Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ನಾಗರ ಪಂಚಮಿ 2021: ಈ ದಿನ ಹುತ್ತಕ್ಕೆ ಹಾಲೆರೆಯುವುದು ಏಕೆ?
ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿ. ಆಟಿ ಅಮವಾಸ್ಯೆಯಾಗಿ ಐದನೇ ದಿನಕ್ಕೆ ಈ ಹಬ್ಬ ಆಚರಿಸಲಾಗುವುದು. ನಾಡಿನ ದೊಡ್ಡ ಹಬ್ಬವೆಂದೇ ಕರೆಯಲ್ಪಡುವ ನಾಗರ ಪಂಚಮಿ ಈ ವರ್ಷದಲ್ಲಿ ಬರುವ ಉಳಿದೆಲ್ಲಾ ಹಬ್ಬಗಳಿಗೆ ಮುನ್ನುಡಿಯಾಗಿ ಬರುವ ಹಬ್ಬವಾಗಿದೆ. ಈ ಹಬ್ಬದಂದು ಹುತ್ತಕ್ಕೆ ಹಾಲೆರೆಯುವ ಸಂಪ್ರದಾಯವಿದೆ.
ಜನರು ಹುತ್ತಕ್ಕೆ ಹಾಲೆರೆಯುವುದರ ಹಿಂದಿರುವ ಧಾರ್ಮಿಕ ಮಹತ್ವವೇನು, ಪೌರಾಣಿಕ ಕತೆಗಳು ಏನು ಹೇಳುತ್ತವೆ ಎಂದು ನೋಡೋಣ ಬನ್ನಿ:

ಶ್ರಾವಣ ಮಾಸದ ಮೊದಲ ಹಬ್ಬ
ಶ್ರಾವಣ ಮಾಸವೆಂದರೆ ಅದು ಸಂಪೂರ್ಣವಾಗಿ ಶಿವನಿಗೆ ಮೀಸಲಾಗಿರುವ ಮಾಸ. ಶಿವನ ಕೊರಳಿನಲ್ಲಿ ನಾಗ ಇರುತ್ತಾನೆ. ನಾಗರ ಪಂಚಮಿಯಂದು ನಾಗನಿಗೆ ಪೂಜೆಯನ್ನು ಸಲ್ಲಿಸಿ ಆಶೀರ್ವದಿಸುವಂತೆ ಪ್ರಾರ್ಥಿಸಲಾಗುವುದು. ಇನ್ನು ನಾವು ಆಚರಿಸುವ ಎಲ್ಲಾ ಹಬ್ಬಗಳು ರೈತನ ಜೀವನದೊಂದಿಗೆ ಸಂಬಂಧ ಹೊಂದಿದೆ. ಹಾವುಗಳು ರೈತನ ಸ್ನೇಹಿಯಾಗಿವೆ. ಹೊಲದಲ್ಲಿರುವ ಹುಳ-ಹುಪ್ಪಟೆಗಳನ್ನು ಹಾವುಗಳು ತಿನ್ನುತ್ತವೆ, ಇದರಿಂದ ಬೆಳೆ ನಾಶವಾಗುವುದನ್ನು ತಡೆಗಟ್ಟುತ್ತೆ. ನಾಗರ ಪಂಚಮಿಯಲ್ಲಿ ಅವುಗಳನ್ನು ಅವುಗಳನ್ನು ಪೂಜಿಸಿ ಕೃತಜ್ಞತೆ ಸಲ್ಲಿಸುವ ಒಂದು ವಿಧಾನ ಕೂಡ ಆಗಿದೆ.

ಪೌರಾಣಿಕ ಕತೆ
ನಾಗರ ಪಂಚಮಿಯಲ್ಲಿ ಇರುವ ಒಂದು ಪ್ರಮುಖವಾದ ಸಂಪ್ರದಾಯವೆಂದರೆ ಹುತ್ತಕ್ಕೆ ಹಾಲೆರೆಯುವುದು. ಹುತ್ತಕ್ಕೆ ಹಾಲೆರೆಯುವುದರ ಹಿಂದೆ ಪೌರಾಣಿಕ ಕತೆಗಳಿವೆ.
ಒಂದು ಕತೆಯಲ್ಲಿ ಶ್ರೀಕೃಷ್ಣನು ನಾಗ ಕಾಳಿಂಗನನ್ನು ಸೋಲಿಸಿದ ಬಳಿಕ ನಿನಗೆ ನಾಗರ ಪಂಚಮಿಗೆ ಜನರು ಹಾಲೆರೆದು ಪೂಜಿಸುವಂತಾಗಲಿ ಎಂದು ಆಶೀರ್ವದಿಸುತ್ತಾನೆ. ಈ ದಿನ ಯಾರು ಹಾವಿಗೆ ಹಾಲೆರೆಯುತ್ತಾರೋ ಅವರಿಗೆ ಪಾಪಗಳಿಂದ ಮೋಕ್ಷ ಸಿಗುವುದು ಎಂದು ಹೇಳಲಾಗಿದೆ.

ಮತ್ತೊಂದು ಪೌರಾಣಿಕ ಕತೆಯ ಪ್ರಕಾರ
ಮತ್ತೊಂದು ಕತೆಯ ಪ್ರಕಾರ ದೇವತೆಗಳು-ದಾನವರು ಸಮುದ್ರ ಮಂಥನ ಮಾಡುತ್ತಿರುವಾಗ ಕ್ಷೀರ ಸಾಗರದಲ್ಲಿ ಹಾಲಾಹಲ ವಿಷ ಉತ್ಪತ್ತಿಯಾಗಿತ್ತದೆ, ಆ ವಿಷ ಜಗತ್ತನ್ನೇ ಸುಡಲಾರಂಭಿಸಿದಾಗ ಎಲ್ಲರೂ ಶಿವನ ಮೊರೆ ಹೋಗುತ್ತಾರೆ, ಆಗ ಶಿವ ಆ ವಿಷವನ್ನು ಗಟ-ಗಟನೆ ಕುಡಿಯುತ್ತಾನೆ, ಅದರಲ್ಲಿ ಸ್ವಲ್ಪ ಹನಿ ಭೂ ಲೋಕಕ್ಕೆ ಬೀಳುತ್ತೆ, ಅದನ್ನು ಹಾವುಗಳು ಕುಡಿಯುತ್ತವೆ. ಹಾಲಾಹಲ ಕುಡಿದ ಶಿವನ ದೇಹದ ಉರಿ ಕಡಿಮೆ ಮಾಡಲು ಇಂದ್ರನು ಮಳೆ ಸರಿಸುತ್ತಾನೆ, ದೇವತೆಗಳು ಅವನಿಗೆ ರುದ್ರಾಭಿಷೇಕ ಮಾಡುತ್ತಾರೆ. ಭೂಮಿಯಲ್ಲಿರುವ ಹಾವುಗಳಿಗೆ ಹಾಲೆರೆಯಲಾಗುವುದು, ಆ ಶುಭ ದಿನವೇ ನಾಗರ ಪಂಚಮಿ ಎಂದು ಹೇಳಲಾಗುವುದು.

ಜನರು ಹುತ್ತಕ್ಕೆ ಹಾಲೆರೆಯುವುದರ ಹಿಂದಿರುವ ಧಾರ್ಮಿಕ ಮಹತ್ವ
* ನಾಗರ ಪಂಚಮಿಗೆ ಹುತ್ತಕ್ಕೆ ಹಾಲೆರೆದರೆ ನಾಗ ದೇವತೆಯು ಕುಟುಂಬವನ್ನು ದುಷ್ಟ ಶಕ್ತಿಗಳಿಂದ ರಕ್ಷಿಸುತ್ತದೆ ಎಂಬ ನಂಬಿಕೆಯಿದೆ.
* ರಾಹು ಹಾಗೂ ಕೇತುವಿನ ಸ್ಥಾನದಿಂದ ಉಂಟಾದ ಕಾಳಸರ್ಪ ದೋಷ ನಿವಾರಣೆಗಾಗಿ ನಾಗರ ಪಂಚಮಿಯೆಂದು ಹುತ್ತಕ್ಕೆ ಹಾಲೆರೆಯುತ್ತಾರೆ.
* ಶಿವ ಹಾವನ್ನು ಕೊರಳಿಗೆ ಸುತ್ತಿದರೆ, ವಿಷ್ಣು ಹಾವಿನ ಮೇಲೆಯೇ ಮಲಗುತ್ತಾನೆ, ಇನ್ನು ಶ್ರೀ ಕೃಷ್ಣ ಮಗುವಾಗಿದ್ದಾಗ ಹಾವು ಎಡೆ ಬಿಡಿಸಿ ಮಗುವಿಗೆ ಮಳೆಯಿಂದ ರಕ್ಷಣೆ ನೀಡಿದ ಕತೆಯಿದೆ.. ಹೀಗೆ ನಮ್ಮ ಎಲ್ಲಾ ಪೌರಾಣಿಕ ಕತೆಯಲ್ಲಿ ಹಾವು ದೇವತೆಗಳ ಸಹಾಯಕನಾಗಿದೆ.
ನಾಗನಿಗೆ ಹಾಲೆರೆಯುವುದರಿಂದ ನಾಗ ದೇವತೆಯ ಆಶೀರ್ವಾದ ನಮ್ಮ ಮೇಲಿರುತ್ತದೆ, ಇದರಿಂದ ಬದುಕಿನಲ್ಲಿ ಸಂತೋಷ, ಸಡಗರ ತುಂಬಿರುತ್ತದೆ ಎಂಬ ನಂಬಿಕೆಯಿಂದ ಜನರು ನಾಗರ ಪಂಚಮಿ ಹಬ್ಬದಂದು ಹುತ್ತಕ್ಕೆ ಹಾಲೆರೆಯುತ್ತಾರೆ.



Click it and Unblock the Notifications