Just In
- 11 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
- 11 hrs ago ವೃಷಭ ರಾಶಿಗೆ ದೇವಗುರುವಿನ ಸಂಚಾರ: ಮೇಷ ರಾಶಿಗಳಿಗೆ ಇದರ ಪ್ರಭಾವ ಹೇಗಿರಲಿದೆ?
- 12 hrs ago ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- 13 hrs ago ದಿನ ಭವಿಷ್ಯ ಏಪ್ರಿಲ್ 19: ಶುಕ್ರವಾರದ ಈ ಶುಭ ದಿನ ನಿಮ್ಮ ರಾಶಿಗೆ ಹೇಗಿರಲಿದೆ?
Don't Miss
- News Big Offer for Bengaluru Voters: ಮತದಾರರಿಗೆ ಗುಡ್ ನ್ಯೂಸ್.. ರಿಯಾಯಿತಿ ದರದಲ್ಲಿ ತಿಂಡಿ ವ್ಯವಸ್ಥೆ
- Technology ಇಂದು ಮತ್ತೆ ಮೊಟೊರೊಲಾ ಎಡ್ಜ್ 50 ಪ್ರೊ ಫೋನಿನ ಸ್ಪೆಷಲ್ ಸೇಲ್!..ಡಿಸ್ಕೌಂಟ್ ಎಷ್ಟು?
- Sports PBKS vs MI IPL 2024: ಮತ್ತೊಮ್ಮೆ ಕೊನೆಯ ಓವರ್ನಲ್ಲಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸನ್ನಿವೇಶ ಹೇಗಿದೆ?
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Movies 'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭಗವಾನ್ 'ವಿಷ್ಣುವಿನ' ಹೆಸರಿನ ಹಿಂದಿದೆ, ಕುತೂಹಲಕರ ಸಂಗತಿ
ಹಿಂದೂ ಧರ್ಮದಲ್ಲಿ ಮುಕ್ಕೋಟಿ ದೇವರು ಎನ್ನುವ ನಂಬಿಕೆಯಿದೆ. ಹಿಂದೂ ಪುರಾಣಗಳಲ್ಲಿಯೂ ಪ್ರತಿಯೊಂದು ದೇವರ ಬಗ್ಗೆ ಉಲ್ಲೇಖವಿದೆ. ಅದರಲ್ಲಿ ವಿಷ್ಣುವಿನ ಬಗ್ಗೆ ನಾವು ತಿಳಿದುಕೊಂಡಿರುವುದು ತುಂಬಾ ಕಡಿಮೆ ಮತ್ತು ಇನ್ನಷ್ಟು ತಿಳಿಯಬೇಕಾಗಿದೆ. ಹಿಂದೂ ಪುರಾಣಗಳಲ್ಲಿ ವಿಷ್ಣುವಿನ ಎರಡು ಮುಖಗಳ ಬಗ್ಗೆ ವಿವರ ನೀಡಲಾಗಿದೆ. ಒಂದರಲ್ಲಿ ಆತ ತುಂಬಾ ಶಾಂತ, ಮನೋಹರ ಹಾಗೂ ಸೌಮ್ಯವಾಗಿರುತ್ತಾನೆ. ಬ್ರಹ್ಮ, ವಿಷ್ಣು, ಮಹೇಶ್ವರ - ಈ ತ್ರಿಮೂರ್ತಿಗಳಲ್ಲಿ ಯಾರು ಸಮರ್ಥರು?
ಆದರೆ ಇನ್ನೊಂದರಲ್ಲಿ ಆತ ತುಂಬಾ ಅಪಾಯಕಾರಿಯಾಗಿ ಕಾಲಸ್ವರೂಪ ಶೇಷನಾಗ(ಹಾವುಗಳ ರಾಜ)ನ ಮೇಲೆ ಯಾವುದೇ ಭೀತಿಯಿಲ್ಲದೆ ವಿಶ್ರಾಂತಿ ಪಡೆಯುತ್ತಿರುತ್ತಾನೆ. ಇದನ್ನು ನೋಡುವ ಪ್ರತಿಯೊಬ್ಬನಿಗೂ ಹಾವುಗಳ ರಾಜನ ಮೇಲೆ ಸ್ವಲ್ಪವೂ ಆತಂಕವಿಲ್ಲದೆ ಕುಳಿತಿರಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಖಂಡಿತವಾಗಿಯೂ ಬರುತ್ತದೆ. ವಿಷ್ಣು ಏಕೆ ಶಾಪಗ್ರಸ್ತನಾದ ಎಂಬ ಒಂದು ಸಾಲಿಗ್ರಾಮದ ಕಥೆ
ಆದರೆ
ದೇವರಾಗಿರುವ
ಕಾರಣ
ಇದು
ಸಾಧ್ಯ
ಎಂಬ
ಉತ್ತರವೂ
ನಮ್ಮಲ್ಲೇ
ಇರುತ್ತದೆ.
ವಿಷ್ಣುವಿನ
ಇನ್ನಷ್ಟು
ಶಕ್ತಿಗಳು
ಮತ್ತು
ವಿಷಯಗಳ
ಬಗ್ಗೆ
ನಿಮಗೆ
ತಿಳಿದಿಲ್ಲ.
ಇದನ್ನು
ತಿಳಿದರೆ
ನಿಮಗೊಮ್ಮೆ
ಅಚ್ಚರಿಯಾಗಬಹುದು,
ಮುಂದೆ
ಒದಿ...
ವಿಷ್ಣುವಿನ ಹೆಸರೇಕೇ ನಾರಾಯಣ?
ಹಿಂದೂ ಪುರಾಣಗಳ ಪ್ರಕಾರ ವಿಷ್ಣುವಿನ ಭಕ್ತನಾಗಿರುವ ನಾರದನು ಯಾವಾಗಲೂ ನಾರಾಯಣ ನಾರಾಯಣ ಎಂದು ಜಪಿಸುತ್ತಾ ಇರುತ್ತಾನೆ. ಇದರಿಂದಾಗಿ ವಿಷ್ಣುವಿನ ಎಲ್ಲಾ ಹೆಸರುಗಳಿಗೆ ನಾರಾಯಣ ಸೇರ್ಪಡೆಯಾಗಿದೆ. ಉದಾಹರಣೆಗೆ: ಸತ್ಯನಾರಾಯಣ, ಅನಂತನಾರಾಯಣ, ಲಕ್ಷ್ಮೀನಾರಾಯಣ ಮತ್ತು ಧ್ರುವನಾರಾಯಣ... ಹೀಗೆ ಹಲವಾರು. ವಿಷ್ಣುವನ್ನು ನಾರಾಯಣ ಎಂದು ಕರೆಯುತ್ತಾರೆ ಎನ್ನುವುದು ಹೆಚ್ಚಿನವರ ನಂಬಿಕೆ. ಆದರೆ ಇದರ ಹಿಂದಿನ ರಹಸ್ಯ ತಿಳಿಯದೇ ಇರುವವರು ತುಂಬಾ ಮಂದಿ ಇದ್ದಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ
ವಿಷ್ಣುವಿನ ಹೆಸರೇಕೇ ನಾರಾಯಣ?
ಪುರಾಣಗಳ ಪ್ರಕಾರ ನೀರು ಯಾನೆ ಗಂಗಾ ನದಿಯು ವಿಷ್ಣುವಿನ ಕಾಲಿನಿಂದ ಹುಟ್ಟಿರುವ ಕಾರಣದಿಂದ ಅದನ್ನು `ವಿಷ್ಣು ಪಾದುಕಿ' ಎನ್ನುತ್ತಾರೆ. ನೀರನ್ನು `ನೀರು' ಅಥವಾ `ನರ' ಎಂದು ಹೇಳಲಾಗುತ್ತದೆ. ವಿಷ್ಣು ಕೂಡ ನೀರಿನಲ್ಲೇ ವಾಸಿಸುವ ಕಾರಣ ನಾರಾಯಣ ಹೆಸರು ನೀರಿನಿಂದಾಗಿ ಬಂದಿದೆ.
ಶೇಷನಾಗನ ಮೇಲೆ ವಿಷ್ಣು ವಿಶ್ರಾಂತಿ ಪಡೆಯುತ್ತಿರುವ ರಹಸ್ಯವೇನು?
ಜೀವನದ ಪ್ರತಿಯೊಂದು ಕ್ಷಣವು ಕರ್ತವ್ಯ ಮತ್ತು ಜವಾಬ್ದಾರಿಗಳಿಗೆ ನಂಟನ್ನು ಹೊಂದಿದೆ. ಕುಟುಂಬ, ಸಮಾಜ ಮತ್ತು ಆರ್ಥಿಕ ಜವಾಬ್ದಾರಿಯು ತುಂಬಾ ಪ್ರಾಮುಖ್ಯವಾದ ಜವಾಬ್ದಾರಿಗಳಾಗಿದೆ. ಈ ಜವಾಬ್ದಾರಿಗಳನ್ನು ನಿಭಾಯಿಸಲು ತುಂಬಾ ಕಠಿಣ ಪರಿಶ್ರಮ ಪಡಬೇಕು ಮತ್ತು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದು ಶೇಷನಾಗನಂತೆ ತುಂಬಾ ಭಯ ಹಾಗೂ ಆತಂಕ ಉಂಟುಮಾಡುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ
ಶೇಷನಾಗನ ಮೇಲೆ ವಿಷ್ಣು ವಿಶ್ರಾಂತಿ ಪಡೆಯುತ್ತಿರುವ ರಹಸ್ಯವೇನು?
ಆದರೆ ವಿಷ್ಣುವಿನ ಇನ್ನೊಂದು ಮುಖವು ನಮ್ಮನ್ನು ಇಂತಹ ಕಠಿಣ ಸಮಯದಲ್ಲೂ ತುಂಬಾ ಶಾಂತ ಹಾಗೂ ತಾಳ್ಮೆಯಿಂದ ಇರುವಂತೆ ಪ್ರೇರೇಪಿಸುತ್ತದೆ. ಈ ಗುಣಗಳಿಂದಾಗಿಯೇ ಸಮಸ್ಯೆಗಳನ್ನು ಸುಲಭವಾಗಿ ನಿಭಾಯಿಸಬಹುದಾಗಿದೆ.
ಹರಿ ಹೆಸರಿನ ಅರ್ಥವೇನು?
ವಿಷ್ಣುವನ್ನು ಹರಿ ಎಂದು ಕರೆಯುತ್ತಾರೆ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಇದನ್ನು ಯಾಕಾಗಿ ಕರೆಯುತ್ತಾರೆಂದು ನಿಮಗೆ ಎಷ್ಟು ಮಂದಿಗೆ ತಿಳಿದಿದೆ. ಗ್ರಂಥಗಳ ಪ್ರಕಾರ ಹರಿ ಎಂದರೆ ತೆಗೆದುಹಾಕುವುದು ಅಥವಾ ಕದ್ದಿರುವುದು. `ಹರಿ ಹರತಿ ಪಾಪನಿ' ಎನ್ನುವ ವಾಕ್ಯವಿದೆ. ಹರಿಯು ನಮ್ಮೆಲ್ಲಾ ಪಾಪ ಹಾಗೂ ಸಮಸ್ಯೆಗಳನ್ನು ತೆಗೆದುಹಾಕುತ್ತಾನೆ ಎಂದು ಇದರರ್ಥ.