Latest Updates
-
ಆಗಸ್ಟ್ 15 ಧ್ವಜಾರೋಹಣ: ಬೆಂಗಳೂರಿನಲ್ಲಿ ಜೋಡಿಗಳು ಪಾಲಿಸಬೇಕಾದ ಪ್ರಮುಖ ನಿಯಮಗಳಿವು! -
ಆನ್ಲೈನ್ ಸೆಕ್ಸ್ಟಾರ್ಷನ್ ವಂಚನೆ: ಅಪರಿಚಿತ ವಿಡಿಯೋ ಕಾಲ್ ರಿಸೀವ್ ಮಾಡಿದ್ರೆ ಹುಷಾರ್, ಇಲ್ಲಿದೆ ಎಚ್ಚರಿಕೆ! -
ಮಳೆಗಾಲದ ಕಿರಿಕಿರಿ ಬೇಡವೇ? ₹999 ಒಳಗೆ ಸಿಗುವ ಈ ಸ್ಮಾರ್ಟ್ ವಸ್ತುಗಳು ನಿಮ್ಮ ಮನೆಗೆ ಮಸ್ಟ್! -
ಜಂಕ್ ಫುಡ್ ಪ್ಯಾಕೆಟ್ ಮೇಲೆ ಎಚ್ಚರಿಕೆ ಲೇಬಲ್ ಕಡ್ಡಾಯ: ಸುಪ್ರೀಂ ಕೋರ್ಟ್ನಿಂದ ಕಂಪನಿಗಳಿಗೆ ಖಡಕ್ ಎಚ್ಚರಿಕೆ! -
ಆಗಸ್ಟ್ 14 ಮತ್ತು 15ರ ಗೊಂದಲ ಬೇಡ: ಸೋಶಿಯಲ್ ಮೀಡಿಯಾದಲ್ಲಿ ಡಿಪಿ ಮತ್ತು ಪೋಸ್ಟ್ ಹಾಕುವಾಗ ಈ ತಪ್ಪು ಮಾಡ್ಬೇಡಿ! -
ಬಂಬಲ್ ಆಪ್ನಲ್ಲಿ ಮಹತ್ವದ ಬದಲಾವಣೆ: ಡೇಟಿಂಗ್ನಲ್ಲಿ ಸಂಭಾಷಣೆ ಶುರು ಮಾಡುವುದು ಹೇಗೆ? -
ಬೆಂಗಳೂರಿನ ಡೇಟಿಂಗ್ ಆ್ಯಪ್ಗಳಲ್ಲಿ ಹೊಸ ವಂಚನೆ: ಪಬ್ಗಳಲ್ಲಿ ಹಣ ಕಳೆದುಕೊಳ್ಳದಂತೆ ಪಾರಾಗುವುದು ಹೇಗೆ? -
ಬೆಂಗಳೂರಿನಲ್ಲಿ ಮಳೆಗಾಲ: ನಿಮ್ಮ ಅಪಾರ್ಟ್ಮೆಂಟ್ನಲ್ಲಿ ಹಾವುಗಳ ಕಾಟವೇ? ಈ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೇ ಪಾಲಿಸಿ! -
ಇಂದು ರಾತ್ರಿ ಆಕಾಶದಲ್ಲಿ ಅದ್ಭುತ: ಪರ್ಸೀಡ್ಸ್ ಉಲ್ಕಾಪಾತ ವೀಕ್ಷಿಸಲು ಮತ್ತು ಫೋಟೋ ತೆಗೆಯಲು ಸರಳ ಟಿಪ್ಸ್ -
ಮಳೆಗಾಲದಲ್ಲಿ ಹೊರಗಿನ ಊಟ ಅಪಾಯಕಾರಿ: ಆನ್ಲೈನ್ ಫುಡ್ ಆರ್ಡರ್ ಮಾಡುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಮೂರು ಕಡೆ ನೀರಿನಿಂದ ಸುತ್ತುವರೆದ ಮುರುಡೇಶ್ವರ: ನೋಡುಗರ ಮನಸೂರೆಗೊಳ್ಳುತ್ತೆ ಈ ತಾಣ
ಭಾರತದಲ್ಲಿ ನೋಡಲೇಬೇಕಾದ ಸ್ಥಳಗಳಲ್ಲಿಒಂದು ಕರ್ನಾಟಕದ ಮುರುಡೇಶ್ವರ. ಮುರುಡೇಶ್ವರ ನೋಡಲೆಂದೇ ಲಕ್ಷಾಂತರ ಜನರು ಭೇಟಿ ನೀಡುತ್ತಿದ್ದಾರೆ. ಸಮುದ್ರ ಅಲೆಗಳ ನರ್ತನ, ಅತ್ಯಂತ ಎತ್ತರವಾದ ರಾಜಗೋಪುರ, ವಿಶಾಲವಾದ ಶಿವನ ಪ್ರತಿಮೆ ಇವೆಲ್ಲಾ ನೋಡುಗರನ್ನು ಮೋಡಿ ಮಾಡುವಂತಿದೆ. ಇಂಥ ಸುಂದರ ತಾಣ ಈಗ ಮಳೆಯಿಂದಾಗಿ ಸಕತ್ ಟ್ರೆಂಡ್ನಲ್ಲಿದೆ. ಮೂರು ಕಡೆ ನೀರು ಸುತ್ತುವರೆದಿರುವ ದೃಶ್ಯದಿಂದಾಗಿ ಈ ತಾಣ ಮತ್ತಷ್ಟು ಮನಮೋಹಕವಾಗಿ ಕಾಣತ್ತಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಸುಂದರ ತಾಣ
ಮುರುಡೇಶ್ವರವು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿರುವ ಪ್ರಸಿದ್ಧವಾದ ಧಾರ್ಮಿಕ ಸ್ಥಳವಾಗಿದೆ. ಬೆಂಗಳೂರಿನಿಂದ 515ಕಿ.ಮೀ ದೂರದಲ್ಲಿದೆ. ಇಲ್ಲಿ ರೈಲು ನಿಲ್ದಾಣ ಕೂಡ ಇದ್ದು ಮಂಗಳೂರು-ಮುಂಬೈ ಕೊಂಕಣ ರೈಲು ಮಾರ್ಗದಲ್ಲಿ ನಿಲುಗಡೆ ಹೊಂದಿದೆ.
ಮುರುಡೇಶ್ವರ ನೋಡಲು ಹೋಗುವವರಿಗೆ ಅದರ ಸುತ್ತ ಮುತ್ತಲೇ ಇರುವ ಶಿರಸಿ, ಗೋಕರ್ಣ, ಕೊಲ್ಲೂರಿಗೆ ಭೇಟಿ ನೀಡಬಹುದಾಗಿದೆ.

ಗಮನ ಸೆಳೆಯುವ ಅತಿ ಎತ್ತರದ ಭವ್ಯ ಗೋಪುರ
ಮುರುಡೇಶ್ವರ ಮತ್ತೊಂದು ವಿಶೇಷವೆಂದರೆ ಕುಂದುಕ ಬೆಟ್ಟದ ಮೇಲಿರುವ ಶಿವ ದೇವಾಲಯದ ಅತಿ ಎತ್ತರದ ರಾಜ ಗೋಪುರ. ಈ ಗೋಪುರ 237.5 ಅಡಿ ಎತ್ತರ ಹೊಂದಿದೆ. ನೀವು ಮುರುಡೇಶ್ವರ ಪ್ರವೇಶಿಸುವ ಮುಂಚೆಯೇ ಈ ಗೋಪುರ ಕಣ್ಣಿಗೆ ಬಿದ್ದು ನಮ್ಮಲ್ಲಿ ಕುತೂಹಲ ಕೆರಳಿಸುವುದು.

ಧ್ಯಾನ ಮುದ್ರೆಯಲ್ಲಿರುವ ಶಿವನ ಪ್ರತಿಮೆ
ಮುರುಡೇಶ್ವರದಲ್ಲಿ ಗೋಪುರದ ಮೇಲೆ ತೆರಳಿದರೆ ಅಲ್ಲಿ ಧ್ಯಾನ ಮುದ್ರೆಯಲ್ಲಿರುವ ಶಿವನ ಸುಂದರ ಪ್ರತಿಮೆ ದೇಶದಲ್ಲಿಯೇ ಅತಿ ಎತ್ತರದ ಶಿವನ ಪ್ರತಿಮೆಯಾಗಿದೆ. ಈ ಶಿವ ಪ್ರತಿಮೆ 123 ಅಡಿಗಳಷ್ಟು ಎತ್ತರವನ್ನು ಹೊಂದಿದೆ.

ಮನಸೂರೆಗೊಳ್ಳುವ ಕಡಲ ತೀರ
ಇಲ್ಲಿನ ಧಾರ್ಮಿಕ ಕ್ಷೇತ್ರದ ಜೊತೆಗೆ ಪ್ರವಾಸಿಗರನ್ನು ಸೆಳೆಯುವ ಮತ್ತೊಂದು ಅಂಶವೆಂದರೆ ಅಲ್ಲಿಯ ಸುಂದರ ಕಡಲ ತೀರ. ಅಲೆಗಳು ಬಂದಪ್ಪಳಿಸುವ ಆ ಸುಂದರ ದೃಶ್ಯ ವೀಕ್ಷಕರ ಮನದಲ್ಲಿರುವ ಚಿಂತೆಯೆಂಬ ಅಲೆಗಳನ್ನು ಮರೆಸಿ, ಮನಸ್ಸಿನ ನವಚೇತನ ತುಂಬುವುದು, ಈ ಪ್ರದೇಶಕ್ಕೆ ಬೇಟಿ ನೀಡಿ ಮರಳುವಾಗ ಒಂದು ಬಗೆಯ ನವೋಲ್ಲಾಸ ನಮ್ಮಲ್ಲಿ ತುಂಬುವುದು, ಅಷ್ಟೊಂದು ಸುಂದರವಾಗಿದೆ ಈ ತಾಣ.
ಇದೀಗ ಮಳೆಯ ಆರ್ಭಟ ಚೋರಾಗಿದ್ದು ಮೂರು ದಿಕ್ಕಿನಿಂದಲೂ ನೀರು ಸುತ್ತುವರೆದಿರುವ ಮುರುಡೇಶ್ವರ ಮತ್ತಷ್ಟು ಮನ ಮೋಹಕವಾಗಿದೆ.

ಮುರುಡೇಶ್ವರ ಶಿವನ ದೇವಾಲಯ ಪೂಜೆಯ ಸಮಯ
ಇಲ್ಲಿಯ ದೇವಾಲಯವು ಮುಂಜಾನೆ 3 ಗಂಟೆಗೆ ಓಪನ್ ಆಗುತ್ತೆ. ಮಧ್ಯಾಹ್ನ 1 ಗಂಟೆಯವರೆಗೆ ಪೂಜೆ ಇರುತ್ತದೆ. ನಂತರ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ದೇವಾಲಯದ ಬಾಗಿಲು ತೆರೆದಿರುತ್ತದೆ.



Click it and Unblock the Notifications