Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
ಶನಿ ದೋಷ, ಕಷ್ಟದಿಂದ ಮುಕ್ತಿಗೆ ಶನಿವಾರ ಶನಿ ದೇವನ ಪೂಜೆ ಹೇಗಿರಬೇಕು?
ಶನಿವಾರವೆಂಬುವುದು ನ್ಯಾಯದ ದೇವರು ಶನಿಗೆ ಮೀಸಲಾದ ದಿನ. ಈ ದಿನ ಶನಿಯನ್ನು ಆರಾಧಿಸಿದರೆ ಶನಿ ದೋಷ, ಕಷ್ಟಗಳು ನೀಗುವುದು ಎಂಬ ನಂಬಿಕೆಯಿದೆ. ಮನುಷ್ಯನ ಕರ್ಮಕ್ಕೆ ತಕ್ಕ ಫಲ ಶನಿ ನೀಡುವುದು ಎಂದು ಹೇಳಲಾಗುವುದು.
ಶನಿವಾರ ಸಂಜೆ ಯಾರು ಶನಿ ದೇವನಿಗೆ ಭಕ್ತಿ ಹಾಗೂ ಶ್ರದ್ಧೆಯಿಂದ ಪೂಜೆ ಸಲ್ಲಿಸುತ್ತಾರೋ ಅವರ ಕಷ್ಟಗಳು ಶನಿಯ ಕೃಪೆಯಿಂದಾಗಿ ದೂರವಾಗಿವುದು, ಸಾಡೇಸಾತಿ ಸಮಸ್ಯೆ ಇರುವವರಿಗೆ ಉತ್ತಮ ಪರಿಹಾರವೂ ಸಿಗುವುದು.

ಶನಿ ದೇವನ ಕೃಪೆಗಾಗಿ ಶನಿವಾರ ಏನು ಮಾಡಬೇಕು?
ಶನಿವಾರ ಸಂಜೆ ಶನಿಯ ಪೂಜೆ ಮಾಡುವಾಗ ಸ್ನಾನ ಮಾಡಿ ಮಡಿ ಬಟ್ಟೆ ಧರಿಸಿ. ಕಪ್ಪು, ನೀಲಿ, ಬೂದು ಬಣ್ಣದ ಬಟ್ಟೆಯನ್ನು ಈ ದಿನ ಧರಿಸಬೇಡಿ.
50 ಗ್ರಾಂ ಉದ್ದಿನ ಬೇಳೆ, 50 ಗ್ರಾಂ ಕಪ್ಪು ಎಳ್ಳು, 50 ಗ್ರಾಂ ಸಾಸಿವೆಯೆಣ್ಣೆ, ಎರಡೂವರೆ ಮೀಟರ್ ಕಪ್ಪು ಬಟ್ಟೆ, 5 ಕಬ್ಬಿಣದ ಮೊಳೆ, ಒಣ ಹಣ್ಣುಗಳು ಅಥವಾ ಸಿಹಿ ಜೊತೆಗೆ ದೇವಾಲಯಕ್ಕೆ ಹೋಗಬೇಕು.
ನಂತರ ದೇವಾಲಯದಲ್ಲಿ ಕೂತು ಶನಿ ದೇವನನ್ನು ಧ್ಯಾನಿಸಿ. ಅವನನ್ನು ಗುಣಗಾನ ಮಾಡಿ.

ಶನಿ ದೇವನ ಮಂತ್ರ ಪಠಿಸಿ
"ಓಂ ಹಿಲ್ಮ್ ಶಾಮ್ ಶನಾಯ ನಮ"
"ಓಂ ಪ್ರಾಮ್ ಪ್ರೀಮ್ ಪ್ರೌಮ್ ಸಹ ಶಾನೈಶ್ರಾಯ ನಮ"
"ಓಂ ಶಾಮ್ ಶನೇಶ್ಚಾರ ನಮಃ"
"ಔಮ್ ಐಂಗ್ ಹರಿಂಗ್ ಶರಿಂಗ್ ಶಂಗ್ ಶನೈಶ್ಚರಾಯ ನಮ ಔಮ್"
ಶನಿ ಗಾಯತ್ರಿ ಮಂತ್ರ
ಓಂ ಶನೈಶ್ಚರಾಯ ವಿದ್ಮಯೇ
ಸೂರ್ಯಪುತ್ರಾಯ ದಹಿಮಹಿ
ತನ್ನೊ ಮಂಡಾ ಪ್ರಚೋದಾಯತ್
ಶನಿ ಧ್ಯಾನ ಮಂತ್ರ
ನೀಲಂಜನ ಸಮಾಭಮ್ ರವಿಪುತ್ರಂ ಯಮಗ್ರಾಜಂ
ಚಯಾ ಮಾರ್ತಾಂದ ಸಂಭಾತ್ ತಮ್ ನಮಮಿ ಶೈಶ್ಚರಂ

ದಾನ ಮಾಡಿ
ಶನಿ ದೇವನ ಕೃಪೆಗೆ ಪಾತ್ರರಾಗಬೇಕೆಂದರೆ ಈ ದಿನ ನಿರ್ಗತಿಕರಿಗೆ ದಾನ ಮಾಡಬೇಕು. ಹಿರಿಯರನ್ನು, ನಿರ್ಗತಿಕರನ್ನು ನಿಂದಿಸಬಾರದು. ನಿರ್ಗತಿಕರಿಗೆ ಕಪ್ಪು ಎಳ್ಳು, ಆಹಾರ, ಕಪ್ಪು ಅಥವಾ ನೀಲಿ ಬಟ್ಟೆಗಳನ್ನು ದಾನ ಮಾಡಬಹುದು.

ಆರತಿ ಮಾಡುವಾಗ ಏನು ಮಾಡಬೇಕು?
ಆರತಿಯನ್ನು ಶನಿ ದೇವನ ವಿಗ್ರಹದ ಮುಂದೆ ನಿಂತು ಮಾಡಬೇಡಿ, ಶನಿಯ ದೃಷ್ಟಿ ನಿಮ್ಮ ಮೇಲೆ ಬೀಳದಂತೆ ಎಚ್ಚರವಹಿಸಿ. ಸ್ವಲ್ಪ ಬದಿಗೆ ಸರಿದು ಪೂಜೆ ಮಾಡಿ, ಆರತಿ ಬೆಳಗಿ. ನಂತರ ನೀವೂ ಆರತಿ ತಗೊಂಡು ದೇವರಿಗೆ ಪ್ರಸಾದ ಅರ್ಪಿಸಿ. ಬಳಿಕ ಶನಿ ದೇವನ ಮಂತ್ರ ಹೇಳುತ್ತಾ ಧ್ಯಾನಿಸಿ.
ಇದರಿಂದ ಶನಿ ದೋಷ, ಸಾಡೇಸಾತಿ, ಕಷ್ಟಗಳು ಇವೆಲ್ಲಾ ದೂರವಾಗುವುದು.



Click it and Unblock the Notifications