Just In
- 2 min ago ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- 37 min ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
- 1 hr ago ಏಪ್ರಿಲ್ 24 ದಿನ ಭವಿಷ್ಯ: ಬುಧವಾರದ ಈ ದಿನ ನಿಮ್ಮ ರಾಶಿಫಲ ಹೇಗಿದೆ?
- 3 hrs ago UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
Don't Miss
- Movies Bhagyalakshmi: ಕೆಲಸ ಹುಡುಕುವುದೇ ಭಾಗ್ಯಾಗೆ ಸವಾಲು; ಶ್ರೇಷ್ಠಾಳಿಂದ ತಾಂಡವ್ಗಿಲ್ಲ ಉಳಿಗಾಲ
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- News Narendra Modi: ಕರ್ನಾಟಕಕ್ಕೆ ಏಪ್ರಿಲ್ 28, 29ಕ್ಕೆ ಪ್ರಧಾನಿ ಮೋದಿ ಆಗಮನ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಹಾಲಯ ಅಮವಾಸ್ಯೆ 2021: ಪೂಜಾವಿಧಿ ಹಾಗೂ ಈ ದಿನ ಏನು ಮಾಡಬಾರದು?
ಪಿತೃಪಕ್ಷದ ಕೊನೆಯ ದಿನವೇ ಮಹಾಲಯ ಅಮವಾಸ್ಯೆ. 2021ರಲ್ಲಿ ಮಹಾಲಯ ಅಮವಾಸ್ಯೆ ಸೆಪ್ಟೆಂಬರ್ 6ರಂದು ಆಚರಿಸಲಾಗುವುದು. ಈ ದಿನ ಪಿತೃಗಳಿಗೆ ತರ್ಪಣ ನೀಡಲಾಗುವುದು. ಅಲ್ಲದೆ ಕಾಗೆಗೆ ಆಹಾರವನ್ನು ನೀಡಲಾಗುವುದು.
ಗತಿಸಿದ ಪಿತೃಗಳ ಹೆಸರಿನಲ್ಲಿ ದಾನ ಮಾಡುವುದರಿಂದ ಕೂಡ ಪುಣ್ಯ ದೊರೆಯುತ್ತದೆ. ಪಿತೃದೋಷವಿದ್ದರೆ ಮನುಷ್ಯ ಬದುಕಿನಲ್ಲಿ ತುಂಬಾ ಕಷ್ಟಗಳನ್ನು ಎದುರಿಸಬೇಕಾಗುವುದು, ಅವುಗಳ ನಿವಾರಣೆಗೆ ಮಹಾಲಯ ಅಮವಾಸ್ಯೆಯಮದು ಪಿತೃಗಳಿಗೆ ತರ್ಪಣ ನೀಡಬೇಕು. ಪಿತೃಗಳಿಗೆ ತರ್ಪಣ ನೀಡುವಾಗ ಕೆಲವೊಂದು ನಿಯಮಗಳಿವೆ. ಅವುಗಳನ್ನು ಪಾಲಿಸಬೇಕು. ಆಗ ಹಿರಿಯರ ಆಶೀರ್ವಾದದಿಂದ ಒಳ್ಳೆಯದಾಗುವುದು.
ಮಹಾಲಯ ಅಮವಾಸ್ಯೆಯಂದು ಏನು ಮಾಡಬೇಕು, ಏನು ಮಾಡಬಾರದು ಎಂದು ನೋಡೋಣ ಬನ್ನಿ:
ಪಿತೃ ದೋಷದ ಲಕ್ಷಣಗಳು
* ಮನೆಯಲ್ಲಿ ಹಿರಿಯ ವ್ಯಕ್ತಿಯ ಕೂದಲು ಬಿಳಿ ಬಣ್ಣದಿಂದ ಹಳದಿ ಬಣ್ಣಕ್ಕೆ ತಿರುಗುವುದು ಹಾಗೂ ಕೆಮ್ಮಿನ ಸಮಸ್ಯೆ ಹಾಗೂ ಕಫ ಕಪ್ಪು ಬಣ್ಣದಲ್ಲಿರುವುದು
* ಸಮಾಜದಲ್ಲಿ ಗೌರವ ಹಾಳಾದರೆ
* ಕುಟುಂಬದಲ್ಲಿ ಆಗಾಗ ಜಗಳವಾಗುತ್ತಿದ್ದರೆ
* ಯಾವುದೇ ಕೆಲಸ ಮಾಡಿದರೂ ಸಫಲವಾಗದಿರುವುದು, ಆರ್ಥಿಕ ತೊಂದರೆ
* ಮಕ್ಕಳಾಗದಿರುವುದು ಅಥವಾ ಹುಟ್ಟಿರುವ ಮಕ್ಕಳಲ್ಲಿ ನ್ಯೂನ್ಯತೆ
* ಮದುವೆ ವಿಳಂಬವಾಗುವುದು
ಪಿತೃ ದೋಷ ನಿವಾರಣೆಗೆ ಮಹಾಲಯ ಅಮವಾಸ್ಯೆಯಂದು ಏನು ಮಾಡಬಾರದು?
* ಪಿತೃಗಳಿಗೆ ಮಾಂಸಾಹಾರ ನೀಡಬಾರದು
* ಈ ದಿನ ಮಾಂಸಾಹಾರ ತಯಾರಿಸುವುದು, ತಿನ್ನುವುದು ಮಾಡಬಾರದು
* ಪೂಜೆಗೆ ಸ್ಟೀಲ್, ಪ್ಲಾಸ್ಟಿಕ್ ಅಥವಾ ಗ್ಲಾಸ್ನ ವಸ್ತುಗಳನ್ನು ಬಳಸಬಾರದು. ಬದಲಿಗೆ ಮಣ್ಣಿನ ಪಾತ್ರೆಗಳನ್ನು ಬಳಸಬೇಕು.
* ಪಿತೃಗಳಿಗೆ ಪೂಜೆ ಮಾಡುವಾಗ ಘಂಟೆ ಬಾರಿಸಬಾರದು.
* ತರ್ಪಣ ಕಾರ್ಯ ಮಾಡುವಾಗ ಆ ವ್ಯಕ್ತಿಗೆ ಯಾವುದೇ ಅಡೆತಡೆ ಮಾಡಬಾರದು.
* ಹಿರಿಯರನ್ನು ಅವಗಣಿಸಬಾರದು.
ಮಹಾಲಯ ಅಮವಾಸ್ಯೆ ದಿನ ಏನು ಮಾಡಬೇಕು?
* ಪಿತೃ ಪಕ್ಷದ ಕೊನೆಯ ಶ್ರಾದ್ಧ ದಿನವೇ ಮಹಾಲಯ ಅಮವಾಸ್ಯೆ. ಸಾಮಾನ್ಯವಾಗಿ ವ್ಯಕ್ತಿ ಸತ್ತ ತಿಥಿಯ ದಿನಾಂಕದಂದು ಶ್ರಾದ್ಧ ಮಾಡಲಾಗುವುದು. ಅದು ನೆನಪಿಲ್ಲದಿದ್ದರೆ ಪಿತೃ ಪಕ್ಷದಲ್ಲಿ ಅಥವಾ ಮಹಾಲಯ ಅಮವಾಸ್ಯೆಯಂದು ಪಿತೃಗಳಿಗೆ ತರ್ಪಣ ನೀಡಬೇಕು.
* ಮಹಾಲಯ ಅಮವಾಸ್ಯೆಯ ದಿನದಂದು ಮುಂಜಾನೆ ಎದ್ದು ನದಿಯಲ್ಲಿ ಅಥವಾ ಗಂಗಾಜಲ ಹಾಕಿದ ನೀರಿನಲ್ಲಿ ಸ್ನಾನ ಮಾಡಬೇಕು.
* ನಂತರ ಮಡಿ ಬಟ್ಟೆ ಧರಿಸಬೇಕು. ಈ ದಿನ ಮನೆಯಲ್ಲಿ ಸಾತ್ವಿಕವಾದ ಆಹಾರವನ್ನಷ್ಟೇ ಸೇವಿಸಬೇಕು.
* ತರ್ಪಣ ಕಾರ್ಯ ಇರುವವರು ಉಪವಾಸವಿದ್ದು ಕಾರ್ಯವನ್ನು ಮಾಡಬೇಕು. ಕೆಲವರಿಗೆ ಮನೆಗೆ ಬ್ರಾಹ್ಮಣರನ್ನು ಕರೆಸಿ ಪೂಜೆ ಮಾಡಿದರೆ, ಹೆಚ್ಚಾಗಿ ನದಿ ತಟದಲ್ಲಿ ತರ್ಪಣ ಕಾರ್ಯ ಮಾಡಲಾಗುವುದು.
ಸಂಜೆ ಹೊತ್ತಿಗೆ ನಾಲ್ಕು ಮಣ್ಣಿನ ದೀಪದಲ್ಲಿ ಸಾಸಿವೆಯೆಣ್ಣೆ, ಬತ್ತಿ ಹಾಕಿ ಹಚ್ಚಿಟ್ಟು ಮನೆಯೊಳಗಡೆ ಬಂದು ಪಿತೃಪಕ್ಷ ಮುಗಿದಿದೆ ನಮ್ಮಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ, ನಮ್ಮನ್ನು ಆಶೀರ್ವದಿಸಿ ಎಂದು ಪ್ರಾರ್ಥಿಸಬೇಕು.
ಪಿತೃ ತರ್ಪಣ ಮಾಡುವಾಗ ಈ ಮಂತ್ರ ಪಠಿಸಿ
ತೀರಿ ಹೋದ ತಂದೆಗೆ ತರ್ಪಣ ಬಿಡುವಾಗ ಹೇಳಬೇಕಾದ ಮಂತ್ರ
ತರ್ಪಣ ನೀಡುವ ಮುನ್ನ ಪಾತ್ರೆಯಲ್ಲಿ ಗಂಗಾಜಲ ಅಥವಾ ಇತರೆ ಶುದ್ಧ ಜಲ ತೆಗೆದುಕೊಂಡು ಅದರಲ್ಲಿ ಹಾಲು, ಎಳ್ಳು ಹಾಗೂ ಬಾರ್ಲಿಯನ್ನು ಬೆರೆಸಬೇಕು. ಇದಾದ ಬಳಿಕ ಸವಟಿನಲ್ಲಿ ಆ ನೀರನ್ನು ತೆಗೆದುಕೊಂಡು ಮೂರು ಬಾರಿ ಜಲಾಂಜಲಿ ನೀಡಬೇಕು. ಹೀಗೆ ಮಾಡುವಾಗ ನಿಮ್ಮ ಗೋತ್ರವನ್ನು ಉಚ್ಚರಿಸಿ' ಗೋತ್ರ ಅಸ್ಮತಪಿತ ಶರ್ಮಾ ವಸುರೂಪತ್ ತ್ರುಪ್ಯತ ಮಿಂದ ತಿಲೋದಕಂ ಗಂಗಾ ಜಲಂ ವಾ ತಸ್ಮೈ ಸ್ವದಾನಮಃ, ತಸ್ಮೈಸ್ವಧಾ ನಮಃ, ತಸ್ಮೈ ಸ್ವಧಾನಮಃ ' ಎಂಬ ಮಂತ್ರ ಪಠಿಸಿ.
ತಾಯಿಯ ತರ್ಪಣೆಗಾಗಿ ಮಂತ್ರ
ತಾಯಿಗೆ ತಿಲಾಂಜಲಿ ಅರ್ಪಿಸುವಾಗ, ನಿಮ್ಮ ಗೋತ್ರದ (ಗೋತ್ರದ ಹೆಸರು) ಹೆಸರನ್ನು ಹೇಳಿ ' ಗೋತ್ರ ಅಸ್ಮಾನ್ಮಾತ (ತಾಯಿಯ ಹೆಸರು) ದೇವಿ ವಸುರೂಪಸ್ತಂ ತೃಪ್ತಮಿದಂ ತಿಲೋದಕಂ ಗಂಗಾ ಜಲ್ ವಾ ತಸ್ಮೈ ಸ್ವಧ ನಮಃ, ತಸ್ಮೈ ಸ್ವಧ ನಮಃ, ತಸ್ಮೈ ಸ್ವಧ ನಮಃ' ಎಂಬ ಮಂತ್ರ ಪಠಿಸಿ.