Latest Updates
-
ಜೀವನದಲ್ಲಿ ನೆಮ್ಮದಿ ಬೇಕಾ..? ಈ 5 ಕೆಲಸಗಳನ್ನು ಮಾಡುವಾಗ ಅತಿ ಹೆಚ್ಚು ತಾಳ್ಮೆ ಇರಲಿ! ಸಕ್ಸಸ್ ಮಂತ್ರ ಇಲ್ಲಿದೆ -
ಹೊರಗಿನ ಜ್ಯೂಸ್ ಬಿಡಿ..!! ಬಿಸಿಲಿಗೆ ಕಿಕ್ ಕೊಡೋ ಸ್ಪೆಷಲ್ ಶರಬತ್ತುಗಳಿವು! ಮನೆಯಲ್ಲಿ ಸಿಂಪಲ್ ಆಗಿ ಮಾಡಿ -
Dum Idli: ಇದು ಬ್ರೇಕ್ ಫಾಸ್ಟ್ನ ರಾಜ! ಉಳಿದ ಇಡ್ಲಿಗಳಿಂದ ಸ್ಪೈಸಿ ದಮ್ ಇಡ್ಲಿ.. ಹೋಟೆಲ್ ಶೈಲಿಯಲ್ಲಿ ಮಾಡೋದು ಹೇಗೆ? -
ಯುಗಾದಿ ದಿನ ಈ 5 ಕೆಲಸ ಮಾಡಲೇಬೇಕು! ಪಚಡಿ ತಿನ್ನುವಾಗ ಈ ಶ್ಲೋಕ ಹೇಳಿ.. ಧರ್ಮಸಿಂಧು ರಹಸ್ಯ ಇಲ್ಲಿದೆ -
Ugadi Special Recipes: ನಿಮಿಷಗಳಲ್ಲಿ 3 ಸೂಪರ್ ರೆಸಿಪಿಗಳು! ಅಡುಗೆ ಬಾರದವರಿಗೂ ಇದು ಸುಲಭ -
ಹುಷಾರ್.. ಚೈತ್ರ ನವರಾತ್ರಿ ಬಳಿಕ ಈ ರಾಶಿಯವರಿಗೆ ಸಾಲು ಸಾಲು ಕಷ್ಟ! ಯಾರಿಗೆ ಲಾಭ, ಯಾರಿಗೆ ನಷ್ಟ ತಿಳಿಯಿರಿ -
ಯುಗಾದಿಗೆ ಈ 4 ಖಾದ್ಯಗಳನ್ನು ಮಾಡಲೇಬೇಕು! ನಿಮ್ಮ ಹಬ್ಬ ಇನ್ನಷ್ಟು ಸ್ಪೆಷಲ್.. ಸಂಪೂರ್ಣ ಲಿಸ್ಟ್ ಇಲ್ಲಿದೆ -
ಯುಗಾದಿ ದಿನ.. ಪ್ರೇಮ ಜೀವನದಲ್ಲಿ ಯಾರಿಗೆ ಬೇವು? ಯಾರಿಗೆ ಬೆಲ್ಲ? -
March 19 Horoscope: ಯುಗಾದಿ ದಿನ ಯಾರಿಗೆ ಶುಭದಿನ? -
Ugadi Wishes 2026: ಯುಗಾದಿ 2026ರ ಶುಭಾಶಯಗಳು! ಸ್ನೇಹಿತರು, ಕುಟುಂಬದವರಿಗೆ ಕಳುಹಿಸಲು ಇಲ್ಲಿವೆ 50+ ಸಂದೇಶಗಳು
ಶ್ರಾವಣ ಮಾಸದ ಮಹತ್ವವನ್ನು ಅರಿತುಕೊಳ್ಳಿ
ಹಿಂದೂ ಧರ್ಮದಲ್ಲಿ ಶ್ರಾವಣ ಮಾಸ ಎನ್ನುವುದು ಜನಪ್ರಿಯ ವಿಚಾರವಾಗಿದೆ. ಶ್ರಾವಣ ಮಾಸ ಅಥವಾ ಶ್ರಾವಣ ಸೋಮವಾರ ಎಂದರೇನು? ಹೌದು ಹಿಂದೂ ಪಂಚಾಂಗದ ಐದನೇ ತಿಂಗಳನ್ನು ಶ್ರಾವಣ ಮಾಸ ಎಂದು ಕರೆಯುತ್ತಾರೆ.
ಈ ವರ್ಷ ಆಗಸ್ಟ್ 9ರಂದು ಶ್ರಾವಣ ಪ್ರಾರಂಭ.. ಸೆಪ್ಟೆಂಬರ್ 7ಕ್ಕೆ ಮುಕ್ತಾಯ. ಹಿಂದೂಗಳಿಗೆ ಈ ಮಾಸವು ಅತಿ ಪವಿತ್ರವಾಗಿರುತ್ತದೆ ಈ ದಿನದಲ್ಲಿ ಜನರು ಕೆಲವೊಂದು ಹಬ್ಬ ಹರಿದಿನಗಳನ್ನು ಆಚರಿಸುತ್ತಾರೆ. ಹಾಗಿದ್ದರೆ ಈ ಮಾಸದ ಹಿಂದಿರುವ ಕೆಲವೊಂದು ಮಹತ್ವಗಳು ಮತ್ತು ಧಾರ್ಮಿಕ ನೋಟವನ್ನು ತಿಳಿದುಕೊಳ್ಳೋಣ.

ಸಮುದ್ರ ಮಥನದ ಸಂದರ್ಭದಲ್ಲಿ, ದೇವತೆಗಳು ದಾನವರು ಕ್ಷೀರ ಸಾಗರವನ್ನು ಮಣಿಸುವಾಗ ವಿಷ ಉದ್ಭವವಾಗುತ್ತದೆ. ಈ ವಿಷ ಅತ್ಯಂತ ಪ್ರಭಾವಶಾಲಿ ಮತ್ತು ಮೃತ್ಯುಪಾಶವಾಗಿರುತ್ತದೆ. ಆ ಸಮಯದಲ್ಲಿ ಶಿವನು ಲೋಕವನ್ನು ಕಾಪಾಡುವುದಕ್ಕಾಗಿ ಅದನ್ನು ಕುಡಿದು ಗಂಟಲಲ್ಲಿ ಶೇಖರಿಸುತ್ತಾರೆ. ಇದರಿಂದಾಗಿ ಅವರ ಹೆಸರು ನೀಲಕಂಠ ಎಂದಾಗಿಯೂ ಬದಲಾಗುತ್ತದೆ. ಮತ್ತು ಶಿವನು ತಮ್ಮ ಮುಡಿಯಲ್ಲಿ ಚಂದ್ರನನ್ನು ಧರಿಸಿರುವುದು ತಮ್ಮನ್ನು ವಿಷದಿಂದ ಕಾಪಾಡಿಕೊಳ್ಳಲು ಎಂದು ಪುರಾಣಗಳು ಹೇಳುತ್ತವೆ.
ಶ್ರಾವಣ ಮಾಸದ ಮಹತ್ವ ಮತ್ತು 2014ರ ದಿನಾಂಕಗಳ ಬಗ್ಗೆ ಅರಿತುಕೊಳ್ಳೋಣ
2014ರ ವರ್ಷದಲ್ಲಿ ಶ್ರಾವಣ ಮಾಸವು 13 ಜುಲೈರಂದು ಬಂದಿದೆ. ಶ್ರಾವಣ ಸೋಮವಾರದಂದು ಶ್ರಾವಣ ಸೋಮವಾರ ವೃತವನ್ನು ಕೈಗೊಳ್ಳಲಾಗುತ್ತದೆ. ಅಂದರೆ ಸೋಮವಾರಗಳಲ್ಲಿ 14, 21, 28, ಆಗಸ್ಟ್ 4 ರಂದು ಈ ವೃತವನ್ನು ಕೈಗೊಳ್ಳಲಾಗುತ್ತದೆ. ಶ್ರಾವಣ ಮಾಸವು ಆಗಸ್ಟ್ 10 ರಂದು ಆದಿತ್ಯವಾರ ಕೊನೆಗೊಳ್ಳುತ್ತದೆ. ಶ್ರಾವಣ ಮಾಸದ ಸಂದರ್ಭಗಳಲ್ಲಿ, ಅಂದರೆ ಸೋಮವಾರದಂದು ಉಪವಾಸವನ್ನು ಕೈಗೊಳ್ಳಲಾಗುತ್ತದೆ.
ಹಿಂದೂ ದೇವರುಗಳನ್ನು ದಿನದ ಪ್ರಕಾರ ಪೂಜಿಸಿ
ಶ್ರಾವಣ ಸೋಮವಾರದಂದು ಕೈಗೊಳ್ಳುವ ಉಪವಾಸದ ಬಗ್ಗೆ ನೋಡೋಣ
ಶ್ರಾವಣ ಸೋಮವಾರದಂದು ಜನರು ಏಕೆ ಉಪವಾಸ ಮಾಡುತ್ತಾರೆ ಎಂಬುದು ನಮಗೆ ಅರ್ಥವಾಗುತ್ತದೆ. ಶ್ರಾವಣ ಮಾಸದಂದು, ಶಿವ ದೇವರು ಹೆಚ್ಚು ಶಕ್ತಿಶಾಲಿಯಾಗಿರುತ್ತಾರೆ. ಸೋಮವಾರದಂದು ಮಹಿಳೆಯರು ಶ್ರಾವಣ ಸೋಮವಾರದ ಉಪವಾಸವನ್ನು ಕೈಗೊಳ್ಳುತ್ತಾರೆ. ಅವರಿಗೆ ಸರಿಯಾದ ವರ ದೊರೆಯಲಿ ಎಂಬುದು ಇದರ ಹಿಂದಿರುವ ಆಶಯವಾಗಿರುತ್ತದೆ. ಅವರ ಶ್ರದ್ಧೆ ಭಕ್ತಿಯು ಶಿವನನ್ನು ಒಲಿಸಿಕೊಳ್ಳುವಲ್ಲಿ ನೆರವಾಗುತ್ತದೆ ಮತ್ತು ಅವರು ಕೇಳಿದ ವರ ಅವರಿಗೆ ದೊರೆಯುತ್ತದೆ ಎಂಬ ನಂಬಿಕೆ ಇದೆ. ಶ್ರಾವಣ ಸೋಮವಾರದಂದು ಹಿಡಿದ ವೃತವು ಕೈಗೂಡುತ್ತದೆ ಎಂಬ ನಂಬಿಕೆಯ ಆಧಾರದ ಮೇಲೆಯೇ ಜನರು ಈ ದಿನದಂದು ವೃತ ಕೈಗೊಳ್ಳುತ್ತಾರೆ ಮತ್ತು ಇಷ್ಟಾರ್ಥವನ್ನು ನೆರವೇರಿಸಿಕೊಳ್ಳುತ್ತಾರೆ.



Click it and Unblock the Notifications











