Latest Updates
-
ಸೋಷಿಯಲ್ ಮೀಡಿಯಾದಲ್ಲಿ ಪ್ರೀತಿಯನ್ನು ತೋರಿಸುವ ಹೊಸ ಟ್ರೆಂಡ್: 'ಸಾಫ್ಟ್ ಲಾಂಚ್' ಮೂಲಕ ನಿಮ್ಮ ಸಂಬಂಧವನ್ನು ಭದ್ರಪಡಿಸಿಕೊಳ್ಳಿ! -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಲ್ಲೂ ನಿಮ್ಮ ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಉಳಿಸಲು ಈ ಟಿಪ್ಸ್ ಸಾಕು! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಆಹಾರ ಕ್ರಮಗಳನ್ನು ಮರೆಯದೆ ಪಾಲಿಸಿ! -
ಮುಟ್ಟಿನ ನೈರ್ಮಲ್ಯ ದಿನ: ಕೇವಲ 200 ರೂಪಾಯಿಗೂ ಕಡಿಮೆ ಬೆಲೆಯಲ್ಲಿ ಸಿಗುತ್ತಿವೆ ಈ ಅಗತ್ಯ ಉತ್ಪನ್ನಗಳು, ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ಮದುವೆ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ 5 ಬದಲಾವಣೆಗಳನ್ನು ಮರೆಯಬೇಡಿ! -
ದೆಹಲಿ ಧೂಳಿನ ಬಿರುಗಾಳಿ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 500 ರೂಪಾಯಿಯ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ಈ ಸರಳ ಆಹಾರ ಬದಲಾವಣೆ ನಿಮ್ಮನ್ನು ಹೀಟ್ಸ್ಟ್ರೋಕ್ನಿಂದ ರಕ್ಷಿಸುತ್ತದೆ! -
ರೆಡ್ ಕಾರ್ಪೆಟ್ನಿಂದ ನಿಮ್ಮ ವಾರ್ಡ್ರೋಬ್ಗೆ: ಕಾನ್ 2026ರ ಈ ಫ್ಯಾಷನ್ ಟ್ರೆಂಡ್ಸ್ ಈಗ ಸಿಕ್ಕಾಪಟ್ಟೆ ವೈರಲ್! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲ ಬೇಗೆಯಲ್ಲಿ ಮದುವೆ ಸಂಭ್ರಮ ಹಾಳಾಗದಿರಲಿ: ಅತಿಥಿಗಳ ಆರೋಗ್ಯ ಕಾಪಾಡಲು ಇಲ್ಲಿವೆ ಸೀಕ್ರೆಟ್ ಟಿಪ್ಸ್!
Shravan Purnima 2021 : ಶ್ರಾವಣ ಪೂರ್ಣಿಮೆ ತುಂಬಾ ಪವಿತ್ರವಾದ ದಿನ, ಏಕೆ?
ಹಿಂದೂಗಳಿಗೆ ಶ್ರಾವಣ ಪೂರ್ಣಿಮೆ ತುಂಬಾನೇ ವಿಶೇಷ, ಈ ವರ್ಷ ಶ್ರಾವಣ ಪೂರ್ಣಿಮೆಯನ್ನು ಆಗಸ್ಟ್ 22 ಭಾನುವಾರದಂದು ಆಚರಿಸಲಾಗುವುದು. ಇದನ್ನು ರಾಖಿ ಪೂರ್ಣಿಮೆ ಎಂದು ಕೂಡ ಕರೆಯಲಾಗುವುದು. ಈ ಪವಿತ್ರ ದಿನದಂದು ರಕ್ಷಾ ಬಂಧನ ಆಚರಿಸಲಾಗುವುದು.
ಈ ದಿನದಂದು ದೇಶದ ಬೇರೆ-ಬೇರೆ ಕಡೆ ವಿವಿಧ ರೀತಿಯಲ್ಲಿ ಆಚರಿಸಲಾಗುವುದು. ನಾವಿಲ್ಲಿ ಶ್ರಾವಣ ಪೂರ್ಣಿಮೆಯ ಮಹತ್ವ ಹಾಗೂ ಆಚರಣೆಯ ಬಗ್ಗೆ ಹೇಳಿದ್ದೇವೆ ನೋಡಿ:

ಶ್ರಾವಣ ಪೂರ್ಣಿಮೆ ಮಹತ್ವ
ಹಿಂದೂ ಕ್ಯಾಲೆಂಡರ್ನಲ್ಲಿ ಶ್ರಾವಣ ಪೂರ್ಣಿಮೆಯನ್ನು ತುಂಬಾ ಮಹತ್ವದ ದಿನವೆಂದು ಪರಿಗಣಿಸಲಾಗಿದೆ. ಉಪನಯನ ಮತ್ತು ಯಜ್ಙೋಪವೀತ ಆಚರಿಸಲಾಗುವುದು. ಬ್ರಾಹ್ಮಣರಾಗಿದ್ದವರಿಗೆ ಅವರ ಅವಿಬಾಜ್ಯ ಅಂಗವೇ ಯಜ್ಙೋಪವೀತ . ಪ್ರತೀ ಹುಣ್ಣಿಮೆ ದಿನ ನೂಲಹುಣ್ಣಿಮೆಯಂದು ಇದನ್ನು ಆಚರಿಸಲಾಗುವುದು. ಬ್ರಾಹ್ಮಣರು ಈ ದಿನ ಶುದ್ಧೀಕರಣ ಸಂಪ್ರದಾಯವನ್ನು ಕೂಡ ಆಚರಿಸುತ್ತಾರೆ. ಇನ್ನು ಶಿವ ಭಕ್ತರು ಈ ದಿನ ವಿಶೇಷ ಪೂಜೆ ಸಲ್ಲಿಸಲಾಗುವುದು, ಹೀಗೆ ಅನೇಕ ಕಾರಣಗಳಿಗೆ ಈ ದಿನ ತುಂಬಾನೇ ಮಹತ್ವದ್ದಾಗಿದೆ.

ಶ್ರಾವಣ ಪೂರ್ಣಿಮೆಯಂದು ಪಾಲಿಸುವ ಆಚರಣೆಗಳು
* ರಕ್ಷಾ ಬಂಧನ: ರಾಖಿ ಹಬ್ಬ
* ಹಯಗ್ರೀವ ಜಯಂತಿ: ಈ ದಿನ ಹಯಗ್ರೀವನ ಪೂಜೆ ಮಾಡಲಾಗುವದುಉ.
* ಉಪಕರ್ಮ: ಜನಿವಾರ ಬದಲಾಯಿಸುವುದು
* ಜಂಧ್ಯಂ ಪೂರ್ಣಿಮೆ: ಉಪಕರ್ಮ ಮಾಡುವುದು
* ನಾರಳಿ ಪೂರ್ಣಿಮೆ : ಈ ದಿನ ಸಮುದ್ರಕ್ಕೆ ತೆಂಗಿನಕಾಯಿ ಒಡೆದು ವರುಣ ದೇವನನ್ನು ಆರಾಧಿಸಲಾಗುವುದು.
* ಅವನಿ ಅವಿಟ್ಟಂ: ಗಾಯತ್ರಿ ಜಪ ಮಾಡುತ್ತಾ ದಕ್ಷಿಣ ಭಾರತದ ಬ್ರಾಹ್ಮಣರು ಜನಿವಾರ ಬದಲಾಯಿಸುವುದು
* ಬಲರಾಮ್ ಜಯಂತಿ: ಬಲರಾಮ ಜನಿಸಿದ ದಿನ
* ಅಮರನಾಥ ಯಾತ್ರೆ ಕೊನೆಯ ದಿನ
* ಪವಿತ್ರೋಪನ: ಈ ದಿನ ಶಿವನಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು.
* ಕಜರಾಯಿ ಪೂರ್ಣಿಮೆ: ಕೆಲವೊಂದು ಬೆಳೆಯ ಕಟಾವು

ಶ್ರಾವಣ ಪೂರ್ಣಿಮೆ ಆಚರಣೆಯ ಧಾರ್ಮಿಕ ಪ್ರಯೋಜನಗಳು
ಶ್ರಾವಣ ಪೂರ್ಣಿಮೆ ಆಚರಿಸುವುದರಿಂದ ಚಂದ್ರ ದೋಷ ನಿವಾರಣೆಯಾಗುತ್ತದೆ. ಈ ದಿನ ಬ್ರಾಹ್ಮಣರಿಗೆ ದಾನ ಮಾಡುವುದರಿಂದ ವಿಷ್ಣು, ಲಕ್ಷ್ಮಿಯನ್ನು ಪೂಜಿಸುವುದರಿಂದ ಸಂಪತ್ತು ವೃದ್ಧಿಯಾಗುವುದು.
ಈ ದಿನ ಪೂಜೆ ಮಾಡುವಾಗ ನೀವು ಶುಭ ಮುಹೂರ್ತದಲ್ಲಿ ಮಾಡಬೇಕು. ಭದ್ರಾಕಾಲದಲ್ಲಿ ಮಾಡಬೇಡಿ.



Click it and Unblock the Notifications