Latest Updates
-
ಬಾಂದ್ರಾ ಫೇರ್ ರಶ್: ಕಪಲ್ಸ್ ಹುಷಾರ್! ಟ್ರಾಫಿಕ್ ಜಾಮ್ನಲ್ಲಿ ಸಿಲುಕದಂತೆ ಡೇಟಿಂಗ್ ಪ್ಲಾನ್ ಮಾಡುವುದು ಹೇಗೆ? -
ಅಪಾರ್ಟ್ಮೆಂಟ್ನಲ್ಲಿ ಗಣೇಶ ವಿಸರ್ಜನೆ: ಪರಿಸರ ಸ್ನೇಹಿಯಾಗಿ ಆಚರಿಸಲು ಇಲ್ಲಿವೆ 5 ಸಿಂಪಲ್ ಟಿಪ್ಸ್ -
ಹಬ್ಬದ ಸೀಸನ್ನಲ್ಲಿ ಎಚ್ಚರ! ಮಾರುಕಟ್ಟೆಯಲ್ಲಿ ನಕಲಿ 'ಅನಲಾಗ್ ಪನೀರ್' ಹಾವಳಿ: ಅಸಲಿ ಪನೀರ್ ಗುರುತಿಸುವುದು ಹೇಗೆ? -
iPhone 18 ಪ್ರೀ-ಆರ್ಡರ್ ಆರಂಭ: ನಿಮ್ಮ ಫೋನ್ ಬುಕ್ ಮಾಡುವ ಮುನ್ನ ಈ 5 ವಿಷಯಗಳನ್ನು ಮಿಸ್ ಮಾಡ್ಬೇಡಿ! -
ಬೀಚ್ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದೀರಾ? ಗಾಯಗಳಾಗದಂತೆ ಕೆಲಸ ಮಾಡಲು ಈ ಸುರಕ್ಷತಾ ಟಿಪ್ಸ್ ಮಿಸ್ ಮಾಡಬೇಡಿ! -
ಇಂದಿನ ಲವ್ ಜಾತಕ: ನಿಮ್ಮ ಪ್ರೀತಿಯನ್ನು ಗಟ್ಟಿಗೊಳಿಸಲು ಇಂದಿನ ಬೆಸ್ಟ್ ಟಿಪ್ಸ್ ಮತ್ತು ಡೇಟಿಂಗ್ ಐಡಿಯಾಗಳು -
₹1,000 ಕ್ಕಿಂತ ಕಡಿಮೆ ಬಜೆಟ್ನಲ್ಲಿ ಮನೆಗೆ ಹೊಸ ಲುಕ್: ಬಿದಿರಿನ ಅಲಂಕಾರಿಕ ವಸ್ತುಗಳ ಮ್ಯಾಜಿಕ್! -
ನೆಸ್ಲೆ ಶಿಶು ಆಹಾರದ ಮೇಲೆ FSSAI ಕಣ್ಣು: ನಿಮ್ಮ ಮಗುವಿನ ಸುರಕ್ಷತೆಗಾಗಿ ಪೋಷಕರು ತಿಳಿಯಲೇಬೇಕಾದ ವಿಷಯಗಳು -
ವಿಶ್ವಕರ್ಮ ಪೂಜೆ ಸಂಭ್ರಮ: ಗಾಳಿಪಟ ಹಾರಿಸುವಾಗ ಈ ಸುರಕ್ಷತಾ ನಿಯಮಗಳನ್ನು ಮರೆಯದಿರಿ! -
IMD ಮಳೆ ಅಲರ್ಟ್: ಸಿಡಿಲು-ಮಳೆಯಿಂದ ಪಾರಾಗಲು ಈ ನಿಯಮ ಪಾಲಿಸಿ, ಮನೆಯಲ್ಲೇ ಫಿಟ್ ಆಗಿರಿ
ಕಷ್ಟಗಳು ನೀಗಲು ಶನಿ ದೇವನನ್ನು ಒಲಿಸಿಕೊಳ್ಳುವುದು ಹೇಗೆ?
ನಮ್ಮ ಬದುಕಿನಲ್ಲಿ ಏಳಿಗೆಯಾಗಬೇಕಾದರೆ ಶನಿಯ ವಕ್ರದೃಷ್ಟಿ ಇರಬಾರದು, ಶನಿಯ ಕೃಪೆ ಇರಬೇಕೆಂದು ಹೇಳುತ್ತಾರೆ. ಶನಿವಾರ ಶನಿ ದೇವನಿಗೆ ಮೀಸಲು.

ಶನಿಯ ವಕ್ರದೃಷ್ಟಿಗೆ ಬಿದ್ದರೆ ಯಾವ ಗ್ರಹಗಳಿಂದಲೂ ನಮ್ಮನ್ನು ಪಾರು ಮಾಡಲು ಸಾಧ್ಯವಿಲ್ಲ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಶನಿಯು ಕಷ್ಟದ ಸಂಕೇತವಾಗಿದೆ. ಯಾರು ಆತನ ಕಷ್ಟಗಳನ್ನು ಗೆಲ್ಲುತ್ತಾರೋ ಅವರು ಅವನ ಕೃಪೆಗೆ ಪಾತ್ರರಾಗುತ್ತಾರೆ, ಪ್ರಗತಿಯನ್ನು ಹೊಂದುತ್ತಾರೆ
ಶನಿಯ ಕೃಪೆಗೆ ಪಾತ್ರರಾಗಲು ಹಾಗೂ ಶನಿ ದೋಷವಿದ್ದರೆ ಆ ಕಷ್ಟಗಳು ಬೇಗನೆ ನೀಗಲು ಶನಿವಾರ ಶನಿಯನ್ನು ಈ ರೀತಿ ಪೂಜಿಸಿ:

ಸಾಸಿವೆಯೆಣ್ಣೆ ಅಥವಾ ಎಳ್ಳೆಣ್ಣೆ ಅರ್ಪಿಸಿ
ಶನಿ ದೇವನ ಕೃಪೆಗೆ ಪಾತ್ರರಾಗಲು ಇದೊಂದು ತುಂಬಾ ಜನಪ್ರಿಯವಾದ ವಿಧಾನವಾಗಿದೆ. ತಾಮ್ರದ ಪಾತ್ರೆಗೆ ಸಾಸಿವೆಯೆಣ್ಣೆ ಅಥವಾ ಎಳ್ಳೆಣ್ಣೆ ತುಂಬಿ ಶನಿ ದೇವರ ಮೂರ್ತಿಗೆ ಅರ್ಪಿಸಬೇಕು. ಈ ರೀತಿ ಎಣ್ಣೆ ಅರ್ಪಿಸುವಾಗ ಓಂ ಪ್ರಾಂ ಪ್ರೀಂ ಪ್ರೌಂ ಸಃ ಶನೈಶ್ಚರಾಯ ನಮಃ
ಓಂ ಐಂಗ್ ಹ್ರಿಂಗ್ ಶ್ರೀಂಗ್ ಶಂಗ್ ಶನೈಶ್ಚರಾಯ ನಮಃ ಓಂ
ಓಂ ಹಿಂ ಶಂ ಶನಯೇ ನಮಃ
ಓಂ ಶಂ ಶನೈಶ್ಚರಾಯ ನಮಃ ಎಂದು ಶನಿ ಬೀಜ ಮಂತ್ರ ಹೇಳಿ.

ಹನುಮಂತನನ್ನು ಪೂಜಿಸಿ
ಶನಿವಾರ ಹನುಮಂತನನ್ನು ಭಕ್ತಿಯಿಂದ ಪೂಜಿಸಿದರೆ ಶನಿಯ ಹನುಮಂತನ ಕೃಪೆಯ ಜೊತೆಗೆ ಶನಿಯ ಕೃಪೆಗೆ ಪಾತ್ರರಾಗುವಿರಿ. ಹಿಂದೂ ಪುರಾಣದ ಪ್ರಕಾರ ಹನುಮಂತ ಶನಿ ದೇವನನ್ನು ರಾಕ್ಷಸ ರಾವಣನಿಂದ ಕಾಪಾಡುತ್ತಾನೆ. ಆದ್ದರಿಂದ ಹನುಮಂತನಿಗೆ ಪೂಜೆ ಸಲ್ಲಿಸಿದರೆ ಶನಿ ದೇವ ನಿಮ್ಮನ್ನು ಹರಿಸುತ್ತಾನೆ.

ದಾನ ಮಾಡಿ
ಶನಿವಾರ ನಿಮ್ಮ ಕೈಯಲ್ಲಿ ಆದಷ್ಟು ಬಡವರಿಗೆ ದಾನ ಮಾಡಿ. ಯಾವುದೇ ಫಲ ಅಪೇಕ್ಷೆಯಿಲ್ಲದೆ ದಾನ ಮಾಡಬೇಕು.

ಮನೆಯನ್ನು ಸ್ವಚ್ಛವಾಗಿ ಇಡಬೇಕು
ನೀವು ಮನೆಯಲ್ಲಿರುವ ಕಸವೆಲ್ಲಾ ತೆಗೆದು ಸ್ವಚ್ಛವಾಗಿಡಬೇಕು. ಮುರಿದ ವಸ್ತುಗಳನ್ನು ಹೊರಗಡೆ ಹಾಕಿ. ಮನೆಯನ್ನು ಮಾತ್ರವಲ್ಲ ಮನಸ್ಸನ್ನು ಶುದ್ಧ ಮಾಡಿ, ನಿಮ್ಮಲ್ಲಿರುವ ಎಲ್ಲಾ ಋಣಾತ್ಮಕ ಚಿಂತೆಗಳನ್ನು ಹೊರಹಾಕಿ.

ಆಲದ ಮರ ಹಾಗೂ ಕಾಗೆಯನ್ನು ಪೂಜಿಸಿ
ಶನಿವಾರ ಸ್ವಲ್ಪ ಸಾಸಿವೆಯೆಣ್ಣೆಯನ್ನು ಆಲದ ಮರಕ್ಕೆ ಹಾಕಿ ಪೂಜಿಸಿ ಅಲ್ಲದೆ ಶನಿವಾರ ಕಾಗೆಗಳಿಗೆ ತಿನ್ನಲು ಕೊಡಿ. ಇದರಿಂದ ಶನಿಯ ಕೃಪೆಗೆ ಪಾತ್ರರಾಗುವಿರಿ.



Click it and Unblock the Notifications
