Latest Updates
-
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್
ಶುಕ್ರವಾರ ತುಂಬಾ ಶುಭ ದಿನವೆಂದು ಹೇಳುವುದು ಇದೇ ಕಾರಣಕ್ಕೆ
ವಾರದಲ್ಲಿ 7 ದಿನ, ಹಿಂದೂ ಧರ್ಮದ ಪ್ರಕಾರ ಒಂದೊಂದು ದಿನಕ್ಕೆ ಒಂದೊಂದು ವಿಶೇಷವಿದೆ. ಆದರೆ ಶುಕ್ರವಾರಕ್ಕೇ ತುಂಬಾನೇ ಮಹತ್ವವಿದೆ. ಶುಕ್ರವಾರದಂದು ದೇವಿ ಪೂಜೆಗೆ ಶ್ರೇಷ್ಠವೆಂದು ಹೇಳಲಾಗುವುದು.
ಶಕ್ತಿ ದೇವತೆ ದುರ್ಗಾಮಾತೆ, ಕಾಳಿ, ಲಕ್ಷ್ಮೀ, ಸರಸ್ವತಿ ಈ ಎಲ್ಲಾ ದೇವತೆಗಳನ್ನು ಶುಕ್ರವಾರ ಆರಾಧಿಸುವುದರಿಂದ ತುಂಬಾ ಒಳಿತಾಗುವುದು ಎಂಬ ನಂಬಿಕೆ ಇದೆ.
ಶುಕ್ರವಾರ ಶುಕ್ರಗ್ರಹಕ್ಕೆ ಸಂಬಂಧಿಸಿದ ದಿನ, ಶುಕ್ರ ಗ್ರಹವನ್ನು ದಾನವರ ಗುರು ಎಂದು ಹೇಳಲಾಗುವುದು. ಅಲ್ಲದೆ ಶುಕ್ರಗ್ರಹ ಸೌಂದರ್ಯ, ಐಶ್ವರ್ಯ ಮತ್ತು ಶುಭ ವಿಷಯಕ್ಕೆ ಸಂಬಂಧಿಸಿದ್ದಾಗಿದೆ.

ಶುಕ್ರವಾರದ ಉಪವಾಸದ ಮಹತ್ವ
ಶುಕ್ರವಾರದಂದು ತುಂಬಾ ಜನರು ಉಪವಾಸ ಆಚರಿಸುತ್ತಾರೆ. ಕುಟುಂಬದಲ್ಲಿ ನೆಮ್ಮದಿ, ಸಂತೋಷ, ಸಮೃದ್ಧಿಗಾಗಿ ಉಪವಾಸವಿದ್ದು ದೇವಿಯನ್ನು ಆರಾಧಿಸಲಾಗುವುದು.
ಒಂದು ಶುಕ್ರವಾರ ಉಪವಾಸ ಆಚರಿಸಿದರೆ 16 ಶುಕ್ರವಾರ ಉಪವಾಸ ಆಚರಿಸಬೇಕು, 17ನೇ ಶುಕ್ರವಾರದಂದು 16 ವರ್ಷದ ಕೆಳಗಿನ ಹೆಣ್ಮಕ್ಕಳನ್ನು ಮನೆಗೆ ಆಹ್ವಾನಿಸಿ ಅವರಿಗೆ ಉಡುಗೊರೆ, ಹಣ್ಣುಗಳನ್ನು ನೀಡಿದರೆ ಉಪವಾಸ ಮುಕ್ತಾಯವಾಗುವುದು.

ಶುಕ್ರವಾರದಂದು ಲಕ್ಷ್ಮೀಯ ಆರಾಧನೆ
ಶುಕ್ರವಾರದಂದು ಲಕ್ಷ್ಮೀಯ ಆರಾಧನೆ ಮಾಡುವುದರಿಂದ ಸಂಪತ್ತು ವೃದ್ಧಿಯಾಗುವುದು. ಆರ್ಥಿಕ ಸಂಕಷ್ಟದಲ್ಲಿ ಇರುವವರು ಲಕ್ಷ್ಮೀಯ ಪೂಜೆ ಮಾಡುವುದರಿಂದ ಅವಳ ಕೃಪೆಯಿಂದ ಕಷ್ಟಗಳು ದೂರವಾಗುವುದು. ಲಕ್ಷ್ಮಿ ಪೂಜೆ ಮಾಡುವಾಗ ಕಲಸ ಇಡಬೇಕು ಜೊತೆಗೆ ಅಡಿಕೆಯನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಇಡಬೇಕು. ಪ್ರತೀ ಶುಕ್ರವಾರ ಅಡಿಕೆಯನ್ನು ಬದಲಾಯಿಸಬಹುದು. ಹೀಗೆ ಮಾಡುವುದರಿಂದ ಸಂಪತ್ತು, ಆರೋಗ್ಯ ವೃದ್ಧಿಯಾಗುವುದು.

ಶುಕ್ರವಾರದಂದು ಈ ಮಂತ್ರ ಪಠಿಸಿ
ಲಕ್ಷ್ಮೀ ಬೀಜಮಂತ್ರ 1
||ಓಂ ಹ್ರೀಂ ಶ್ರೀಂ ಲಕ್ಷ್ಮಿಭ್ಯೋ ನಮಃ|
ಲಕ್ಷ್ಮೀ ಬೀಜಮಂತ್ರ 2
||ಓಂ ಶ್ರಿಂಗ್ ಶ್ರೀಯೇ ನಮಃ||
ಲಕ್ಷ್ಮೀ ಗಾಯತ್ರಿ ಮಂತ್ರ
||ಓಂ ಶ್ರೀ ಮಹಾಲಕ್ಷ್ಮೈಚ ವಿದ್ಮಹೇ ವಿಷ್ಣು ಪತ್ನಯೇ ಚ ಧೀಮಹಿ ತನ್ನೋ ಲಕ್ಷ್ಮೀ ಪ್ರಚೋದಯಾತ್ ಓಂ||
ಇದನ್ನು 108 ಬಾರಿ ಪಠಿಸಿದರೆ ಒಳ್ಳೆಯದು.

ದಾನ ಮಾಡಿ
ದೇವಿಯನ್ನು ಪೂಜಿಸಿದಷ್ಟೇ ಫಲ ದಾನ ಮಾಡುವುದರಿಂದಲೂ ಸಿಗುವುದು. ಶುಕ್ರವಾರದಂದು ದೇವಾಲಯಕ್ಕೆ ಧೂಪ, ದ್ರವ್ಯಗಳನ್ನು ಅರ್ಪಿಸಿ. ಬಡವರಿಗೆ ದಾನ ಮಾಡಿ. ದಾನ ಮಾಡುವುದರಿಂದ ನಿಮ್ಮ ಪುಣ್ಯದ ಫಲ ಹೆಚ್ಚುವುದು.



Click it and Unblock the Notifications