Latest Updates
-
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ!
Shravan Purnima 2021 : ಶ್ರಾವಣ ಪೂರ್ಣಿಮೆ ತುಂಬಾ ಪವಿತ್ರವಾದ ದಿನ, ಏಕೆ?
ಹಿಂದೂಗಳಿಗೆ ಶ್ರಾವಣ ಪೂರ್ಣಿಮೆ ತುಂಬಾನೇ ವಿಶೇಷ, ಈ ವರ್ಷ ಶ್ರಾವಣ ಪೂರ್ಣಿಮೆಯನ್ನು ಆಗಸ್ಟ್ 22 ಭಾನುವಾರದಂದು ಆಚರಿಸಲಾಗುವುದು. ಇದನ್ನು ರಾಖಿ ಪೂರ್ಣಿಮೆ ಎಂದು ಕೂಡ ಕರೆಯಲಾಗುವುದು. ಈ ಪವಿತ್ರ ದಿನದಂದು ರಕ್ಷಾ ಬಂಧನ ಆಚರಿಸಲಾಗುವುದು.
ಈ ದಿನದಂದು ದೇಶದ ಬೇರೆ-ಬೇರೆ ಕಡೆ ವಿವಿಧ ರೀತಿಯಲ್ಲಿ ಆಚರಿಸಲಾಗುವುದು. ನಾವಿಲ್ಲಿ ಶ್ರಾವಣ ಪೂರ್ಣಿಮೆಯ ಮಹತ್ವ ಹಾಗೂ ಆಚರಣೆಯ ಬಗ್ಗೆ ಹೇಳಿದ್ದೇವೆ ನೋಡಿ:

ಶ್ರಾವಣ ಪೂರ್ಣಿಮೆ ಮಹತ್ವ
ಹಿಂದೂ ಕ್ಯಾಲೆಂಡರ್ನಲ್ಲಿ ಶ್ರಾವಣ ಪೂರ್ಣಿಮೆಯನ್ನು ತುಂಬಾ ಮಹತ್ವದ ದಿನವೆಂದು ಪರಿಗಣಿಸಲಾಗಿದೆ. ಉಪನಯನ ಮತ್ತು ಯಜ್ಙೋಪವೀತ ಆಚರಿಸಲಾಗುವುದು. ಬ್ರಾಹ್ಮಣರಾಗಿದ್ದವರಿಗೆ ಅವರ ಅವಿಬಾಜ್ಯ ಅಂಗವೇ ಯಜ್ಙೋಪವೀತ . ಪ್ರತೀ ಹುಣ್ಣಿಮೆ ದಿನ ನೂಲಹುಣ್ಣಿಮೆಯಂದು ಇದನ್ನು ಆಚರಿಸಲಾಗುವುದು. ಬ್ರಾಹ್ಮಣರು ಈ ದಿನ ಶುದ್ಧೀಕರಣ ಸಂಪ್ರದಾಯವನ್ನು ಕೂಡ ಆಚರಿಸುತ್ತಾರೆ. ಇನ್ನು ಶಿವ ಭಕ್ತರು ಈ ದಿನ ವಿಶೇಷ ಪೂಜೆ ಸಲ್ಲಿಸಲಾಗುವುದು, ಹೀಗೆ ಅನೇಕ ಕಾರಣಗಳಿಗೆ ಈ ದಿನ ತುಂಬಾನೇ ಮಹತ್ವದ್ದಾಗಿದೆ.

ಶ್ರಾವಣ ಪೂರ್ಣಿಮೆಯಂದು ಪಾಲಿಸುವ ಆಚರಣೆಗಳು
* ರಕ್ಷಾ ಬಂಧನ: ರಾಖಿ ಹಬ್ಬ
* ಹಯಗ್ರೀವ ಜಯಂತಿ: ಈ ದಿನ ಹಯಗ್ರೀವನ ಪೂಜೆ ಮಾಡಲಾಗುವದುಉ.
* ಉಪಕರ್ಮ: ಜನಿವಾರ ಬದಲಾಯಿಸುವುದು
* ಜಂಧ್ಯಂ ಪೂರ್ಣಿಮೆ: ಉಪಕರ್ಮ ಮಾಡುವುದು
* ನಾರಳಿ ಪೂರ್ಣಿಮೆ : ಈ ದಿನ ಸಮುದ್ರಕ್ಕೆ ತೆಂಗಿನಕಾಯಿ ಒಡೆದು ವರುಣ ದೇವನನ್ನು ಆರಾಧಿಸಲಾಗುವುದು.
* ಅವನಿ ಅವಿಟ್ಟಂ: ಗಾಯತ್ರಿ ಜಪ ಮಾಡುತ್ತಾ ದಕ್ಷಿಣ ಭಾರತದ ಬ್ರಾಹ್ಮಣರು ಜನಿವಾರ ಬದಲಾಯಿಸುವುದು
* ಬಲರಾಮ್ ಜಯಂತಿ: ಬಲರಾಮ ಜನಿಸಿದ ದಿನ
* ಅಮರನಾಥ ಯಾತ್ರೆ ಕೊನೆಯ ದಿನ
* ಪವಿತ್ರೋಪನ: ಈ ದಿನ ಶಿವನಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು.
* ಕಜರಾಯಿ ಪೂರ್ಣಿಮೆ: ಕೆಲವೊಂದು ಬೆಳೆಯ ಕಟಾವು

ಶ್ರಾವಣ ಪೂರ್ಣಿಮೆ ಆಚರಣೆಯ ಧಾರ್ಮಿಕ ಪ್ರಯೋಜನಗಳು
ಶ್ರಾವಣ ಪೂರ್ಣಿಮೆ ಆಚರಿಸುವುದರಿಂದ ಚಂದ್ರ ದೋಷ ನಿವಾರಣೆಯಾಗುತ್ತದೆ. ಈ ದಿನ ಬ್ರಾಹ್ಮಣರಿಗೆ ದಾನ ಮಾಡುವುದರಿಂದ ವಿಷ್ಣು, ಲಕ್ಷ್ಮಿಯನ್ನು ಪೂಜಿಸುವುದರಿಂದ ಸಂಪತ್ತು ವೃದ್ಧಿಯಾಗುವುದು.
ಈ ದಿನ ಪೂಜೆ ಮಾಡುವಾಗ ನೀವು ಶುಭ ಮುಹೂರ್ತದಲ್ಲಿ ಮಾಡಬೇಕು. ಭದ್ರಾಕಾಲದಲ್ಲಿ ಮಾಡಬೇಡಿ.



Click it and Unblock the Notifications