Latest Updates
-
ಬೆಂಗಳೂರಿನಲ್ಲಿ ಇಂದೇ ವಿದ್ಯುತ್ ಕಡಿತ: ನಿಮ್ಮ ಎಲೆಕ್ಟ್ರಾನಿಕ್ ಉಪಕರಣಗಳನ್ನು ಸುರಕ್ಷಿತವಾಗಿಡುವುದು ಹೇಗೆ? -
ಕರ್ಕ ಸಂಕ್ರಾಂತಿ ವಿಶೇಷ: ಮಳೆಗಾಲದಲ್ಲಿ ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಜಗನ್ನಾಥ ರಥಯಾತ್ರೆ 2026: ಸಂಚಾರ ಮಾರ್ಗ ಬದಲಾವಣೆ, ಭಕ್ತರಿಗಾಗಿ ಇಲ್ಲಿದೆ ಮಹತ್ವದ ಮಾಹಿತಿ! -
ನೀಟ್ ಪರೀಕ್ಷೆಯ ಆತಂಕವೇ? ಈ 6 ನಿಮಿಷದ ವ್ಯಾಯಾಮ ನಿಮ್ಮ ಒತ್ತಡವನ್ನು ಮರೆಸುತ್ತದೆ! -
ಮಧ್ಯಪ್ರದೇಶ UCC: ಲಿವ್-ಇನ್ ಜೋಡಿಗಳಿಗೆ ಕಡ್ಡಾಯ ನೋಂದಣಿ, ನಿಯಮ ಮೀರಿದರೆ ಕಾದಿದೆ ಸಂಕಷ್ಟ! -
ಹಾಲಿನಲ್ಲಿ ವಿಷಕಾರಿ ಕಲಬೆರಕೆ ಪತ್ತೆ: ನಿಮ್ಮ ಮನೆಯ ಹಾಲಿನ ಸುರಕ್ಷತೆ ಪರೀಕ್ಷಿಸುವುದು ಹೇಗೆ? -
ಬೆಂಗಳೂರಿನಲ್ಲಿ 12 ಗಂಟೆಗಳ ಕಾಲ ನೀರಿನ ಕಡಿತ: ನಾಳೆ ನೀರು ಉಳಿಸಲು ಈ ಟಿಪ್ಸ್ ಫಾಲೋ ಮಾಡಿ! -
ಮಳೆಗಾಲದಲ್ಲಿ ಜಿಮ್ಗೆ ಹೋಗಲು ಸಾಧ್ಯವಿಲ್ಲವೇ? ಮನೆಯಲ್ಲೇ ಫಿಟ್ ಆಗಿರಲು 8 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ
ಮಹಾಲಯ ಅಮಾವಾಸ್ಯೆ 2021: ದಿನ, ಮುಹೂರ್ತ ಹಾಗೂ ಸರ್ವಪಿತೃ ಅಮಾವಾಸ್ಯೆಯ ಮಹತ್ವ
ನಮ್ಮ ಕುಟುಂಬದ ಪೂರ್ವಜನರಿಗೆ, ಹಿರಿಯರಿಗೆ ಪೂಜೆ ಸಲ್ಲಿಸುವ ವಿಶೇಷ ಸಮಯ ಪಿತೃಪಕ್ಷ. 2021ನೇ ಸಾಲಿನಲ್ಲಿ ಪಿತೃಪಕ್ಷ ಸೆಪ್ಟಂಬರ್ 20ರಂದು ಆರಂಭವಾಗಿ ಅಕ್ಟೋಬರ್ 6ರವೆರೆಗೆ ಇದ್ದು, ಅಕ್ಟೋಬರ್ 6ರಂದು ಪಿತೃಪಕ್ಷದ ಅಂತಿಮ ದಿನ ಮಹಾಲಯ ಅಮಾವಾಸ್ಯೆ ಮತ್ತು ಸರ್ವಪಿತೃ ಅಮಾವಾಸ್ಯೆ ಬರಲಿದೆ.
ಮಹಾಲಯ ಅಮಾವಾಸ್ಯೆ ಹಿಂದೂಗಳ ಪಾಲಿಗೆ ದೊಡ್ಡ ಹಬ್ಬ ಎಂದೇ ಹೇಳಬಹುದು. ಪಿತೃ ಪಕ್ಷದ ಕೊನೆಯ ಶ್ರಾದ್ಧ ದಿನವನ್ನು ಸರ್ವಪಿತೃ ಮೋಕ್ಷ ಅಮಾವಾಸ್ಯೆ ಅಥವಾ ಮಹಾಲಯ ಅಮಾವಾಸ್ಯೆ ಎಂದು ಹೇಳಲಾಗುತ್ತದೆ. ಪಿತೃ ಪಕ್ಷದಲ್ಲಿ ಬರುವ ಕೊನೆಯ ಶ್ರಾದ್ಧವು ಅತ್ಯಂತ ಮಹತ್ತರವಾದ ದಿನವಾಗಿದೆ. ಈ ದಿನದ ಮತ್ತೊಂದು ಮಹತ್ವವೆಂದರೆ ನಮ್ಮ ಹಿರಿಯರು ಅಥವಾ ಮೃತರಾದವರ ಮೃತಪಟ್ಟ ದಿನನೆನಪಿಲ್ಲದಾಗ ಈ ದಿನದಂದು ಅವರಿಗೆ ತಿಥಿ ಕಾರ್ಯ ಸಹ ಮಾಡಬಹುದು.

1. ಮಹಾಲಯ ಅಮಾವಾಸ್ಯೆ ಪೂಜಾ ದಿನ ಮತ್ತು ಸಮಯ
2021ನೇ ಸಾಲಿನಲ್ಲಿ ಅಕ್ಟೋಬರ್ 6ರಂದು ಮಹಾಲಯ ಅಮಾವಾಸ್ಯೆ ಇದೆ.
ಪೂಜಾ ಸಮಯ
ಕುತುಪ್ ಮುಹೂರ್ತ: ಬೆಳಿಗ್ಗೆ 11.45 ರಿಂದ ಮಧ್ಯಾಹ್ನ 12.30
ರೋಹಿಣಿ ಮುಹೂರ್ತ: ಮಧ್ಯಾಹ್ನ 12.32 ರಿಂದ 1.19
ಅಪರಾಹ್ನ ಮುಹೂರ್ತ: ಮಧ್ಯಾಹ್ನ 1.19 ರಿಂದ 3.40
ಮಹಾಲಯ ಅಮಾವಾಸ್ಯೆ ತಿಥಿ ಆರಂಭ ಅಕ್ಟೋಬರ್ 5ರಂದು ಸಂಜೆ 07.04 ರಿಂದ
ಅಕ್ಟೋಬರ್ 6ರಂದು 4.34ಕ್ಕೆ ಅಂತ್ಯ

2. ಮಹಾಲಯ ಅಮಾವಾಸ್ಯೆ ಇತಿಹಾಸ
ಹಿಂದೂ ಪುರಾಣಗಳ ಪ್ರಕಾರ, ದುರ್ಗಾ ದೇವಿಯು ತನ್ನ ತಂದೆಯ ಮನೆಯಾದ ಭೂಮಿಗೆ ಮಹಾಲಯದ ಮೇಲೆ ಬರುತ್ತಾಳೆ. ಜನಪ್ರಿಯ ನಂಬಿಕೆಗಳ ಪ್ರಕಾರ, ಮಹಿಷಾಸುರ ರಾಕ್ಷಸನು ಅತ್ಯಂತ ಶಕ್ತಿಶಾಲಿಯಾಗಿದ್ದನು ಮತ್ತು ದೇವತೆಗಳು ಅಥವಾ ಮನುಷ್ಯರು ಅವನನ್ನು ಕೊಲ್ಲಲು ಸಾಧ್ಯವಾಗಲಿಲ್ಲ. ದೇವತೆಗಳು ಕಠಿಣ ಹೋರಾಟವನ್ನು ನಡೆಸಿದರು ಆದರೆ ಶಕ್ತಿಯುತ ಮತ್ತು ಭಯಾನಕ ಅಸುರನಿಗೆ ಸೋತರು. ದೇವಲೋಕವನ್ನು ಮಹಿಷಾಸುರ ಆಳುತ್ತಿದ್ದ. ಈ ವೇಳೆ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಮಹಿಷಾಸುರ ರಾಕ್ಷಸನನ್ನು ಕೊಲ್ಲಲು ಮತ್ತು ನಾಶಮಾಡಲು ದುರ್ಗಾ ಮಾತೆಯನ್ನು ಸೃಷ್ಟಿಸುತ್ತಾರೆ.
ದುರ್ಗಾ ಆಯುಧಗಳಿಂದ ಅಲಂಕರಿಸಲಾಗಿತ್ತು. 9 ದಿನಗಳ ಕಾಲ, ಅವಳು ಮಹಿಷಾಸುರನೊಂದಿಗೆ ಉಗ್ರವಾಗಿ ಹೋರಾಡಿದಳು ಮತ್ತು 10ನೇ ದಿನ, ದುರ್ಗಾ ದೇವಿಯು ಅವನನ್ನು ಯಶಸ್ವಿಯಾಗಿ ಕೊಂದಳು. ಇದು ನವರಾತ್ರಿ ಮತ್ತು ದುರ್ಗಾ ಪೂಜೆಯ ಆರಂಭವನ್ನು ಸೂಚಿಸುತ್ತದೆ. ಬೇರೆ ಬೇರೆ ರಾಜ್ಯಗಳು ಇದನ್ನು ವಿಭಿನ್ನ ರೀತಿಯಲ್ಲಿ ಆಚರಿಸುತ್ತವೆ. ಮಹಾಲಯ ಅಮಾವಾಸ್ಯೆಯ ಬೆಳಿಗ್ಗೆ, ಮೊದಲು ಪೂರ್ವಜರು ವಿದಾಯ ಹೇಳುತ್ತಾಳೆ ಮತ್ತು ದುರ್ಗಾ ಭೂಮಿಗೆ ಹೋಗುವಂತೆ ಆಶೀರ್ವದಿಸಿದರು.

3. ಮಹಾಲಯ ಅಮಾವಾಸ್ಯೆಯ ಮಹತ್ವ
ಧರ್ಮಗ್ರಂಥಗಳಲ್ಲಿ ಮಹಾಲಯ ಅಮಾವಾಸ್ಯೆಯು ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿದೆ. ರಾಕ್ಷಸನಾದ ಮಹಿಷಾಸುರನನ್ನು ಕೊಂದ ದಿನ ಜನರು ತಮ್ಮ ಪೂರ್ವಜರಿಗೆ ತರ್ಪಣ ಅಥವಾ ಶ್ರಾದ್ಧದ ಮೂಲಕ ಗೌರವ ಸಲ್ಲಿಸುತ್ತಾರೆ. ದುರ್ಗಾ ದೇವಿಯು ಕೈಲಾಸದಿಂದ ಭೂಮಿಗೆ ಪ್ರಯಾಣ ಆರಂಭಿಸಿದಳು ಎಂದು ನಂಬಲಾಗಿದೆ. ಅವಳು ಪಲ್ಲಕ್ಕಿಯಲ್ಲಿ ಅಥವಾ ದೋಣಿ, ಆನೆ ಅಥವಾ ಕುದುರೆಯ ಮೇಲೆ ಪ್ರಯಾಣಿಸಿದಳು.
ಮತ್ತೊಂದು ನಂಬಿಕೆಯ ಪ್ರಕಾರ, ಪಿತೃ ಪಕ್ಷದ ಸಮಯದಲ್ಲಿ ಭೂಲೋಕಕ್ಕೆ ಬರುವ ಪೂರ್ವಜರು ಮಹಾಲಯ ಅಮಾವಾಸ್ಯೆಯಂದು ಮರಳಿ ಪರಲೋಕಕ್ಕೆ ತೆರಳುತ್ತಾರೆ. ಈ ಕೊನೆಯ ದಿನವಾದ ಮಹಾಲಯ ಅಮವಾಸ್ಯೆಯೆಂದು ಪಿತೃಗಳನ್ನು ಪರಲೋಕಕ್ಕೆ ಗೌರವದಿಂದ ಕಳುಹಿಸಿಕೊಡಲು ಅವರಿಗೆ ಇಷ್ಟವಾದ ಭಕ್ಷ್ಯ ಭೋಜನಗಳನ್ನು ಇಟ್ಟು ಪೂಜಿಸಿ ಕಳುಹಿಸುವುದು ಹಿಂದೂ ಧರ್ಮದ ವಾಡಿಕೆ. ಇನ್ನು ಕೆಲವರು ಅವರಿಗೆ ಪಿಂಡ ಬಿಡುವ ಮೂಲಕ ಗೌರವ ಸಲ್ಲಿಸುತ್ತಾರೆ.
ದಾನ ಧರ್ಮ ಮಾಡಲು ಕೂಡ ಈ ದಿನ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಹಿರಿಯರು ಮಹಾಲಯ ಅಮಾವಾಸ್ಯೆಯಂದು ತಮ್ಮ ಕುಟುಂಬದವರನ್ನು ಕೊನೆಯದಾಗಿ ಆಶೀರ್ವದಿಸಿ ಹೋಗುತ್ತಾರೆ. ಹಿರಿಯರಿಗೆ ಮನೆಯಲ್ಲಿ ಪೂಜೆ ಸಲ್ಲಿಸುವುದರಿಂದ ನಕಾರಾತ್ಮಕ ಶಕ್ತಿಯು ಇಲ್ಲವಾಗುತ್ತದೆ ಎಂಬ ನಂಬಿಕೆಯಿದೆ. ಅಲ್ಲದೇ ನಮ್ಮ ಪೂಜೆಯಿಂದ ಹಿರಿಯರು ತೃಪ್ತರಾದರೆ ಮನೆಯಲ್ಲಿನ ವಾಸ್ತು ದೋಷ ನಿವಾರಣೆಯಾಗುತ್ತದೆ ಎನ್ನಲಾಗುತ್ತದೆ.



Click it and Unblock the Notifications