Latest Updates
-
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ!
ನವರಾತ್ರಿಯಲ್ಲಿಈ ಕಾರ್ಯಗಳನ್ನು ಮಾಡಲೇಬಾರದು
ನವರಾತ್ರಿ ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದಾಗಿದೆ. ಒಂಭತ್ತು ದಿನ ನಡೆಯುವ ಈ ಆಚರಣೆಯಲ್ಲಿ ಪ್ರತಿಯೊಂದು ದಿನ ದೇವಿಯ ಒಂದೊಂದು ಸ್ವರೂಪವನ್ನು ಪೂಜಿಸ ಆರಾಧಿಸಲಾಗುವುದು.

ಈ ಹಬ್ಬದಲ್ಲಿ ಪೂಜೆ ಜೊತೆ ವ್ರತವನ್ನು ಮಾಡಲಾಗುವುದು. ಐಶ್ವರ್ಯ, ಸಂಪತ್ತು, ಆರೋಗ್ಯಕ್ಕಾಗಿ ದೇವಿಯನ್ನು ಆರಾಧಿಸಲಾಗುವುದು. ಈ ಒಂಭತ್ತು ದಿನಗಳಲ್ಲಿ ಕೆಲವೊಂದು ಕಾರ್ಯಗಳನ್ನು ಮಾಡಬಾರದು ಅಂತಾರೆ. ನವರಾತ್ರಿಯಲ್ಲಿ ಯಾವ ಕಾರ್ಯಗಳನ್ನು ಮಾಡಬಾರದು ನೋಡೋಣ ಬನ್ನಿ:

ಉಗುರು ಮತ್ತು ಕೂದಲನ್ನು ಕತ್ತರಿಸಬಾರದು
ನವರಾತ್ರಿಯಲ್ಲಿ ಉಗುರು ಮತ್ತು ಕೂದಲನ್ನು ಕತ್ತರಿಸುವುದರಿಂದ ದೇವಿಯ ಕೋಪಕ್ಕೆ ತುತ್ತಾಗುವರು ಎಂಬ ನಂಬಿಕೆ ಇದೆ. ಶೇವಿಂಗ್ ಮಾಡಬಹುದು ಆದರೆ ಕೂದಲನ್ನು ಕತ್ತರಿಸುವುದು ಒಳ್ಳೆಯದಲ್ಲ ಎಂದು ಹೇಳಲಾಗುವುದು.

ಮಾಂಸಾಹಾರ ಸೇವನೆ
ನವರಾತ್ರಿಯಲ್ಲಿ ಸಾತ್ವಿಕ ಆಹಾರ ಸೇವನೆ ಮಾಡಬೇಕು. ಮಾಂಸಾಹಾರ, ಈರುಳ್ಳಿ, ಬೆಳ್ಳುಳ್ಳಿ ಬಳಸುವುದು, ಮದ್ಯಪಾನ ಇವೆಲ್ಲಾ ನವರಾತ್ರಿ ಸಮಯದಲ್ಲಿ ವರ್ಜಿತ.

ನಿಂಬೆಹಣ್ಣನ್ನು ಕತ್ತರಿಸುವುದು
ನವರಾತ್ರಿ ಸಮಯದಲ್ಲಿ ನಿಂಬೆಹಣ್ಣು ಕತ್ತರಿಸಬಾರದು ಅಂತಾರೆ. ನಿಂಬೆರಸ ಬೇಕಿದ್ದರೆ ಹೊರಗಿನಿಂದ ಕೊಂಡು ಬಳಸಬಹುದು ಆದರೆ ಕತ್ತರಿಸಬಾರದು ಎಂಬ ನಂಬಿಕೆ ಇದೆ.

ಕರಿದ ಪದಾರ್ಥಗಳನ್ನು ಸೇವಿಸಬಾರದು
ನವರಾತ್ರಿಯ ಮುಖ್ಯ ಉದ್ದೇಶ ದೇಹದಲ್ಲಿರುವ ಕಶ್ಮಲಗಳನನ್ಉ ಹೊರಹಾಕುವುದು, ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ನವರಾತ್ರಿ ಸಮಯದಲ್ಲಿ ಬಳಸಬಾರದು.

ಹಸಿದ ಹೊಟ್ಟೆಯಲ್ಲಿ ಇರಬಾರದು
ನವರಾತ್ರಿಯಲ್ಲಿ ಉಪವಾಸ ಮಾಡಲಾಗುವುದು, ಆದರೆ ಹಸಿದ ಹೊಟ್ಟೆಯಲ್ಲಿ ಇರಬಾರದು. ಸ್ವಲ್ಪ ಹಣ್ಣು-ಹಂಪಲು ಇವುಗಳನ್ನು ತಿನ್ನಬೇಕು. ಹೊಟ್ಟೆ ಹಸಿದು ಇದ್ದರೆ ಅದು ದೇವಿಗ ಇಷ್ಟವಾಗುವುದಿಲ್ಲ ಎನ್ನಲಾಗುವುದು.

ಮಧ್ಯಾಹ್ನ ಹೊತ್ತು ಮಲಗುವುದು
ಮಧ್ಯಾಹ್ನದ ಹೊತ್ತು ಮಲಗುವುದು ಶುಭಕರವಲ್ಲ ಎಂದು ಹೇಳಲಾಗುವುದು. ಮಧ್ಯಾಹ್ನ ಮಲಗುವುದರಿಂದ ವ್ರತದಿಂದ ಗಳಿಸಿದ ಪುಣ್ಯ ಇಲ್ಲವಾಗುವುದು.

ದೀಪ ಕೆಡಬಾರದು
ನವರಾತ್ರಿ ಸಮಯದಲ್ಲಿ ರಾತ್ರಿ-ಹಗಲು ಹಚ್ಚಿದ ದೀಪ ಬೆಳಗುತ್ತಲೇ ಇರಬೇಕು. ದೀಪದಲ್ಲಿ ಎಣ್ಣೆ, ಬತ್ತಿ ಇದೆಯೇ ಆಗಾಗ ನೋಡುತ್ತಾ ದೀಪವನ್ನು ಆರದಂತೆ ನೋಡಿಕೊಳ್ಳಬೇಕು. ಹೀಗೆ ಮಾಡಿದ್ದೇ ಆದರೆ ಮನೆಗೆ ಅದೃಷ್ಟಲಕ್ಷ್ಮಿ ಒಲಿಯುವಳು.

ಜಗಳ ಆಡಬಾರದು
ನವರಾತ್ರಿಯಲ್ಲಿ ಯಾರ ಜೊತೆ ಜಗಳ ಆಡಬಾರದು, ಎಲ್ಲರನ್ನೂ ಪ್ರೀತಿ, ಗೌರವದಿಂದ ಕಾಣಬೇಕು ಎಂದು ಹೇಳಲಾಗುವುದು. ಬೇರೆಯವರ ಬಗ್ಗೆ ಕೆಟ್ಟದಾಗಿ ಹೇಳಿದರೆ ಇದರಿಂದ ನಮಗೇ ದೋಷ ಉಂಟಾಗುವುದು ಎಂದು ಹೇಳಲಾಗುವುದು.



Click it and Unblock the Notifications