Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಶ್ರಾವಣ ಮಾಸ: ಇಷ್ಟಾರ್ಥ ಸಿದ್ಧಿಗಾಗಿ ಈ ತಿಂಗಳಿನಲ್ಲಿ ಪಾಲಿಸಬೇಕಾದ ನಿಯಮಗಳೇನು ನೋಡಿ
ಹಿಂದೂ ಕನ್ನಡ ಪಂಚಾಂಗ ಪ್ರಕಾರ ಶ್ರಾವಣ ಮಾಸವೆಂಬುವುದು 5ನೇ ತಿಂಗಳಾಗಿದ್ದು, ಇದನ್ನು ಅತ್ಯಂತ ಪವಿತ್ರವಾದ ಮಾಸವೆಂದು ಪರಿಗಣಿಸಲಾಗಿದೆ. ಈ ಮಾಸದಲ್ಲಿ ಹೇಗಿರಬೇಕು, ಏನು ಮಾಡಬಾರದು ಎಂಬೆಲ್ಲಾ ನಿಯಮಗಳಿವೆ.
ಶ್ರಾವಣ ಮಾಸದ ನಿಯಮಗಳನ್ನು ಪಾಲಿಸಿದರೆ ಒಳಿತಾಗುವುದು ಎಂಬ ನಂಬಿಕೆ. ಈ ವರ್ಷ ಶ್ರಾವಣ ಮಾಸ ಆಗಸ್ಟ್-ಸೆಪ್ಟೆಂಬರ್ ನಡುವೆ ಬಂದಿದೆ. ಆಗಸ್ಟ್ 9ರಿಂದ ಕರ್ನಾಟಕದಲ್ಲಿ ಶ್ರಾವಣ ಪ್ರಾರಂಭ.
ಈ ಮಾಸದಲ್ಲಿ ಶ್ರಾವಣ ಸೋಮವಾರ ಆಚರಿಸಲಾಗುವುದು. ಒಂದು ಸೋಮವಾರ ಆಚರಿಸಿದರೆ 16 ಸೋಮವಾರ ಆಚರಿಸಬೇಕೆಂಬ ನಿಯಮವಿದೆ. ಏನಾದರೂ ಸಂಕಲ್ಪ ತೆಗೆದುಕೊಂಡು ಶ್ರಾವಣ ಸೋಮವಾರ ಆಚರಿಸಿದರೆ ಅದು ನೆರವೇರುವುದು ಎಂದು ಹೇಳಲಾಗುವುದು. ಶ್ರಾವಣ ಸೋಮವಾರದಂದು ಭಕ್ತರು ಬೆಳಗ್ಗೆ ಎದ್ದು ಸ್ನಾನ ಮಾಡೊ ಶಿವನ ದೇವಾಲಯಕ್ಕೆ ಹೋಗಿ ಪೂಜೆಯನ್ನು ಸಲ್ಲಿಸುತ್ತಾರೆ. ಕೆಲವರು ಮನೆಯಲ್ಲಿ ಶಿವಲಿಂಗಕ್ಕೆ ಪೂಜೆ ಸಲ್ಲಿಸುತ್ತಾರೆ.
ಶ್ರಾವಣ ಮಾಸದಲ್ಲಿ ಯಾರು ಶ್ರಾವಣ ಸೋಮವಾರ ಆಚರಿಸುತ್ತಾರೋ ಅವರು ಕೆಲವೊಂದು ಆಚಾರಗಳನ್ನು ಪಾಲಿಸಬೇಕು. ಆ ನಿಯಮ ಇಡೀ ಶ್ರಾವಣ ಮಾಸಕ್ಕೆ ಅನ್ವಯವಾಗುವುದು. ಶ್ರಾವಣ ತಿಂಗಳಿನಲ್ಲಿ ಏನು ಮಾಡಬಾರದು, ಏನು ಮಾಡಬೇಕು ಎಂದು ತಿಳಿಯೋಣ ಬನ್ನಿ:

ಶ್ರಾವಣ ಸೋಮವಾರ 2021: ಏನು ಮಾಡಬೇಕು
* ಉಪವಾಸ: ಶ್ರಾವ ಣ ಸೋಮವಾರದಂದು ಉಪವಾಸವಿರುವುದು ಹಾಗೂ ಇಡೀ ತಿಂಗಳು ಉಪವಾಸ ಮಾಡಿದರೆ (ಅಕ್ಕಿಯ ಅಂಶ ತಿನ್ನುವಂತಿಲ್ಲ, ಹಣ್ಣುಗಳು, ಗೋಧಿಯ ಪದಾರ್ಥ ಸೇವಿಸಬಹುದು) ಒಳ್ಳೆಯದು.
* ಶ್ರಾವಣ ಉಪವಾಸದಲ್ಲಿ ಸಾಕಷ್ಟು ನೀರು ಕುಡಿಯಿರಿ ಹಾಗೂ ಹಣ್ಣುಗಳನ್ನು ಸೇವಿಸಿ.
* ಶಿವನ ದೇವಾಲಯಕ್ಕೆ ಪ್ರತಿನಿತ್ಯ ಭೇಟಿ ನೀಡಿ.
* ಪ್ರತಿದಿನ ಮೃತ್ಯುಂಜಯ ಮಂತ್ರ ಪಠಿಸಿ.
* ಓಂ ನಮಃ ಶಿವಾಯ ಅಂತ ದಿನವಿಡೀ ಪಠಿಸುತ್ತಲೇ ಇರಿ.
* ಶಿವನಿಗೆ ಹಾಲು, ತುಪ್ಪ, ಮೊಸರು, ಗಂಗಾಜಲ, ಹಾಗೂ ಜೇನು ಹಾಕಿ ತಯಾರಿಸಿದ ನೈವೇದ್ಯ ಅರ್ಪಿಸಿ.
* ಈ ತಿಂಗಳಿನಲ್ಲಿ ರುದ್ರಾಕ್ಷಿ ಮಾಲೆ ಧರಿಸಿ.
* ಪ್ರತಿ ಸೋಮವಾರ ಶ್ರಾವಣ ಸೋಮವಾರ ವ್ರತ ಕತೆ ಓದುವುದು ಅಥವಾ ಕೇಳುವುದು ಮಾಡಬೇಕು. ಈ ಕತೆ ಕೇಳುವುದರಿಂದ ಅಥವಾ ಹೇಳುವುದರಿಂದ ಬದುಕನ್ನು ಮೋಕ್ಷದ ಕಡೆಗೆ ಕೊಂಡೊಯ್ಯುವುದು.

ಶ್ರಾವಣ 2021: ಏನು ಮಾಡಬಾರದು?
* ಈ ತಿಂಗಳಿನಲ್ಲಿ ಮದ್ಯವನ್ನು ಸೇವಿಸಬಾರದು.
* ಈ ತಿಂಗಳಿನಲ್ಲಿ ಕೂದಲು ತೆಗೆಯುವುದು, ಗಡ್ಡ ಬೋಳಿಸುವುದು ಮಾಡಬಾರದು.
* ಉಪವಾಸವನ್ನು ಮುರಿಯದಂತೆ ನೋಡಿಕೊಳ್ಳಬೇಕು.
* ಮಾಂಸಾಹಾರ ಸೇವಿಸಬಾರದು
* ಈ ತಿಂಗಳಿನಲ್ಲಿ ಅಡುಗೆಗೆ ಶುಂಠಿ-ಬೆಳ್ಳುಳ್ಳಿ ಕೂಡ ಬಳಸುವಂತಿಲ್ಲ.
* ಪುರಾಣದ ಪ್ರಕಾರ ಬದನೆಕಾಯಿ ಕೂಡ ಈ ತಿಂಗಳು ಬಳಸುವಂತಿಲ್ಲ.

ಶ್ರಾವಣ ಸೋಮವಾರ 2021:
ಆಗಸ್ಟ್ 9 , 2021
ಆಗಸ್ಟ್ 16, 2021
ಆಗಸ್ಟ್ 23, 2021
ಆಗಸ್ಟ್ 30, 2021
ಸೆಪ್ಟೆಂಬರ್ 6, 2021
ಸೆಪ್ಟೆಂಬರ್ 7ಕ್ಕೆ ಶ್ರಾವಣ ತಿಂಗಳು ಮುಕ್ತಾಯವಾಗುವುದು.



Click it and Unblock the Notifications