾಗಬಹುದು ಎಂದು ಹಿಂದೂ ಧರ್ಮವು ಹೇಳುತ್ತದೆ. ಜೀವನದಲ್ಲಿ ಯಾವುದೇ ಪರಿಸ್ಥಿತಿಯಿದ್ದರೂ ಖುಷಿಯನ್ನು ಹೊಂದಿರುವುದು ಸತ್ವದ ಲಕ್ಷಣವಾಗಿದೆ. ಮನುಷ್ಯರು ತಮಸ ಹಾಗೂ ರಾಜಸದಿಂದ ದೂರ ಉಳಿಯಬೇಕು.
ಇದರಿಂದ ದೂರ ಉಳಿಯದೆ ಇದ್ದರೆ ನಮಗೆ ಜೀವನದಲ್ಲಿ ನಕಾರಾತ್ಮಕ ಅಂಶಗಳು ಕಂಡುಬರುವುದು ಮತ್ತು ಧನಾತ್ಮಕ ಅಂಶಗಳು ನಮ್ಮಿಂದ ದೂರವಾಗುವುದು. ಸತ್ವವನ್ನು ಅಳವಡಿಸದೆ ಇದ್ದರೆ ದೇವರು ಕೂಡ ಕಷ್ಟದ ಸಮಯದಲ್ಲಿ ನಮ್ಮನ್ನು ಕಾಪಾಡಲು ಸಾಧ್ಯವಾಗುವುದಿಲ್ಲ. ತಮಸ ಹಾಗೂ ರಾಜಸದಲ್ಲಿ ನಾವು ಒಳ್ಳೆಯದನ್ನು ಕಂಡರೂ ಮಾನವ ಅಸ್ತಿತ್ವದ ಬಗ್ಗೆ ಇರುವ ಸತ್ಯವನ್ನು ಕಂಡುಕೊಳ್ಳಲು ನಮ್ಮಿಂದ ಸಾಧ್ಯವಾಗದೆ ಇರಬಹುದು.



Click it and Unblock the Notifications













