Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಮೂಢನಂಬಿಕೆಗಳೊಂದಿಗೆ ತಳುಕು ಹಾಕಿಕೊಂಡಿರುವ ಸತ್ಯಗಳು
ಹಿಂದೂ ಧರ್ಮವು ತನ್ನದೇ ಆದ ಆಚರಣೆಗಳಿಂದ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದು ನಿತ್ಯ ಜೀವನದ ಒಂದು ಅಂಗವಾಗಿ ಮಾರ್ಪಟ್ಟಿದೆ. ಹಿರಿಯರಿಂದ ಬಳುವಳಿಯಾಗಿ ಬಂದಿರುವ ಕೆಲವೊಂದು ನೀತಿ ನಿಯಮಗಳನ್ನು ನಾವು ಇಂದಿಗೂ ಪಾಲಿಸಿಕೊಂಡು ಬರುತ್ತಿದ್ದೇವೆ. ಕೆಲವೊಮ್ಮೆ ಈ ನಂಬಿಕೆಗಳ ಗೂಡಾರ್ಥವನ್ನು ನಾವು ಅರಿತುಕೊಳ್ಳದೆಯೇ ಅದನ್ನು ನಾವು ಅನುಸರಿಸುತ್ತೇವೆ. ಆದರೆ ಈ ಆಚರಣೆಗಳು ನಂಬಿಕೆಗಳು ಏಕೆ ಮಹತ್ವವನ್ನು ಪಡೆದುಕೊಂಡಿವೆ ಮತ್ತು ಮೂಢ ನಂಬಿಕೆಯಾಗಿದ್ದರೂ ಅವುಗಳ ಅನುಸರಣೆ ಏಕೆ ಮಾಡಬೇಕು ಎಂಬುದು ನಿಮ್ಮನ್ನು ಕಾಡಿರಬಹುದು. ಮೂಢನಂಬಿಕೆಯ ಸುಳಿಯಲ್ಲಿ ನಲುಗುತ್ತಿದೆ ನಮ್ಮ ಭಾರತ..!
ವೈಜ್ಞಾನಿಕವಾದ ರಹಸ್ಯಗಳನ್ನು ಈ ನಂಬಿಕೆಗಳು ಹೊಂದಿಕೊಂಡಿದ್ದು ಅವುಗಳನ್ನು ಪಾಲಿಸುವುದು ಆರೋಗ್ಯಕರವಾಗಿ ಉತ್ತಮವಾಗಿದೆ ಎಂಬುದನ್ನೇ ಇಂದಿನ ಲೇಖನದಲ್ಲಿ ತಿಳಿಸಲಿದ್ದೇವೆ. ಯಾವುದೇ ನಂಬಿಕೆಗಳು ಸತ್ಯಕ್ಕೆ ಸಮೀಪವಾಗಿರುತ್ತವೆ ಅಂತೆಯೇ ಅದೊಂದು ಉತ್ತಮ ಸಿದ್ಧಾಂತವನ್ನು ಹೊಂದಿಕೊಂಡಿರುತ್ತದೆ. ಈ ಆಚರಣೆಗಳನ್ನು ನಂಬಿಕೆಗೆ ಹತ್ತಿರವಾಗಿ ಆಚರಿಸಿ ಅದರಲ್ಲಿರುವ ಕುರುಡತನವನ್ನು ನಂಬದೆ ಆ ಸಿದ್ಧಾಂತಗಳನ್ನು ಅರಿತುಕೊಂಡು ಪಾಲನೆ ಮಾಡುವುದು ಉತ್ತಮವಾದುದು. ಇಂದಿನ ಲೇಖನದಲ್ಲಿ ಆಚರಣೆಯಲ್ಲಿರುವ ಮೂಢನಂಬಿಕೆಗಳು ಮತ್ತು ಅವುಗಳಲ್ಲಿ ಅಡಗಿರುವ ವೈಜ್ಞಾನಿಕ ಸಿದ್ಧಾಂತಗಳನ್ನು ಅರಿತುಕೊಳ್ಳೋಣ...

ಲಿಂಬೆ ಮತ್ತು ಹಸಿಮೆಣಸು
ಲಿಂಬೆ ಮತ್ತು ಹಸಿಮೆಣಸನ್ನು ಜೊತೆಯಾಗಿ ಕಟ್ಟಿ ವಾಹನ ಇಲ್ಲವೇ ಮನೆಯ ಮುಂಭಾಗದಲ್ಲಿ ನೇತುಹಾಕಿರುವುದನ್ನು ನೀವು ಕಂಡಿರುತ್ತೀರಿ. ಇದನ್ನು ಕಟ್ಟಲು ದಾರವನ್ನು ಬಳಸುತ್ತಾರೆ. ಕೆಟ್ಟ ದೃಷ್ಟಿ ತಾಗಬಾರದು ಎಂಬ ಕಾರಣಕ್ಕಾಗಿ ಜನರು ಇದನ್ನು ಕಟ್ಟುತ್ತಾರೆ ಆದರೆ ವೈಜ್ಞಾನಿಕವಾದ ತತ್ವ ಎಂದರೆ ಹತ್ತಿಯ ದಾರವು ಸೊಳ್ಳೆ ಮತ್ತು ಕೀಟಾಣುಗಳನ್ನು ಹೊಡೆದೋಡಿಸುತ್ತದೆ. ಅಂತೆಯೇ ಕಟುವಾದ ವಾಸನೆಯನ್ನು ಹೀರಿಕೊಳ್ಳುತ್ತದೆ.

ಒಡೆದ ಕನ್ನಡಿ
ಹಿಂದಿನ ದಿನಗಳಲ್ಲಿ ಕನ್ನಡಿ ಒಡೆಯುವುದನ್ನು ಅಶುಭವೆಂದು ಪರಿಗಣಿಸಲಾಗುತ್ತಿತ್ತು. ಕನ್ನಡಿ ಕಡಿಮೆ ದರದಲ್ಲಿ ದೊರೆಯುವುದರಿಂದ ಅದು ಆಗಾಗ್ಗೆ ಬಿದ್ದು ಒಡೆಯುವುದನ್ನು ತಪ್ಪಿಸುವುದಕ್ಕಾಗಿ ಹಿಂದಿನವರು ಈ ಕಟ್ಟುಕಥೆಯನ್ನು ಹೇಳಿ ನಂಬಿಸುತ್ತಿದ್ದರು.

ಸೂರ್ಯಾಸ್ತದ ನಂತರ ಉಗುರು ತೆಗೆಯುವುದು
ಸೂರ್ಯಾಸ್ತದ ನಂತರ ಉಗುರು ತೆಗೆಯುವುದು ಇಲ್ಲವೇ ಕೂದಲು ಕತ್ತರಿಸುವುದು ತಪ್ಪು ಎಂಬುದಾಗಿ ಪರಿಗಣಿಸಲಾಗುತ್ತದೆ. ವೈಜ್ಞಾನಿಕವಾಗಿ ಈ ಆಚರಣೆಯನ್ನು ನೋಡಹೊರಟರೆ ರಾತ್ರಿ ವೇಳೆಯಲ್ಲಿ ಉಗುರು ಕತ್ತರಿಸುವಾಗ ಉಂಟಾಗುವ ಗಾಯಗಳನ್ನು ತಪ್ಪಿಸುವುದಕ್ಕಾಗಿ ಹಿರಿಯರು ಈ ರೀತಿ ಹೇಳುತ್ತಿದ್ದರು. ಆದ್ದರಿಂದಲೇ ಕತ್ತಲಾದ ನಂತರ ಯಾವುದೇ ಚಟುವಟಿಕೆಯನ್ನು ಮಾಡಬಾರದು ಎಂಬುದಾಗಿ ನಿಷೇಧವನ್ನು ಹೇರಿದ್ದರು.

ಗ್ರಹಣ ಸಮಯದಲ್ಲಿ ಗರ್ಭಿಣಿಯರು ಹೊರಹೋಗುವಂತಿಲ್ಲ
ಸೂರ್ಯಗ್ರಹಣದ ಸಮಯದಲ್ಲಿ ಗರ್ಭಿಣಿಯರು ಹೊರಹೋಗದಂತೆ ನಿಷೇಧವನ್ನು ಹೇರಲಾಗಿತ್ತು. ಈ ಸಮಯದಲ್ಲಿ ತರಕಾರಿಗಳನ್ನು ಕತ್ತರಿಸುವುದು ಮತ್ತು ಹೊರಹೋಗುವುದನ್ನು ನಿಷೇಧಿಸಲಾಗಿತ್ತು. ಆದರೆ ಇದರ ಹಿಂದಿರುವ ಸತ್ಯ ಸೂರ್ಯನ ಯುವಿ ಕಿರಣಗಳು ಭ್ರೂಣಕ್ಕೆ ಅಪಾಯವನ್ನು ತಂದೊಡ್ಡಬಹುದು ಎಂಬುದಾಗಿತ್ತು.

ಸಂಜೆ ಹೊತ್ತಿನಲ್ಲಿ ಕಸ ಗುಡಿಸುವುದು
ಆ ದಿನಗಳಲ್ಲಿ ಸಂಜೆ ಹೊತ್ತು ಮಂದ ಬೆಳಕು ಇದ್ದುದರಿಂದಾಗಿ ಕೆಲವೊಮ್ಮೆ ಧರಿಸಿಕೊಂಡಿದ್ದ ಅಮೂಲ್ಯ ವಸ್ತುಗಳು ಅಂದರೆ ಆಭರಣಗಳು ಮೊದಲಾದವು ಬಿದ್ದು ಹೋಗುತ್ತಿತ್ತು ಮತ್ತು ಅದನ್ನು ಹುಡುಕುವುದು ಕಷ್ಟಾಸಾಧ್ಯವಾಗುತ್ತಿತ್ತು. ಆದ್ದರಿಂದಲೇ ಸಂಜೆ ಕಸಗುಡಿಸಬಾರದು ಎಂಬ ನಿಯಮವನ್ನು ಅನ್ವಯಿಸಿದ್ದರು.



Click it and Unblock the Notifications











