Latest Updates
-
ಬಿಸಿಗಾಳಿಯ ಆರ್ಭಟ: ಮನೆಯನ್ನು ತಂಪಾಗಿಡಲು ಮತ್ತು ಆರೋಗ್ಯ ಕಾಪಾಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ರೆಡ್ ಅಲರ್ಟ್: ಆಯುಷ್ ಸಚಿವಾಲಯದ ಈ ಸಿಂಪಲ್ ಟಿಪ್ಸ್ ಪಾಲಿಸಿದರೆ ಸಾಕು, ದೇಹ ತಂಪಾಗಿರುತ್ತೆ! -
ಬಿಸಿಲಿನ ಬೇಗೆಯಿಂದ ತತ್ತರಿಸಿದ ಕರ್ನಾಟಕ: ಮನೆಯಲ್ಲೇ ತಂಪಾಗಿರಲು ನೀವು ಮಾಡಬೇಕಾದ ಆ 5 ಬದಲಾವಣೆಗಳೇನು? -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
45 ಡಿಗ್ರಿ ಬಿಸಿಲಲ್ಲಿ ಮದುವೆ ಪ್ಲಾನ್ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ ಎಚ್ಚರಿಕೆ ಮರೆಯದಿರಿ! -
ಶಾಖದ ಅಲೆ ಎಚ್ಚರಿಕೆ: ಎಸಿ ಇಲ್ಲದೆ ಮನೆಯನ್ನು ತಂಪಾಗಿಡಲು ಮತ್ತು ನಿಮ್ಮ ಗಿಡಗಳನ್ನು ಬಿಸಿಲಿನಿಂದ ರಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ಪಾನೀಯ ಮತ್ತು ಆಹಾರವೇ ಸಂಜೀವಿನಿ! -
ಸೀರೆ ಉಡೋದ್ರಲ್ಲಿ ಹೊಸ ಕ್ರಾಂತಿ: ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗ್ತಿರೋ 'ದೇಸಿ-ಕೋರ್' ಸೀರೆ ಸ್ಟೈಲ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಬೇಗೆಯಲ್ಲೂ ಫಿಟ್ ಆಗಿರಬೇಕೆ? ಮುಂಜಾನೆಯ ಈ ಸಣ್ಣ ಬದಲಾವಣೆ ನಿಮ್ಮ ಆರೋಗ್ಯಕ್ಕೆ ವರದಾನ! -
ಬಿಸಿಲ ಧಗೆಯಲ್ಲಿ ಮದುವೆ ಸಮಾರಂಭಗಳ ಸಂಕಟ: ಅತಿಥಿಗಳಿಗೂ ನಿಮಗೂ ಆರಾಮ ನೀಡುವ ಸೀಕ್ರೆಟ್ ಟಿಪ್ಸ್ ಇಲ್ಲಿದೆ!
ಭಗವಾನ್ 'ವಿಷ್ಣುವಿನ' ಹೆಸರಿನ ಹಿಂದಿದೆ, ಕುತೂಹಲಕರ ಸಂಗತಿ
ಹಿಂದೂ ಧರ್ಮದಲ್ಲಿ ಮುಕ್ಕೋಟಿ ದೇವರು ಎನ್ನುವ ನಂಬಿಕೆಯಿದೆ. ಹಿಂದೂ ಪುರಾಣಗಳಲ್ಲಿಯೂ ಪ್ರತಿಯೊಂದು ದೇವರ ಬಗ್ಗೆ ಉಲ್ಲೇಖವಿದೆ. ಅದರಲ್ಲಿ ವಿಷ್ಣುವಿನ ಬಗ್ಗೆ ನಾವು ತಿಳಿದುಕೊಂಡಿರುವುದು ತುಂಬಾ ಕಡಿಮೆ ಮತ್ತು ಇನ್ನಷ್ಟು ತಿಳಿಯಬೇಕಾಗಿದೆ. ಹಿಂದೂ ಪುರಾಣಗಳಲ್ಲಿ ವಿಷ್ಣುವಿನ ಎರಡು ಮುಖಗಳ ಬಗ್ಗೆ ವಿವರ ನೀಡಲಾಗಿದೆ. ಒಂದರಲ್ಲಿ ಆತ ತುಂಬಾ ಶಾಂತ, ಮನೋಹರ ಹಾಗೂ ಸೌಮ್ಯವಾಗಿರುತ್ತಾನೆ. ಬ್ರಹ್ಮ, ವಿಷ್ಣು, ಮಹೇಶ್ವರ - ಈ ತ್ರಿಮೂರ್ತಿಗಳಲ್ಲಿ ಯಾರು ಸಮರ್ಥರು?
ಆದರೆ ಇನ್ನೊಂದರಲ್ಲಿ ಆತ ತುಂಬಾ ಅಪಾಯಕಾರಿಯಾಗಿ ಕಾಲಸ್ವರೂಪ ಶೇಷನಾಗ(ಹಾವುಗಳ ರಾಜ)ನ ಮೇಲೆ ಯಾವುದೇ ಭೀತಿಯಿಲ್ಲದೆ ವಿಶ್ರಾಂತಿ ಪಡೆಯುತ್ತಿರುತ್ತಾನೆ. ಇದನ್ನು ನೋಡುವ ಪ್ರತಿಯೊಬ್ಬನಿಗೂ ಹಾವುಗಳ ರಾಜನ ಮೇಲೆ ಸ್ವಲ್ಪವೂ ಆತಂಕವಿಲ್ಲದೆ ಕುಳಿತಿರಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಖಂಡಿತವಾಗಿಯೂ ಬರುತ್ತದೆ. ವಿಷ್ಣು ಏಕೆ ಶಾಪಗ್ರಸ್ತನಾದ ಎಂಬ ಒಂದು ಸಾಲಿಗ್ರಾಮದ ಕಥೆ
ಆದರೆ ದೇವರಾಗಿರುವ ಕಾರಣ ಇದು ಸಾಧ್ಯ ಎಂಬ ಉತ್ತರವೂ ನಮ್ಮಲ್ಲೇ ಇರುತ್ತದೆ. ವಿಷ್ಣುವಿನ ಇನ್ನಷ್ಟು ಶಕ್ತಿಗಳು ಮತ್ತು ವಿಷಯಗಳ ಬಗ್ಗೆ ನಿಮಗೆ ತಿಳಿದಿಲ್ಲ. ಇದನ್ನು ತಿಳಿದರೆ ನಿಮಗೊಮ್ಮೆ ಅಚ್ಚರಿಯಾಗಬಹುದು, ಮುಂದೆ ಒದಿ...

ವಿಷ್ಣುವಿನ ಹೆಸರೇಕೇ ನಾರಾಯಣ?
ಹಿಂದೂ ಪುರಾಣಗಳ ಪ್ರಕಾರ ವಿಷ್ಣುವಿನ ಭಕ್ತನಾಗಿರುವ ನಾರದನು ಯಾವಾಗಲೂ ನಾರಾಯಣ ನಾರಾಯಣ ಎಂದು ಜಪಿಸುತ್ತಾ ಇರುತ್ತಾನೆ. ಇದರಿಂದಾಗಿ ವಿಷ್ಣುವಿನ ಎಲ್ಲಾ ಹೆಸರುಗಳಿಗೆ ನಾರಾಯಣ ಸೇರ್ಪಡೆಯಾಗಿದೆ. ಉದಾಹರಣೆಗೆ: ಸತ್ಯನಾರಾಯಣ, ಅನಂತನಾರಾಯಣ, ಲಕ್ಷ್ಮೀನಾರಾಯಣ ಮತ್ತು ಧ್ರುವನಾರಾಯಣ... ಹೀಗೆ ಹಲವಾರು. ವಿಷ್ಣುವನ್ನು ನಾರಾಯಣ ಎಂದು ಕರೆಯುತ್ತಾರೆ ಎನ್ನುವುದು ಹೆಚ್ಚಿನವರ ನಂಬಿಕೆ. ಆದರೆ ಇದರ ಹಿಂದಿನ ರಹಸ್ಯ ತಿಳಿಯದೇ ಇರುವವರು ತುಂಬಾ ಮಂದಿ ಇದ್ದಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ವಿಷ್ಣುವಿನ ಹೆಸರೇಕೇ ನಾರಾಯಣ?
ಪುರಾಣಗಳ ಪ್ರಕಾರ ನೀರು ಯಾನೆ ಗಂಗಾ ನದಿಯು ವಿಷ್ಣುವಿನ ಕಾಲಿನಿಂದ ಹುಟ್ಟಿರುವ ಕಾರಣದಿಂದ ಅದನ್ನು `ವಿಷ್ಣು ಪಾದುಕಿ' ಎನ್ನುತ್ತಾರೆ. ನೀರನ್ನು `ನೀರು' ಅಥವಾ `ನರ' ಎಂದು ಹೇಳಲಾಗುತ್ತದೆ. ವಿಷ್ಣು ಕೂಡ ನೀರಿನಲ್ಲೇ ವಾಸಿಸುವ ಕಾರಣ ನಾರಾಯಣ ಹೆಸರು ನೀರಿನಿಂದಾಗಿ ಬಂದಿದೆ.

ಶೇಷನಾಗನ ಮೇಲೆ ವಿಷ್ಣು ವಿಶ್ರಾಂತಿ ಪಡೆಯುತ್ತಿರುವ ರಹಸ್ಯವೇನು?
ಜೀವನದ ಪ್ರತಿಯೊಂದು ಕ್ಷಣವು ಕರ್ತವ್ಯ ಮತ್ತು ಜವಾಬ್ದಾರಿಗಳಿಗೆ ನಂಟನ್ನು ಹೊಂದಿದೆ. ಕುಟುಂಬ, ಸಮಾಜ ಮತ್ತು ಆರ್ಥಿಕ ಜವಾಬ್ದಾರಿಯು ತುಂಬಾ ಪ್ರಾಮುಖ್ಯವಾದ ಜವಾಬ್ದಾರಿಗಳಾಗಿದೆ. ಈ ಜವಾಬ್ದಾರಿಗಳನ್ನು ನಿಭಾಯಿಸಲು ತುಂಬಾ ಕಠಿಣ ಪರಿಶ್ರಮ ಪಡಬೇಕು ಮತ್ತು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದು ಶೇಷನಾಗನಂತೆ ತುಂಬಾ ಭಯ ಹಾಗೂ ಆತಂಕ ಉಂಟುಮಾಡುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಶೇಷನಾಗನ ಮೇಲೆ ವಿಷ್ಣು ವಿಶ್ರಾಂತಿ ಪಡೆಯುತ್ತಿರುವ ರಹಸ್ಯವೇನು?
ಆದರೆ ವಿಷ್ಣುವಿನ ಇನ್ನೊಂದು ಮುಖವು ನಮ್ಮನ್ನು ಇಂತಹ ಕಠಿಣ ಸಮಯದಲ್ಲೂ ತುಂಬಾ ಶಾಂತ ಹಾಗೂ ತಾಳ್ಮೆಯಿಂದ ಇರುವಂತೆ ಪ್ರೇರೇಪಿಸುತ್ತದೆ. ಈ ಗುಣಗಳಿಂದಾಗಿಯೇ ಸಮಸ್ಯೆಗಳನ್ನು ಸುಲಭವಾಗಿ ನಿಭಾಯಿಸಬಹುದಾಗಿದೆ.

ಹರಿ ಹೆಸರಿನ ಅರ್ಥವೇನು?
ವಿಷ್ಣುವನ್ನು ಹರಿ ಎಂದು ಕರೆಯುತ್ತಾರೆ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಇದನ್ನು ಯಾಕಾಗಿ ಕರೆಯುತ್ತಾರೆಂದು ನಿಮಗೆ ಎಷ್ಟು ಮಂದಿಗೆ ತಿಳಿದಿದೆ. ಗ್ರಂಥಗಳ ಪ್ರಕಾರ ಹರಿ ಎಂದರೆ ತೆಗೆದುಹಾಕುವುದು ಅಥವಾ ಕದ್ದಿರುವುದು. `ಹರಿ ಹರತಿ ಪಾಪನಿ' ಎನ್ನುವ ವಾಕ್ಯವಿದೆ. ಹರಿಯು ನಮ್ಮೆಲ್ಲಾ ಪಾಪ ಹಾಗೂ ಸಮಸ್ಯೆಗಳನ್ನು ತೆಗೆದುಹಾಕುತ್ತಾನೆ ಎಂದು ಇದರರ್ಥ.



Click it and Unblock the Notifications