Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಶ್ರಾವಣ ಮಾಸ 2021: ಯಾವಾಗ ಪ್ರಾರಂಭ? ಈ ತಿಂಗಳ ಮಹತ್ವ ಹಾಗೂ ಪೂಜಾ ವಿಧಿಗಳೇನು?
ಹಿಂದೂಗಳಿಗೆ ಆಷಾಢ ಕಳೆದು ಬರುವ ಶ್ರಾವಣ ತುಂಬಾ ವಿಶೇಷಗಳನ್ನು ಹೊತ್ತು ತರುವ ತಿಂಗಳಾಗಿದೆ. ಹಿಂದೂ ಕನ್ನಡ ಕ್ಯಾಲೆಂಡರ್ನಲ್ಲಿ ಶ್ರಾವಣ 5ನೇ ತಿಂಗಳಾಗಿದೆ.
ಶ್ರಾವಣ ಎಂದರೆ ಸಾಲು-ಸಾಲು ಹಬ್ಬಗಳನ್ನು ಹೊತ್ತು ಬರುವ ಮಾಸವಾಗಿದೆ. ಶ್ರಾವಣದಲ್ಲಿ ನಾಗರ ಪಂಚಮಿ, ವರಲಕ್ಷ್ಮಿ ವ್ರತ, ರಿಗ್ ಮತ್ತು ಯುಜುರ್ ಉಪಕರ್ಮ, ಶ್ರೀ ಕೃಷ್ಣ ಜಯಂತಿ ಹೀಗೆ ಅನೇಕ ಹಬ್ಬಗಳು-ಆಚರಣೆಗಳಿವೆ. ಇನ್ನು ಶ್ರಾವಣ ಮಾಸದ ಎಲ್ಲಾ ಮಂಗಳವಾರದಂದು ಮಂಗಳಗೌರಿ ಪೂಜೆ ಮಾಡಲಾಗುವುದು. ಶ್ರಾವಣ ಸೋಮವಾರ ಕೂಡ ಆಚರಿಸಲಾಗುವುದು.
ಶ್ರಾವಣ ಯಾವಾಗ?
ಆಗಸ್ಟ್ 9ರಿಂದ ಶ್ರಾವಣ ಪ್ರಾರಂಭ, ಸೆಪ್ಟೆಂಬರ್ 7ಕ್ಕೆ ಮುಕ್ತಾಯ

ಶ್ರಾವಣದಲ್ಲಿ ಶ್ರಾವಣ ಸೋಮವಾರದ ಮಹತ್ವ
ಶ್ರಾವಣದಲ್ಲಿ ಶ್ರಾವಣ ಸೋಮವಾರ ತುಂಬಾ ವಿಶೇಷ ದಿನವಾಗಿದೆ. ಈ ದಿನ ಶಿವಲಿಂಗಕ್ಕೆ ನೀರಿನ ಅಭಿಷೇಕ ಮಾಡಿ ಶಿವನನ್ನು ಆರಾಧಿಸಲಾಗುವುದು.
ಪೌರಾಣಿಕ ಕತೆಗಳ ಪ್ರಕಾರ ದೇವತೆಗಳು ಹಾಗೂ ಅಸುರರ ನಡುವೆ ಯುದ್ಧ ನಡೆದಾಗ ನೀರಿನಲ್ಲಿ ವಿಷ ಉತ್ಪತ್ತಿಯಾಗುತ್ತೆ, ಆಗ ಶಿವ ಮನುಕುಲದ ರಕ್ಷಣೆಗೆ ವಿಷವನ್ನು ಕುಡಿಯುತ್ತಾನೆ, ಶಿವನಿಗೆ ವಿಷವನ್ನು ಕುಡಿದಾಗ ಉರಿ ತಾಳಲಾಗದೆ ಚಂದ್ರನೊಳಗೆ ತನ್ನ ತಲೆ ಇಡುತ್ತಾನೆ, ಇಂದ್ರನು ಶಿವನ ಮೇಲೆ ಮಳೆಯನ್ನು ಸರಿಸುತ್ತಾನೆ, ಎಲ್ಲಾ ದೇವತೆಗಳು ಶಿವನ ಮೇಲೆ ಗಂಗಾಜಲ ಸುರಿದು ಶಿವನ ದೇಹದ ಉರಿಯನ್ನು ಕಡಿಮೆ ಮಾಡುತ್ತಾರೆ. ಇದೆಲ್ಲಾ ನಡೆದಿರುವುದು ಶ್ರಾವನ ಮಾಸದಲ್ಲಿ. ಹೀಗಾಗಿ ಶ್ರಾವಣ ಮಾಸ ಅದರಲ್ಲೂ ಶ್ರಾವಣ ಸೋಮವಾರ ಶಿವನಿಗೆ ಮೀಸಲಿಟ್ಟ ದಿನವಾಗಿದೆ.
ಶ್ರಾವಣ ಸೋಮವಾರದಂದು ಶಿವ ಲಿಂಗವನ್ನು ಗಂಗಾ ಜಲದಿಂದ ಅಭಿಷೇಕ ಮಾಡಿ ಆರಾಧಿಸಲಾಗುವುದು.

ಶ್ರಾವಣ ಸೋಮವಾರದ ಪೂಜಾವಿಧಿ
* ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಬೇಕು
* ನಂತರ ಶಿವನ ದೇವಾಲಯಕ್ಕೆ ಹೋಗಿ ರುದ್ರಾಭಿಷೇಕ ಪೂಜೆ ಮಾಡಿಸಿ, ಮೆಯಲ್ಲಿಯೇ ಮಾಡುವುದಾದರೆ ಸರಿಯಾದ ಕ್ರಮದಲ್ಲಿ ಮಾಡಬೇಕು.
* ಶಿವಲಿಂಗಕ್ಕೆ ಬಿಲ್ವೆ ಪತ್ರೆ ಅರ್ಪಿಸಿ.
* ಶಿವನಿಗೆ ನೈವೇದ್ಯ ಅರ್ಪಿಸಿ
* ನಂತರ ಶಿವನ ಮಂತ್ರಗಳನ್ನು ಪಠಿಸಿ, ನಂತರ ಆರತಿ ಮಾಡಿ.
* ಪೂಜೆ ಮುಗಿದ ಬಳಿಕ ಪ್ರಸಾದವನ್ನು ಹಂಚಿ.
ಸೂಚನೆ: ಶ್ರಾವಣ ಸೋಮವಾರದಂದು ಉಪವಾಸ ವ್ರತ ಪಾಲಿಸಿ ಶಿವನ ಆರಾಧನೆ ಮಾಡಿದರೆ ಹೆಚ್ಚು ಫಲ ಸಿಗುವುದು.

ಶ್ರಾವಣ ಮಾಸದಲ್ಲಿ ಶಿವ ಪೂಜೆ ಮಾಡುವುದರಿಂದ ದೊರೆಯುವ ಪ್ರಯೋಜನಗಳು
* ಶಿವನ ಆರಾಧನೆಯಿಂದ ಗ್ರಹಗಳ ದೋಷವಿದ್ದರೆ ಅದು ದೂರವಾಗುವುದು.
* ಶಿವನಿಗೆ ರುದ್ರಾಭಿಷೇಕ ಮಾಡುವುದರಿಂದ ಕಾಯಿಲೆಯಿಂದ ಗುಣಮುಖರಾಗುವಿರಿ, ಆರ್ಥಿಕ ಸಮಸ್ಯೆಯಿದ್ದರೆ ದೂರವಾಗುವುದು, ಪಾಪ ಕರ್ಮಗಳಿಂದ ಮೋಕ್ಷ ಸಿಗುವುದು.
* ಶಿವನ ಆರಾಧನೆಯಿಂದ ಮನಸ್ಸಿಗೆ ನೆಮ್ಮದಿ ಸಿಗುವುದು.
* ಉದ್ಯಮ ಹಾಗೂ ವೃತ್ತಿ ಜೀವನದಲ್ಲಿ ಯಶಸ್ಸು ಉಂಟಾಗುವುದು.

ಈ ವರ್ಷ ಶ್ರಾವಣ ಸೋಮವಾರದ ದಿನಾಂಕಗಳು
ಆಗಸ್ಟ್ 9 , 2021
ಆಗಸ್ಟ್ 16, 2021
ಆಗಸ್ಟ್ 23, 2021
ಆಗಸ್ಟ್ 30, 2021
ಸೆಪ್ಟೆಂಬರ್ 6, 2021



Click it and Unblock the Notifications