Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
Shravana Shanivara : ಶ್ರಾವಣ ಶನಿವಾರ: ಈ ದೇವರುಗಳ ಆರಾಧನೆಯಿಂದ ಸಂಪತ್ತು ವೃದ್ಧಿ
ಶ್ರಾವಣ ಮಾಸದಲ್ಲಿ ಪ್ರತಿಯೊಂದು ದಿನವೂ ವಿಶೇಷವಾದದ್ದೇ. ಸೋಮವಾರ ಶ್ರಾವಣ ಸೋಮವಾರ ಆಚರಿಸಿದರೆ, ಮಂಗಳ ವಾರ ಗೌರಿ ವ್ರತ ಆಚರಿಸಲಾಗುವುದು, ಇನ್ನು ಶುಕ್ರವಾರ, ಶನಿವಾರ ಕೂಡ ಪೂಜೆಗೆ ಶ್ರೇಷ್ಠವಾದ ದಿನವೆಂದು ಹೇಳಲಾಗಿದೆ.

ಶ್ರಾವಣ ಶನಿವಾರ ಹನುಮಂತ, ಶನಿ ದೇವ, ವೆಂಕಟೇಶ್ವರ ಸ್ವಾಮಿಯ ಆರಾಧನೆ ಮಾಡಲಾಗುವುದು. ಈ ವರ್ಷ ಶ್ರಾವಣ ಶನಿವಾರದ ದಿನಾಂಕಗಳು ಹಾಗೂ ಆ ದಿನ ಪಠಿಸಬೇಕಾದ ಮಂತ್ರಗಳ ಬಗ್ಗೆ ಹೇಳಲಾಗಿದೆ ನೋಡಿ:

2021ರಲ್ಲಿ ಶ್ರಾವಣ ಶನಿವಾರದ ದಿನಾಂಕಗಳು
ಆಗಸ್ಟ್ 14
ಆಗಸ್ಟ್ 21
ಆಗಸ್ಟ್ 28
ಸೆಪ್ಟೆಂಬರ್ 4

ಶನಿವಾರ ಅಶ್ವತ್ಥ ಮರಕ್ಕೆ ಪೂಜೆ
ಅಶ್ವತ್ಥ ಮರದಲ್ಲಿ ಲಕ್ಷ್ಮಿ, ವಿಷ್ಣು ವಾಸ ಮಾಡುತ್ತಾರೆ ಎಂದು ಹೇಳಲಾಗುವುದು. ಅಶ್ವತ್ಥ ಮರವನ್ನು ಶ್ರೀ ಕೃಷ್ಣನನ್ನು ತನ್ನದೇ ರೂಪವೆಂದು ವಿವರಿಸಿದ್ದಾನೆ.
ಅಶ್ವತ್ಥ ಮರಕ್ಕೆ ನೀರನ್ನು ಹಾಕಿ ಪ್ರದರ್ಶಣೆ ಬಂದು ಪೂಜೆ ಮಾಡಬೇಕು, ನಂತರ ನೈವೇದ್ಯ ಅರ್ಪಿಸಬೇಕು. ಪೂಜೆ ಸಲ್ಲಿಸುವಾಗ ಲಕ್ಷ್ಮಿ ಹಾಗೂ ವಿಷ್ಣು ಮಂತ್ರ ಪಠಿಸಿ
ಲಕ್ಷ್ಮಿ ಮಂತ್ರ
"ಓಂ ಶ್ರೀಮ್ ಮಹಾ ಲಕ್ಷ್ಮೀಯೇಯ್ ನಮಃ"
"ಓಂ ಹ್ರೀಮ್ ಶ್ರೀಮ್ ಕ್ಲೀಮ್ ಮಹಾಲಕ್ಷ್ಮಿ ನಮಃ"
" ಓಂ ಶ್ರೀಮ್ ಶ್ರೀ-ಆಯ್ ನಮಃ "
" ಓಂ ಮಹಾ ದೇವಿಚ ವಿದ್ಮಾಯ್; ವಿಷ್ಣು ಪ್ರತಿಚಾ ದೇಮಹಿ; ಥನ್ನೋ ಲಕ್ಷ್ಮಿ ಪ್ರಚೋದಯತ್"
ವಿಷ್ಣು ಮೂಲ ಮಂತ್ರ:
ಓಂ ನಮೋ ನಾರಾಯಣಾಯ

ಶನಿ ದೇವನ ಆರಾಧನೆ
ಶನಿ ದೋಷ ನಿವಾರಣೆಗೆ ಶನಿವಾರದಂದು ಶನಿ ದೇವನನ್ನು ಆರಾಧನೆ ಮಾಡಬೇಕು. ಶನಿಗೆ ಎಳ್ಳೆಣ್ಣೆ ಅರ್ಪಿಸಿ, ಶನಿ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸಬೇಕು. ಈ ದಿನ ವ್ರತ ನಿಯಮಗಳನ್ನು ಪಾಲಿಸಿ ಪೂಜೆ ಮಾಡುವುದರಿಂದ ಕಷ್ಟಗಳು ದೂರವಾಗುವುದು.
"ಓಂ ಹಿಲ್ಮ್ ಶಾಮ್ ಶನಾಯ ನಮ"
"ಓಂ ಪ್ರಾಮ್ ಪ್ರೀಮ್ ಪ್ರೌಮ್ ಸಹ ಶಾನೈಶ್ರಾಯ ನಮ"
"ಓಂ ಶಾಮ್ ಶನೇಶ್ಚಾರ ನಮಃ"
"ಔಮ್ ಐಂಗ್ ಹರಿಂಗ್ ಶರಿಂಗ್ ಶಂಗ್ ಶನೈಶ್ಚರಾಯ ನಮ ಔಮ್"
ಶನಿವಾರ ವೆಂಕಟೇಶ್ವರ ಸ್ವಾಮಿಯ ಆರಾಧನೆ
ಶನಿವಾರ ವೆಂಕಟೇಶ್ವರ ಸ್ವಾಮಿಯ ಆರಾಧನೆ ಮಾಡಲಾಗುವುದು. ವೆಂಕಟೇಶ್ವರ ಕೃಪೆಯಿಂದ ಸಂಪತ್ತು ವೃದ್ಧಿಯಾಗುವುದು.

ಓಂ ಶ್ರೀ ವೆಂಕಟೇಶ್ವರಾಯ ನಮಃ |
ಓಂ ಲಕ್ಷ್ಮೀಪತಯೇ ನಮಃ |
ಓಂ ವರಪ್ರದಾಯ ನಮಃ |
ಎಂದು ಪಠಿಸುತ್ತಾ ಪೂಜೆ ಸಲ್ಲಿಸಿ.
ಹೀಗೆ ಶ್ರಾವಣ ಶನಿವಾರ ಪೂಜೆಗೆ ತುಂಬಾ ಶ್ರೇಷ್ಠವಾದ ದಿನವಾಗಿದೆ. ಈ ಶ್ರಾವಣ ಮಾಸದಲ್ಲಿ ಸಲ್ಲಿಸುವ ಪೂಜೆಗೆ ವಿಶೇಷ ಫಲವಿದೆ ಎಂದು ಹೇಳಲಾಗುವುದು.



Click it and Unblock the Notifications
