Latest Updates
-
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್!
ರಾಮಭಕ್ತ ಹನುಮಂತನ ಬಗ್ಗೆ ಹೆಚ್ಚಿನವರಿಗೆ ತಿಳಿದಿರದ ರಹಸ್ಯಗಳು..!
ರಾಮನ ಪರಮಭಕ್ತ ಹನುಮಂತ. ಈತನು ಚಿರಂಜೀವಿಯಾಗಿರು ಎಂಬ ವರವನ್ನು ರಾಮನಿಂದ ಪಡೆದುಕೊಂಡಿದ್ದಾನೆ. ಭೂಮಿಯಲ್ಲಿ ರಾಮನ ಭಕ್ತರು ಬದುಕಿರುವ ತನಕ ಈತ ಕಲಿಯುಗದಲ್ಲೇ ಇರುತ್ತಾನೆ ಎಂಬ ನಂಬಿಕೆಯಿದೆ.

ಹನುಮಂತನಿಗೆ ಅಂಜನೀಪುತ್ರ, ಆಂಜನೇಯ, ವಾನರಪುತ್ರ ಹೀಗೆ ಹಲವಾರು ಹೆಸರುಗಳಿದೆ. ನಿಮಗೊತ್ತಾ? ಹನುಮಂತನು ಚೈತ್ರಮಾಸದ ಹುಣ್ಣಿಮೆಯಂದು ಜನಿಸಿದನೆಂದು ಹೇಳಲಾಗುತ್ತದೆ. ಹೀಗೆ ಹನುಮಂತನ ಬಗ್ಗೆ ಸಾಮಾನ್ಯ ಜನರಿಗೆ ಗೊತ್ತಿರದ ಐದು ರಹಸ್ಯಗಳು ಇಂದಿಗೂ ರಹಸ್ಯವಾಗೇ ಉಳಿದಿದೆ. ಅಷ್ಟಕ್ಕು ಯಾವುದು ಆ 5 ರಹಸ್ಯಗಳು ಯಾವುದು ಇಲ್ಲಿದೆ ಡಿಟೇಲ್ಸ್.
1. ಹನುಮಂತನಿಗೆ 5 ಜನ ಸಹೋದರರಿದ್ದಾರೆ
ಆಂಜನೇಯನು ಇಂದಿಗೂ ಭಾರತ ಮತ್ತು ಶ್ರೀಲಂಕಾದ ಮಧ್ಯೆ ಇರುವ ಮೌಂಟ್ ಗಂಧಮದನದಲ್ಲಿ ವಾಸವಾಗಿದ್ದಾನೆ ಎಂಬ ಉಲ್ಲೇಖವಿದೆ. ಬ್ರಹ್ಮಾಂಡ ಪುರಾಣದಲ್ಲಿ ವಾನರ ವಂಶಾವಳಿ ಬಗ್ಗೆ ಸವಿಸ್ತಾರವಾದ ವಿವರಣೆ ನೀಡಲಾಗಿದೆ. ಇದರಲ್ಲಿ ಹನುಮಂತನ ಖಾಸ ಸಹೋದರರ ಬಗ್ಗೆ ಉಲ್ಲೇಖವಿದೆ. ಹನುಮಂತನು ಆರು ಜನ ಸಹೋದರರಲ್ಲಿ ದೊಡ್ಡವನಾಗಿದ್ದು, ಉಳಿದವರ ಹೆಸರುಗಳು ಇಂತಿವೆ ಮತಿಮಾನ್, ಶೃತಿಮಾನ್, ಕೇತುಮಾನ್, ಗತಿಮಾನ್ ಮತ್ತು ದೃತಿಮಾನ್. ಮಹಾಭಾರತದ ಸಮಯದಲ್ಲಿ ಕುಂತಿಯ ಮಗನಾದ ಭೀಮನನ್ನು ಹನುಮಂತನ ಸಹೋದರ ಎಂದು ಕರೆಯಲಾಗುತ್ತಿತ್ತು.
2. ರಾಮಾಯಣವನ್ನು ಮೊದಲು ಬರೆದವನು ಹನುಮಂತ
ದಕ್ಷಿಣ ಭಾರತದ ಜನಪದದಲ್ಲಿ ಉಲ್ಲೇಖವಾಗಿರುವಂತೆ ಹನುಮಂತನೇ ಮೊದಲು ರಾಮಾಯಣವನ್ನು ಬರೆದಿದಂತೆ. ಅದೂ ಕೂಡ ಆತನ ಉಗುರಿನ ಸಹಾಯದಿಂದ ಬಂಡೆಗಳ ಮೇಲೆ ರಾಮಾಯಣ ಬರೆದಿದ್ದನು ಎನ್ನಲಾಗಿದೆ. ಇದು ವಾಲ್ಮಿಕಿ ರಾಮಾಯಣಕ್ಕೂ ಮೊದಲೇ ಬರೆಯಲಾಗಿದೆ ಎಂಬ ಉಲ್ಲೇಖವಿದೆ. ಇದನ್ನು ಹಮುಮಾನ್ ರಾಮಾಯಣ ಅಂತಲೇ ದಕ್ಷಿಣ ಭಾರತದಲ್ಲಿ ಕರೆಯಲಾಗುತ್ತದೆ. ರಾಮಾಯಣವನ್ನು ಬರೆದ ಮೇಲೆ ಹನುಮಂತನು ಆ ಕಲ್ಲನ್ನು ಸಮುದ್ರಕ್ಕೆ ಎಸೆದಿದ್ದಾನಂತೆ. ನಂತರ ಇದು ತುಳಸಿದಾಸರಿಗೆ ಲಭ್ಯವಾಯಿತು ಎನ್ನಲಾಗಿದೆ.
3. ಹನುಮಂತನ ವಾಹನ
ಎಲ್ಲಾ ದೇವರು ಹಾಗೂ ದೇವತೆಗಳಿಗೆ ವಾಹನ ಇರುವ ಬಗ್ಗೆ ನಾವು ಕೇಳಿದ್ದೇವೆ. ಆದರೆ ಹನುಮಂತನ ವಾಹನ ಬಗ್ಗೆ ನಿಮಗೆ ಗೊತ್ತಿದ್ಯಾ? ಹೌದು, ಹನುಮಂತನಿಗೂ ವಾಹನ ಇದೆ ಆದರೆ ಅದು ನಮ್ಮ ಕಣ್ಣಿಗೆ ಕಾಣಿಸೋದಿಲ್ಲ. ಹನುಮಾನ್ ಸಹಸ್ರನಾಮ ಸ್ತೋತ್ರದಲ್ಲಿ ಎಪ್ಪತ್ತೆರಡನೇ ಪದ್ಯದಲ್ಲಿ ವಾಯುವಾಹನದ ಬಗ್ಗೆ ಉಲ್ಲೇಖ ಮಾಡಲಾಗಿದೆ. ಹಾಗೆಂದರೆ ಆ ವಾಹನವು ಗಾಳಿ ಎಂದರ್ಥ. ಹನುಮಂತನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವೇಗವಾಗಿ ಹೋಗಲು ವಾಯುವನ್ನು ವಾಹನವಾಗಿ ಬಳಸುತ್ತಾನೆ.
4. ಹನುಮಂತನಿಗೆ ನಾಲ್ಕು ಗುರುಗಳಿದ್ದರು
ಪುರಾಣಗಳ ಪ್ರಕಾರ ಹನುಮಂತನಿಗೆ ನಾಲ್ಕು ಜನ ಗುರುಗಳು ಇದ್ದರಂತೆ ಇವರಿಂದ ಹನುಮಂತನು ಶಿಕ್ಷಣ ಹಾಗೂ ಇತರ ವಿದ್ಯೆಗಳನ್ನು ಕಲಿತಿದ್ದನಂತೆ. ಅದರಲ್ಲಿ ಮೊದಲನೇಯ ಗುರು ಸೂರ್ಯದೇವ, ಎರಡನೇಯ ಗುರು ನಾರದ, ಮೂರನೇ ಗುರು ಪವನ ದೇವ, ನಾಲ್ಕನೇಯ ಗುರು ಮತಂಗ ಋಷಿ.
5. ಹನುಮಂತನ ಜಾತಿ
ಸಂಶೋಧನೆಗಳ ಪ್ರಕಾರ ಒಂಬತ್ತು ಲಕ್ಷ ವರ್ಷಗಳ ಮೊದಲು ಕೋತಿಗಳ ವಿಭಿನ್ನ ಪ್ರಭೇಧವೊಂದು ಭೂಮಿಯ ಮೇಲೆ ಇತ್ತಂತೆ. ಈ ಪ್ರಭೇಧವು 12 ರಿಂದ 15 ವರ್ಷಗಳಲ್ಲಿ ನಶಿಸಿ ಹೋಗಿದ್ಯಂತೆ. ಈ ಪ್ರಭೇಧದ ಹೆಸರೇ ಕಪಿ. ಹನುಮಾನ್ ಕೂಡ ಇದೇ ಪ್ರಭೇಧಕ್ಕೆ ಸೇರಿದವನಾಗಿದ್ದಾನೆ. ವಾನರರು ಕೂಡ ಕಾಡು ವಾಸಿಗಳೇ ಆದರೆ ಇವರು ಹನುಮಾನ್ಗಿಂತ ವಿಭಿನ್ನರು. ಯಾಕೆಂದರೆ ಅವರು ಕಾಡುಗಳಲ್ಲಿ ಮಾತ್ರ ವಾಸಿಸುತ್ತಾರೆ.
ಇದುವೇ ಹನುಮಾನ್ ಬಗ್ಗೆ ಸಾಮಾನ್ಯ ಜನರಿಗೆ ಗೊತ್ತಿರದ ಕೆಲವೊಂದು ರಹಸ್ಯಕಾರಿ ಸಂಗತಿಗಳು.



Click it and Unblock the Notifications

