Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ದೇವಾನುದೇವತೆಗಳಿಗೆ ನೆಚ್ಚಿನ ಹೂಗಳು ಇದೆ ನೋಡಿ
ದೇವಾನುದೇವತೆಗಳ ಅನುಗ್ರಹವಿಲ್ಲದೆ ಏನು ಆಗುವುದಿಲ್ಲ ಎಂಬ ನಂಬಿಕೆ ಹಲವರಲ್ಲಿದೆ. ಹಾಗೆಯೇ ದೇವರನ್ನು ಒಲಿಸಿಕೊಳ್ಳಲು, ದೇವರ ಕೃಪೆಗೆ ಪಾತ್ರರಾಗಲು ನಾವು ನಿತ್ಯ ಪೂಜೆ, ಹೋಮ-ಹವನ, ಪಾರಾಯಣ, ಭಜನೆ, ದೇವರಿಗೆ ಇಷ್ಟವಾದ ಪ್ರಸಾದ ಹೀಗೆ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತೇವೆ.
ಹಾಗೆಯೇ ಪ್ರತಿಯೊಂದು ದೇವರಿಗೆ ತನ್ನದೇ ಆದ ವಿಭಿನ್ನವಾದ ಇಷ್ಟಗಳು ಇದೆ. ನಾವಿಂದು ದೇವಾನುದೇವತೆಗಗೆ ಇಷ್ಟವಾಗುವಂಥ ಪುಷ್ಟಗಳು ಯಾವುವು, ಈ ಹೂಗಳು ದೇವರಿಗೆ ಏಕೆ ಇಷ್ಟ ಎಂಬುದರ ಬಗ್ಗೆ ತಿಳಿಸಿಕೊಡಲಿದ್ದೇವೆ:

ಕೆಂಪು ದಾಸವಾಳ
ಕಾಳಿ ದೇವಿಯು ಉಗ್ರತೆಯನ್ನು ಪ್ರತಿಬಿಂಬಿಸುವ ಹೂವು ಕೆಂಪು ದಾಸವಾಳವಾಗಿದೆ. ಹೂವಿನ ಆಕಾರವು ದೇವಿಯ ನಾಲಿಗೆಯನ್ನು ಸಂಕೇತಿಸುತ್ತದೆ ಮತ್ತು ರೋಮಾಂಚಕ ಕೆಂಪು ಬಣ್ಣವು ಕಾಳಿ ಮಾವನ ಉಗ್ರತೆಯನ್ನು ಚಿತ್ರಿಸುತ್ತದೆ. ಇದು ಕಾಳಿದೇವಿಯ ನೆಚ್ಚಿನ ಹೂವು ಸಹ ಎನ್ನಲಾಗುತ್ತದೆ.

ಮಲ್ಲಿಗೆ
ಈ ಸಣ್ಣ ಪರಿಮಳಯುಕ್ತ ಹೂವು ಹೆಚ್ಚಿನ ಔಷಧೀಯ ಮೌಲ್ಯವನ್ನು ಹೊಂದಿದೆ ಆದರೆ ಇದು ಧಾರ್ಮಿಕ ಮಹತ್ವವನ್ನು ಹೊಂದಿದೆ. ನೀವು ಹನುಮಂತನನ್ನು ಮೆಚ್ಚಿಸಲು ಬಯಸಿದರೆ, ಮಲ್ಲಿಗೆ ಹೂವಿನ ಅಲಂಕಾರ ಮಾಡಿ, ಈ ಹೂವನ್ನು ಅರ್ಪಿಸುವುದನ್ನು ಮರೆಯಬೇಡಿ.

ಪಲಾಶ್
ಪಲಾಶ್ ಹೂವುಗಳು ಸರಸ್ವತಿ ದೇವಿಯನ್ನು ಪೂಜಿಸಲು ಅತ್ಯಂತ ಪೂಜ್ಯನೀಯ ಹೂಗಳಲ್ಲಿ ಒಂದಾಗಿದೆ. ಸರಸ್ವತಿ ದೇವಿಯು ಬಿಳಿ ಬಣ್ಣದ ಹೂವುಗಳನ್ನು ಇಷ್ಟಪಡುತ್ತಾಳೆ ಎಂದು ನಂಬಲಾಗಿದೆ, ಆದರೂ ಪಲಾಶ್ ಹೂವುಗಳಿಲ್ಲದ ಸರಸ್ವತಿ ಪೂಜೆಯನ್ನು ಅಪೂರ್ಣವೆಂದು ಪರಿಗಣಿಸಲಾಗುತ್ತದೆ.

ಚೆಂಡು ಹೂ
ಹಲವು ಔಷಧೀಯ ಗುಣಗಳಿರುವ ಚೆಂಡು ಹೂ ಗಜಮುಖನ ಪ್ರಿಯವಾದ ಹೂವು. ಗಣೇಶ ಕೆಂಪು ಬಣ್ಣದ ಹೂವುಗಳನ್ನು ಇಷ್ಟಪಡುತ್ತಾರೆ ಎಂದು ನಂಬಲಾಗಿದೆ, ಚೆಂಡು ಹೂ ಅವುಗಳಲ್ಲಿ ಒಂದು. ಈ ಕೇಸರಿ ಬಣ್ಣದ ಹೂವನ್ನು ಹಾರ ಅಥವಾ ದಳಗಳ ರೂಪದಲ್ಲಿಯೂ ಬಳಸಬಹುದಾಗಿದೆ, ವಿನಾಯಕನಿಗೆ ಪ್ರಿಯವಾದ ಹೂವುಗಳಲ್ಲಿ ಇದೂ ಒಂದು. ಕೆಲವು ಸಂಪ್ರದಾಯಗಳಲ್ಲಿ, ಈ ಹೂವನ್ನು ಭಗವಾನ್ ವಿಷ್ಣುವಿಗೆ ಸಹ ಅರ್ಪಿಸಲಾಗುತ್ತದೆ.

ಧಾತುರ
ಹಿಂದೂ ವಾಮನ ಪುರಾಣದ ಪ್ರಕಾರ ದೇವತೆಗಳು ಹಾಗೂ ರಾಕ್ಷಸರ ನಡುವಿನ ಸಾಗರ ಮಂಥನದ ಸಮಯದಲ್ಲಿ ಶಿವ ಹಾಲಾಹಲ ವಿಷ ಸೇವಿಸುತ್ತಾನೆ, ಈ ಹೂವು ಶಿವನ ಎದೆಯಿಂದ ಹೊರಹೊಮ್ಮಿತು ಮತ್ತು ಅಂದಿನಿಂದ ಇದು ಅವನ ನೆಚ್ಚಿನ ಹೂವು ಎಂದು ನಂಬಲಾಗಿದೆ. ಅಹಂಕಾರ, ದ್ವೇಷ, ಅಸೂಯೆ ಮುಂತಾದ ನಕಾರಾತ್ಮಕ ಭಾವನೆಗಳನ್ನು ಹೋಗಲಾಡಿಸಲು ಈ ಶಿವಪೂಜೆಯನ್ನು ದೇವರಿಗೆ ಅರ್ಪಿಸಲಾಗುತ್ತದೆ.

ಕಮಲ
ಸಂಪತ್ತು ಮತ್ತು ಸಮೃದ್ಧಿಯ ದೇವತೆ ಲಕ್ಷ್ಮಿ ದೇವಿಯು ಕಮಲವನ್ನು ಇಷ್ಟಪಡುತ್ತಾರೆ ಮತ್ತು ಈ ಕಾರಣಕ್ಕಾಗಿ ಈ ಹೂವನ್ನು ಲಕ್ಷ್ಮಿ ಪೂಜೆಯ ಸಮಯದಲ್ಲಿ ಅಥವಾ ದೀಪಾವಳಿಯ ಸಮಯದಲ್ಲಿ ಪೂಜಿಸಲು ತಪ್ಪದೇ ಬಳಸಲಾಗುತ್ತದೆ. ನಿಮ್ಮ ಮನೆಯಲ್ಲಿ ಸಹ ಕಮಲದ ಬೀಜದ ಹಾರ ಅಥವಾ ಮಾಲೆಯನ್ನು ಇಟ್ಟುಕೊಳ್ಳುವುದು ಅದೃಷ್ಟದ ದೇವಿಯನ್ನು ಮೆಚ್ಚಿಸುತ್ತದೆ ಎಂದು ನಂಬಲಾಗಿದೆ.

ಪಾರಿಜಾತ
ರಾತ್ರಿ ಹೂಬಿಡುವ ಹವಳದ ಮಲ್ಲಿಗೆಯನ್ನು ದೈವಿಕ ಹೂವು ಎಂದು ಪರಿಗಣಿಸಲಾಗುತ್ತದೆ ಮತ್ತು ಇದು ವಿಷ್ಣುವನ್ನು ಮೆಚ್ಚಿಸುತ್ತದೆ ಎಂದು ನಂಬಲಾಗಿದೆ. ಸಾಗರ ಮಂಥನದ ಸಮಯದಲ್ಲಿ ಈ ಹೂವು ಹುಟ್ಟಿಕೊಂಡಿತು ಮತ್ತು ಇಂದ್ರ ದೇವರು ಅದನ್ನು ಸ್ವರ್ಗಕ್ಕೆ ಪಡೆದರು ಎಂದು ಹೇಳಲಾಗುತ್ತದೆ.

ಕೆಂಪು ಒಲಿಯಾಂಡರ್
ದುರ್ಗಾದೇವಿ, ಕಾಳಿಯಯನ್ನು ಕೆಂಪು ಬಣ್ಣದಲ್ಲಿ ಹೂವುಗಳನ್ನು ಅರ್ಪಿಸಿ ಪೂಜಿಸಲಾಗುತ್ತದೆ, ಈ ಕೆಂಪು ನೆರಿಯಮ್ ಒಲಿಯಾಂಡರ್ ಅಂತಹ ಹೂವುಗಳಲ್ಲಿ ಒಂದಾಗಿದೆ. ದೇವರನ್ನು ಆರಾಧಿಸುವಾಗ, ಸ್ತೋತಗ್ರ ಮಂತ್ರ ಪಠಣದಂಥ ಸಮಯದಲ್ಲಿ ಈ ಹೂವಿನ ಅರ್ಪಣೆ ಬಹಳ ಪೂಜ್ಯನೀಯ ಎಂದು ನಂಬಲಾಗಿದೆ.

ತುಳಸಿ
ಕೃಷ್ಣನ ನೆಚ್ಚಿನ ಹೂಗಳಲ್ಲಿ ತುಳಸಿ ಬಹಳ ಪ್ರಮುಖವಾದದ್ದು. ಇದನ್ನು ದೇವಾಲಯಗಳಲ್ಲಿ ಪ್ರಸಾದಕ್ಕೂ ಸಹ ಬಳಸಲಾಗುತ್ತದೆ. ಕೃಷ್ಣ ಮಾತ್ರವಲ್ಲದೇ ಬಹುತೇಕ ಎಲ್ಲ ದೇವರಿಗೂ ತುಳಸಿ ಬಹಳ ನೆಚ್ಚಿನ ಎಲೆಯಾಗಿದೆ. ಇದಕ್ಕೆ ಹಿಂದೂ ಧರ್ಮದಲ್ಲಿ ಬಹಳ ಪೂಜ್ಯನೀಯ ಸ್ಥಾನವಿದೆ.



Click it and Unblock the Notifications











