Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
Shravan Purnima 2021 : ಶ್ರಾವಣ ಪೂರ್ಣಿಮೆ ತುಂಬಾ ಪವಿತ್ರವಾದ ದಿನ, ಏಕೆ?
ಹಿಂದೂಗಳಿಗೆ ಶ್ರಾವಣ ಪೂರ್ಣಿಮೆ ತುಂಬಾನೇ ವಿಶೇಷ, ಈ ವರ್ಷ ಶ್ರಾವಣ ಪೂರ್ಣಿಮೆಯನ್ನು ಆಗಸ್ಟ್ 22 ಭಾನುವಾರದಂದು ಆಚರಿಸಲಾಗುವುದು. ಇದನ್ನು ರಾಖಿ ಪೂರ್ಣಿಮೆ ಎಂದು ಕೂಡ ಕರೆಯಲಾಗುವುದು. ಈ ಪವಿತ್ರ ದಿನದಂದು ರಕ್ಷಾ ಬಂಧನ ಆಚರಿಸಲಾಗುವುದು.
ಈ ದಿನದಂದು ದೇಶದ ಬೇರೆ-ಬೇರೆ ಕಡೆ ವಿವಿಧ ರೀತಿಯಲ್ಲಿ ಆಚರಿಸಲಾಗುವುದು. ನಾವಿಲ್ಲಿ ಶ್ರಾವಣ ಪೂರ್ಣಿಮೆಯ ಮಹತ್ವ ಹಾಗೂ ಆಚರಣೆಯ ಬಗ್ಗೆ ಹೇಳಿದ್ದೇವೆ ನೋಡಿ:

ಶ್ರಾವಣ ಪೂರ್ಣಿಮೆ ಮಹತ್ವ
ಹಿಂದೂ ಕ್ಯಾಲೆಂಡರ್ನಲ್ಲಿ ಶ್ರಾವಣ ಪೂರ್ಣಿಮೆಯನ್ನು ತುಂಬಾ ಮಹತ್ವದ ದಿನವೆಂದು ಪರಿಗಣಿಸಲಾಗಿದೆ. ಉಪನಯನ ಮತ್ತು ಯಜ್ಙೋಪವೀತ ಆಚರಿಸಲಾಗುವುದು. ಬ್ರಾಹ್ಮಣರಾಗಿದ್ದವರಿಗೆ ಅವರ ಅವಿಬಾಜ್ಯ ಅಂಗವೇ ಯಜ್ಙೋಪವೀತ . ಪ್ರತೀ ಹುಣ್ಣಿಮೆ ದಿನ ನೂಲಹುಣ್ಣಿಮೆಯಂದು ಇದನ್ನು ಆಚರಿಸಲಾಗುವುದು. ಬ್ರಾಹ್ಮಣರು ಈ ದಿನ ಶುದ್ಧೀಕರಣ ಸಂಪ್ರದಾಯವನ್ನು ಕೂಡ ಆಚರಿಸುತ್ತಾರೆ. ಇನ್ನು ಶಿವ ಭಕ್ತರು ಈ ದಿನ ವಿಶೇಷ ಪೂಜೆ ಸಲ್ಲಿಸಲಾಗುವುದು, ಹೀಗೆ ಅನೇಕ ಕಾರಣಗಳಿಗೆ ಈ ದಿನ ತುಂಬಾನೇ ಮಹತ್ವದ್ದಾಗಿದೆ.

ಶ್ರಾವಣ ಪೂರ್ಣಿಮೆಯಂದು ಪಾಲಿಸುವ ಆಚರಣೆಗಳು
* ರಕ್ಷಾ ಬಂಧನ: ರಾಖಿ ಹಬ್ಬ
* ಹಯಗ್ರೀವ ಜಯಂತಿ: ಈ ದಿನ ಹಯಗ್ರೀವನ ಪೂಜೆ ಮಾಡಲಾಗುವದುಉ.
* ಉಪಕರ್ಮ: ಜನಿವಾರ ಬದಲಾಯಿಸುವುದು
* ಜಂಧ್ಯಂ ಪೂರ್ಣಿಮೆ: ಉಪಕರ್ಮ ಮಾಡುವುದು
* ನಾರಳಿ ಪೂರ್ಣಿಮೆ : ಈ ದಿನ ಸಮುದ್ರಕ್ಕೆ ತೆಂಗಿನಕಾಯಿ ಒಡೆದು ವರುಣ ದೇವನನ್ನು ಆರಾಧಿಸಲಾಗುವುದು.
* ಅವನಿ ಅವಿಟ್ಟಂ: ಗಾಯತ್ರಿ ಜಪ ಮಾಡುತ್ತಾ ದಕ್ಷಿಣ ಭಾರತದ ಬ್ರಾಹ್ಮಣರು ಜನಿವಾರ ಬದಲಾಯಿಸುವುದು
* ಬಲರಾಮ್ ಜಯಂತಿ: ಬಲರಾಮ ಜನಿಸಿದ ದಿನ
* ಅಮರನಾಥ ಯಾತ್ರೆ ಕೊನೆಯ ದಿನ
* ಪವಿತ್ರೋಪನ: ಈ ದಿನ ಶಿವನಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು.
* ಕಜರಾಯಿ ಪೂರ್ಣಿಮೆ: ಕೆಲವೊಂದು ಬೆಳೆಯ ಕಟಾವು

ಶ್ರಾವಣ ಪೂರ್ಣಿಮೆ ಆಚರಣೆಯ ಧಾರ್ಮಿಕ ಪ್ರಯೋಜನಗಳು
ಶ್ರಾವಣ ಪೂರ್ಣಿಮೆ ಆಚರಿಸುವುದರಿಂದ ಚಂದ್ರ ದೋಷ ನಿವಾರಣೆಯಾಗುತ್ತದೆ. ಈ ದಿನ ಬ್ರಾಹ್ಮಣರಿಗೆ ದಾನ ಮಾಡುವುದರಿಂದ ವಿಷ್ಣು, ಲಕ್ಷ್ಮಿಯನ್ನು ಪೂಜಿಸುವುದರಿಂದ ಸಂಪತ್ತು ವೃದ್ಧಿಯಾಗುವುದು.
ಈ ದಿನ ಪೂಜೆ ಮಾಡುವಾಗ ನೀವು ಶುಭ ಮುಹೂರ್ತದಲ್ಲಿ ಮಾಡಬೇಕು. ಭದ್ರಾಕಾಲದಲ್ಲಿ ಮಾಡಬೇಡಿ.



Click it and Unblock the Notifications