Latest Updates
-
ಮಳೆಗಾಲದ ಜಾರುವ ರಸ್ತೆಗಳಲ್ಲಿ ನಡೆಯುವಾಗ ಎಚ್ಚರ: ಸುರಕ್ಷಿತವಾಗಿರಲು 8 ನಿಮಿಷಗಳ ಈ ವ್ಯಾಯಾಮ ಮಾಡಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು 45 ನಿಮಿಷದಲ್ಲಿ ಟ್ಯಾಕ್ಸ್ ಫೈಲ್ ಮಾಡುವುದು ಹೇಗೆ? -
ಪ್ರವಾಹದ ನೀರು ಮನೆಯೊಳಗೆ ನುಗ್ಗಿದೆಯೇ? ಆಸ್ತಿ ಮತ್ತು ಆರೋಗ್ಯ ರಕ್ಷಣೆಗೆ ತಕ್ಷಣ ಮಾಡಬೇಕಾದ ಕೆಲಸಗಳಿವು -
ಬೆಂಗಳೂರಿನಲ್ಲಿ ಮೊಟ್ಟೆ ಬೆಲೆ ಏರಿಕೆ: ಬಜೆಟ್ ಉಳಿಸಲು ಇಲ್ಲಿದೆ ಬೆಸ್ಟ್ ಪ್ರೋಟೀನ್ ಆಯ್ಕೆಗಳು! -
ಇನ್ಸ್ಟಾಗ್ರಾಮ್ ಡೌನ್: ಆತಂಕ ಬೇಡ, ನಿಮ್ಮ ಅಕೌಂಟ್ ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಮಳೆ ರಜೆ ದಿನ ಮನೆಯಲ್ಲೇ ಫಿಟ್ ಆಗಿರಲು 12 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ವಿಶ್ವ ಐವಿಎಫ್ ದಿನ: ಪೋಷಕರಾಗುವ ಕನಸಿಗೆ ದಂಪತಿಗಳು ಮಾಡಬೇಕಾದ ಸಿದ್ಧತೆಗಳೇನು? -
ಮುಂಬೈ-ಥಾಣೆ ಮಳೆ ಅಲರ್ಟ್: ನಿಮ್ಮ ಮನೆಗೆ ನೀರು ನುಗ್ಗದಂತೆ ತಡೆಯಲು ಈ 20 ನಿಮಿಷದ ಟಿಪ್ಸ್ ಫಾಲೋ ಮಾಡಿ -
ಮಕ್ಕಳ ಟಿಫಿನ್ ಬಾಕ್ಸ್ನಲ್ಲಿ ಅಡಗಿದೆ ಅಪಾಯ? ಪೋಷಕರು ಮರೆಯದೆ ಪಾಲಿಸಬೇಕಾದ ಸುರಕ್ಷತಾ ಸೂತ್ರಗಳು -
ರಾಮಾಯಣದಲ್ಲಿ ರಾವಣನಾಗಿ ಯಶ್: ಸ್ಯಾನ್ ಡಿಯಾಗೋ ಕಾಮಿಕ್-ಕಾನ್ನಲ್ಲಿ ಅಬ್ಬರಿಸಲು ಸಜ್ಜಾದ ರಾಕಿಂಗ್ ಸ್ಟಾರ್!
Shravan Purnima 2021 : ಶ್ರಾವಣ ಪೂರ್ಣಿಮೆ ತುಂಬಾ ಪವಿತ್ರವಾದ ದಿನ, ಏಕೆ?
ಹಿಂದೂಗಳಿಗೆ ಶ್ರಾವಣ ಪೂರ್ಣಿಮೆ ತುಂಬಾನೇ ವಿಶೇಷ, ಈ ವರ್ಷ ಶ್ರಾವಣ ಪೂರ್ಣಿಮೆಯನ್ನು ಆಗಸ್ಟ್ 22 ಭಾನುವಾರದಂದು ಆಚರಿಸಲಾಗುವುದು. ಇದನ್ನು ರಾಖಿ ಪೂರ್ಣಿಮೆ ಎಂದು ಕೂಡ ಕರೆಯಲಾಗುವುದು. ಈ ಪವಿತ್ರ ದಿನದಂದು ರಕ್ಷಾ ಬಂಧನ ಆಚರಿಸಲಾಗುವುದು.
ಈ ದಿನದಂದು ದೇಶದ ಬೇರೆ-ಬೇರೆ ಕಡೆ ವಿವಿಧ ರೀತಿಯಲ್ಲಿ ಆಚರಿಸಲಾಗುವುದು. ನಾವಿಲ್ಲಿ ಶ್ರಾವಣ ಪೂರ್ಣಿಮೆಯ ಮಹತ್ವ ಹಾಗೂ ಆಚರಣೆಯ ಬಗ್ಗೆ ಹೇಳಿದ್ದೇವೆ ನೋಡಿ:

ಶ್ರಾವಣ ಪೂರ್ಣಿಮೆ ಮಹತ್ವ
ಹಿಂದೂ ಕ್ಯಾಲೆಂಡರ್ನಲ್ಲಿ ಶ್ರಾವಣ ಪೂರ್ಣಿಮೆಯನ್ನು ತುಂಬಾ ಮಹತ್ವದ ದಿನವೆಂದು ಪರಿಗಣಿಸಲಾಗಿದೆ. ಉಪನಯನ ಮತ್ತು ಯಜ್ಙೋಪವೀತ ಆಚರಿಸಲಾಗುವುದು. ಬ್ರಾಹ್ಮಣರಾಗಿದ್ದವರಿಗೆ ಅವರ ಅವಿಬಾಜ್ಯ ಅಂಗವೇ ಯಜ್ಙೋಪವೀತ . ಪ್ರತೀ ಹುಣ್ಣಿಮೆ ದಿನ ನೂಲಹುಣ್ಣಿಮೆಯಂದು ಇದನ್ನು ಆಚರಿಸಲಾಗುವುದು. ಬ್ರಾಹ್ಮಣರು ಈ ದಿನ ಶುದ್ಧೀಕರಣ ಸಂಪ್ರದಾಯವನ್ನು ಕೂಡ ಆಚರಿಸುತ್ತಾರೆ. ಇನ್ನು ಶಿವ ಭಕ್ತರು ಈ ದಿನ ವಿಶೇಷ ಪೂಜೆ ಸಲ್ಲಿಸಲಾಗುವುದು, ಹೀಗೆ ಅನೇಕ ಕಾರಣಗಳಿಗೆ ಈ ದಿನ ತುಂಬಾನೇ ಮಹತ್ವದ್ದಾಗಿದೆ.

ಶ್ರಾವಣ ಪೂರ್ಣಿಮೆಯಂದು ಪಾಲಿಸುವ ಆಚರಣೆಗಳು
* ರಕ್ಷಾ ಬಂಧನ: ರಾಖಿ ಹಬ್ಬ
* ಹಯಗ್ರೀವ ಜಯಂತಿ: ಈ ದಿನ ಹಯಗ್ರೀವನ ಪೂಜೆ ಮಾಡಲಾಗುವದುಉ.
* ಉಪಕರ್ಮ: ಜನಿವಾರ ಬದಲಾಯಿಸುವುದು
* ಜಂಧ್ಯಂ ಪೂರ್ಣಿಮೆ: ಉಪಕರ್ಮ ಮಾಡುವುದು
* ನಾರಳಿ ಪೂರ್ಣಿಮೆ : ಈ ದಿನ ಸಮುದ್ರಕ್ಕೆ ತೆಂಗಿನಕಾಯಿ ಒಡೆದು ವರುಣ ದೇವನನ್ನು ಆರಾಧಿಸಲಾಗುವುದು.
* ಅವನಿ ಅವಿಟ್ಟಂ: ಗಾಯತ್ರಿ ಜಪ ಮಾಡುತ್ತಾ ದಕ್ಷಿಣ ಭಾರತದ ಬ್ರಾಹ್ಮಣರು ಜನಿವಾರ ಬದಲಾಯಿಸುವುದು
* ಬಲರಾಮ್ ಜಯಂತಿ: ಬಲರಾಮ ಜನಿಸಿದ ದಿನ
* ಅಮರನಾಥ ಯಾತ್ರೆ ಕೊನೆಯ ದಿನ
* ಪವಿತ್ರೋಪನ: ಈ ದಿನ ಶಿವನಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು.
* ಕಜರಾಯಿ ಪೂರ್ಣಿಮೆ: ಕೆಲವೊಂದು ಬೆಳೆಯ ಕಟಾವು

ಶ್ರಾವಣ ಪೂರ್ಣಿಮೆ ಆಚರಣೆಯ ಧಾರ್ಮಿಕ ಪ್ರಯೋಜನಗಳು
ಶ್ರಾವಣ ಪೂರ್ಣಿಮೆ ಆಚರಿಸುವುದರಿಂದ ಚಂದ್ರ ದೋಷ ನಿವಾರಣೆಯಾಗುತ್ತದೆ. ಈ ದಿನ ಬ್ರಾಹ್ಮಣರಿಗೆ ದಾನ ಮಾಡುವುದರಿಂದ ವಿಷ್ಣು, ಲಕ್ಷ್ಮಿಯನ್ನು ಪೂಜಿಸುವುದರಿಂದ ಸಂಪತ್ತು ವೃದ್ಧಿಯಾಗುವುದು.
ಈ ದಿನ ಪೂಜೆ ಮಾಡುವಾಗ ನೀವು ಶುಭ ಮುಹೂರ್ತದಲ್ಲಿ ಮಾಡಬೇಕು. ಭದ್ರಾಕಾಲದಲ್ಲಿ ಮಾಡಬೇಡಿ.



Click it and Unblock the Notifications