Latest Updates
-
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್!
ಕರ್ಕ ಸಂಕ್ರಾಂತಿ 2021: ಯಾವಾಗ, ಈ ದಿನ ತುಂಬಾ ಮಹತ್ವವಾದದ್ದು ಏಕೆ?
ಸೂರ್ಯನು ಮಿಥುನ ರಾಶಿಯಿಂದ ಕರ್ಕ ರಾಶಿಗೆ ಸಂಚರಿಸುವುದನ್ನು ಕರ್ಕ ಸಂಕ್ರಾಂತಿ ಎಂದು ಕರೆಯಲಾಗುವುದು. ಈ ವರ್ಷ ಜುಲೈ 16ಕ್ಕೆ ಕರ್ಕ ಸಂಕ್ರಾಂತಿ. ಈ ಕರ್ಕ ಸಂಕ್ರಾಂತಿಯ ಮತ್ತೊಂದು ವಿಶೇಷವೆಂದರೆ ಈ ದಿನದಿಂದ ದಕ್ಷಿಣಾಯಾನ ಕಾಲ ಪ್ರಾರಂಭವಾಗುವುದು, ಅಂದರೆ ದಕ್ಷಿಣಾಭಿಮುಖವಾಗಿ ಚಲಿಸಲು ಪ್ರಾರಂಭಿಸುತ್ತದೆ.
ಹಿಂದೂ ಪುರಾಣದ ಪ್ರಕಾರ ಕರ್ಕ ಸಂಕ್ರಾಂತಿಯಿಂದ ಮಳೆಗಾಲ ಪ್ರಾರಂಭ ಎಂದರ್ಥ. ದಕ್ಷಿಣಾಯಾನ ನಾಲ್ಕು ತಿಂಗಳು ಇರುತ್ತದೆ, ಮಕರ ಸಂಕ್ರಾಂತಿಗೆ ದಕ್ಷಿಣಾಯಾನ ಮುಕ್ತಾಯವಾಗುವುದು.

ಕರ್ಕ ಸಂಕ್ರಾಂತಿಯ ವಿಶೇಷ
ಕರ್ಕ ಸಂಕ್ರಾಂತಿಯಂದು ಶ್ರೀ ವಿಷ್ಣುವನ್ನು ಆರಾಧಿಸಲಾಗುವುದು. ಈ ದಿನ ಭಕ್ತರು ಆಹಾರ ಹಾಗೂ ವಸ್ತ್ರಗಳನ್ನು ದಾನ ಮಾಡುತ್ತಾರೆ. ಪೌರಾಣಿಕ ಹಿನ್ನೆಲೆ ನೋಡಿದಾಗ ಕರ್ಕ ಸಂಕ್ರಾಂತಿಯ ದಿನದ ನಂತರ ಸೂರ್ಯ, ವಿಷ್ಣು ಹಾಗೂ ಇತರ ದೇವರು ಗಾಢ ನಿದ್ದೆಗೆ ಜಾರುತ್ತಾರೆ, ಈ ಸಮಯದಲ್ಲಿ ಶಿವನು ಇಡೀ ವಿಶ್ವವನ್ನು ನೋಡಿಕೊಳ್ಳುತ್ತಾನೆ ಎಂದು ಹೇಳಲಾಗುವುದು.

ಚಾತುರ್ಮಾಸದ ಪ್ರಾರಂಭ
ಚಾತುರ್ಮಾಸ ಶ್ರಾವಣ ಮಾಸದಿಂದ ಪ್ರಾರಂಭವಾಗುವುದು. ಭಾದ್ರಪದದಲ್ಲಿ ಗಣೇಶ ಹಾಗೂ ಶ್ರೀಕೃಷ್ಣನನ್ನು ಆರಾಧಿಸಲಾಗುವುದು, ನಂತರ ನವರಾತ್ರಿ ಪ್ರಾರಂಭ ಅದಾದ ಬಳಿಕ ದೀಪಾವಳಿ... ಹೀಗೆ ಹಬ್ಬಗಳ ಸಂಭ್ರಮಕ್ಕೆ ನಾಂದಿ ಈ ಕರ್ಕ ಸಂಕ್ರಾಂತಿ.

ಕರ್ಕ ಸಂಕ್ರಾಂತಿ ದಿನದ ಮಹತ್ವ
ಈ ದಿನದಂದು ಸೂರ್ಯೋದಯಕ್ಕೆ ಮುನ್ನ ಎದ್ದು ಸ್ನಾನ ಮಾಡಿ ಶ್ರಾದ್ಧ ಕಾರ್ಯ ಮಾಡಲಾಗುವುದು. ಈ ದಿನ ಶ್ರಾದ್ಧ ಕಾರ್ಯ ಮಾಡುವುದಿಂದ ಪಿತೃಗಳಿಗೆ ಮೋಕ್ಷ ಸಿಗುವುದು ಎಂದು ಹೇಳಲಾಗುವುದು.

ಕರ್ಕ ಸಂಕ್ರಾಂತಿ ಮುಹೂರ್ತ
ದಿನ: ಶುಕ್ರವಾರ
ದಿನಾಂಕ: ಜುಲೈ 16, 2021
ಸಂಕ್ರಾಂತಿ ಪ್ರಾರಂಭ ಸಮಯ : ಬೆಳಗ್ಗೆ 11:39ಕ್ಕೆ
ಸಂಕ್ರಾಂತಿ ರಾಶಿ: ಕನ್ಯಾ
ಸಂಕ್ರಾಂತಿ ನಕ್ಷತ್ರ: ಹಸ್ತಾ



Click it and Unblock the Notifications