Latest Updates
-
ಆಗಸ್ಟ್ 27 ಅಥವಾ 28? ರಾಖಿ ಹಬ್ಬದ ಗೊಂದಲಕ್ಕೆ ಇಲ್ಲಿದೆ ಬೆಸ್ಟ್ ಪ್ಲಾನ್! -
ಗುಡುಗು-ಸಿಡಿಲು ಮಳೆ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು 15 ನಿಮಿಷಗಳ ತುರ್ತು ಕ್ರಮಗಳು -
ರಕ್ಷಾಬಂಧನಕ್ಕೆ ಸಿಹಿ ಖರೀದಿಸ್ತಿದ್ದೀರಾ? ಈ ತಪ್ಪು ಮಾಡಿದ್ರೆ ಆರೋಗ್ಯಕ್ಕೆ ಕುತ್ತು, ನಕಲಿ ಸ್ವೀಟ್ಸ್ ಪತ್ತೆ! -
ರಕ್ಷಾಬಂಧನಕ್ಕೆ ಚಿನ್ನ ಖರೀದಿಸುವ ಮುನ್ನ ಎಚ್ಚರ! ಇಂದಿನ ದರ ಮತ್ತು ಲಾಭದಾಯಕ ಟಿಪ್ಸ್ ಇಲ್ಲಿದೆ -
ರಾಷ್ಟ್ರೀಯ ಕ್ರೀಡಾ ದಿನ: 29 ನಿಮಿಷಗಳ ಸರಳ ವರ್ಕೌಟ್ ಮೂಲಕ ಫಿಟ್ ಆಗಿ! -
ಕುಟುಂಬದಲ್ಲಿ ಉಡುಪಿನ ಬಗ್ಗೆ ಟೀಕೆಗಳೇ? ಈ 7 ವಾಕ್ಯಗಳ ಮೂಲಕ ಗೌರವಯುತವಾಗಿ ಉತ್ತರಿಸಿ! -
ಈರುಳ್ಳಿ ಬೆಲೆ ಏರಿಕೆ: ಅಡುಗೆಮನೆಯ ಬಜೆಟ್ ಉಳಿಸಲು ಸರಳ ಟಿಪ್ಸ್ ಮತ್ತು ಪರ್ಯಾಯಗಳು! -
ಪ್ಯಾಕೆಟ್ ಆಹಾರದ ಮೇಲೆ ಕಡ್ಡಾಯ ಎಚ್ಚರಿಕೆ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಅಂತಿಮ ಗಡುವು! -
ಇಂದಿನ ಪೆಟ್ರೋಲ್ ದರ ಸ್ಥಿರ: ಪ್ರಯಾಣದ ವೆಚ್ಚ ಉಳಿಸಲು ಈ 5 ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: ಆರೋಗ್ಯ ಕಾಪಾಡಿಕೊಳ್ಳಲು 12 ನಿಮಿಷದ ವರ್ಕೌಟ್ ಮತ್ತು ಸುರಕ್ಷತಾ ಟಿಪ್ಸ್
ಕಷ್ಟಗಳು ನೀಗಲು ಶನಿ ದೇವನನ್ನು ಒಲಿಸಿಕೊಳ್ಳುವುದು ಹೇಗೆ?
ನಮ್ಮ ಬದುಕಿನಲ್ಲಿ ಏಳಿಗೆಯಾಗಬೇಕಾದರೆ ಶನಿಯ ವಕ್ರದೃಷ್ಟಿ ಇರಬಾರದು, ಶನಿಯ ಕೃಪೆ ಇರಬೇಕೆಂದು ಹೇಳುತ್ತಾರೆ. ಶನಿವಾರ ಶನಿ ದೇವನಿಗೆ ಮೀಸಲು.

ಶನಿಯ ವಕ್ರದೃಷ್ಟಿಗೆ ಬಿದ್ದರೆ ಯಾವ ಗ್ರಹಗಳಿಂದಲೂ ನಮ್ಮನ್ನು ಪಾರು ಮಾಡಲು ಸಾಧ್ಯವಿಲ್ಲ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಶನಿಯು ಕಷ್ಟದ ಸಂಕೇತವಾಗಿದೆ. ಯಾರು ಆತನ ಕಷ್ಟಗಳನ್ನು ಗೆಲ್ಲುತ್ತಾರೋ ಅವರು ಅವನ ಕೃಪೆಗೆ ಪಾತ್ರರಾಗುತ್ತಾರೆ, ಪ್ರಗತಿಯನ್ನು ಹೊಂದುತ್ತಾರೆ
ಶನಿಯ ಕೃಪೆಗೆ ಪಾತ್ರರಾಗಲು ಹಾಗೂ ಶನಿ ದೋಷವಿದ್ದರೆ ಆ ಕಷ್ಟಗಳು ಬೇಗನೆ ನೀಗಲು ಶನಿವಾರ ಶನಿಯನ್ನು ಈ ರೀತಿ ಪೂಜಿಸಿ:

ಸಾಸಿವೆಯೆಣ್ಣೆ ಅಥವಾ ಎಳ್ಳೆಣ್ಣೆ ಅರ್ಪಿಸಿ
ಶನಿ ದೇವನ ಕೃಪೆಗೆ ಪಾತ್ರರಾಗಲು ಇದೊಂದು ತುಂಬಾ ಜನಪ್ರಿಯವಾದ ವಿಧಾನವಾಗಿದೆ. ತಾಮ್ರದ ಪಾತ್ರೆಗೆ ಸಾಸಿವೆಯೆಣ್ಣೆ ಅಥವಾ ಎಳ್ಳೆಣ್ಣೆ ತುಂಬಿ ಶನಿ ದೇವರ ಮೂರ್ತಿಗೆ ಅರ್ಪಿಸಬೇಕು. ಈ ರೀತಿ ಎಣ್ಣೆ ಅರ್ಪಿಸುವಾಗ ಓಂ ಪ್ರಾಂ ಪ್ರೀಂ ಪ್ರೌಂ ಸಃ ಶನೈಶ್ಚರಾಯ ನಮಃ
ಓಂ ಐಂಗ್ ಹ್ರಿಂಗ್ ಶ್ರೀಂಗ್ ಶಂಗ್ ಶನೈಶ್ಚರಾಯ ನಮಃ ಓಂ
ಓಂ ಹಿಂ ಶಂ ಶನಯೇ ನಮಃ
ಓಂ ಶಂ ಶನೈಶ್ಚರಾಯ ನಮಃ ಎಂದು ಶನಿ ಬೀಜ ಮಂತ್ರ ಹೇಳಿ.

ಹನುಮಂತನನ್ನು ಪೂಜಿಸಿ
ಶನಿವಾರ ಹನುಮಂತನನ್ನು ಭಕ್ತಿಯಿಂದ ಪೂಜಿಸಿದರೆ ಶನಿಯ ಹನುಮಂತನ ಕೃಪೆಯ ಜೊತೆಗೆ ಶನಿಯ ಕೃಪೆಗೆ ಪಾತ್ರರಾಗುವಿರಿ. ಹಿಂದೂ ಪುರಾಣದ ಪ್ರಕಾರ ಹನುಮಂತ ಶನಿ ದೇವನನ್ನು ರಾಕ್ಷಸ ರಾವಣನಿಂದ ಕಾಪಾಡುತ್ತಾನೆ. ಆದ್ದರಿಂದ ಹನುಮಂತನಿಗೆ ಪೂಜೆ ಸಲ್ಲಿಸಿದರೆ ಶನಿ ದೇವ ನಿಮ್ಮನ್ನು ಹರಿಸುತ್ತಾನೆ.

ದಾನ ಮಾಡಿ
ಶನಿವಾರ ನಿಮ್ಮ ಕೈಯಲ್ಲಿ ಆದಷ್ಟು ಬಡವರಿಗೆ ದಾನ ಮಾಡಿ. ಯಾವುದೇ ಫಲ ಅಪೇಕ್ಷೆಯಿಲ್ಲದೆ ದಾನ ಮಾಡಬೇಕು.

ಮನೆಯನ್ನು ಸ್ವಚ್ಛವಾಗಿ ಇಡಬೇಕು
ನೀವು ಮನೆಯಲ್ಲಿರುವ ಕಸವೆಲ್ಲಾ ತೆಗೆದು ಸ್ವಚ್ಛವಾಗಿಡಬೇಕು. ಮುರಿದ ವಸ್ತುಗಳನ್ನು ಹೊರಗಡೆ ಹಾಕಿ. ಮನೆಯನ್ನು ಮಾತ್ರವಲ್ಲ ಮನಸ್ಸನ್ನು ಶುದ್ಧ ಮಾಡಿ, ನಿಮ್ಮಲ್ಲಿರುವ ಎಲ್ಲಾ ಋಣಾತ್ಮಕ ಚಿಂತೆಗಳನ್ನು ಹೊರಹಾಕಿ.

ಆಲದ ಮರ ಹಾಗೂ ಕಾಗೆಯನ್ನು ಪೂಜಿಸಿ
ಶನಿವಾರ ಸ್ವಲ್ಪ ಸಾಸಿವೆಯೆಣ್ಣೆಯನ್ನು ಆಲದ ಮರಕ್ಕೆ ಹಾಕಿ ಪೂಜಿಸಿ ಅಲ್ಲದೆ ಶನಿವಾರ ಕಾಗೆಗಳಿಗೆ ತಿನ್ನಲು ಕೊಡಿ. ಇದರಿಂದ ಶನಿಯ ಕೃಪೆಗೆ ಪಾತ್ರರಾಗುವಿರಿ.



Click it and Unblock the Notifications