Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಶನಿ ದೋಷ, ಕಷ್ಟದಿಂದ ಮುಕ್ತಿಗೆ ಶನಿವಾರ ಶನಿ ದೇವನ ಪೂಜೆ ಹೇಗಿರಬೇಕು?
ಶನಿವಾರವೆಂಬುವುದು ನ್ಯಾಯದ ದೇವರು ಶನಿಗೆ ಮೀಸಲಾದ ದಿನ. ಈ ದಿನ ಶನಿಯನ್ನು ಆರಾಧಿಸಿದರೆ ಶನಿ ದೋಷ, ಕಷ್ಟಗಳು ನೀಗುವುದು ಎಂಬ ನಂಬಿಕೆಯಿದೆ. ಮನುಷ್ಯನ ಕರ್ಮಕ್ಕೆ ತಕ್ಕ ಫಲ ಶನಿ ನೀಡುವುದು ಎಂದು ಹೇಳಲಾಗುವುದು.
ಶನಿವಾರ ಸಂಜೆ ಯಾರು ಶನಿ ದೇವನಿಗೆ ಭಕ್ತಿ ಹಾಗೂ ಶ್ರದ್ಧೆಯಿಂದ ಪೂಜೆ ಸಲ್ಲಿಸುತ್ತಾರೋ ಅವರ ಕಷ್ಟಗಳು ಶನಿಯ ಕೃಪೆಯಿಂದಾಗಿ ದೂರವಾಗಿವುದು, ಸಾಡೇಸಾತಿ ಸಮಸ್ಯೆ ಇರುವವರಿಗೆ ಉತ್ತಮ ಪರಿಹಾರವೂ ಸಿಗುವುದು.

ಶನಿ ದೇವನ ಕೃಪೆಗಾಗಿ ಶನಿವಾರ ಏನು ಮಾಡಬೇಕು?
ಶನಿವಾರ ಸಂಜೆ ಶನಿಯ ಪೂಜೆ ಮಾಡುವಾಗ ಸ್ನಾನ ಮಾಡಿ ಮಡಿ ಬಟ್ಟೆ ಧರಿಸಿ. ಕಪ್ಪು, ನೀಲಿ, ಬೂದು ಬಣ್ಣದ ಬಟ್ಟೆಯನ್ನು ಈ ದಿನ ಧರಿಸಬೇಡಿ.
50 ಗ್ರಾಂ ಉದ್ದಿನ ಬೇಳೆ, 50 ಗ್ರಾಂ ಕಪ್ಪು ಎಳ್ಳು, 50 ಗ್ರಾಂ ಸಾಸಿವೆಯೆಣ್ಣೆ, ಎರಡೂವರೆ ಮೀಟರ್ ಕಪ್ಪು ಬಟ್ಟೆ, 5 ಕಬ್ಬಿಣದ ಮೊಳೆ, ಒಣ ಹಣ್ಣುಗಳು ಅಥವಾ ಸಿಹಿ ಜೊತೆಗೆ ದೇವಾಲಯಕ್ಕೆ ಹೋಗಬೇಕು.
ನಂತರ ದೇವಾಲಯದಲ್ಲಿ ಕೂತು ಶನಿ ದೇವನನ್ನು ಧ್ಯಾನಿಸಿ. ಅವನನ್ನು ಗುಣಗಾನ ಮಾಡಿ.

ಶನಿ ದೇವನ ಮಂತ್ರ ಪಠಿಸಿ
"ಓಂ ಹಿಲ್ಮ್ ಶಾಮ್ ಶನಾಯ ನಮ"
"ಓಂ ಪ್ರಾಮ್ ಪ್ರೀಮ್ ಪ್ರೌಮ್ ಸಹ ಶಾನೈಶ್ರಾಯ ನಮ"
"ಓಂ ಶಾಮ್ ಶನೇಶ್ಚಾರ ನಮಃ"
"ಔಮ್ ಐಂಗ್ ಹರಿಂಗ್ ಶರಿಂಗ್ ಶಂಗ್ ಶನೈಶ್ಚರಾಯ ನಮ ಔಮ್"
ಶನಿ ಗಾಯತ್ರಿ ಮಂತ್ರ
ಓಂ ಶನೈಶ್ಚರಾಯ ವಿದ್ಮಯೇ
ಸೂರ್ಯಪುತ್ರಾಯ ದಹಿಮಹಿ
ತನ್ನೊ ಮಂಡಾ ಪ್ರಚೋದಾಯತ್
ಶನಿ ಧ್ಯಾನ ಮಂತ್ರ
ನೀಲಂಜನ ಸಮಾಭಮ್ ರವಿಪುತ್ರಂ ಯಮಗ್ರಾಜಂ
ಚಯಾ ಮಾರ್ತಾಂದ ಸಂಭಾತ್ ತಮ್ ನಮಮಿ ಶೈಶ್ಚರಂ

ದಾನ ಮಾಡಿ
ಶನಿ ದೇವನ ಕೃಪೆಗೆ ಪಾತ್ರರಾಗಬೇಕೆಂದರೆ ಈ ದಿನ ನಿರ್ಗತಿಕರಿಗೆ ದಾನ ಮಾಡಬೇಕು. ಹಿರಿಯರನ್ನು, ನಿರ್ಗತಿಕರನ್ನು ನಿಂದಿಸಬಾರದು. ನಿರ್ಗತಿಕರಿಗೆ ಕಪ್ಪು ಎಳ್ಳು, ಆಹಾರ, ಕಪ್ಪು ಅಥವಾ ನೀಲಿ ಬಟ್ಟೆಗಳನ್ನು ದಾನ ಮಾಡಬಹುದು.

ಆರತಿ ಮಾಡುವಾಗ ಏನು ಮಾಡಬೇಕು?
ಆರತಿಯನ್ನು ಶನಿ ದೇವನ ವಿಗ್ರಹದ ಮುಂದೆ ನಿಂತು ಮಾಡಬೇಡಿ, ಶನಿಯ ದೃಷ್ಟಿ ನಿಮ್ಮ ಮೇಲೆ ಬೀಳದಂತೆ ಎಚ್ಚರವಹಿಸಿ. ಸ್ವಲ್ಪ ಬದಿಗೆ ಸರಿದು ಪೂಜೆ ಮಾಡಿ, ಆರತಿ ಬೆಳಗಿ. ನಂತರ ನೀವೂ ಆರತಿ ತಗೊಂಡು ದೇವರಿಗೆ ಪ್ರಸಾದ ಅರ್ಪಿಸಿ. ಬಳಿಕ ಶನಿ ದೇವನ ಮಂತ್ರ ಹೇಳುತ್ತಾ ಧ್ಯಾನಿಸಿ.
ಇದರಿಂದ ಶನಿ ದೋಷ, ಸಾಡೇಸಾತಿ, ಕಷ್ಟಗಳು ಇವೆಲ್ಲಾ ದೂರವಾಗುವುದು.



Click it and Unblock the Notifications
