Latest Updates
-
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಕರಣ್ ಜೋಹರ್ ಅಬ್ಬರ, ಭಾರತೀಯ ಫ್ಯಾಷನ್ ಲೋಕದ ಹೊಸ ಸಂಚಲನ! -
ಮೇ ತಿಂಗಳ ಬಿಸಿಲ ಧಗೆ: ನಿಮ್ಮ ಬೆಳಗಿನ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳದಿದ್ದರೆ ಕಷ್ಟ! -
ಎವೆಲಿನ್ ಶರ್ಮಾ ವಿಚ್ಛೇದನ: ಮಕ್ಕಳ ಭವಿಷ್ಯಕ್ಕಾಗಿ ಈ ಜೋಡಿ ಆರಿಸಿದ ಹೊಸ ದಾರಿ ಯಾವುದು? -
ಬಿಸಿಲ ಧಗೆಗೆ ತಂಪಾದ ಗುಡ್ ನ್ಯೂಸ್: ಮೇ 8 ರಿಂದ ಶುರುವಾಗಲಿದೆ ಗ್ರೇಟ್ ಸಮ್ಮರ್ ಸೇಲ್! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಈ ಸರಳ ಆಹಾರ ಪದ್ಧತಿಯಿಂದ ಇಡೀ ದಿನ ಇರಿ ಫ್ರೆಶ್! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಕೂಲ್ ಆಗಿರಿ! -
ಬಿಸಿಗಾಳಿಯ ಅಬ್ಬರ: ನಿಮ್ಮ ಫಿಟ್ನೆಸ್ ದಿನಚರಿಯನ್ನು ಬದಲಾಯಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ! -
ಹೊಸ ಜೀವನ ಆರಂಭಿಸುವ ಮುನ್ನ ಎಚ್ಚರ: ವಿಚ್ಛೇದನ ಮತ್ತು ಕಾನೂನು ಹಕ್ಕುಗಳ ಬಗ್ಗೆ ಹೈಕೋರ್ಟ್ ಹೇಳಿದ್ದೇನು? -
ಬಿರುಗಾಳಿ ಮತ್ತು ಬಿಸಿಲ ಬೇಗೆ: ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ನಿಮ್ಮ ಜೀವ ಉಳಿಸುವ ಸರಳ ಮನೆಮದ್ದುಗಳಿವು!
ಪಿತೃ ಪಕ್ಷ ಪೂಜೆಯನ್ನು ಮನೆಯಲ್ಲಿ ಮಾಡುವಾಗ ಅನುಸರಿಸಬೇಕಾದ ವಿಧಿವಿಧಾನಗಳು
ಪಿತೃ ಪಕ್ಷ ಎಂಬುದು ಸಪ್ಟೆಂಬರ್ 24 ರಿಂದ ಆರಂಭವಾಗುತ್ತಿದ್ದು ನಮ್ಮ ಹಿರಿಯರಿಗೆ ನಾವು ಈ ಮೂಲಕ ಗೌರವವನ್ನು ಸಲ್ಲಿಸುತ್ತೇವೆ. ಪಿತೃ ಪಕ್ಷವು ಅಕ್ಟೋವರ್ 8 ರವರೆಗೆ ಮುಂದುವರಿಯುತ್ತದೆ. ಬೇರೆ ಬೇರೆ ಕ್ರಮಗಳು ಮತ್ತು ಶ್ರಾದ್ಧ ಕಾರ್ಯಕ್ರಮವನ್ನು ಈ ಸಮಯದಲ್ಲಿ ಮಾಡುತ್ತಾರೆ. ಇದರ ಮೂಲಕ ಮೃತರಾದ ಹಿರಿಯರಿಗೆ ಗೌರವವನ್ನು ಸಲ್ಲಿಸಲಾಗುತ್ತದೆ. ಪಿತೃ ದೋಷ ಪೂಜೆ ಅಥವಾ ಯಜ್ಞದಲ್ಲಿ ಪಿತೃ ದಾನ ಕೂಡ ಹಿರಿದಾದುದು. ಯಾವ ತಿಥಿಯಲ್ಲಿ ಹಿರಿಯರು ಮೃತರಾಗಿದ್ದಾರೋ ಆ ದಿನವನ್ನು ಹೆಚ್ಚು ಮಹತ್ವ ಮತ್ತು ಪುನೀತವಾದುದು ಎಂದು ಪರಿಗಣಿಸಲಾಗುತ್ತದೆ.

ಮೃತರಾದ ಹಿರಿಯರು ಪಿತೃ ಲೋಕವನ್ನು ಸೇರುತ್ತಾರೆ ಎಂದು ಹೇಳಲಾಗುತ್ತದೆ ಅಂತೆಯೇ ಅವರು ಆಹಾರವನ್ನು ಸೇವಿಸಲಾರರು ಮತ್ತು ಸಿದ್ಧಪಡಿಸಲಾರರು. ಭೂಮಿಯಲ್ಲಿರುವ ಅವರ ಕುಟುಂಬದವರು ಪಿತೃ ಪಕ್ಷದ ಪದ್ಧತಿಗಳನ್ನು ಅನುಸರಿಸಿ ಅವರನ್ನು ತೃಪ್ತಿ ಪಡಿಸುವ ಕಾರ್ಯವನ್ನು ಮಾಡುತ್ತಾರೆ. ಇಂದಿನ ಲೇಖನದಲ್ಲಿ ನಿಮ್ಮ ಹಿರಿಯರನ್ನು ಹೇಗೆ ಆಹ್ವಾನಿಸಬೇಕು ಮತ್ತು ಶ್ರಾದ್ಧವನ್ನು ಹೇಗೆ ಮಾಡಬೇಕು ಎಂಬುದನ್ನು ತಿಳಿಸುತ್ತಿದ್ದೇವೆ. ಹಿರಿಯರು ಮೃತರಾದ ದಿನವೇ ಪಿತೃ ಪಕ್ಷದ ಪೂಜೆಯನ್ನು ಮಾಡಬೇಕು. ಬೆಳಗ್ಗೆ 11.30 ಯಿಂದ ಮಧ್ಯಾಹ್ನ 12.30 ಯ ಒಳಗೆ ಅವರನ್ನು ಆಹ್ವಾನಿಸಬೇಕು. ಪಿತೃ ಪೂಜಾ ವಿಧಿ ವಿಧಾನ ಇಲ್ಲಿದೆ.

ಪಿತೃ ಪೂಜಾ ವಿಧಿ
ದಕ್ಷಿಣ ದಿಕ್ಕಿನಲ್ಲಿ ಮರದ ಸ್ಟೂಲ್ ಅನ್ನು ಇರಿಸಿ. ಬಿಳಿ ಬಟ್ಟೆಯಿಂದ ಅದನ್ನು ಮುಚ್ಚಿ. ಕಪ್ಪು ಎಳ್ಳನ್ನು ಹರಡಿ ಮತ್ತು ಅದರ ಮೇಲೆ ಬಾರ್ಲಿ ಬೀಜ ಹಾಕಿ. ನಿಮ್ಮ ಹಿರಿಯರ ಫೋಟೋವನ್ನು ಅದರ ಮೇಲಿರಿಸ. ಕುಶ ಎಲೆಯನ್ನು ಕೂಡ ಚಿತ್ರದ ಪಕ್ಕ ಇರಿಸಬಹುದು. ವಿಷ್ಣುವಿನ ಅಂಶ ಈ ಹುಲ್ಲಿನಲ್ಲಿ ಇದೆ ಎಂದು ನಂಬಲಾಗಿದೆ.
ನೀವು ಯಾರಿಗೆ ಪೂಜೆ ಮಾಡಬೇಕೋ ಅವರನ್ನು ಆಹ್ವಾನಿಸಿ. ಅವರ ಹೆಸರನ್ನು ಕರೆಯಿರಿ, ನಮ್ಮ ಸಂಪೂರ್ಣ ಕುಟುಂಬ ನಿಮ್ಮನ್ನು ನಮ್ಮ ಮನೆಗೆ ಆಹ್ವಾನಿಸುತ್ತಿದ್ದು ಈ ಪಿತೃ ಪಕ್ಷದ ಪೂಜೆಯನ್ನು ಸ್ವೀಕರಿಸಿ ಎಂದು ಹೇಳಿ. ಇದರ ನಂತರ ತಾಮ್ರ ಅಥವಾ ಹಿತ್ತಾಳೆ ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ ನೀರು ತುಂಬಿಸಿ. ಅದಕ್ಕೆ ಸ್ವಲ್ಪ ಹಾಲು ಹಾಕಿ (ಹಸಿ ದನದ ಹಾಲು). ಇದಕ್ಕೆ ಎಳ್ಳಿನ ಬೀಜ ಹಾಕಿ ಮತ್ತು ಬಾರ್ಲಿ ಅಕ್ಕಿ ಸೇರಿಸಿ ಇದನ್ನು ಫೋಟೋವನ್ನು ಇರಿಸುವ ಮುನ್ನ ಇಡಿ.

ಪಿಂಡ ಸಿದ್ಧತೆ
ಅನ್ನವನ್ನು ಸಿದ್ಧ ಮಾಡಿ ಇದಕ್ಕೆ ಹಾಲು, ಜೇನು ಮತ್ತು ಗಂಗಾಜಲವನ್ನು ಸೇರಿಸಿ. ಈಗ ಅನ್ನದ ಉಂಡೆಯನ್ನು ಸಿದ್ಧ ಮಾಡಿ ಮತ್ತು ಪೋಟೋದ ಮುಂದೆ ಎಲೆಯ ಮೇಲಿರಿಸಿ. ಈ ಅನ್ನದ ಉಂಡೆಯನ್ನು ಪಿಂಡ ಎಂದು ಕರೆಯುತ್ತಾರೆ ಇದನ್ನು ಪಿಂಡ ದಾನದಲ್ಲಿ ಬಳಸಲಾಗುತ್ತದೆ. ಪೂರ್ಣವಾಗಿ ನಿಯಮಗಳು ಕೊನೆಗೊಂಡ ನಂತರ ಹತ್ತಿರದ ನದಿಯಲ್ಲಿ ಅದನ್ನು ಮಿಶ್ರ ಮಾಡಬೇಕು.

ಇನ್ನೊಂದು ಪದ್ಧತಿಯನ್ನು ನೀವು ನಿರ್ವಹಿಸಬಹುದು
ಈ ಪದ್ಧತಿಯನ್ನು ಅನುಸರಿಸಲು ನಿಮಗೆ ಸಾಧ್ಯವಿಲ್ಲ ಎಂದಾದಲ್ಲಿ, ಕೆಳಗೆ ತಿಳಿಸಿದ ಇನ್ನೊಂದು ವಿಧಾನವನ್ನು ನೀವು ಅನುಸರಿಸಬಹುದು. ರೋಟಿ ಮಾಡಿ ಅದರ ಮೇಲೆ ಬೆಲ್ಲ ಮತ್ತು ತುಪ್ಪವನ್ನು ಹಾಕಿ. ಹಿರಿಯರ ಫೋಟೋದ ಮುಂದೆ ಇದನ್ನು ಇರಿಸಿ. ಪ್ರತೀ ದಿನ ಹೀಗೆ ಮಾಡಿ ರೋಟಿಯನ್ನು ದನಕ್ಕೆ ನೀಡಿ.
ಪೂಜೆ ಮತ್ತು ಅರ್ಪಣೆಯನ್ನು ಮಾಡುವ ಮುನ್ನ ನೀವು ಅರ್ಚಕರನ್ನು ಆಹ್ವಾನಿಸಬೇಕು ಮತ್ತು ಅವರಿಗೆ ಆಹಾರವನ್ನು ನೀಡಬೇಕು. ಅವರಿಗೆ ಆಹಾರವನ್ನು ನೀಡಿದ ನಂತರ ಅರ್ಚಕರಿಗೆ ಉಡುಪನ್ನು ನೀಡಬೇಕು.

ಬೆಲ್ಲ ಮತ್ತು ತುಪ್ಪವನ್ನು ನೀಡುವುದು
ಅರ್ಚಕರಿಗೆ ಆಹಾರವನ್ನು ಉಣಬಡಿಸಿದ ನಂತರ, ಸೆಗಣಿಯನ್ನು ಉರಿಸಿ ಮತ್ತು ಇದು ಸಂಪೂರ್ಣ ಉರಿದ ನಂತರ ಇದಕ್ಕೆ ತುಪ್ಪವನ್ನು ಹಾಕಿ ಮತ್ತು ಸಣ್ಣ ತುಂಡು ಬೆಲ್ಲ ಇರಿಸಿ. ಪೂರ್ವಿಕರಿಗೆ ಇದು ಅರ್ಪಣೆಯನ್ನು ನೀಡುವ ಇನ್ನೊಂದು ವಿಧಾನವಾಗಿದೆ. ಬೆಲ್ಲವು ಸಂಪೂರ್ಣ ಉರಿದ ನಂತರ, ಅದನ್ನು ಪೂರ್ವಿಕರು ಸೇವಿಸುತ್ತಾರೆ ಎಂದು ಹೇಳಲಾಗಿದೆ.



Click it and Unblock the Notifications