Latest Updates
-
ಲಿವ್-ಇನ್ ಸಂಬಂಧದಲ್ಲಿರುವ ಯುವ ಜೋಡಿಗಳಿಗೆ ಶಾಕ್: ಹೈಕೋರ್ಟ್ನಿಂದ ಹೊಸ ಆದೇಶ, ಇನ್ನು ರಕ್ಷಣೆ ಸಿಗಲ್ಲ! -
ಬಿಸಿಲಿಗೆ ಬಾಲ್ಕನಿ ಗಿಡಗಳು ಬಾಡುತ್ತಿವೆಯೇ? ಈ 5 ಸರಳ ಟ್ರಿಕ್ಸ್ ಬಳಸಿ ಗಿಡಗಳನ್ನು ಶಾಶ್ವತವಾಗಿ ಉಳಿಸಿಕೊಳ್ಳಿ! -
ಹಾಲಿನ ಬೆಲೆ ಏರಿಕೆ: ಅಡುಗೆಮನೆಯ ಬಜೆಟ್ ಹಾಳಾಗದಂತೆ ಆರೋಗ್ಯ ಕಾಪಾಡಿಕೊಳ್ಳಲು ಈ ಪರ್ಯಾಯ ಆಹಾರಗಳೇ ದಾರಿ! -
ರೆಡ್ ಕಾರ್ಪೆಟ್ ಮೇಲೆ ಸದ್ದು ಮಾಡುತ್ತಿರುವ 'ಸೀರೆ-ಗೌನ್' ಮ್ಯಾಜಿಕ್: 2026ರ ಈ ಫ್ಯಾಷನ್ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿಯ ಅಬ್ಬರ: ಆರೋಗ್ಯ ಹಾಳಾಗದಂತೆ ವರ್ಕೌಟ್ ಮಾಡಲು ಈ ಬದಲಾವಣೆಗಳನ್ನು ಮಾಡಿಕೊಳ್ಳುವುದು ಅತ್ಯಗತ್ಯ, ಇಲ್ಲದಿದ್ದರೆ ಅಪಾಯ! -
ಬಿಸಿಲು ಅಥವಾ ಮಳೆ: ಹವಾಮಾನದ ಅಬ್ಬರದ ನಡುವೆಯೂ ನಿಮ್ಮ ಮದುವೆ ಸಂಭ್ರಮವನ್ನು ಅಚ್ಚುಕಟ್ಟಾಗಿ ಪ್ಲಾನ್ ಮಾಡುವುದು ಹೇಗೆ? -
ಬಿಸಿಲ ಧಗೆಗೆ ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ನಿಮ್ಮ ಮನೆಯನ್ನು ತಂಪಾಗಿರಿಸಲು ಮತ್ತು ಗಿಡಗಳನ್ನು ಉಳಿಸಲು ಇಲ್ಲಿವೆ ಅದ್ಭುತ ಟಿಪ್ಸ್! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಅಡುಗೆ ಮನೆಯಲ್ಲಿರುವ ಈ ಪದಾರ್ಥಗಳೇ ಸಾಕು, ಇಂದೇ ಟ್ರೈ ಮಾಡಿ! -
ಕಾನ್ 2026 ರೆಡ್ ಕಾರ್ಪೆಟ್ನಲ್ಲಿ ಭಾರತೀಯ ತಾರೆಯರ ಮಿಂಚಿನ ಸಂಚಲನ: ಈ ಫ್ಯಾಷನ್ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ!
ಕಾಳಸರ್ಪ ದೋಷದ ಅಪಾಯಗಳೇನು? ಇದಕ್ಕೆ ಪರಿಹಾರವೇನು?
ಯಾರಿಗಾದರೂ ಹಾವು ಕಚ್ಚಿ ಸತ್ತರೆ ಅಥವಾ ಒಬ್ಬ ವ್ಯಕ್ತಿಗೆ ಒಮ್ಮೆ ಹಾವು ಕಚ್ಚಿ ಬದುಕಿದರೂ ನಂತರ ಮತ್ತೆ ಹಾವು ಕಚ್ಚಿದೆ ಅವನಿಗೆ/ಅವಳಿಗೆ ಸರ್ಪ ದೋಷವಿದೆ, ಅದಕ್ಕೆ ಈ ರೀತಿ ಉಂಟಾಗಿದೆ ಎಂದು ಹೇಳುತ್ತಾರೆ. ನಾಗ ದೋಷಿವಿದ್ದರೆ ಅದಕ್ಕೆ ಪರಿಹಾರ ಮಾಡದಿದ್ದರೆ ಒಳ್ಳೆಯದಲ್ಲ ಎಂಬ ನಂಬಿಕೆ ನಮ್ಮಲ್ಲಿ ಬಲವಾಗಿದೆ. ದೊಡ್ಡ ಸೆಲೆಬ್ರಿಟಗಳಿಂದ ಹಿಡಿದು ಜನಸಾಮಾನ್ಯರವರೆಗೆ ನಾಗದೋಷಕ್ಕೆ ಭಯಪಡುತ್ತಾರೆ. ತುಂಬಾ ಜನರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು ನಾಗ ದೋಷಕ್ಕೆ ಪರಿಹಾರ ಮಾಡಿಸುತ್ತಾರೆ. ನಾಗ ದೋಷವೆಂಬುವುದು ನಮ್ಮ ಜನ್ಮ ಕುಂಡಲಿಯಲ್ಲಿ ಇರುತ್ತದೆ ಎಂದು ಹೇಳಲಾಗುವುದು.

ಸರ್ಪ ದೋಷಕ್ಕೆ ಪರಿಹಾರ
ಸರ್ಪ ದೋಷ ಇರುವವರು ಈ ದೋಷ ಪರಿಹಾರ ಮಾಡುವ ದೇವಾಲಯಕ್ಕೆ ಹೋಗಿ ಪರಿಹಾರ ಮಾಡಬೇಕು. ಕರ್ನಾಟಕದಲ್ಲಿ ಕುಕ್ಕೆ ಸುಬ್ರಹ್ಮಣ್ಯ, ಉಜ್ವೈನ್ನ ಮಹಾಕಾಳೇಶ್ವರ ದೇವಾಲಯ, ಆಂಧ್ರದ ಶ್ರೀ ಕಾಳಹಸ್ತಿ ಮತ್ತು ಮೋಪಿದೇವಿ ಸುಬ್ರಹ್ಮಣ್ಯ ದೇವಾಲಯ, ತಮಿಳುನಾಡಿನ ರಾಮನಾಥ ಸ್ವಾಮಿ ದೇವಾಲಯ ಹೀಗೆ ಸರ್ಪದೋಷದ ಪರಿಹಾರಕ್ಕೆ ನಿರ್ದಿಷ್ಟವಾದ ದೇವಾಲಯಗಳಿಗೆ ಹೋಗಿ ಪೂಜೆಯನ್ನು ಮಾಡಿಸಬೇಕು.
* ರಾಹು-ಕೇತು ಪೂಜೆ ಮಾಡುವ ಮುನ್ನ ಗಣಪತಿಯನ್ನು ಪೂಜಿಸಬೇಕು. ನಂತರ ರಾಹು-ಕೇತುವಿಗೆ ಪೂಜಿಯನ್ನು ಸಲ್ಲಿಸಬೇಕು.
* ಸರ್ಪದೋಷ ಇರುವವರು ಉತ್ತಮ ಪರಿಹಾರ ಕಾಣುವವರಿಗೆ ವರ್ಷದಲ್ಲಿ ಎರಡು ಬಾರಿ ಅಂದ್ರೆ ಉತ್ತರಾಯಣ ಕಾಲದಲ್ಲಿ ಹಾಗೂ ದಕ್ಷಿಣಾಯನ ಕಾಲದಲ್ಲಿ ಪೂಜೆ ಮಾಡಬೇಕು. ಸ
* ರ್ಪದೊಷ ನಿವಾರಣೆಗೆ ಪ್ರತಿದಿನ ಹನುಮಾನ ಚಾಲೀಸ ಪಠಿಸಬೇಕು, ನರಸಿಂಹ ಸ್ವಾಮಿ ಅಥವಾ ಸುಬ್ರಹ್ಮಣ್ಯ ಸ್ವಾಮಿ ದೇವಾಲಯಕ್ಕೆ ಪ್ರತಿನಿತ್ಯ ಭೇಟಿ ಕೊಟ್ಟು ಪೂಜೆ ಸಲ್ಲಿಸಬೇಕು.
* ಪ್ರತೀವರ್ಷ ಗರುಡ ಪಂಚಮಿ ವ್ರತ ಪಾಲಿಸಿದರೆ ತುಂಬಾನೇ ಒಳ್ಳೆಯದು.
* 43 ಬುಧವಾರ ಬಡವರಿಗೆ ಧಾನ್ಯಗಳನ್ನು ದಾನ ಮಾಡಬೇಕು
* ಷಷ್ಠಿ ಪೂಜೆ ಮಾಡಬೇಕು
ಹೀಗೆ ಮಾಡುವುದರಿಂದ ಪರಿಹಾರ ಕಂಡುಕೊಳ್ಳಬಹುದು.

ಸರ್ಪದೋಷ ಎಂದರೇನು?
ರಾಹು 3ನೇ ಮನೆಯಲ್ಲಿದ್ದು ಕೇತು 9ನೇ ಮನೆಯಲ್ಲಿರುವಾಗ ಉಳಿದ ಗ್ರಹಗಳು 4, 8, 10, 2ನೇ ಮನೆಯಲ್ಲಿದ್ದರೆ ಸರ್ಪದೋಷವಿದೆ ಎಂದು ಹೇಳಲಾಗುವುದು.

ಸರ್ಪದೋಷವಿದ್ದರೆ ಏನಾಗುತ್ತೆ?
* ವ್ಯಕ್ತಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ
* ಸಾವಿನ ಭಯ ಕಾಡುವುದು
* ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಗೊಂದಲ ಉಂಟಾಗುವುದು
* ಪ್ರೀತಿ, ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಉಂಟಾಗುವುದು
* ಔಷಧಿ ತೆಗೆದುಕೊಂಡರೂ ಕಾಯಿಲೆ ಕಡಿಮೆಯಾಗುವುದಿಲ್ಲ.
* ಆರ್ಥಿಕ ತೊಂದರೆಗಳು ಉಂಟಾಗುವುದು, ವೃತ್ತಿ ಬದುಕಿನಲ್ಲಿ ತೊಂದರೆ ಉಂಟಾಗುವುದು.
* ಸಂಗಾತಿ ಅಥವಾ ವ್ಯವಹಾರ ಪಾಲುದಾರರಿಂದ ಮೋಸ ಉಂಟಾಗುವುದು
* ಯಶಸ್ಸು, ಗೌರವ ಸಿಗುವುದಿಲ್ಲ
* ರಾತ್ರಿಯಲ್ಲಿ ಸರಿಯಾಗಿ ನಿದ್ದೆ ಕೂಡ ಮಾಡಲಾಗುವುದಿಲ್ಲ
* ಆತ್ಮವಿಶ್ವಾಸ ಕಡಿಮೆಯಾಗುವುದು
* ಮಾನಸಿಕ ನೆಮ್ಮದಿ ಕಡಿಮೆಯಾಗುವುದು

ಕಾಳಸರ್ಪ ದೋಷಕ್ಕೆ ಪರಿಹಾರ
* ಸುಬ್ರಹ್ಮಣ್ಯ ಸ್ವಾಮಿ ದೇವಾಲಯಕ್ಕೆ ಹೋಗಿ ಪೂಜೆ ಮಾಡಿಸಿ.
* ಕಾಳ ಸರ್ಪ ಯೋಗ ಯಂತ್ರವನ್ನು ದೇವರ ಕೋಣೆಯಲ್ಲಿ ಇಟ್ಟು ಪ್ರತಿದಿನ ಪೂಜಿಸಿ
* ಬುಧವಾರ ಮತ್ತು ಶುಕ್ರವಾರ ಕಾಳಸರ್ಪದೋಷ ನಿವಾರಣೆ ಪೂಜೆ ಆಡಿಸಿ
* ಅಶ್ಲೇಷ ಬಲಿ ಮಾಡಿಸಿ
* ನಾಗರಪಂಚಮಿಯಂದು ಸರ್ಪಶಾಂತಿ ಹೋಮ ಮಾಡಿಸಿ
* 14 ಮುಖದ ರುದ್ರಾಕ್ಷ ಧರಿಸಿ.
* ಪ್ರತಿದಿನ ಗೋಮೇಧಿಕ ಹರಳನ್ನು ಕೈಯಲ್ಲಿ ಹಿಡಿದು 108 ಬಾರಿ ರಾಹು ಬೀಜ ಮಂತ್ರ 'ಉನ್ ಭ್ರು ಭ್ರೂಂ: ರಾಹುವೇ ನಮಃ:' ಪಠಿಸಿ.
* ಶನಿವಾರ ಆಲದ ಮರಕ್ಕೆ ನೀರು ಹಾಕಿ.

ಇತರ ಪರಿಹಾರ
* ಶನಿವಾರ ಅಥವಾ ಪಂಚಮಿ ತಿಥಿಯಂದು ನದಿಗೆ 11 ತೆಂಗಿನಕಾಯಿಯನ್ನು ಅರ್ಪಿಸಿ
* ಕಾಳ ಸರ್ಪ ಗಾಯತ್ತಿ ಮಂತ್ರ ಪಠಿಸಿ
* ವಿಷ್ಣು ಸಹಸ್ರನಾಮ ಪಠಿಸಿ
* ಮಾನಸ ದೇವಿಯನ್ನು ಪೂಜಿಸಿ
* ಮನೆಯಲ್ಲಿ ನಾಯಿಯನ್ನು ಸಾಕಿ. ಇದು ಆಪತ್ತುಗಳಿಂದ ಕಾಪಾಡುವ ಬಟುಕ ಭೈರವನನ್ನು ಸಂತೋಷಪಡಿಸುತ್ತದೆ.



Click it and Unblock the Notifications