Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಶ್ರಾವಣ ಮಾಸ: ಇಷ್ಟಾರ್ಥ ಸಿದ್ಧಿಗಾಗಿ ಈ ತಿಂಗಳಿನಲ್ಲಿ ಪಾಲಿಸಬೇಕಾದ ನಿಯಮಗಳೇನು ನೋಡಿ
ಹಿಂದೂ ಕನ್ನಡ ಪಂಚಾಂಗ ಪ್ರಕಾರ ಶ್ರಾವಣ ಮಾಸವೆಂಬುವುದು 5ನೇ ತಿಂಗಳಾಗಿದ್ದು, ಇದನ್ನು ಅತ್ಯಂತ ಪವಿತ್ರವಾದ ಮಾಸವೆಂದು ಪರಿಗಣಿಸಲಾಗಿದೆ. ಈ ಮಾಸದಲ್ಲಿ ಹೇಗಿರಬೇಕು, ಏನು ಮಾಡಬಾರದು ಎಂಬೆಲ್ಲಾ ನಿಯಮಗಳಿವೆ.
ಶ್ರಾವಣ ಮಾಸದ ನಿಯಮಗಳನ್ನು ಪಾಲಿಸಿದರೆ ಒಳಿತಾಗುವುದು ಎಂಬ ನಂಬಿಕೆ. ಈ ವರ್ಷ ಶ್ರಾವಣ ಮಾಸ ಆಗಸ್ಟ್-ಸೆಪ್ಟೆಂಬರ್ ನಡುವೆ ಬಂದಿದೆ. ಆಗಸ್ಟ್ 9ರಿಂದ ಕರ್ನಾಟಕದಲ್ಲಿ ಶ್ರಾವಣ ಪ್ರಾರಂಭ.
ಈ ಮಾಸದಲ್ಲಿ ಶ್ರಾವಣ ಸೋಮವಾರ ಆಚರಿಸಲಾಗುವುದು. ಒಂದು ಸೋಮವಾರ ಆಚರಿಸಿದರೆ 16 ಸೋಮವಾರ ಆಚರಿಸಬೇಕೆಂಬ ನಿಯಮವಿದೆ. ಏನಾದರೂ ಸಂಕಲ್ಪ ತೆಗೆದುಕೊಂಡು ಶ್ರಾವಣ ಸೋಮವಾರ ಆಚರಿಸಿದರೆ ಅದು ನೆರವೇರುವುದು ಎಂದು ಹೇಳಲಾಗುವುದು. ಶ್ರಾವಣ ಸೋಮವಾರದಂದು ಭಕ್ತರು ಬೆಳಗ್ಗೆ ಎದ್ದು ಸ್ನಾನ ಮಾಡೊ ಶಿವನ ದೇವಾಲಯಕ್ಕೆ ಹೋಗಿ ಪೂಜೆಯನ್ನು ಸಲ್ಲಿಸುತ್ತಾರೆ. ಕೆಲವರು ಮನೆಯಲ್ಲಿ ಶಿವಲಿಂಗಕ್ಕೆ ಪೂಜೆ ಸಲ್ಲಿಸುತ್ತಾರೆ.
ಶ್ರಾವಣ ಮಾಸದಲ್ಲಿ ಯಾರು ಶ್ರಾವಣ ಸೋಮವಾರ ಆಚರಿಸುತ್ತಾರೋ ಅವರು ಕೆಲವೊಂದು ಆಚಾರಗಳನ್ನು ಪಾಲಿಸಬೇಕು. ಆ ನಿಯಮ ಇಡೀ ಶ್ರಾವಣ ಮಾಸಕ್ಕೆ ಅನ್ವಯವಾಗುವುದು. ಶ್ರಾವಣ ತಿಂಗಳಿನಲ್ಲಿ ಏನು ಮಾಡಬಾರದು, ಏನು ಮಾಡಬೇಕು ಎಂದು ತಿಳಿಯೋಣ ಬನ್ನಿ:

ಶ್ರಾವಣ ಸೋಮವಾರ 2021: ಏನು ಮಾಡಬೇಕು
* ಉಪವಾಸ: ಶ್ರಾವ ಣ ಸೋಮವಾರದಂದು ಉಪವಾಸವಿರುವುದು ಹಾಗೂ ಇಡೀ ತಿಂಗಳು ಉಪವಾಸ ಮಾಡಿದರೆ (ಅಕ್ಕಿಯ ಅಂಶ ತಿನ್ನುವಂತಿಲ್ಲ, ಹಣ್ಣುಗಳು, ಗೋಧಿಯ ಪದಾರ್ಥ ಸೇವಿಸಬಹುದು) ಒಳ್ಳೆಯದು.
* ಶ್ರಾವಣ ಉಪವಾಸದಲ್ಲಿ ಸಾಕಷ್ಟು ನೀರು ಕುಡಿಯಿರಿ ಹಾಗೂ ಹಣ್ಣುಗಳನ್ನು ಸೇವಿಸಿ.
* ಶಿವನ ದೇವಾಲಯಕ್ಕೆ ಪ್ರತಿನಿತ್ಯ ಭೇಟಿ ನೀಡಿ.
* ಪ್ರತಿದಿನ ಮೃತ್ಯುಂಜಯ ಮಂತ್ರ ಪಠಿಸಿ.
* ಓಂ ನಮಃ ಶಿವಾಯ ಅಂತ ದಿನವಿಡೀ ಪಠಿಸುತ್ತಲೇ ಇರಿ.
* ಶಿವನಿಗೆ ಹಾಲು, ತುಪ್ಪ, ಮೊಸರು, ಗಂಗಾಜಲ, ಹಾಗೂ ಜೇನು ಹಾಕಿ ತಯಾರಿಸಿದ ನೈವೇದ್ಯ ಅರ್ಪಿಸಿ.
* ಈ ತಿಂಗಳಿನಲ್ಲಿ ರುದ್ರಾಕ್ಷಿ ಮಾಲೆ ಧರಿಸಿ.
* ಪ್ರತಿ ಸೋಮವಾರ ಶ್ರಾವಣ ಸೋಮವಾರ ವ್ರತ ಕತೆ ಓದುವುದು ಅಥವಾ ಕೇಳುವುದು ಮಾಡಬೇಕು. ಈ ಕತೆ ಕೇಳುವುದರಿಂದ ಅಥವಾ ಹೇಳುವುದರಿಂದ ಬದುಕನ್ನು ಮೋಕ್ಷದ ಕಡೆಗೆ ಕೊಂಡೊಯ್ಯುವುದು.

ಶ್ರಾವಣ 2021: ಏನು ಮಾಡಬಾರದು?
* ಈ ತಿಂಗಳಿನಲ್ಲಿ ಮದ್ಯವನ್ನು ಸೇವಿಸಬಾರದು.
* ಈ ತಿಂಗಳಿನಲ್ಲಿ ಕೂದಲು ತೆಗೆಯುವುದು, ಗಡ್ಡ ಬೋಳಿಸುವುದು ಮಾಡಬಾರದು.
* ಉಪವಾಸವನ್ನು ಮುರಿಯದಂತೆ ನೋಡಿಕೊಳ್ಳಬೇಕು.
* ಮಾಂಸಾಹಾರ ಸೇವಿಸಬಾರದು
* ಈ ತಿಂಗಳಿನಲ್ಲಿ ಅಡುಗೆಗೆ ಶುಂಠಿ-ಬೆಳ್ಳುಳ್ಳಿ ಕೂಡ ಬಳಸುವಂತಿಲ್ಲ.
* ಪುರಾಣದ ಪ್ರಕಾರ ಬದನೆಕಾಯಿ ಕೂಡ ಈ ತಿಂಗಳು ಬಳಸುವಂತಿಲ್ಲ.

ಶ್ರಾವಣ ಸೋಮವಾರ 2021:
ಆಗಸ್ಟ್ 9 , 2021
ಆಗಸ್ಟ್ 16, 2021
ಆಗಸ್ಟ್ 23, 2021
ಆಗಸ್ಟ್ 30, 2021
ಸೆಪ್ಟೆಂಬರ್ 6, 2021
ಸೆಪ್ಟೆಂಬರ್ 7ಕ್ಕೆ ಶ್ರಾವಣ ತಿಂಗಳು ಮುಕ್ತಾಯವಾಗುವುದು.



Click it and Unblock the Notifications











