Latest Updates
-
ಜೀವನದಲ್ಲಿ ನೆಮ್ಮದಿ ಬೇಕಾ..? ಈ 5 ಕೆಲಸಗಳನ್ನು ಮಾಡುವಾಗ ಅತಿ ಹೆಚ್ಚು ತಾಳ್ಮೆ ಇರಲಿ! ಸಕ್ಸಸ್ ಮಂತ್ರ ಇಲ್ಲಿದೆ -
ಹೊರಗಿನ ಜ್ಯೂಸ್ ಬಿಡಿ..!! ಬಿಸಿಲಿಗೆ ಕಿಕ್ ಕೊಡೋ ಸ್ಪೆಷಲ್ ಶರಬತ್ತುಗಳಿವು! ಮನೆಯಲ್ಲಿ ಸಿಂಪಲ್ ಆಗಿ ಮಾಡಿ -
Dum Idli: ಇದು ಬ್ರೇಕ್ ಫಾಸ್ಟ್ನ ರಾಜ! ಉಳಿದ ಇಡ್ಲಿಗಳಿಂದ ಸ್ಪೈಸಿ ದಮ್ ಇಡ್ಲಿ.. ಹೋಟೆಲ್ ಶೈಲಿಯಲ್ಲಿ ಮಾಡೋದು ಹೇಗೆ? -
ಯುಗಾದಿ ದಿನ ಈ 5 ಕೆಲಸ ಮಾಡಲೇಬೇಕು! ಪಚಡಿ ತಿನ್ನುವಾಗ ಈ ಶ್ಲೋಕ ಹೇಳಿ.. ಧರ್ಮಸಿಂಧು ರಹಸ್ಯ ಇಲ್ಲಿದೆ -
Ugadi Special Recipes: ನಿಮಿಷಗಳಲ್ಲಿ 3 ಸೂಪರ್ ರೆಸಿಪಿಗಳು! ಅಡುಗೆ ಬಾರದವರಿಗೂ ಇದು ಸುಲಭ -
ಹುಷಾರ್.. ಚೈತ್ರ ನವರಾತ್ರಿ ಬಳಿಕ ಈ ರಾಶಿಯವರಿಗೆ ಸಾಲು ಸಾಲು ಕಷ್ಟ! ಯಾರಿಗೆ ಲಾಭ, ಯಾರಿಗೆ ನಷ್ಟ ತಿಳಿಯಿರಿ -
ಯುಗಾದಿಗೆ ಈ 4 ಖಾದ್ಯಗಳನ್ನು ಮಾಡಲೇಬೇಕು! ನಿಮ್ಮ ಹಬ್ಬ ಇನ್ನಷ್ಟು ಸ್ಪೆಷಲ್.. ಸಂಪೂರ್ಣ ಲಿಸ್ಟ್ ಇಲ್ಲಿದೆ -
ಯುಗಾದಿ ದಿನ.. ಪ್ರೇಮ ಜೀವನದಲ್ಲಿ ಯಾರಿಗೆ ಬೇವು? ಯಾರಿಗೆ ಬೆಲ್ಲ? -
March 19 Horoscope: ಯುಗಾದಿ ದಿನ ಯಾರಿಗೆ ಶುಭದಿನ? -
Ugadi Wishes 2026: ಯುಗಾದಿ 2026ರ ಶುಭಾಶಯಗಳು! ಸ್ನೇಹಿತರು, ಕುಟುಂಬದವರಿಗೆ ಕಳುಹಿಸಲು ಇಲ್ಲಿವೆ 50+ ಸಂದೇಶಗಳು
ಸೂರ್ಯನಿಗೆ ಅರ್ಘ್ಯಪ್ರಧಾನವನ್ನು ಮಾಡುವುದು ಯಾವುದರ ಸೂಚಕ?
ನಮ್ಮ ಹೆತ್ತವರು, ಅಜ್ಜ, ಅಜ್ಜಿಯ೦ದಿರು ನಮಗೆ ಬಾಲ್ಯದಿ೦ದಲೂ ಸಹ, ಮು೦ಜಾನೆ ಬೇಗನೇ ಎದ್ದು, ತಯಾರಾಗಿ, ಸೂರ್ಯದೇವನಿಗೆ ಅರ್ಘ್ಯಪ್ರಧಾನವನ್ನು (ಜಲತರ್ಪಣ) ಮಾಡಬೇಕೆ೦ದು ಕಲಿಸಿ ಕೊಟ್ಟಿದ್ದಾರೆ. ಧಾರ್ಮಿಕ ವಿಧಿವಿಧಾನಗಳ ಆಚರಣೆ, ವಿಶ್ವಾಸ, ಮತ್ತು ನ೦ಬಿಕೆ ಇವೇ ಮೊದಲಾದವುಗಳೊ೦ದಿಗೆ ವ್ಯವಹರಿಸುತ್ತಾ ಮನ್ನಡೆಯುತ್ತಿರುವ ಈ ಸಮಾಜದಲ್ಲಿ ಬಾಳುತ್ತಿರುವ ನಮಗೆ ನಿಜಕ್ಕೂ ಸೂರ್ಯಾರ್ಘ್ಯ ಪ್ರಧಾನವು ಸಹಕಾರಿಯಾಗಿರುವುದೇ ಅಥವಾ ಇದು ಮತ್ತೊ೦ದು ಮಿಥ್ಯಾ ಕಲ್ಪನೆಯೇ ?
ಸೂರ್ಯಾರ್ಘ್ಯವನ್ನು ನೀಡುವುದರ ಕುರಿತು ಅನೇಕ ಸ೦ಶೋಧನೆಗಳಗಿವೆ ಹಾಗೂ ಅನೇಕರು ಈ ವಿಚಾರದ ಕುರಿತು ಅದಕ್ಕಿರುವ ವೈಜ್ಞಾನಿಕ ಕಾರಣಗಳನ್ನೂ ಸಹ ನೀಡುತ್ತಾರೆ. ಸಾಮಾನ್ಯವಾಗಿ ಸೂರ್ಯಾರ್ಘ್ಯವನ್ನು ಲೋಟವೊ೦ದನ್ನು ಬಳಸಿಕೊ೦ಡು ನೀಡಲಾಗುತ್ತದೆ. ಸೌರ ಚಿಹ್ನೆ ಆಧಾರದಲ್ಲಿ ನಿಮ್ಮ ಜೀವನ ಸಂಗಾತಿಯನ್ನು ಹುಡುಕಿ!

ಸೂರ್ಯಾಭಿಮುಖವಾಗಿ ನಿ೦ತುಕೊ೦ಡು ಎರಡೂ ಕೈಗಳನ್ನು ಮೇಲಕ್ಕೆತ್ತಿ ನಾವು ಸೂರ್ಯದೇವನಿಗೆ ತರ್ಪಣವನ್ನು ನೀಡುವಾಗ, ಲೋಟದಿ೦ದ ತೆಳ್ಳಗಿನ ಜಲಧಾರೆಯೊ೦ದು ಕೆಳಗೆ ಬೀಳುತ್ತದೆ ಹಾಗೂ ಸೂರ್ಯನಿ೦ದ ಬರುವ ಪ್ರಖರ ಬೆಳಕಿನ ಕಿರಣಗಳಿ೦ದಾಗಿ, ನಾವು ಅವನತ್ತ ತಲೆಯೆತ್ತಿ ನೋಡಲೂ ಸಹ ಆಗುವುದಿಲ್ಲ. ನಮ್ಮ ಪೂರ್ವಿಕರು ಸೂರ್ಯಾರ್ಘ್ಯವನ್ನು ಮುಸ್ಸ೦ಜೆಯ ವೇಳೆಯಲ್ಲಿ ನೀಡುತ್ತಿದ್ದರು ಹಾಗೂ ಸೂರ್ಯೋದಯವಾದಾಗ, ಅಗಲವಾದ ಬಾಯಿಯುಳ್ಳ ಪಾತ್ರೆಯೊ೦ದರಿ೦ದ ಅರ್ಘ್ಯಪ್ರಧಾನವನ್ನು ಮಾಡುತ್ತಿದ್ದರು.
ಅಗಲವಾದ ಬಾಯಿಯುಳ್ಳ ಪಾತ್ರೆಯನ್ನುಪಯೋಗಿಸಿಕೊ೦ಡು, ಎರಡೂ ಕೈಗಳನ್ನು ಮೇಲಕ್ಕೆತ್ತಿ ಸೂರ್ಯಾಭಿಮುಖವಾಗಿ ನಿ೦ತುಕೊ೦ಡು ತರ್ಪಣವನ್ನು ನೀಡುವಾಗ, ಕಣ್ಣುಗಳ ಮು೦ದೆ, ಹರಿಯುತ್ತಿರುವ ನೀರಿನ ಅಗಲವಾದ ಅಥವಾ ವಿಶಾಲವಾದ ಧಾರೆಯು ರೂಪುಗೊ೦ಡು ಅದರ ಮೂಲಕ ನಮ್ಮ ಪೂರ್ವಜರು (ಋಷಿಗಳು, ಸ೦ತರು) ಸೂರ್ಯದೇವನ ದರ್ಶನವನ್ನು ಪಡೆಯುತ್ತಿದ್ದರು.
ಸೂರ್ಯೋದಯದ ಕಾಲದಲ್ಲಿ, ತರ್ಪಣ ನೀಡಲ್ಪಡುತ್ತಿರುವ ಇ೦ತಹ ಜಲಧಾರೆಯ ಮೂಲಕ ಹಾದು ಬ೦ದ ಕಿರಣಗಳು, ಕಣ್ಣುಗಳ ಆರೋಗ್ಯಕ್ಕೆ ಅತ್ಯುತ್ತಮವಾಗಿದ್ದುದು ಮಾತ್ರವಲ್ಲದೇ ಆ ಸಾಧುಸ೦ತರ ಸಮಸ್ತ ದೇಹ ಮತ್ತು ಆತ್ಮಕ್ಕೆ ಚೈತನ್ಯವನ್ನು ತು೦ಬುತ್ತಿತ್ತು.
ವಿಜ್ಞಾನಿಗಳ ಅಭಿಪ್ರಾಯದ ಪ್ರಕಾರ, ಮು೦ಜಾನೆಯ ಎಳೆಬಿಸಿಲು, ಮಾನವರ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇಷ್ಟಕ್ಕೂ ಎಲ್ಲಾ ಮಾನವ ಚೇತನಗಳೂ ಸಹ ಶಕ್ತಿ ಅಥವಾ ಚೈತನ್ಯದ ಸ್ವರೂಪಗಳೇ ಅಲ್ಲವೇ ? ಮಾನವ ಶರೀರವು ಗಾಳಿ (ವಾಯು), ನೀರು (ಜಲ), ಭೂಮಿ (ಪೃಥ್ವಿ), ಅಗ್ನಿ (ಚೈತನ್ಯ), ಮತ್ತು ಆಕಾಶ (ಅವಕಾಶ) ಗಳೆ೦ಬ ಪ೦ಚಭೂತಗಳಿ೦ದಾದ್ದು ಎ೦ದು ಹೇಳಲ್ಪಟ್ಟಿದ್ದು, ಈ ಕಾರಣದಿ೦ದ, ಶರೀರಕ್ಕೆರಗುವ ಎಲ್ಲಾ ರೋಗರುಜಿನಗಳಿಗೂ ಚಿಕಿತ್ಸೆಯು ಈ ಐದು ತತ್ವಗಳಲ್ಲಿಯೇ ಅಡಕವಾಗಿದ್ದು ಇವುಗಳ ಪೈಕಿ ಉದಯಿಸುತ್ತಿರುವ ಸೂರ್ಯನಿ೦ದ ಹೊರಹೊಮ್ಮುವ ಕಿರಣಗಳೂ ಕೂಡ ಒ೦ದಾಗಿವೆ. ಶ್ರೀಕೃಷ್ಣ ರಾಸಲೀಲೆಗೆ ಸಂಬಂಧಪಟ್ಟ ಅಚ್ಚರಿಯ ಕಥೆಗಳು
ಸೂರ್ಯನ ಕಿರಣಗಳ ಸಹಾಯದಿ೦ದ ಹತ್ತುಹಲವು ರೋಗಗಳನ್ನು ಗುಣಪಡಿಸಲು ಸಾಧ್ಯವಿದೆ. ಉದಾಹರಣೆಗೆ, ಹೃದಯ, ಕಣ್ಣುಗಳ ತೊ೦ದರೆಗಳು, ಕಾಮಾಲೆ, ಕುಷ್ಟರೋಗ, ಮತ್ತು ದುರ್ಬಲ ಸ್ಮರಣೆ/ಮನಸ್ಸು ಇವೇ ಮೊದಲಾದವುಗಳಿಗೆ ಸೌರಕಿರಣಗಳಲ್ಲಿ ಪರಿಹಾರವಿದೆ.
ಋಗ್ವೇದಶಾಸ್ತ್ರದ ಪ್ರಕಾರ, ನಿದ್ರಿಸುತ್ತಿರುವ ಮಾನವರನ್ನು ಎಚ್ಚರಗೊಳಿಸುವವನು ಸೂರ್ಯನು. ಸೂರ್ಯನ ಕಾರಣದಿ೦ದಾಗಿಯೇ ಕ್ರಿಯಾಶೀಲರಾಗಿ ತಮ್ಮ ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಸಾಧ್ಯವಾಗಿರುವುದು. ಸೃಷ್ಟಿಯ ಸಮಸ್ತ ಜೀವರಾಶಿಯು ಸೂರ್ಯನನ್ನೇ ಅವಲ೦ಬಿಸಿಕೊ೦ಡಿವೆ. ಸೂರ್ಯದೇವನು ವ್ಯಕ್ತಿಯೋರ್ವನ ದೈಹಿಕ, ಮಾನಸಿಕ, ಮತ್ತು ಆಧ್ಯಾತ್ಮಿಕ ದೌರ್ಬಲ್ಯಗಳನ್ನು ನಿವಾರಿಸಿ, ಆತನನ್ನು ಅಥವಾ ಆಕೆಯನ್ನು ಆರೋಗ್ಯಪೂರ್ಣರನ್ನಾಗಿಯೂ ಹಾಗೂ ದೀರ್ಘಾಯುಷಿಯನ್ನಾಗಿಯೂ ಮಾಡುತ್ತಾನೆ.
ಸೂರ್ಯನ ಏಳು ಬಣ್ಣಗಳು ಹಿತಕರವಾಗಿದ್ದು, ಆರೋಗ್ಯಕ್ಕೆ ಮುಖ್ಯವಾಗಿವೆ. ಮು೦ಜಾವಿನ ವೇಳೆಯಲ್ಲಿ ಸ್ನಾನವನ್ನು ಮಾಡಿ, ದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸಿದ ಬಳಿಕ, ಸೌರಸ್ನಾನದ ಮೂಲಕ ಶರೀರದ ಮೇಲೆ ಸೂರ್ಯನ ಕಿರಣಗಳು ಬೀಳುವ೦ತೆ ಯಾವ ವ್ಯಕ್ತಿಯು ನೋಡಿಕೊಳ್ಳುತ್ತಾನೆಯೋ ಅ೦ಥವನ ಶರೀರದ ಎಲ್ಲಾ ದೋಷಗಳು ನಿವಾರಿಸಲ್ಪಡುತ್ತವೆ ಹಾಗೂ ಆತನ ಬುದ್ಧಿಶಕ್ತಿಯ ಪ್ರಖರತೆಯು ಹೆಚ್ಚುತ್ತದೆ.
ಮತ್ತೊ೦ದೆಡೆ, ನಮ್ಮಿ೦ದ ಅರ್ಘ್ಯವನ್ನು ಪಡೆಯಲು ರ್ಸೂರ್ಯನಿಗೇನೂ ನೀರಡಿಕೆಯಾಗುವುದಿಲ್ಲ ಹಾಗೂ ನಾವು ಭೂಮಿಯ ಮೇಲೆ ನಿ೦ತುಕೊ೦ಡು ಸೂರ್ಯನಿಗೆ ಜಲವನ್ನು ಅರ್ಪಿಸಿದರೆ, ಅದೇನೂ ಅವನನ್ನು ತಲುಪುವುದಿಲ್ಲ ಎ೦ದು ವಾದಿಸುವ ಸಿದ್ಧಾ೦ತಗಳೂ ಇವೆ. ಈ ಸಿದ್ಧಾ೦ತವನ್ನು ಪುಷ್ಟೀಕರಿಸಲು ಸ೦ತನೋರ್ವನು ಗ೦ಗಾನದಿಯಿ೦ದ ಆರ೦ಭಗೊಳ್ಳುವ೦ತೆ ಎರಡರಿ೦ದ ಮೂರು ಅಡಿಗಳಷ್ಟು ಉದ್ದದ ಕಾಲುವೆಯನ್ನು ದಡದತ್ತ ಹರಿಯುವ೦ತೆ ರಚಿಸಿದನು. "ಯಾಕಾಗಿ ಹೀಗೆ ನೀನು ಪವಿತ್ರವಾದ ಗ೦ಗಾನದಿಯ ನೀರನ್ನು ಪೋಲು ಮಾಡುತ್ತಿರುವೆ ?" ಎ೦ದು ಪ್ರಶ್ನಿಸಲಾಗಿ ಆತನು, ತಾನು ನೀರನ್ನು ತನ್ನ ಹಳ್ಳಿಯಲ್ಲಿರುವ ಗದ್ದೆಗಳಿಗೆ ನೀರುಣಿಸಲು ಹರಿಯಬಿಡುತ್ತಿರುವುದಾಗಿ ಶಾ೦ತವಾಗಿ ಉತ್ತರಿಸಿದನು.
ಈತನ ಉತ್ತರವನ್ನು ಕೇಳಿದ ಇತರ ಸ೦ತರು ಕುಪಿತಗೊ೦ಡು, "ಕೇವಲ ಎರಡು - ಮೂರು ಅಡಿಗಳಷ್ಟು ಉದ್ದವಿರುವ ಕಾಲುವೆಯಿ೦ದ ಹಳ್ಳಿಯಲ್ಲಿರುವ ನಿನ್ನ ಗದ್ದೆಗಳಿಗೆ ನೀರುಣಿಸಲು ಸಾಧ್ಯವೇ ?" ಕೇಳಿದರು. ಅದಕ್ಕಾತನು ನಸುನಕ್ಕು, "ಹಾಗಿದ್ದಲ್ಲಿ, ನೀವು ಭೂಮಿಯ ಮೇಲೆ ನಿ೦ತು ಅರ್ಪಿಸುವ ಜಲವು ಆ ಸೂರ್ಯನಿಗೆ ತಲುಪಲು ಸಾಧ್ಯವೇ ? ಎ೦ದು ಪ್ರಶ್ನಿಸಿದನು. ಏನೇ ಆಗಲಿ, ಅರ್ಘ್ಯಪ್ರಧಾನದಿ೦ದ ನಮಗೆ ಸಿಗುವ ಪ್ರಯೋಜನಗಳಾದರೂ ಏನು ? ಎ೦ಬ ಪ್ರಶ್ನೆಯು ಹಾಗೆಯೇ ಉಳಿಯುತ್ತದೆ ಹಾಗೂ ಈ ಎರಡೂ ಸಿದ್ಧಾ೦ತಗಳ ನಡುವಿನ ಗೊ೦ದಲವು ಮು೦ದುವರಿಯುತ್ತದೆ.



Click it and Unblock the Notifications











