Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಕಾರ್ತಿಕ ಪೂರ್ಣಿಮೆ 2022: ದಿನಾಂಕ, ಮುಹೂರ್ತ, ಪೂಜಾವಿಧಿಯ ಕುರಿತ ಸಂಪೂರ್ಣ ಮಾಹಿತಿ
ಪೂರ್ಣಿಮೆ ಅಥವಾ ಹುಣ್ಣೆಮೆ ಪ್ರತಿ ತಿಂಗಳ ಶುಕ್ಲ ಪಕ್ಷದ ಕೊನೆಯ ದಿನಾಂಕದಂದು ಬರುತ್ತದೆ. ಆದರೆ, ಕಾರ್ತಿಕ ಮಾಸದಲ್ಲಿ ಬರುವ ಹುಣ್ಣಿಮೆಗೆ ವಿಶೇಷ ಮಹತ್ವವಿದ್ದು, ಅತ್ಯಂತ ಮಂಗಳಕರವೆಂದು ಬಾವಿಸಲಾಗಿದೆ.
ಈ ಬಾರಿ ಕಾರ್ತಿಕ ಮಾಸದ ಹುಣ್ಣಿಮೆಯನ್ನು ನವೆಂಬರ್ 8ಕ್ಕೆ ಆಚರಿಸಲಾಗುವುದು. ಈ ದಿನದ ಸ್ನಾನ, ದಾನ ಇತ್ಯಾದಿಗಳಿಗೂ ವಿಶೇಷ ಮಹತ್ವವಿದ್ದು, ಈ ದಿನವನ್ನು ಭಗವಾನ್ ವಿಷ್ಣುವಿಗೆ ಸಮರ್ಪಿಸಲಾಗಿದೆ. ಈ ಕಾರ್ತಿಕ ಹುಣ್ಣಿಮೆಯ ಪೂಜಾವಿಧಾನ, ಶುಭಮುಹೂರ್ತ ಹಾಗೂ ಪ್ರಾಮುಖ್ಯತೆಯ ಸಂಪೂರ್ಣ ಮಾಹಿತಿ ನಿಮಗಾಗಿ.
ಕಾರ್ತಿಕ ಹುಣ್ಣಿಮೆಯ ಪೂಜಾವಿಧಾನ, ಶುಭಮುಹೂರ್ತ ಹಾಗೂ ಪ್ರಾಮುಖ್ಯತೆಯನ್ನು ಈ ಕೆಳಗೆ ನೀಡಲಾಗಿದೆ:

ಕಾರ್ತಿಕ ಹುಣ್ಣಿಮೆಯ ಪೂಜಾವಿಧಾನ, ಶುಭಮುಹೂರ್ತ ಹಾಗೂ ಪ್ರಾಮುಖ್ಯತೆಯನ್ನು ಈ ಕೆಳಗೆ ನೀಡಲಾಗಿದೆ:
ಪೂರ್ಣಿಮಾ ತಿಥಿಯು ಕಾರ್ತಿಕ ಮಾಸದ ಕೊನೆಯ ದಿನವಾಗಿದ್ದು, ಇದನ್ನು ಕಾರ್ತಿಕ ಪೂರ್ಣಿಮಾ ಎಂದು ಕರೆಯಲಾಗುತ್ತದೆ. ಈ ವರ್ಷ ಕಾರ್ತಿಕ ಪೂರ್ಣಿಮೆ ನವೆಂಬರ್8 ರಂದು ಬರುತ್ತದೆ. ಈ ದಿನ ಭಗವಾನ್ ಭೋಲೆನಾಥನು ರಾಕ್ಷಸ ತ್ರಿಪುರಾಸುರನನ್ನು ಕೊಂದನು. ಈ ಸಂತಸದಲ್ಲಿ ದೇವತೆಗಳು ದೀಪ ಬೆಳಗಿಸಿ ಸಂಭ್ರಮಿಸಿದರು. ಇದನ್ನು ದೇವ ದೀಪಾವಳಿ ಎಂದು ಕರೆಯಲಾಗುತ್ತದೆ. ಅಷ್ಟೇ ಅಲ್ಲ, ಈ ದಿನ ಪುಣ್ಯ ನದಿಯಲ್ಲಿ ಸ್ನಾನ ಮಾಡಿ ದಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಅದೇ ಸಮಯದಲ್ಲಿ, ಈ ದಿನ, ಶ್ರೀ ಹರಿಯನ್ನು ಪೂಜಿಸುವುದರಿಂದ ಅದೃಷ್ಟವು ಪ್ರಾಪ್ತಿಯಾಗುತ್ತದೆ. ಕಾರ್ತಿಕ ಪೂರ್ಣಿಮೆಯ ದಿನಾಂಕ, ಶುಭ ಸಮಯ ಮತ್ತು ಮಹತ್ವದ ಬಗ್ಗೆ ತಿಳಿಯೋಣ.

ಕಾರ್ತಿಕ ಪೂರ್ಣಿಮೆಯ ತಿಥಿ 2022:
ಕಾರ್ತಿಕ ಪೂರ್ಣಿಮೆ ನವೆಂಬರ್ 8, 2022
ಪೂರ್ಣಿಮ ತಿಥಿ ಪ್ರಾರಂಭ, 2022 ನವೆಂಬರ್ 7 ಸಂಜೆ 4:15ಕ್ಕೆ
ಪೂರ್ಣಿಮೆ ತಿಥಿ ಮುಕ್ತಾಯ: 2022 ನವೆಂಬರ್ 8 ಸಂಜೆ 4:31ಕ್ಕೆ

ಕಾರ್ತಿಕ ಪೂರ್ಣಿಮೆಯ ಪೂಜಾ ವಿಧಾನ:
ಕಾರ್ತಿಕ ಹುಣ್ಣಿಮೆಯ ದಿನ ವಿಧಿವಿಧಾನಗಳೊಂದಿಗೆ ಸ್ನಾನ ಮಾಡಿ, ರಾತ್ರಿ ಜಾಗರಣೆ, ತುಳಸಿಗೆ ದೀಪ ದಾನ, ನೆಲ್ಲಿಕಾಯಿ ಪೂಜೆ, ಅಮೃತಬಳ್ಳಿಯ ಕೆಳಗೆ ಆಹಾರ ಸೇವಿಸಿ ಸಂಜೆ ದೀಪವನ್ನು ದಾನ ಮಾಡುವವರಿಗೆ ಇಷ್ಟಾರ್ಥಗಳು ನೆರವೇರುತ್ತವೆ. ಕಾರ್ತಿಕ ಹುಣ್ಣಿಮೆಯನ್ನು ಪುಷ್ಕರ್ತೀರ್ಥ, ದ್ವಾರಕಾಪುರಿ, ಸುಕರಕ್ಷೇತ್ರಗಳಲ್ಲಿ ಉಪವಾಸ ಮಾಡುವುದು ವಿಶೇಷವಾಗಿ ಫಲ ನೀಡುತ್ತದೆ ಎಂದು ಭಾವಿಸಲಾಗಿದೆ.
- ಈ ದಿನ ಬ್ರಾಹ್ಮಿಮುಹೂರ್ತದಲ್ಲಿ ಎದ್ದು, ಪವಿತ್ರ ಸ್ನಾನ ಮಾಡಬೇಕು ಅಥವಾ ಮನೆಯಲ್ಲಿ ಗಂಗಾಜಲವನ್ನು ಹಾಕಿ ಸ್ನಾನ ಮಾಡಬೇಕು ಎಂದು ಹೇಳಲಾಗುತ್ತದೆ.
- ಸ್ನಾನದ ನಂತರ ಉಪವಾಸದ ಪ್ರತಿಜ್ಞೆ ಮಾಡಿ, ವಿಷ್ಣುವಿನ ಮುಂದೆ ಶುದ್ಧ ದೇಸಿ ತುಪ್ಪದ ದೀಪವನ್ನು ಬೆಳಗಿಸಬೇಕು. ಶ್ರೀ ಹರಿಗೆ ತಿಲಕ ನಂತರ, ಧೂಪ, ದೀಪ, ಹಣ್ಣುಗಳು, ಹೂವುಗಳು ಮತ್ತು ನೈವೇದ್ಯ ಇತ್ಯಾದಿಗಳಿಂದ ಪೂಜಿಸಿ.
- ಸಂಜೆ ಮತ್ತೆ ವಿಷ್ಣುವನ್ನು ಆರಾಧಿಸಿ, ಭಗವಂತನಿಗೆ ಪಂಚಾಮೃತವನ್ನು ಅರ್ಪಿಸಿ. ಅದಕ್ಕೆ ತುಳಸಿಯ ಭಾಗವನ್ನು ಸೇರಿಸುವುದನ್ನು ಮರೆಯಬೇಡಿ.
- ನಂತರ, ವಿಷ್ಣುವಿನ ಜೊತೆಗೆ ಲಕ್ಷ್ಮಿ ದೇವಿಯ ಪೂಜೆ ಮತ್ತು ಆರತಿ ಮಾಡಿ.
- ರಾತ್ರಿ ಚಂದ್ರನು ಕಾಣಿಸಿಕೊಂಡ ನಂತರ ಅರ್ಘ್ಯವನ್ನು ಅರ್ಪಿಸಿ ನಂತರ ಉಪವಾಸವನ್ನು ಮುರಿಯಿರಿ.

ಕಾರ್ತಿಕ ಪೂರ್ಣಿಮಾ ಪ್ರಾಮುಖ್ಯತೆ:
ಎಲ್ಲಾ ಹುಣ್ಣಿಮೆಗಳಿಗಿಂತ ಕಾರ್ತಿಕ ಪೂರ್ಣಿಮೆಗೆ ವಿಶೇಷ ಮಹತ್ವವಿದೆ. ಈ ದಿನದಂದು ದರ್ಬೆ ಸ್ನಾನ ಮಾಡುವುದು ಮತ್ತು ದೀಪಗಳನ್ನು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದ್ದು, ಇದು ಪುಣ್ಯವನ್ನು ನೀಡುತ್ತದೆ. ಕಾರ್ತಿಕ ಪೂರ್ಣಿಮೆಯಂದು ಹೆಚ್ಚಿನ ಸಂಖ್ಯೆಯ ಜನರು ಪವಿತ್ರ ನದಿಗಳಲ್ಲಿ ಸ್ನಾನ ಮಾಡುತ್ತಾರೆ ಮತ್ತು ದಾನ ಕಾರ್ಯಗಳನ್ನು ಮಾಡುತ್ತಾರೆ. ಆರಾಧನೆ, ಹವನ, ಪಠಣ ಮತ್ತು ತಪಸ್ಸನ್ನು ಸಹ ಈ ದಿನದಂದು ವಿಶೇಷ ಮಹತ್ವವನ್ನು ಹೊಂದಿದೆ.



Click it and Unblock the Notifications











