Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಗುರುಪೂರ್ಣಿಮಾ 2020: ಗುರುವಿನ ಮಹತ್ವ, ಪೂಜಾ ಸಮಯ
ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ|
ಚಕ್ಷುರುನ್ಮೀಲಿತಂ ದೇವ ತಸ್ಮೈ ಶ್ರೀ ಗುರುವೇ ನಮಃ
ಶಿಷ್ಯನ ಅಜ್ಞಾನವೆಂಬ ಬೇನೆಯನ್ನು ಜ್ಞಾನವೆಂಬ ಅಂಜನದಿಂದ ಗುಣಪಡಿಸಿ, ಅವನ ಕೀರ್ತಿ ಎಲ್ಲೆಡೆ ಪಸರಿಸುವಂತೆ ಮಾಡಿದ ಶ್ರೀ ಗುರುವಿಗೆ ಕೃತಜ್ಞತೆ.
ಗುರುಗಳಿಗೆ ಧನ್ಯತಾ ಭಾವವಾಗಿ ವಂದನೆ ಅರ್ಪಿಸುವ ಗುರು ಪೂರ್ಣಿಮಾವನ್ನು ಪ್ರತಿ ವರ್ಷವೂ ಆಷಾಢ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಅಥವಾ ವ್ಯಾಸ ಪೂರ್ಣಿಮೆಯಂದು ಆಚರಿಸಲಾಗುತ್ತದೆ. ಆದಿ ಗುರು ಎಂದು ಪೂಜಿಸುವ ವ್ಯಾಸರನ್ನು ಸ್ಮರಿಸುವ ಸಲುವಾಗಿ ಗುರುಪೂರ್ಣಿಮಾ ಆಚರಣೆ ರೂಢಿಗೆ ಬಂದಿತು.
ಈ ವರ್ಷ ಜುಲೈ 5ರಂದು ಗುರುಸ್ಮರಣೆ ಮಾಡುವ ಸದವಕಾಶ ನಮ್ಮೆಲ್ಲರಿಗೂ ಲಭಿಸಿದೆ.

ಕೊರೋನಾ ಮಹಾಮಾರಿ ನಡುವೆಯೂ ನಮ್ಮ ಜೀವನದ ಏಳ್ಗೆಗೆ ಅಲ್ಲದೇ ನಮ್ಮ ಪ್ರತಿ ಹೆಜ್ಜೆಯಲ್ಲೂ ನಮ್ಮನ್ನು ಸರಿಮಾಡಿದ ಗುರುಗಳಿಗೆ ವಂದಿಸುವ ನಮ್ಮ ಆದ್ಯ ಕರ್ತವ್ಯವನ್ನು ನಾವು ಮಾಡಲೇಬೇಕಿದೆ. ಕಾರಣ, ಗುರುಪೂರ್ಣಿಮೆ ದಿನ ಮಹತ್ವವೇ ಹಾಗಿದೇ, ಇತರೆ ದಿನಗಳಿಗಿಂತ ಈ ದಿನಲ್ಲದಿ ಗುರುಗಳ ಆಶೀರ್ವಾದ ಪಡೆದರೆ ಅದು ಬೇರೆ ಯಾವುದೇ ದಿನಕ್ಕಿಂತ ಸಾವಿರ ಪಟ್ಟು ಅಧಿಕ ಫಲಪ್ರದ ಎನ್ನಲಾಗಿದೆ.

ಗುರು ಎಂದರೆ ಯಾರು
ಗುರು ಎಂಬ ಪದದಲ್ಲಿನ ಗು ಎಂಬ ಅಕ್ಷರಕ್ಕೆ ಅಂಧಕಾರವೆಂದು ರು ಎಂಬುದಕ್ಕೆ ಅದನ್ನು ನಿರೋಧಿಸುವವನು ಎಂಬ ಅರ್ಥವನ್ನು ಸಾರುತ್ತದೆ. ಹಿಂದು ಸಂಪ್ರದಾಯದಲ್ಲಿ ಗುರು ಪೂಜೆ ಮಾಡದೇ ಯಾವ ಕಾರ್ಯವನ್ನು ಆರಂಭಿಸಬಾರದು. ಪ್ರಾಚೀನ ಭಾರತದ ಶಿಕ್ಷಣ ಪದ್ದತಿಯಲ್ಲಿ ಶಿಷ್ಯರನ್ನು ಗುರು ತನ್ನಾಶ್ರಮಕ್ಕೆ ಬರಮಾಡಿಕೊಂಡು ಧಾರ್ಮಿಕ ಮತ್ತು ಲೌಕಿಕ ಶಿಕ್ಷಣಗಳೆರಡನ್ನು ನೀಡುತ್ತಿದ್ದರು. ಶಿಷ್ಯರು ಸಹ ಗುರುವಿನ ಬಗ್ಗೆ ಅನನ್ಯ ಭಕ್ತಿಯಿಂದ ವಿದ್ಯಾರ್ಜನೆ ಮಾಡುತ್ತಿದ್ದರು. ಗುರುಗಳ ಆಶ್ರಮದಲ್ಲಿಯೇ ಇದ್ದು ಭಕ್ತಿ, ಶ್ರದ್ದೆ, ಶುದ್ಧ ಮನಸ್ಸಿನಿಂದ ಸ್ವಾರ್ಥರಹಿತರಾಗಿ ಸೇವೆ ಮಾಡಿ ಗುರುಕೃಪೆಗೆ ಪಾತ್ರರಾಗುತ್ತಿದ್ದನು. ಅಂಥ ಶಿಷ್ಯನಿಗೆ ಗುರು ಅನುಗ್ರಹ ಮಾಡುತ್ತಿದ್ದನು.

ಗುರುಪೂಜೆ ಮಾಡುವ ವಿಧಾನ
ಗುರು ಪೂರ್ಣಿಮೆಯಂದು "ಗುರು ಪರಂಪರಾ ಸಿದ್ದಯರ್ಥಂ ವ್ಯಾಸ ಪೂಜಾಂ ಕರಿಷ್ಯೇ" ಎಂದು ಧ್ಯಾನಿಸುತ್ತಾ, ಶುಭ್ರ ವಸ್ತ್ರವನ್ನು ಧರಿಸಿ, ತಂದೆ-ತಾಯಿ ಸೇರಿದಂತೆ ಗುರುಗಳನ್ನು ಕೂಡಿಸಿ ಪಾದ ಪೂಜೆ ಮಾಡಿ, ಅವರಿಗೆ ಆರತಿ ಮಾಡಬೇಕು. ನಂತರ ಶಿರ ಸಾಷ್ಟಾಂಗ ನಮಸ್ಕಾರ ಸಲ್ಲಿಸಿ ಗುರುದಕ್ಷಿಣೆ ನೀಡಿ, ಹೂ, ಫಲತಾಂಬೂಲ ಸಲ್ಲಿಸಿ, ಅವರಿಂದ ಮಂತ್ರ ಪುಷ್ಪದಿಂದ ಆಶೀರ್ವಾದ ಮಾಡಿಸಿಕೊಳ್ಳಬೇಕು.

ಗುರುಪೂಜಾ ಸಮಯ
ಈ ವರ್ಷದ ಗುರುಪೂರ್ಣಿಮಾವನ್ನು ಜುಲೈ 5ರಂದು ಆಚರಿಸಲಾಗುತ್ತಿದ್ದು, ಮತ್ತೊಂದು ವಿಶೇಷ ಎಂದರೆ ಇದೇ ದಿನ ಚಂದ್ರಗ್ರಹಣ ಸಹ ಬಂದಿದೆ. ಈ ದಿದಿನ ಗುರುಪೂರ್ಣಿಮೆಯು ಜುಲೈ 4ರಂದು ಬೆಳಿಗ್ಗೆ 11.33ಕ್ಕೆ ಆರಂಭವಾಗಿ ಜುಲೈ 5ರಂದು ಬೆಳಿಗ್ಗೆ 10.13ಕ್ಕೆ ಅಂತ್ಯವಾಗಲಿದೆ. ಈ ಸಮಯದಲ್ಲಿ ಗುರುಗಳಿಗೆ ಪೂಜೆ ಮಾಡಲು ಶುಭ ಸಮಯ ಎಂದು ಹಿಂದೂ ಪಂಚಾಂಗ ಹೇಳುತ್ತದೆ.



Click it and Unblock the Notifications











