Latest Updates
-
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ!
ನವರಾತ್ರಿಯಲ್ಲಿಈ ಕಾರ್ಯಗಳನ್ನು ಮಾಡಲೇಬಾರದು
ನವರಾತ್ರಿ ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದಾಗಿದೆ. ಒಂಭತ್ತು ದಿನ ನಡೆಯುವ ಈ ಆಚರಣೆಯಲ್ಲಿ ಪ್ರತಿಯೊಂದು ದಿನ ದೇವಿಯ ಒಂದೊಂದು ಸ್ವರೂಪವನ್ನು ಪೂಜಿಸ ಆರಾಧಿಸಲಾಗುವುದು.

ಈ ಹಬ್ಬದಲ್ಲಿ ಪೂಜೆ ಜೊತೆ ವ್ರತವನ್ನು ಮಾಡಲಾಗುವುದು. ಐಶ್ವರ್ಯ, ಸಂಪತ್ತು, ಆರೋಗ್ಯಕ್ಕಾಗಿ ದೇವಿಯನ್ನು ಆರಾಧಿಸಲಾಗುವುದು. ಈ ಒಂಭತ್ತು ದಿನಗಳಲ್ಲಿ ಕೆಲವೊಂದು ಕಾರ್ಯಗಳನ್ನು ಮಾಡಬಾರದು ಅಂತಾರೆ. ನವರಾತ್ರಿಯಲ್ಲಿ ಯಾವ ಕಾರ್ಯಗಳನ್ನು ಮಾಡಬಾರದು ನೋಡೋಣ ಬನ್ನಿ:

ಉಗುರು ಮತ್ತು ಕೂದಲನ್ನು ಕತ್ತರಿಸಬಾರದು
ನವರಾತ್ರಿಯಲ್ಲಿ ಉಗುರು ಮತ್ತು ಕೂದಲನ್ನು ಕತ್ತರಿಸುವುದರಿಂದ ದೇವಿಯ ಕೋಪಕ್ಕೆ ತುತ್ತಾಗುವರು ಎಂಬ ನಂಬಿಕೆ ಇದೆ. ಶೇವಿಂಗ್ ಮಾಡಬಹುದು ಆದರೆ ಕೂದಲನ್ನು ಕತ್ತರಿಸುವುದು ಒಳ್ಳೆಯದಲ್ಲ ಎಂದು ಹೇಳಲಾಗುವುದು.

ಮಾಂಸಾಹಾರ ಸೇವನೆ
ನವರಾತ್ರಿಯಲ್ಲಿ ಸಾತ್ವಿಕ ಆಹಾರ ಸೇವನೆ ಮಾಡಬೇಕು. ಮಾಂಸಾಹಾರ, ಈರುಳ್ಳಿ, ಬೆಳ್ಳುಳ್ಳಿ ಬಳಸುವುದು, ಮದ್ಯಪಾನ ಇವೆಲ್ಲಾ ನವರಾತ್ರಿ ಸಮಯದಲ್ಲಿ ವರ್ಜಿತ.

ನಿಂಬೆಹಣ್ಣನ್ನು ಕತ್ತರಿಸುವುದು
ನವರಾತ್ರಿ ಸಮಯದಲ್ಲಿ ನಿಂಬೆಹಣ್ಣು ಕತ್ತರಿಸಬಾರದು ಅಂತಾರೆ. ನಿಂಬೆರಸ ಬೇಕಿದ್ದರೆ ಹೊರಗಿನಿಂದ ಕೊಂಡು ಬಳಸಬಹುದು ಆದರೆ ಕತ್ತರಿಸಬಾರದು ಎಂಬ ನಂಬಿಕೆ ಇದೆ.

ಕರಿದ ಪದಾರ್ಥಗಳನ್ನು ಸೇವಿಸಬಾರದು
ನವರಾತ್ರಿಯ ಮುಖ್ಯ ಉದ್ದೇಶ ದೇಹದಲ್ಲಿರುವ ಕಶ್ಮಲಗಳನನ್ಉ ಹೊರಹಾಕುವುದು, ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ನವರಾತ್ರಿ ಸಮಯದಲ್ಲಿ ಬಳಸಬಾರದು.

ಹಸಿದ ಹೊಟ್ಟೆಯಲ್ಲಿ ಇರಬಾರದು
ನವರಾತ್ರಿಯಲ್ಲಿ ಉಪವಾಸ ಮಾಡಲಾಗುವುದು, ಆದರೆ ಹಸಿದ ಹೊಟ್ಟೆಯಲ್ಲಿ ಇರಬಾರದು. ಸ್ವಲ್ಪ ಹಣ್ಣು-ಹಂಪಲು ಇವುಗಳನ್ನು ತಿನ್ನಬೇಕು. ಹೊಟ್ಟೆ ಹಸಿದು ಇದ್ದರೆ ಅದು ದೇವಿಗ ಇಷ್ಟವಾಗುವುದಿಲ್ಲ ಎನ್ನಲಾಗುವುದು.

ಮಧ್ಯಾಹ್ನ ಹೊತ್ತು ಮಲಗುವುದು
ಮಧ್ಯಾಹ್ನದ ಹೊತ್ತು ಮಲಗುವುದು ಶುಭಕರವಲ್ಲ ಎಂದು ಹೇಳಲಾಗುವುದು. ಮಧ್ಯಾಹ್ನ ಮಲಗುವುದರಿಂದ ವ್ರತದಿಂದ ಗಳಿಸಿದ ಪುಣ್ಯ ಇಲ್ಲವಾಗುವುದು.

ದೀಪ ಕೆಡಬಾರದು
ನವರಾತ್ರಿ ಸಮಯದಲ್ಲಿ ರಾತ್ರಿ-ಹಗಲು ಹಚ್ಚಿದ ದೀಪ ಬೆಳಗುತ್ತಲೇ ಇರಬೇಕು. ದೀಪದಲ್ಲಿ ಎಣ್ಣೆ, ಬತ್ತಿ ಇದೆಯೇ ಆಗಾಗ ನೋಡುತ್ತಾ ದೀಪವನ್ನು ಆರದಂತೆ ನೋಡಿಕೊಳ್ಳಬೇಕು. ಹೀಗೆ ಮಾಡಿದ್ದೇ ಆದರೆ ಮನೆಗೆ ಅದೃಷ್ಟಲಕ್ಷ್ಮಿ ಒಲಿಯುವಳು.

ಜಗಳ ಆಡಬಾರದು
ನವರಾತ್ರಿಯಲ್ಲಿ ಯಾರ ಜೊತೆ ಜಗಳ ಆಡಬಾರದು, ಎಲ್ಲರನ್ನೂ ಪ್ರೀತಿ, ಗೌರವದಿಂದ ಕಾಣಬೇಕು ಎಂದು ಹೇಳಲಾಗುವುದು. ಬೇರೆಯವರ ಬಗ್ಗೆ ಕೆಟ್ಟದಾಗಿ ಹೇಳಿದರೆ ಇದರಿಂದ ನಮಗೇ ದೋಷ ಉಂಟಾಗುವುದು ಎಂದು ಹೇಳಲಾಗುವುದು.



Click it and Unblock the Notifications