Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಭಗವಾನ್ 'ವಿಷ್ಣುವಿನ' ಹೆಸರಿನ ಹಿಂದಿದೆ, ಕುತೂಹಲಕರ ಸಂಗತಿ
ಹಿಂದೂ ಧರ್ಮದಲ್ಲಿ ಮುಕ್ಕೋಟಿ ದೇವರು ಎನ್ನುವ ನಂಬಿಕೆಯಿದೆ. ಹಿಂದೂ ಪುರಾಣಗಳಲ್ಲಿಯೂ ಪ್ರತಿಯೊಂದು ದೇವರ ಬಗ್ಗೆ ಉಲ್ಲೇಖವಿದೆ. ಅದರಲ್ಲಿ ವಿಷ್ಣುವಿನ ಬಗ್ಗೆ ನಾವು ತಿಳಿದುಕೊಂಡಿರುವುದು ತುಂಬಾ ಕಡಿಮೆ ಮತ್ತು ಇನ್ನಷ್ಟು ತಿಳಿಯಬೇಕಾಗಿದೆ. ಹಿಂದೂ ಪುರಾಣಗಳಲ್ಲಿ ವಿಷ್ಣುವಿನ ಎರಡು ಮುಖಗಳ ಬಗ್ಗೆ ವಿವರ ನೀಡಲಾಗಿದೆ. ಒಂದರಲ್ಲಿ ಆತ ತುಂಬಾ ಶಾಂತ, ಮನೋಹರ ಹಾಗೂ ಸೌಮ್ಯವಾಗಿರುತ್ತಾನೆ. ಬ್ರಹ್ಮ, ವಿಷ್ಣು, ಮಹೇಶ್ವರ - ಈ ತ್ರಿಮೂರ್ತಿಗಳಲ್ಲಿ ಯಾರು ಸಮರ್ಥರು?
ಆದರೆ ಇನ್ನೊಂದರಲ್ಲಿ ಆತ ತುಂಬಾ ಅಪಾಯಕಾರಿಯಾಗಿ ಕಾಲಸ್ವರೂಪ ಶೇಷನಾಗ(ಹಾವುಗಳ ರಾಜ)ನ ಮೇಲೆ ಯಾವುದೇ ಭೀತಿಯಿಲ್ಲದೆ ವಿಶ್ರಾಂತಿ ಪಡೆಯುತ್ತಿರುತ್ತಾನೆ. ಇದನ್ನು ನೋಡುವ ಪ್ರತಿಯೊಬ್ಬನಿಗೂ ಹಾವುಗಳ ರಾಜನ ಮೇಲೆ ಸ್ವಲ್ಪವೂ ಆತಂಕವಿಲ್ಲದೆ ಕುಳಿತಿರಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಖಂಡಿತವಾಗಿಯೂ ಬರುತ್ತದೆ. ವಿಷ್ಣು ಏಕೆ ಶಾಪಗ್ರಸ್ತನಾದ ಎಂಬ ಒಂದು ಸಾಲಿಗ್ರಾಮದ ಕಥೆ
ಆದರೆ ದೇವರಾಗಿರುವ ಕಾರಣ ಇದು ಸಾಧ್ಯ ಎಂಬ ಉತ್ತರವೂ ನಮ್ಮಲ್ಲೇ ಇರುತ್ತದೆ. ವಿಷ್ಣುವಿನ ಇನ್ನಷ್ಟು ಶಕ್ತಿಗಳು ಮತ್ತು ವಿಷಯಗಳ ಬಗ್ಗೆ ನಿಮಗೆ ತಿಳಿದಿಲ್ಲ. ಇದನ್ನು ತಿಳಿದರೆ ನಿಮಗೊಮ್ಮೆ ಅಚ್ಚರಿಯಾಗಬಹುದು, ಮುಂದೆ ಒದಿ...

ವಿಷ್ಣುವಿನ ಹೆಸರೇಕೇ ನಾರಾಯಣ?
ಹಿಂದೂ ಪುರಾಣಗಳ ಪ್ರಕಾರ ವಿಷ್ಣುವಿನ ಭಕ್ತನಾಗಿರುವ ನಾರದನು ಯಾವಾಗಲೂ ನಾರಾಯಣ ನಾರಾಯಣ ಎಂದು ಜಪಿಸುತ್ತಾ ಇರುತ್ತಾನೆ. ಇದರಿಂದಾಗಿ ವಿಷ್ಣುವಿನ ಎಲ್ಲಾ ಹೆಸರುಗಳಿಗೆ ನಾರಾಯಣ ಸೇರ್ಪಡೆಯಾಗಿದೆ. ಉದಾಹರಣೆಗೆ: ಸತ್ಯನಾರಾಯಣ, ಅನಂತನಾರಾಯಣ, ಲಕ್ಷ್ಮೀನಾರಾಯಣ ಮತ್ತು ಧ್ರುವನಾರಾಯಣ... ಹೀಗೆ ಹಲವಾರು. ವಿಷ್ಣುವನ್ನು ನಾರಾಯಣ ಎಂದು ಕರೆಯುತ್ತಾರೆ ಎನ್ನುವುದು ಹೆಚ್ಚಿನವರ ನಂಬಿಕೆ. ಆದರೆ ಇದರ ಹಿಂದಿನ ರಹಸ್ಯ ತಿಳಿಯದೇ ಇರುವವರು ತುಂಬಾ ಮಂದಿ ಇದ್ದಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ವಿಷ್ಣುವಿನ ಹೆಸರೇಕೇ ನಾರಾಯಣ?
ಪುರಾಣಗಳ ಪ್ರಕಾರ ನೀರು ಯಾನೆ ಗಂಗಾ ನದಿಯು ವಿಷ್ಣುವಿನ ಕಾಲಿನಿಂದ ಹುಟ್ಟಿರುವ ಕಾರಣದಿಂದ ಅದನ್ನು `ವಿಷ್ಣು ಪಾದುಕಿ' ಎನ್ನುತ್ತಾರೆ. ನೀರನ್ನು `ನೀರು' ಅಥವಾ `ನರ' ಎಂದು ಹೇಳಲಾಗುತ್ತದೆ. ವಿಷ್ಣು ಕೂಡ ನೀರಿನಲ್ಲೇ ವಾಸಿಸುವ ಕಾರಣ ನಾರಾಯಣ ಹೆಸರು ನೀರಿನಿಂದಾಗಿ ಬಂದಿದೆ.

ಶೇಷನಾಗನ ಮೇಲೆ ವಿಷ್ಣು ವಿಶ್ರಾಂತಿ ಪಡೆಯುತ್ತಿರುವ ರಹಸ್ಯವೇನು?
ಜೀವನದ ಪ್ರತಿಯೊಂದು ಕ್ಷಣವು ಕರ್ತವ್ಯ ಮತ್ತು ಜವಾಬ್ದಾರಿಗಳಿಗೆ ನಂಟನ್ನು ಹೊಂದಿದೆ. ಕುಟುಂಬ, ಸಮಾಜ ಮತ್ತು ಆರ್ಥಿಕ ಜವಾಬ್ದಾರಿಯು ತುಂಬಾ ಪ್ರಾಮುಖ್ಯವಾದ ಜವಾಬ್ದಾರಿಗಳಾಗಿದೆ. ಈ ಜವಾಬ್ದಾರಿಗಳನ್ನು ನಿಭಾಯಿಸಲು ತುಂಬಾ ಕಠಿಣ ಪರಿಶ್ರಮ ಪಡಬೇಕು ಮತ್ತು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದು ಶೇಷನಾಗನಂತೆ ತುಂಬಾ ಭಯ ಹಾಗೂ ಆತಂಕ ಉಂಟುಮಾಡುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಶೇಷನಾಗನ ಮೇಲೆ ವಿಷ್ಣು ವಿಶ್ರಾಂತಿ ಪಡೆಯುತ್ತಿರುವ ರಹಸ್ಯವೇನು?
ಆದರೆ ವಿಷ್ಣುವಿನ ಇನ್ನೊಂದು ಮುಖವು ನಮ್ಮನ್ನು ಇಂತಹ ಕಠಿಣ ಸಮಯದಲ್ಲೂ ತುಂಬಾ ಶಾಂತ ಹಾಗೂ ತಾಳ್ಮೆಯಿಂದ ಇರುವಂತೆ ಪ್ರೇರೇಪಿಸುತ್ತದೆ. ಈ ಗುಣಗಳಿಂದಾಗಿಯೇ ಸಮಸ್ಯೆಗಳನ್ನು ಸುಲಭವಾಗಿ ನಿಭಾಯಿಸಬಹುದಾಗಿದೆ.

ಹರಿ ಹೆಸರಿನ ಅರ್ಥವೇನು?
ವಿಷ್ಣುವನ್ನು ಹರಿ ಎಂದು ಕರೆಯುತ್ತಾರೆ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಇದನ್ನು ಯಾಕಾಗಿ ಕರೆಯುತ್ತಾರೆಂದು ನಿಮಗೆ ಎಷ್ಟು ಮಂದಿಗೆ ತಿಳಿದಿದೆ. ಗ್ರಂಥಗಳ ಪ್ರಕಾರ ಹರಿ ಎಂದರೆ ತೆಗೆದುಹಾಕುವುದು ಅಥವಾ ಕದ್ದಿರುವುದು. `ಹರಿ ಹರತಿ ಪಾಪನಿ' ಎನ್ನುವ ವಾಕ್ಯವಿದೆ. ಹರಿಯು ನಮ್ಮೆಲ್ಲಾ ಪಾಪ ಹಾಗೂ ಸಮಸ್ಯೆಗಳನ್ನು ತೆಗೆದುಹಾಕುತ್ತಾನೆ ಎಂದು ಇದರರ್ಥ.



Click it and Unblock the Notifications