Latest Updates
-
ದೆಹಲಿ ವಾಯು ಮಾಲಿನ್ಯ: ಆರೋಗ್ಯ ಕಾಪಾಡಿಕೊಳ್ಳಲು 12 ನಿಮಿಷದ ವರ್ಕೌಟ್ ಮತ್ತು ಸುರಕ್ಷತಾ ಟಿಪ್ಸ್ -
ಸ್ಮ್ಯಾಶ್ ಪ್ಯಾಟ್ರಿಯಾರ್ಕಿ: ದಂಪತಿಗಳ ನಡುವಿನ ಜಗಳಕ್ಕೆ 20 ನಿಮಿಷದ 'ಹೋಮ್ ರಿಸೆಟ್' ಪ್ಲಾನ್! -
ಮಳೆಗಾಲದಲ್ಲಿ ನಿಮ್ಮ ಮನೆ ಮತ್ತು ಬಲ್ಕನಿ ಸುರಕ್ಷಿತವಾಗಿಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್: ಕೇರಳದಲ್ಲಿ ಯೆಲ್ಲೋ ಅಲರ್ಟ್! -
ರಕ್ಷಾಬಂಧನಕ್ಕೆ ಪನ್ನೀರ್ ಖರೀದಿಸುವ ಮುನ್ನ ಎಚ್ಚರ: ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ರಾಖಿ ಹಬ್ಬ 2026: ಆಗಸ್ಟ್ 28ರಂದು ರಕ್ಷಾಬಂಧನ ಆಚರಣೆ; ಶುಭ ಮುಹೂರ್ತ ಮತ್ತು ಭದ್ರಾ ಕಾಲದ ಸಂಪೂರ್ಣ ಮಾಹಿತಿ ಇಲ್ಲಿದೆ -
ಬೆಂಗಳೂರು ಮಳೆ: ಮನೆಯಲ್ಲೇ ಮಾಡಿ 15 ನಿಮಿಷದ ನೋ-ಜಂಪ್ ವರ್ಕೌಟ್, ಫಿಟ್ ಆಗಿರಿ! -
ಮಳೆಗಾಲದ ಪ್ರಯಾಣ: ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ನಡೆಯಲು 7 ನಿಮಿಷದ ಸರಳ ವ್ಯಾಯಾಮಗಳು -
ಮಳೆಗಾಲದ ಪ್ರಯಾಣ: ಟ್ರಾಫಿಕ್ ಮತ್ತು ಕ್ಯಾಬ್ ಸಮಸ್ಯೆಗಳ ನಡುವೆ ದಂಪತಿಗಳು ನೆಮ್ಮದಿ ಕಾಪಾಡಿಕೊಳ್ಳುವುದು ಹೇಗೆ? -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ಇಂದಿನ ಪರಿಷ್ಕೃತ ಪಟ್ಟಿ ಮತ್ತು ನಿಮ್ಮ ಪ್ರಕರಣದ ಸ್ಥಿತಿ ಪರಿಶೀಲಿಸಿ -
ಓಣಂ ಹಬ್ಬ: ಮಳೆಗೆ ಹಾಳಾಗದ, ₹500ರೊಳಗೆ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್!
ಕಾಳಸರ್ಪ ದೋಷದ ಅಪಾಯಗಳೇನು? ಇದಕ್ಕೆ ಪರಿಹಾರವೇನು?
ಯಾರಿಗಾದರೂ ಹಾವು ಕಚ್ಚಿ ಸತ್ತರೆ ಅಥವಾ ಒಬ್ಬ ವ್ಯಕ್ತಿಗೆ ಒಮ್ಮೆ ಹಾವು ಕಚ್ಚಿ ಬದುಕಿದರೂ ನಂತರ ಮತ್ತೆ ಹಾವು ಕಚ್ಚಿದೆ ಅವನಿಗೆ/ಅವಳಿಗೆ ಸರ್ಪ ದೋಷವಿದೆ, ಅದಕ್ಕೆ ಈ ರೀತಿ ಉಂಟಾಗಿದೆ ಎಂದು ಹೇಳುತ್ತಾರೆ. ನಾಗ ದೋಷಿವಿದ್ದರೆ ಅದಕ್ಕೆ ಪರಿಹಾರ ಮಾಡದಿದ್ದರೆ ಒಳ್ಳೆಯದಲ್ಲ ಎಂಬ ನಂಬಿಕೆ ನಮ್ಮಲ್ಲಿ ಬಲವಾಗಿದೆ. ದೊಡ್ಡ ಸೆಲೆಬ್ರಿಟಗಳಿಂದ ಹಿಡಿದು ಜನಸಾಮಾನ್ಯರವರೆಗೆ ನಾಗದೋಷಕ್ಕೆ ಭಯಪಡುತ್ತಾರೆ. ತುಂಬಾ ಜನರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು ನಾಗ ದೋಷಕ್ಕೆ ಪರಿಹಾರ ಮಾಡಿಸುತ್ತಾರೆ. ನಾಗ ದೋಷವೆಂಬುವುದು ನಮ್ಮ ಜನ್ಮ ಕುಂಡಲಿಯಲ್ಲಿ ಇರುತ್ತದೆ ಎಂದು ಹೇಳಲಾಗುವುದು.

ಸರ್ಪ ದೋಷಕ್ಕೆ ಪರಿಹಾರ
ಸರ್ಪ ದೋಷ ಇರುವವರು ಈ ದೋಷ ಪರಿಹಾರ ಮಾಡುವ ದೇವಾಲಯಕ್ಕೆ ಹೋಗಿ ಪರಿಹಾರ ಮಾಡಬೇಕು. ಕರ್ನಾಟಕದಲ್ಲಿ ಕುಕ್ಕೆ ಸುಬ್ರಹ್ಮಣ್ಯ, ಉಜ್ವೈನ್ನ ಮಹಾಕಾಳೇಶ್ವರ ದೇವಾಲಯ, ಆಂಧ್ರದ ಶ್ರೀ ಕಾಳಹಸ್ತಿ ಮತ್ತು ಮೋಪಿದೇವಿ ಸುಬ್ರಹ್ಮಣ್ಯ ದೇವಾಲಯ, ತಮಿಳುನಾಡಿನ ರಾಮನಾಥ ಸ್ವಾಮಿ ದೇವಾಲಯ ಹೀಗೆ ಸರ್ಪದೋಷದ ಪರಿಹಾರಕ್ಕೆ ನಿರ್ದಿಷ್ಟವಾದ ದೇವಾಲಯಗಳಿಗೆ ಹೋಗಿ ಪೂಜೆಯನ್ನು ಮಾಡಿಸಬೇಕು.
* ರಾಹು-ಕೇತು ಪೂಜೆ ಮಾಡುವ ಮುನ್ನ ಗಣಪತಿಯನ್ನು ಪೂಜಿಸಬೇಕು. ನಂತರ ರಾಹು-ಕೇತುವಿಗೆ ಪೂಜಿಯನ್ನು ಸಲ್ಲಿಸಬೇಕು.
* ಸರ್ಪದೋಷ ಇರುವವರು ಉತ್ತಮ ಪರಿಹಾರ ಕಾಣುವವರಿಗೆ ವರ್ಷದಲ್ಲಿ ಎರಡು ಬಾರಿ ಅಂದ್ರೆ ಉತ್ತರಾಯಣ ಕಾಲದಲ್ಲಿ ಹಾಗೂ ದಕ್ಷಿಣಾಯನ ಕಾಲದಲ್ಲಿ ಪೂಜೆ ಮಾಡಬೇಕು. ಸ
* ರ್ಪದೊಷ ನಿವಾರಣೆಗೆ ಪ್ರತಿದಿನ ಹನುಮಾನ ಚಾಲೀಸ ಪಠಿಸಬೇಕು, ನರಸಿಂಹ ಸ್ವಾಮಿ ಅಥವಾ ಸುಬ್ರಹ್ಮಣ್ಯ ಸ್ವಾಮಿ ದೇವಾಲಯಕ್ಕೆ ಪ್ರತಿನಿತ್ಯ ಭೇಟಿ ಕೊಟ್ಟು ಪೂಜೆ ಸಲ್ಲಿಸಬೇಕು.
* ಪ್ರತೀವರ್ಷ ಗರುಡ ಪಂಚಮಿ ವ್ರತ ಪಾಲಿಸಿದರೆ ತುಂಬಾನೇ ಒಳ್ಳೆಯದು.
* 43 ಬುಧವಾರ ಬಡವರಿಗೆ ಧಾನ್ಯಗಳನ್ನು ದಾನ ಮಾಡಬೇಕು
* ಷಷ್ಠಿ ಪೂಜೆ ಮಾಡಬೇಕು
ಹೀಗೆ ಮಾಡುವುದರಿಂದ ಪರಿಹಾರ ಕಂಡುಕೊಳ್ಳಬಹುದು.

ಸರ್ಪದೋಷ ಎಂದರೇನು?
ರಾಹು 3ನೇ ಮನೆಯಲ್ಲಿದ್ದು ಕೇತು 9ನೇ ಮನೆಯಲ್ಲಿರುವಾಗ ಉಳಿದ ಗ್ರಹಗಳು 4, 8, 10, 2ನೇ ಮನೆಯಲ್ಲಿದ್ದರೆ ಸರ್ಪದೋಷವಿದೆ ಎಂದು ಹೇಳಲಾಗುವುದು.

ಸರ್ಪದೋಷವಿದ್ದರೆ ಏನಾಗುತ್ತೆ?
* ವ್ಯಕ್ತಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ
* ಸಾವಿನ ಭಯ ಕಾಡುವುದು
* ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಗೊಂದಲ ಉಂಟಾಗುವುದು
* ಪ್ರೀತಿ, ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಉಂಟಾಗುವುದು
* ಔಷಧಿ ತೆಗೆದುಕೊಂಡರೂ ಕಾಯಿಲೆ ಕಡಿಮೆಯಾಗುವುದಿಲ್ಲ.
* ಆರ್ಥಿಕ ತೊಂದರೆಗಳು ಉಂಟಾಗುವುದು, ವೃತ್ತಿ ಬದುಕಿನಲ್ಲಿ ತೊಂದರೆ ಉಂಟಾಗುವುದು.
* ಸಂಗಾತಿ ಅಥವಾ ವ್ಯವಹಾರ ಪಾಲುದಾರರಿಂದ ಮೋಸ ಉಂಟಾಗುವುದು
* ಯಶಸ್ಸು, ಗೌರವ ಸಿಗುವುದಿಲ್ಲ
* ರಾತ್ರಿಯಲ್ಲಿ ಸರಿಯಾಗಿ ನಿದ್ದೆ ಕೂಡ ಮಾಡಲಾಗುವುದಿಲ್ಲ
* ಆತ್ಮವಿಶ್ವಾಸ ಕಡಿಮೆಯಾಗುವುದು
* ಮಾನಸಿಕ ನೆಮ್ಮದಿ ಕಡಿಮೆಯಾಗುವುದು

ಕಾಳಸರ್ಪ ದೋಷಕ್ಕೆ ಪರಿಹಾರ
* ಸುಬ್ರಹ್ಮಣ್ಯ ಸ್ವಾಮಿ ದೇವಾಲಯಕ್ಕೆ ಹೋಗಿ ಪೂಜೆ ಮಾಡಿಸಿ.
* ಕಾಳ ಸರ್ಪ ಯೋಗ ಯಂತ್ರವನ್ನು ದೇವರ ಕೋಣೆಯಲ್ಲಿ ಇಟ್ಟು ಪ್ರತಿದಿನ ಪೂಜಿಸಿ
* ಬುಧವಾರ ಮತ್ತು ಶುಕ್ರವಾರ ಕಾಳಸರ್ಪದೋಷ ನಿವಾರಣೆ ಪೂಜೆ ಆಡಿಸಿ
* ಅಶ್ಲೇಷ ಬಲಿ ಮಾಡಿಸಿ
* ನಾಗರಪಂಚಮಿಯಂದು ಸರ್ಪಶಾಂತಿ ಹೋಮ ಮಾಡಿಸಿ
* 14 ಮುಖದ ರುದ್ರಾಕ್ಷ ಧರಿಸಿ.
* ಪ್ರತಿದಿನ ಗೋಮೇಧಿಕ ಹರಳನ್ನು ಕೈಯಲ್ಲಿ ಹಿಡಿದು 108 ಬಾರಿ ರಾಹು ಬೀಜ ಮಂತ್ರ 'ಉನ್ ಭ್ರು ಭ್ರೂಂ: ರಾಹುವೇ ನಮಃ:' ಪಠಿಸಿ.
* ಶನಿವಾರ ಆಲದ ಮರಕ್ಕೆ ನೀರು ಹಾಕಿ.

ಇತರ ಪರಿಹಾರ
* ಶನಿವಾರ ಅಥವಾ ಪಂಚಮಿ ತಿಥಿಯಂದು ನದಿಗೆ 11 ತೆಂಗಿನಕಾಯಿಯನ್ನು ಅರ್ಪಿಸಿ
* ಕಾಳ ಸರ್ಪ ಗಾಯತ್ತಿ ಮಂತ್ರ ಪಠಿಸಿ
* ವಿಷ್ಣು ಸಹಸ್ರನಾಮ ಪಠಿಸಿ
* ಮಾನಸ ದೇವಿಯನ್ನು ಪೂಜಿಸಿ
* ಮನೆಯಲ್ಲಿ ನಾಯಿಯನ್ನು ಸಾಕಿ. ಇದು ಆಪತ್ತುಗಳಿಂದ ಕಾಪಾಡುವ ಬಟುಕ ಭೈರವನನ್ನು ಸಂತೋಷಪಡಿಸುತ್ತದೆ.



Click it and Unblock the Notifications