Just In
- 2 min ago ದುಬೈ ಪ್ರವಾಹದ ವೈರಲ್ ವೀಡಿಯೋಗಳು: ಒಂದೊಂದು ದೃಶ್ಯವೂ ಬದುಕಿನ ಪಾಠ ಹೇಳುತ್ತೆ
- 3 hrs ago ಎಳ ನೀರು ಹಾಕಿ ಮಾಡುವ 2 ದೋಸೆ ರೆಸಿಪಿ: ರುಚಿ ಸೂಪರ್, ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- 6 hrs ago ಬೇಸಿಗೆಯಲ್ಲಿ ದಿನಾ ಎಳನೀರು ಕುಡಿದರೆ ಏನಾಗುತ್ತೆ? ಯಾವ ಸಮಯದಲ್ಲಿ ಎಳನೀರು ಕುಡಿಯಬೇಕು?
- 14 hrs ago ಮೀನ ರಾಶಿಗೆ ಮಂಗಳ ಸಂಚಾರ: ಈ 5 ರಾಶಿಯವರು ವೃತ್ತಿ ಬದುಕಿನಲ್ಲಿ ಜಾಗ್ರತೆ
Don't Miss
- News ರಾಜ್ಯದಲ್ಲಿ ಮೊದಲ ಬಾರಿಗೆ ಲೈಂಗಿಕ ದೌರ್ಜನ್ಯಕ್ಕೊಳಗಾದ ಬಾಲಕನಿಗೆ ₹1 ಲಕ್ಷ ಪರಿಹಾರ-ಯಾವ ಜಿಲ್ಲೆಯಲ್ಲಿ?
- Movies ಶಿವಣ್ಣ ಹಾಗೂ ಗೀತಾ ಶಿವರಾಜ್ಕುಮಾರ್ ಹಣೆಯ ಕುಂಕುಮ ಅಳಿಸಿದ್ದು ನಿಜವೇ?
- Automobiles Tata: ಮಧ್ಯಮ ವರ್ಗದವರಿಗೆ ಸಿಹಿಸುದ್ದಿ.. ಮುಂಬರಲಿರುವ ಟಾಟಾ ಕಾರುಗಳಿವು, ಒಂದಕ್ಕಿಂತ ಒಂದು ಭರ್ಜರಿಯಾಗಿವೆ!
- Finance Shilpa Shetty: ಇಡಿಯಿಂದ ನಟಿ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ಅವರ 98 ಕೋಟಿ ಮೌಲ್ಯದ 2 ಫ್ಲಾಟ್, ಷೇರು ವಶ
- Technology Realme: ರಿಯಲ್ಮಿ C65 5G ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! 6.67″ 120Hz ಡಿಸ್ಪ್ಲೆ...
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹಿಂದೂ ಧರ್ಮದ ಭಾವೈಕ್ಯತೆಯ ಹಬ್ಬ: ನಾಗರಪಂಚಮಿ
ಹಿಂದೂ ಸಂಪ್ರದಾಯದಲ್ಲಿ ಹಲವು ಪ್ರಾಣಿಗಳೂ ಪೂಜ್ಯಸ್ಥಾನ ಪಡೆದಿವೆ. ಗೋವು, ಕೋತಿ, ನಂದಿ, ಮೊದಲಾದವುಗಳನ್ನು ನಾವು ದೇವರಿಗೆ ಸಮಾನವಾಗಿ ಕಾಣುತ್ತೇವೆ. ಮನೆಯ ಪ್ರಾರಂಭೋತ್ಸವದಲ್ಲಿಯೂ ಗೋವನ್ನು ಮನೆಯೊಳಗೆ ತರುತ್ತಾರೆ. ರಾಜಸ್ಥಾನದಲ್ಲಿ ಇಲಿಗಳಿಗಾಗಿಯೇ ಒಂದು ದೇವಾಲಯವಿದೆ! ಪೂಜೆಗೊಳಪಡುವ ಇನ್ನೊಂದು ಜೀವಿಯೆಂದರೆ ಹಾವು.
ಪುರಾತನಕಾಲದಿಂದಲೂ ದೇವರ ಶಕ್ತಿಯ ವಿವಿಧ ರೂಪಗಳನ್ನು ಆರಾಧಿಸುವ ಹಿಂದೂಗಳು ಶ್ರಾವಣ ಮಾಸದ ಐದನೆಯ ದಿನ ಅರ್ಧಚಂದ್ರನಿರುವ ರಾತ್ರಿಹೊತ್ತಿನಲ್ಲಿ ನಾಗದೇವತೆಗೆ ಪೂಜೆ ಸಲ್ಲಿಸುವ ಮೂಲಕ ನಾಗಪಂಚಮಿಯನ್ನು ಆಚರಿಸುತ್ತಾರೆ. ಶ್ರಾವಣ ಮಾಸ ಹಿಂದೂ ಕ್ಯಾಲೆಂಡರ್ನ ಒಂದು ಮಾಸವಾಗಿದ್ದು ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಜುಲೈ ಆಗಸ್ಟ್ ತಿಂಗಳಲ್ಲಿ ಆಗಮಿಸುತ್ತದೆ. ನಾಗರಪಂಚಮಿ ವಿಶೇಷ: ಘಮಘಮಿಸುವ ನುಚ್ಚಿನುಂಡೆ ರೆಸಿಪಿ
ಈ
ಹಬ್ಬವನ್ನು
ಇದೇ
ತಿಂಗಳುಗಳಲ್ಲಿ
ಆಚರಿಸಲು
ಹಿಂದಿರುವ
ಪ್ರಧಾನ
ಕಾರಣವೆಂದರೆ,
ಈ
ಸಮಯದಲ್ಲಿ
ಹಾವುಗಳು
ಜನರಿಗೆ
ಭಯಭೀತಿಯನ್ನುಂಟು
ಮಾಡಿರುತ್ತವೆ.
ಮಳೆಯ
ಕಾರಣದಿಂದ
ಬಿಲಗಳಲ್ಲಿ
ನೀರು
ತುಂಬಿಕೊಂಡಾಗ
ಹೊರ
ಬರುವ
ಹಾವುಗಳು
ಜನರಿಗೆ
ಅಪಾಯವನ್ನುಂಟು
ಮಾಡುವ
ಸಾಧ್ಯತೆ
ಹೆಚ್ಚಿರುತ್ತದೆ.
ಹಾಗಾಗಿ
ಈ
ಸಮಯದಲ್ಲಿ
ಹಾವುಗಳಿಗೆ
ಹಾಲೆರೆದು
ಪೂಜಿಸಲಾಗುತ್ತದೆ.
ಬನ್ನಿ
ನಾಗರಪಂಚಮಿ
ಆಚರಿಸುವ
ಹಿಂದಿರುವ
ರಹಸ್ಯವೇನು
ಎಂಬುದನ್ನು
ನೋಡೋಣ...
ನಾಗರಪಂಚಮಿ
:
ಅಚ್ಚ
ಕನ್ನಡ
ಅಣ್ಣ-ತಂಗಿಯರ
ಹಬ್ಬ
ಹಬ್ಬದ ಹಿಂದಿನ ಕಥೆ
ಪುರಾಣದಲ್ಲಿ ಬರುವ ಕಥೆಯೊಂದರ ಪ್ರಕಾರ ಕಾಲಿಯಾ ಅಥವಾ ಕಾಳಿಯಾ ಎಂಬ ಭಯಂಕರ ಸರ್ಪದ ಧಾಳಿಯಿಂದ ಜನರನ್ನು ಭಗವಂತ ಶ್ರೀಕೃಷ್ಣ ರಕ್ಷಿಸುತ್ತಾನೆ. ಕೃಷ್ಣ ಆಗಿನ್ನೂ ಬಾಲಕನಾಗಿದ್ದಾಗ ಯಮುನಾ ನದಿ ತೀರದಲ್ಲಿ ಆಡುತ್ತಿದ್ದಾಗ ಚೆಂಡು ಹೋಗಿ ತೀರದಲ್ಲಿ ಬೆಳೆದು ನದಿಯೆಡೆಗೆ ಚಾಚಿದ್ದ ಕೊಂಬೆಯೊಂದರಲ್ಲಿ ಸಿಕ್ಕಿಕೊಳ್ಳುತ್ತದೆ. ಮುಂದೆ ಓದಿ
ಹಬ್ಬದ ಹಿಂದಿನ ಕಥೆ
ಈ ಚೆಂಡನ್ನು ತೆಗೆಯುವ ಪ್ರಯತ್ನದಲ್ಲಿ ಚೆಂಡು ನೀರಿಗೆ ಬೀಳುತ್ತದೆ. ಚೆಂಡನ್ನು ಹಿಡಿಯಲು ಕೃಷ್ಣನೂ ನೀರಿಗೆ ಧುಮುಕುತ್ತಾನೆ.ಆಗ ನೀರಿನಲ್ಲಿದ್ದ ಕಾಲಿಂಗ ಕೃಷ್ಣನ ಮೇಲೆ ಧಾಳಿ ನಡೆಸುತ್ತಾನೆ. ಯಾವುದೋ ಬಾಲಕ ಎಂದು ಉಡಾಫೆಯಲ್ಲಿದ್ದ ಕಾಲಿಂಗ ಹಾವುಗೆ ಈತ ಸಾಮಾನ್ಯನಲ್ಲ ಎಂದು ಕೊಂಚಕಾಲದಲ್ಲಿಯೇ ಅರಿವಿಗೆ ಬರುತ್ತದೆ.
ಹಬ್ಬದ ಹಿಂದಿನ ಕಥೆ
ಕೂಡಲೇ ಕೃಷ್ಣನಿಗೆ ಶರಣಾಗತನಾದ ಕಾಲಿಯ ಇನ್ನೆಂದೂ ತೊಂದರೆ ಕೊಡಲಾರೆ ಎಂದು ಪ್ರಮಾಣ ಮಾಡಿದನಂತೆ. ಕಾಲಿಯಾನ ಮೇಲೆ ಕೃಷ್ಣ ಸಾಧಿಸಿದ ವಿಜಯವನ್ನು ನಾಗಪಂಚಮಿಯ ಮೂಲಕ ಅಂದಿನಿಂದ ಆಚರಿಸುವ ಪದ್ಧತಿ ನಡೆದುಕೊಂಡು ಬಂದಿದೆ.
ಹಬ್ಬದ ಆಚರಣೆಯ ವಿಧಾನ
ಹಬ್ಬದ ದಿನದಂದು ಜನರು ಉಳುಮೆ ಸಹಿತ ಯಾವುದೇ ನೆಲವನ್ನು ಅಗಿಯುವ ಕೆಲಸವನ್ನು ಮಾಡುವುದಿಲ್ಲ. ನಾಗರ ಕಲ್ಲಿಗೆ ಹಸುವಿನ ಹಾಲು, ಹುರಿದ ಭತ್ತ (ಅರಳು), ಭತ್ತದ ತೆನೆ ಮತ್ತು ದೂರ್ವ ಅಥವಾ ಗರಿಕೆ (ಎಳೆಹುಲ್ಲಿನ ತುರಿಭಾಗ) ಯನ್ನು ಅರ್ಪಿಸಿ ನಾಗನನ್ನು ಪೂಜಿಸಲಾಗುತ್ತದೆ.
ಹಬ್ಬದ ಆಚರಣೆಯ ವಿಧಾನ
ಭಾರತದಾದ್ಯಂತ ಎಲ್ಲೆಡೆ ಇದೇ ವಿಧಾನವನ್ನು ಅನುಸರಿಸಲಾಗುತ್ತದೆ. ಕೆಲವೆಡೆ ಕಲ್ಲಿನ ಬದಲು ಮಣ್ಣಿನಿಂದ ಮಾಡಿದ ಹಾವಿನ ವಿಗ್ರಹಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಕೆಲವೆಡೆ ಜೀವಂತ ಹಾವಿಗೂ ಹಾಲು ಮತ್ತು ಹಾವು ಸ್ವೀಕರಿಸುವ ಇತರ ಪದಾರ್ಥಗಳನ್ನು ನೀಡಿ ಪೂಜೆ ಸಲ್ಲಿಸಲಾಗುತ್ತದೆ.
ಶಿವನಿಗೆ ಪ್ರಿಯನಾದ ನಾಗ
ಅತಿ ಶಕ್ತಿಶಾಲಿ ದೇವನಾದ ಶಿವನ ಕೊರಳಿನಲ್ಲಿ ಯಾವಾಗಲೂ ಒಂದು ಸರ್ಪ ಹೆಡೆಯೆತ್ತಿ ನಿಂತಿರುವುದನ್ನು ಕಾಣಬಹುದು. ಹಾವುಗಳ ಬಗ್ಗೆ ವಿಶೇಷ ಮಮತೆಯನ್ನು ಹೊಂದಿದ್ದ ಶಿವನನ್ನು ಒಲಿಸಿಕೊಳ್ಳಲು ನಾಗಪಂಚಮಿಯ ಪೂಜೆ ಶ್ರೇಯಸ್ಕರ ಎಂದು ಹಿಂದೂಗಳು ನಂಬುತ್ತಾರೆ.
ಶಿವನಿಗೆ ಪ್ರಿಯನಾದ ನಾಗ
ಶಿವ ಮುಂಗೋಪಿಯಾಗಿದ್ದು ಆತನ ಅನುಗ್ರಹ ಪಡೆಯಲು ಮೊದಲು ನಾಗನನ್ನು ಸಂಪ್ರೀತಗೊಳಿಸುವುದು ಅಗತ್ಯ ಎಂದು ಪುರಾಣಗಳು ತಿಳಿಸುತ್ತವೆ.
ವಿವಿಧ ರಾಜ್ಯಗಳಲ್ಲಿ ಆಚರಣೆ
ಭಾರತದಾದ್ಯಂತ ಹಬ್ಬಗಳ ಆಚರಣೆಯಲ್ಲಿ ವೈವಿಧ್ಯತೆ ಇರುವಂತೆಯೇ ನಾಗಪಂಚಮಿಯಲ್ಲಿಯೂ ಇದೆ. ಮಹಾರಾಷ್ಟ್ರ ರಾಜ್ಯದಲ್ಲಿ ಹಾವಿನ ಮರಿಯೊಂದನ್ನು ತಟ್ಟೆಯೊಂದರಲ್ಲಿಟ್ಟು ಪೂಜೆ ಸಲ್ಲಿಸುವ ತಂಡವೊಂದು ಊರೆಲ್ಲಾ ತಿರುಗುತ್ತಾ ಹಣ, ಬಟ್ಟೆ ಅಥವಾ ಆಹಾರವನ್ನು ಬೇಡುತ್ತಾ ಹೋಗುತ್ತಾರೆ.
ವಿವಿಧ ರಾಜ್ಯಗಳಲ್ಲಿ ಆಚರಣೆ
ಕೇರಳದಲ್ಲಿ ಜನರು ಒಂದಕ್ಕಿಂತ ಹೆಚ್ಚು ನಾಗರಕಲ್ಲು ಅಥವಾ ಕಟ್ಟೆಗಳಿಗೆ ಭೇಟಿ ನೀಡಿ ವರ್ಷವಿಡೀ ಜನರಿಗೆ ತೊಂದರೆ ನೀಡದಂತೆ ಪ್ರಾರ್ಥಿಸುತ್ತಾರೆ.
ಪೂಜೆಯ ಮೂಲಕ ಕೋರುವ ಕೋರಿಕೆಗಳು
ನಾಗನನ್ನು ಪೂಜಿಸಿ ಕೋರುವ ಕೋರಿಕೆಗಳನ್ನು ಶಿವನು ಮನ್ನಿಸುತ್ತಾನೆ ಎಂಬ ನಂಬಿಕೆಯಿರುವುದರಿಂದ ಜನರು ಪೂಜೆಯ ಬಳಿಕ ತಮ್ಮ ಇಷ್ಟಾರ್ಥಗಳನ್ನು ತಿಳಿಸುತ್ತಾರೆ. ಅವಿವಾಹಿತ ಕನ್ಯೆಯರು ತಮಗೆ ಉತ್ತಮ ವರ ಸಿಗಲಿ ಎಂದು ಹಾರೈಸಿ ಪೂಜಿಸುತ್ತಾರೆ.
ಪೂಜೆಯ ಮೂಲಕ ಕೋರುವ ಕೋರಿಕೆಗಳು
ಹಾವುಗಳು ತಮಗೆ ಹಾನಿ ಎಸಗಿದವರ ಮುಖಗಳನ್ನು ಗುರುತಿಸುತ್ತದೆ ಎಂಬ ನಂಬಿಕೆ ಇರುವುದರಿಂದ ಮತ್ತು ಮುಂದೆಂದಾದರೂ ಕೇಡು ಎಸಗಿದವರ ಮನೆಯವರಲ್ಲಿ ಯಾರಿಗಾದರೂ ಹಾನಿ ಮಾಡುವ ಮೂಲಕ ಅನಾಹುತ ತಂದೊಡ್ಡಬಹುದು, ನಮ್ಮಲ್ಲಿ ಯಾರಿಂದಾದರೂ ತಪ್ಪಾಗಿದ್ದಲ್ಲಿ ಕ್ಷಮಿಸಿ ಕಾಪಾಡು ಎಂದು ಜನರು ನಾಗದೇವತೆಯಲ್ಲಿ ಪೂಜೆಯ ಮೂಲಕ ವಿನಂತಿಸಿಕೊಳ್ಳುತ್ತಾರೆ.