Just In
- 6 hrs ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- 6 hrs ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 7 hrs ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 7 hrs ago ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
Don't Miss
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Movies "ನಾವು ದಕ್ಷಿಣ ಭಾರತದವರಾಗಿದ್ರೂ ಭಾಷೆ ಬರುತ್ತೆ, ಸುಂದರವಾಗಿಯೂ ಇದ್ದೇವೆ"; ನಟಿ ಪ್ರಿಯಾಮಣಿ
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಷ್ಟಗಳು ನೀಗಲು ಶನಿ ದೇವನನ್ನು ಒಲಿಸಿಕೊಳ್ಳುವುದು ಹೇಗೆ?
ನಮ್ಮ ಬದುಕಿನಲ್ಲಿ ಏಳಿಗೆಯಾಗಬೇಕಾದರೆ ಶನಿಯ ವಕ್ರದೃಷ್ಟಿ ಇರಬಾರದು, ಶನಿಯ ಕೃಪೆ ಇರಬೇಕೆಂದು ಹೇಳುತ್ತಾರೆ. ಶನಿವಾರ ಶನಿ ದೇವನಿಗೆ ಮೀಸಲು.
ಶನಿಯ ವಕ್ರದೃಷ್ಟಿಗೆ ಬಿದ್ದರೆ ಯಾವ ಗ್ರಹಗಳಿಂದಲೂ ನಮ್ಮನ್ನು ಪಾರು ಮಾಡಲು ಸಾಧ್ಯವಿಲ್ಲ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಶನಿಯು ಕಷ್ಟದ ಸಂಕೇತವಾಗಿದೆ. ಯಾರು ಆತನ ಕಷ್ಟಗಳನ್ನು ಗೆಲ್ಲುತ್ತಾರೋ ಅವರು ಅವನ ಕೃಪೆಗೆ ಪಾತ್ರರಾಗುತ್ತಾರೆ, ಪ್ರಗತಿಯನ್ನು ಹೊಂದುತ್ತಾರೆ
ಶನಿಯ ಕೃಪೆಗೆ ಪಾತ್ರರಾಗಲು ಹಾಗೂ ಶನಿ ದೋಷವಿದ್ದರೆ ಆ ಕಷ್ಟಗಳು ಬೇಗನೆ ನೀಗಲು ಶನಿವಾರ ಶನಿಯನ್ನು ಈ ರೀತಿ ಪೂಜಿಸಿ:
ಸಾಸಿವೆಯೆಣ್ಣೆ ಅಥವಾ ಎಳ್ಳೆಣ್ಣೆ ಅರ್ಪಿಸಿ
ಶನಿ ದೇವನ ಕೃಪೆಗೆ ಪಾತ್ರರಾಗಲು ಇದೊಂದು ತುಂಬಾ ಜನಪ್ರಿಯವಾದ ವಿಧಾನವಾಗಿದೆ. ತಾಮ್ರದ ಪಾತ್ರೆಗೆ ಸಾಸಿವೆಯೆಣ್ಣೆ ಅಥವಾ ಎಳ್ಳೆಣ್ಣೆ ತುಂಬಿ ಶನಿ ದೇವರ ಮೂರ್ತಿಗೆ ಅರ್ಪಿಸಬೇಕು. ಈ ರೀತಿ ಎಣ್ಣೆ ಅರ್ಪಿಸುವಾಗ ಓಂ ಪ್ರಾಂ ಪ್ರೀಂ ಪ್ರೌಂ ಸಃ ಶನೈಶ್ಚರಾಯ ನಮಃ
ಓಂ ಐಂಗ್ ಹ್ರಿಂಗ್ ಶ್ರೀಂಗ್ ಶಂಗ್ ಶನೈಶ್ಚರಾಯ ನಮಃ ಓಂ
ಓಂ ಹಿಂ ಶಂ ಶನಯೇ ನಮಃ
ಓಂ ಶಂ ಶನೈಶ್ಚರಾಯ ನಮಃ ಎಂದು ಶನಿ ಬೀಜ ಮಂತ್ರ ಹೇಳಿ.
ಹನುಮಂತನನ್ನು ಪೂಜಿಸಿ
ಶನಿವಾರ ಹನುಮಂತನನ್ನು ಭಕ್ತಿಯಿಂದ ಪೂಜಿಸಿದರೆ ಶನಿಯ ಹನುಮಂತನ ಕೃಪೆಯ ಜೊತೆಗೆ ಶನಿಯ ಕೃಪೆಗೆ ಪಾತ್ರರಾಗುವಿರಿ. ಹಿಂದೂ ಪುರಾಣದ ಪ್ರಕಾರ ಹನುಮಂತ ಶನಿ ದೇವನನ್ನು ರಾಕ್ಷಸ ರಾವಣನಿಂದ ಕಾಪಾಡುತ್ತಾನೆ. ಆದ್ದರಿಂದ ಹನುಮಂತನಿಗೆ ಪೂಜೆ ಸಲ್ಲಿಸಿದರೆ ಶನಿ ದೇವ ನಿಮ್ಮನ್ನು ಹರಿಸುತ್ತಾನೆ.
ದಾನ ಮಾಡಿ
ಶನಿವಾರ ನಿಮ್ಮ ಕೈಯಲ್ಲಿ ಆದಷ್ಟು ಬಡವರಿಗೆ ದಾನ ಮಾಡಿ. ಯಾವುದೇ ಫಲ ಅಪೇಕ್ಷೆಯಿಲ್ಲದೆ ದಾನ ಮಾಡಬೇಕು.
ಮನೆಯನ್ನು ಸ್ವಚ್ಛವಾಗಿ ಇಡಬೇಕು
ನೀವು ಮನೆಯಲ್ಲಿರುವ ಕಸವೆಲ್ಲಾ ತೆಗೆದು ಸ್ವಚ್ಛವಾಗಿಡಬೇಕು. ಮುರಿದ ವಸ್ತುಗಳನ್ನು ಹೊರಗಡೆ ಹಾಕಿ. ಮನೆಯನ್ನು ಮಾತ್ರವಲ್ಲ ಮನಸ್ಸನ್ನು ಶುದ್ಧ ಮಾಡಿ, ನಿಮ್ಮಲ್ಲಿರುವ ಎಲ್ಲಾ ಋಣಾತ್ಮಕ ಚಿಂತೆಗಳನ್ನು ಹೊರಹಾಕಿ.
ಆಲದ ಮರ ಹಾಗೂ ಕಾಗೆಯನ್ನು ಪೂಜಿಸಿ
ಶನಿವಾರ ಸ್ವಲ್ಪ ಸಾಸಿವೆಯೆಣ್ಣೆಯನ್ನು ಆಲದ ಮರಕ್ಕೆ ಹಾಕಿ ಪೂಜಿಸಿ ಅಲ್ಲದೆ ಶನಿವಾರ ಕಾಗೆಗಳಿಗೆ ತಿನ್ನಲು ಕೊಡಿ. ಇದರಿಂದ ಶನಿಯ ಕೃಪೆಗೆ ಪಾತ್ರರಾಗುವಿರಿ.