Latest Updates
-
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ!
ನಾಗರ ಪಂಚಮಿ 2021: ಈ ದಿನ ಹುತ್ತಕ್ಕೆ ಹಾಲೆರೆಯುವುದು ಏಕೆ?
ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿ. ಆಟಿ ಅಮವಾಸ್ಯೆಯಾಗಿ ಐದನೇ ದಿನಕ್ಕೆ ಈ ಹಬ್ಬ ಆಚರಿಸಲಾಗುವುದು. ನಾಡಿನ ದೊಡ್ಡ ಹಬ್ಬವೆಂದೇ ಕರೆಯಲ್ಪಡುವ ನಾಗರ ಪಂಚಮಿ ಈ ವರ್ಷದಲ್ಲಿ ಬರುವ ಉಳಿದೆಲ್ಲಾ ಹಬ್ಬಗಳಿಗೆ ಮುನ್ನುಡಿಯಾಗಿ ಬರುವ ಹಬ್ಬವಾಗಿದೆ. ಈ ಹಬ್ಬದಂದು ಹುತ್ತಕ್ಕೆ ಹಾಲೆರೆಯುವ ಸಂಪ್ರದಾಯವಿದೆ.
ಜನರು ಹುತ್ತಕ್ಕೆ ಹಾಲೆರೆಯುವುದರ ಹಿಂದಿರುವ ಧಾರ್ಮಿಕ ಮಹತ್ವವೇನು, ಪೌರಾಣಿಕ ಕತೆಗಳು ಏನು ಹೇಳುತ್ತವೆ ಎಂದು ನೋಡೋಣ ಬನ್ನಿ:

ಶ್ರಾವಣ ಮಾಸದ ಮೊದಲ ಹಬ್ಬ
ಶ್ರಾವಣ ಮಾಸವೆಂದರೆ ಅದು ಸಂಪೂರ್ಣವಾಗಿ ಶಿವನಿಗೆ ಮೀಸಲಾಗಿರುವ ಮಾಸ. ಶಿವನ ಕೊರಳಿನಲ್ಲಿ ನಾಗ ಇರುತ್ತಾನೆ. ನಾಗರ ಪಂಚಮಿಯಂದು ನಾಗನಿಗೆ ಪೂಜೆಯನ್ನು ಸಲ್ಲಿಸಿ ಆಶೀರ್ವದಿಸುವಂತೆ ಪ್ರಾರ್ಥಿಸಲಾಗುವುದು. ಇನ್ನು ನಾವು ಆಚರಿಸುವ ಎಲ್ಲಾ ಹಬ್ಬಗಳು ರೈತನ ಜೀವನದೊಂದಿಗೆ ಸಂಬಂಧ ಹೊಂದಿದೆ. ಹಾವುಗಳು ರೈತನ ಸ್ನೇಹಿಯಾಗಿವೆ. ಹೊಲದಲ್ಲಿರುವ ಹುಳ-ಹುಪ್ಪಟೆಗಳನ್ನು ಹಾವುಗಳು ತಿನ್ನುತ್ತವೆ, ಇದರಿಂದ ಬೆಳೆ ನಾಶವಾಗುವುದನ್ನು ತಡೆಗಟ್ಟುತ್ತೆ. ನಾಗರ ಪಂಚಮಿಯಲ್ಲಿ ಅವುಗಳನ್ನು ಅವುಗಳನ್ನು ಪೂಜಿಸಿ ಕೃತಜ್ಞತೆ ಸಲ್ಲಿಸುವ ಒಂದು ವಿಧಾನ ಕೂಡ ಆಗಿದೆ.

ಪೌರಾಣಿಕ ಕತೆ
ನಾಗರ ಪಂಚಮಿಯಲ್ಲಿ ಇರುವ ಒಂದು ಪ್ರಮುಖವಾದ ಸಂಪ್ರದಾಯವೆಂದರೆ ಹುತ್ತಕ್ಕೆ ಹಾಲೆರೆಯುವುದು. ಹುತ್ತಕ್ಕೆ ಹಾಲೆರೆಯುವುದರ ಹಿಂದೆ ಪೌರಾಣಿಕ ಕತೆಗಳಿವೆ.
ಒಂದು ಕತೆಯಲ್ಲಿ ಶ್ರೀಕೃಷ್ಣನು ನಾಗ ಕಾಳಿಂಗನನ್ನು ಸೋಲಿಸಿದ ಬಳಿಕ ನಿನಗೆ ನಾಗರ ಪಂಚಮಿಗೆ ಜನರು ಹಾಲೆರೆದು ಪೂಜಿಸುವಂತಾಗಲಿ ಎಂದು ಆಶೀರ್ವದಿಸುತ್ತಾನೆ. ಈ ದಿನ ಯಾರು ಹಾವಿಗೆ ಹಾಲೆರೆಯುತ್ತಾರೋ ಅವರಿಗೆ ಪಾಪಗಳಿಂದ ಮೋಕ್ಷ ಸಿಗುವುದು ಎಂದು ಹೇಳಲಾಗಿದೆ.

ಮತ್ತೊಂದು ಪೌರಾಣಿಕ ಕತೆಯ ಪ್ರಕಾರ
ಮತ್ತೊಂದು ಕತೆಯ ಪ್ರಕಾರ ದೇವತೆಗಳು-ದಾನವರು ಸಮುದ್ರ ಮಂಥನ ಮಾಡುತ್ತಿರುವಾಗ ಕ್ಷೀರ ಸಾಗರದಲ್ಲಿ ಹಾಲಾಹಲ ವಿಷ ಉತ್ಪತ್ತಿಯಾಗಿತ್ತದೆ, ಆ ವಿಷ ಜಗತ್ತನ್ನೇ ಸುಡಲಾರಂಭಿಸಿದಾಗ ಎಲ್ಲರೂ ಶಿವನ ಮೊರೆ ಹೋಗುತ್ತಾರೆ, ಆಗ ಶಿವ ಆ ವಿಷವನ್ನು ಗಟ-ಗಟನೆ ಕುಡಿಯುತ್ತಾನೆ, ಅದರಲ್ಲಿ ಸ್ವಲ್ಪ ಹನಿ ಭೂ ಲೋಕಕ್ಕೆ ಬೀಳುತ್ತೆ, ಅದನ್ನು ಹಾವುಗಳು ಕುಡಿಯುತ್ತವೆ. ಹಾಲಾಹಲ ಕುಡಿದ ಶಿವನ ದೇಹದ ಉರಿ ಕಡಿಮೆ ಮಾಡಲು ಇಂದ್ರನು ಮಳೆ ಸರಿಸುತ್ತಾನೆ, ದೇವತೆಗಳು ಅವನಿಗೆ ರುದ್ರಾಭಿಷೇಕ ಮಾಡುತ್ತಾರೆ. ಭೂಮಿಯಲ್ಲಿರುವ ಹಾವುಗಳಿಗೆ ಹಾಲೆರೆಯಲಾಗುವುದು, ಆ ಶುಭ ದಿನವೇ ನಾಗರ ಪಂಚಮಿ ಎಂದು ಹೇಳಲಾಗುವುದು.

ಜನರು ಹುತ್ತಕ್ಕೆ ಹಾಲೆರೆಯುವುದರ ಹಿಂದಿರುವ ಧಾರ್ಮಿಕ ಮಹತ್ವ
* ನಾಗರ ಪಂಚಮಿಗೆ ಹುತ್ತಕ್ಕೆ ಹಾಲೆರೆದರೆ ನಾಗ ದೇವತೆಯು ಕುಟುಂಬವನ್ನು ದುಷ್ಟ ಶಕ್ತಿಗಳಿಂದ ರಕ್ಷಿಸುತ್ತದೆ ಎಂಬ ನಂಬಿಕೆಯಿದೆ.
* ರಾಹು ಹಾಗೂ ಕೇತುವಿನ ಸ್ಥಾನದಿಂದ ಉಂಟಾದ ಕಾಳಸರ್ಪ ದೋಷ ನಿವಾರಣೆಗಾಗಿ ನಾಗರ ಪಂಚಮಿಯೆಂದು ಹುತ್ತಕ್ಕೆ ಹಾಲೆರೆಯುತ್ತಾರೆ.
* ಶಿವ ಹಾವನ್ನು ಕೊರಳಿಗೆ ಸುತ್ತಿದರೆ, ವಿಷ್ಣು ಹಾವಿನ ಮೇಲೆಯೇ ಮಲಗುತ್ತಾನೆ, ಇನ್ನು ಶ್ರೀ ಕೃಷ್ಣ ಮಗುವಾಗಿದ್ದಾಗ ಹಾವು ಎಡೆ ಬಿಡಿಸಿ ಮಗುವಿಗೆ ಮಳೆಯಿಂದ ರಕ್ಷಣೆ ನೀಡಿದ ಕತೆಯಿದೆ.. ಹೀಗೆ ನಮ್ಮ ಎಲ್ಲಾ ಪೌರಾಣಿಕ ಕತೆಯಲ್ಲಿ ಹಾವು ದೇವತೆಗಳ ಸಹಾಯಕನಾಗಿದೆ.
ನಾಗನಿಗೆ ಹಾಲೆರೆಯುವುದರಿಂದ ನಾಗ ದೇವತೆಯ ಆಶೀರ್ವಾದ ನಮ್ಮ ಮೇಲಿರುತ್ತದೆ, ಇದರಿಂದ ಬದುಕಿನಲ್ಲಿ ಸಂತೋಷ, ಸಡಗರ ತುಂಬಿರುತ್ತದೆ ಎಂಬ ನಂಬಿಕೆಯಿಂದ ಜನರು ನಾಗರ ಪಂಚಮಿ ಹಬ್ಬದಂದು ಹುತ್ತಕ್ಕೆ ಹಾಲೆರೆಯುತ್ತಾರೆ.



Click it and Unblock the Notifications