Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಗುರುಪೂರ್ಣಿಮಾ 2020: ಗುರುವಿನ ಮಹತ್ವ, ಪೂಜಾ ಸಮಯ
ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ|
ಚಕ್ಷುರುನ್ಮೀಲಿತಂ ದೇವ ತಸ್ಮೈ ಶ್ರೀ ಗುರುವೇ ನಮಃ
ಶಿಷ್ಯನ ಅಜ್ಞಾನವೆಂಬ ಬೇನೆಯನ್ನು ಜ್ಞಾನವೆಂಬ ಅಂಜನದಿಂದ ಗುಣಪಡಿಸಿ, ಅವನ ಕೀರ್ತಿ ಎಲ್ಲೆಡೆ ಪಸರಿಸುವಂತೆ ಮಾಡಿದ ಶ್ರೀ ಗುರುವಿಗೆ ಕೃತಜ್ಞತೆ.
ಗುರುಗಳಿಗೆ ಧನ್ಯತಾ ಭಾವವಾಗಿ ವಂದನೆ ಅರ್ಪಿಸುವ ಗುರು ಪೂರ್ಣಿಮಾವನ್ನು ಪ್ರತಿ ವರ್ಷವೂ ಆಷಾಢ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಅಥವಾ ವ್ಯಾಸ ಪೂರ್ಣಿಮೆಯಂದು ಆಚರಿಸಲಾಗುತ್ತದೆ. ಆದಿ ಗುರು ಎಂದು ಪೂಜಿಸುವ ವ್ಯಾಸರನ್ನು ಸ್ಮರಿಸುವ ಸಲುವಾಗಿ ಗುರುಪೂರ್ಣಿಮಾ ಆಚರಣೆ ರೂಢಿಗೆ ಬಂದಿತು.
ಈ ವರ್ಷ ಜುಲೈ 5ರಂದು ಗುರುಸ್ಮರಣೆ ಮಾಡುವ ಸದವಕಾಶ ನಮ್ಮೆಲ್ಲರಿಗೂ ಲಭಿಸಿದೆ.

ಕೊರೋನಾ ಮಹಾಮಾರಿ ನಡುವೆಯೂ ನಮ್ಮ ಜೀವನದ ಏಳ್ಗೆಗೆ ಅಲ್ಲದೇ ನಮ್ಮ ಪ್ರತಿ ಹೆಜ್ಜೆಯಲ್ಲೂ ನಮ್ಮನ್ನು ಸರಿಮಾಡಿದ ಗುರುಗಳಿಗೆ ವಂದಿಸುವ ನಮ್ಮ ಆದ್ಯ ಕರ್ತವ್ಯವನ್ನು ನಾವು ಮಾಡಲೇಬೇಕಿದೆ. ಕಾರಣ, ಗುರುಪೂರ್ಣಿಮೆ ದಿನ ಮಹತ್ವವೇ ಹಾಗಿದೇ, ಇತರೆ ದಿನಗಳಿಗಿಂತ ಈ ದಿನಲ್ಲದಿ ಗುರುಗಳ ಆಶೀರ್ವಾದ ಪಡೆದರೆ ಅದು ಬೇರೆ ಯಾವುದೇ ದಿನಕ್ಕಿಂತ ಸಾವಿರ ಪಟ್ಟು ಅಧಿಕ ಫಲಪ್ರದ ಎನ್ನಲಾಗಿದೆ.

ಗುರು ಎಂದರೆ ಯಾರು
ಗುರು ಎಂಬ ಪದದಲ್ಲಿನ ಗು ಎಂಬ ಅಕ್ಷರಕ್ಕೆ ಅಂಧಕಾರವೆಂದು ರು ಎಂಬುದಕ್ಕೆ ಅದನ್ನು ನಿರೋಧಿಸುವವನು ಎಂಬ ಅರ್ಥವನ್ನು ಸಾರುತ್ತದೆ. ಹಿಂದು ಸಂಪ್ರದಾಯದಲ್ಲಿ ಗುರು ಪೂಜೆ ಮಾಡದೇ ಯಾವ ಕಾರ್ಯವನ್ನು ಆರಂಭಿಸಬಾರದು. ಪ್ರಾಚೀನ ಭಾರತದ ಶಿಕ್ಷಣ ಪದ್ದತಿಯಲ್ಲಿ ಶಿಷ್ಯರನ್ನು ಗುರು ತನ್ನಾಶ್ರಮಕ್ಕೆ ಬರಮಾಡಿಕೊಂಡು ಧಾರ್ಮಿಕ ಮತ್ತು ಲೌಕಿಕ ಶಿಕ್ಷಣಗಳೆರಡನ್ನು ನೀಡುತ್ತಿದ್ದರು. ಶಿಷ್ಯರು ಸಹ ಗುರುವಿನ ಬಗ್ಗೆ ಅನನ್ಯ ಭಕ್ತಿಯಿಂದ ವಿದ್ಯಾರ್ಜನೆ ಮಾಡುತ್ತಿದ್ದರು. ಗುರುಗಳ ಆಶ್ರಮದಲ್ಲಿಯೇ ಇದ್ದು ಭಕ್ತಿ, ಶ್ರದ್ದೆ, ಶುದ್ಧ ಮನಸ್ಸಿನಿಂದ ಸ್ವಾರ್ಥರಹಿತರಾಗಿ ಸೇವೆ ಮಾಡಿ ಗುರುಕೃಪೆಗೆ ಪಾತ್ರರಾಗುತ್ತಿದ್ದನು. ಅಂಥ ಶಿಷ್ಯನಿಗೆ ಗುರು ಅನುಗ್ರಹ ಮಾಡುತ್ತಿದ್ದನು.

ಗುರುಪೂಜೆ ಮಾಡುವ ವಿಧಾನ
ಗುರು ಪೂರ್ಣಿಮೆಯಂದು "ಗುರು ಪರಂಪರಾ ಸಿದ್ದಯರ್ಥಂ ವ್ಯಾಸ ಪೂಜಾಂ ಕರಿಷ್ಯೇ" ಎಂದು ಧ್ಯಾನಿಸುತ್ತಾ, ಶುಭ್ರ ವಸ್ತ್ರವನ್ನು ಧರಿಸಿ, ತಂದೆ-ತಾಯಿ ಸೇರಿದಂತೆ ಗುರುಗಳನ್ನು ಕೂಡಿಸಿ ಪಾದ ಪೂಜೆ ಮಾಡಿ, ಅವರಿಗೆ ಆರತಿ ಮಾಡಬೇಕು. ನಂತರ ಶಿರ ಸಾಷ್ಟಾಂಗ ನಮಸ್ಕಾರ ಸಲ್ಲಿಸಿ ಗುರುದಕ್ಷಿಣೆ ನೀಡಿ, ಹೂ, ಫಲತಾಂಬೂಲ ಸಲ್ಲಿಸಿ, ಅವರಿಂದ ಮಂತ್ರ ಪುಷ್ಪದಿಂದ ಆಶೀರ್ವಾದ ಮಾಡಿಸಿಕೊಳ್ಳಬೇಕು.

ಗುರುಪೂಜಾ ಸಮಯ
ಈ ವರ್ಷದ ಗುರುಪೂರ್ಣಿಮಾವನ್ನು ಜುಲೈ 5ರಂದು ಆಚರಿಸಲಾಗುತ್ತಿದ್ದು, ಮತ್ತೊಂದು ವಿಶೇಷ ಎಂದರೆ ಇದೇ ದಿನ ಚಂದ್ರಗ್ರಹಣ ಸಹ ಬಂದಿದೆ. ಈ ದಿದಿನ ಗುರುಪೂರ್ಣಿಮೆಯು ಜುಲೈ 4ರಂದು ಬೆಳಿಗ್ಗೆ 11.33ಕ್ಕೆ ಆರಂಭವಾಗಿ ಜುಲೈ 5ರಂದು ಬೆಳಿಗ್ಗೆ 10.13ಕ್ಕೆ ಅಂತ್ಯವಾಗಲಿದೆ. ಈ ಸಮಯದಲ್ಲಿ ಗುರುಗಳಿಗೆ ಪೂಜೆ ಮಾಡಲು ಶುಭ ಸಮಯ ಎಂದು ಹಿಂದೂ ಪಂಚಾಂಗ ಹೇಳುತ್ತದೆ.



Click it and Unblock the Notifications